ದ್ರಾವಿಡ್ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್
ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಸುನಿಲ್ ಗವಾಸ್ಕರ್.!
ರೋಹಿತ್ - ದ್ರಾವಿಡ್ಗೆ ವಿಂಡೀಸ್ನಲ್ಲಿ ‘ರಿಯಲ್ ಟೆಸ್ಟ್’
ಇಂಡೋ – ವಿಂಡೀಸ್ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೊಂದು ದಿನ ಕಳೆದ್ರೆ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಭರ್ಜರಿ ಸಿದ್ಧತೆ ನಡೆಸಿರೋ ಟೀಮ್ ಇಂಡಿಯಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಇದರ ನಡುವೆ ಕ್ಯಾಪ್ಟನ್ ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಬಿಗ್ ಡಿಬೆಟ್ ನಡೀತಿದೆ. ಲೆಜೆಂಡ್ ಸುನಿಲ್ ಗವಾಸ್ಕರ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕನ ಪಟ್ಟದಿಂದ ಕೊಹ್ಲಿಯನ್ನ ಕೆಳಗಿಳಿಸಿದಾಗ ರೋಹಿತ್ ಶರ್ಮಾ ಪರ ಲೆಜೆಂಡ್ ಸುನಿಲ್ ಗವಾಸ್ಕರ್ ಬ್ಯಾಟಿಂಗ್ ಮಾಡಿದ್ರು. ಐಪಿಎಲ್ನಲ್ಲಿ 5 ಟ್ರೋಫಿ ಗೆಲ್ಲಿಸಿಕೊಟ್ಟ ಮುಂಬೈಕರ್, ಟೀಮ್ ಇಂಡಿಯಾದ ನಾಯಕನಾಗಿಯೂ ಸಕ್ಸಸ್ ಕಾಣ್ತಾರೆ ಅನ್ನೋ ಗವಾಸ್ಕರ್ ಅಭಿಪ್ರಾಯವಾಗಿತ್ತು. ಇಷ್ಟೇ ಅಲ್ಲ.. ಕ್ಯಾಪ್ಟನ್ ರೋಹಿತ್ ಶರ್ಮಾ – ಕೋಚ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದಲ್ಲಿ ಕ್ರಾಂತಿ ಮಾಡ್ತಾರೆ ಎಂದಿದ್ರು. ಆದ್ರೆ, ಈಗ ಆಗಿರೋದೆ ಬೇರೆ..!
ನಾಯಕನಾಗಿ ವೈಫಲ್ಯ ಕಂಡ ರೋಹಿತ್ ಶರ್ಮಾ.!
ತವರು ಮುಂಬೈ ಆಟಗಾರ ಎಂಬ ವ್ಯಾಮೋಹಕ್ಕೋ ಏನೋ ರೋಹಿತ್ ಶರ್ಮಾ ಪರ ಗವಾಸ್ಕರ್ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೊಹ್ಲಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ರೋಹಿತ್ ಸೂಕ್ತ ಎಂದಿದ್ರು. ಇಷ್ಟೇ ಅಲ್ಲ, ರೋಹಿತ್ ಶರ್ಮಾ ಭಾರೀ ಬದಲಾವಣೆ ತರ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು. ಆದ್ರೆ, ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಗವಾಸ್ಕರ್ ಕೂಡ ವರಸೆ ಬದಲಿಸಿದ್ದಾರೆ. ಅಂದು ಭರ್ಜರಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಪರವೇ ಇಂದು ಕಿಡಿಕಾರ್ತಿದ್ದಾರೆ.
ರೋಹಿತ್ ನಿರಾಸೆ ಮೂಡಿಸಿದ್ದಾರೆ
‘ನಾನು ರೋಹಿತ್ ಶರ್ಮಾರಿಂದ ಇನ್ನೂ ಹೆಚ್ಚನ್ನ ನಿರೀಕ್ಷಿಸಿದ್ದೆ. ಭಾರತ ಬೇರೆ. ವಿದೇಶದಲ್ಲಿ ಏನು ಮಾಡ್ತೀರಿ ಅನ್ನೋದು ನಿಜವಾದ ಪರೀಕ್ಷೆ. ಅಲ್ಲಿ ರೋಹಿತ್ ನಿರಾಸೆ ಮೂಡಿಸಿದ್ದಾರೆ. ಟಿ20 ಮಾದರಿಯಲ್ಲಿ ಕೂಡ. ಐಪಿಎಲ್ನಲ್ಲಿ ಆಡಿದ ಅನುಭವವಿದೆ. ನಾಯಕನಾಗಿ 100ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ. ಐಪಿಎಲ್ ಆಡಿದ ಉತ್ತಮ ಆಟಗಾರರ ತಂಡವಿದ್ದೂ ಫೈನಲ್ಗೂ ಕ್ವಾಲಿಫೈ ಆಗಲಿಲ್ಲ ಅನ್ನೋದು ನಿರಾಶದಾಯಕ’
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ನಾಯಕನಾಗಿ ರೋಹಿತ್ ಫೇಲ್ ಎಂದ್ರಾ ಗವಾಸ್ಕರ್.?
ಟಿ20 ವಿಶ್ವಕಪ್ನ ಹೀನಾಯ ನಿರ್ಗಮನ ಮಾತ್ರವಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಗ್ಗೆಯೂ ಗವಾಸ್ಕರ್ ಪ್ರಶ್ನಿಸಿದ್ದಾರೆ. ಫೈನಲ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ರೋಹಿತ್ ಶರ್ಮಾ, ನಮಗೆ ಸಿದ್ಧತೆಗೆ 20 ದಿನಗಳು ಬೇಕಿದ್ವು ಎಂದಿದ್ರು. ಇದನ್ನ ಈಗ ಗವಾಸ್ಕರ್ ಪ್ರಶ್ನಿಸಿದ್ದು, ವಿಂಡೀಸ್ ಪ್ರವಾಸದಲ್ಲಿ ಈಗ ಏನ್ ಮಾಡ್ತಿದ್ದೀರಿ ಎಂದು ಕೇಳಿದ್ದಾರೆ.
ಈಗ ಪಂದ್ಯವನ್ನ ಆಡ್ತಾ ಇದ್ದೀರಾ.?
ಯಾವ ಬಗೆಯ ಸಿದ್ದತೆಯ ಬಗ್ಗೆ ನೀವು ಕೇಳಿದ್ರಿ. ಈಗ ವೆಸ್ಟ್ ಇಂಡೀಸ್ಗೆ ಹೋಗಿದ್ದಿರಿ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋತ ಉದಾಹರಣೆ ಎದುರಿಗೆ ಇದೆ. ಈಗ ಪಂದ್ಯವನ್ನ ಆಡ್ತಾ ಇದ್ದೀರಾ.? ಹಾಗಾದ್ರೆ, 20-25 ದಿನದ ಬಗ್ಗೆ ಯಾಕೆ ಮಾತಾಡಿದ್ರಿ. ನೀವು ಸಿದ್ಧತೆಯ ಬಗ್ಗೆ ಮಾತನಾಡಿದ್ರೆ, 15 ದಿನ ಮುಂಚೆ ಹೋಗಿ, 2 ವಾರ್ಮ್ಅಪ್ ಪಂದ್ಯಗಳನ್ನಾಡಿ. ಸತ್ಯ ಏನಂದ್ರೆ, ಮುಖ್ಯವಾದ ಆಟಗಾರರು ಬೇಗ ಹೋಗಲು ಇಷ್ಟ ಪಡಲ್ಲ. ಯಾಕಂದ್ರೆ ಏನಾದ್ರೂ ನಾವು ಆಯ್ಕೆಯಾಗ್ತೀವಿ ಎಂದು ಅವರಿಗೆ ತಿಳಿದಿದೆ.
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ದ್ರಾವಿಡ್ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್.!
ರೋಹಿತ್ ಶರ್ಮಾ ಮಾತ್ರವಲ್ಲ. ಕೋಚ್ ದ್ರಾವಿಡ್ರನ್ನೂ ಸುನಿಲ್ ಗವಾಸ್ಕರ್ ಬಿಟ್ಟಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟ್ರಾವಿಡ್ ಹೆಡ್ ವಿರುದ್ಧ ಬೌನ್ಸರ್ ಅಸ್ತ್ರವನ್ನ ಪ್ರಯೋಗಿಸದ್ದರ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ಬೌನ್ಸರ್ ಟ್ರಾವಿಸ್ ಹೆಡ್ರ ವೀಕ್ನೆಸ್ ಪಾಯಿಂಟ್ ಎಂದು ಗೊತ್ತಿದ್ರೂ, ಆ ಅಸ್ತ್ರವನ್ನ ಪ್ರಯೋಗಿಸಲೇ ಇಲ್ಲ ಏಕೆ ಎಂದು ಗವಾಸ್ಕರ್, ದ್ರಾವಿಡ್ ಗೇಮ್ ಪ್ಲಾನ್ ಅನ್ನ ಟೀಕಿಸಿದ್ದಾರೆ.
ಇನ್ನು ಕೋಚಿಂಗ್ ಸ್ಟಾಫ್ಗಳ ಕಾರ್ಯವೈಖರಿಯನ್ನೂ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಮತ್ತೆ ಮತ್ತೆ ಒಂದೇ ತೆರನಾಗಿ ಔಟ್ ಆಗ್ತಿದ್ರೂ, ನೀವು ಟೆಕ್ನಿಕ್ ಬದಲಾಯಿಸಲು ಯಾಕೆ ಮುಂದಾಗಲಿಲ್ಲ ಎಂದು ಕೇಳಿದ್ದಾರೆ.
ಗವಾಸ್ಕರ್ ಇಷ್ಟೇಲ್ಲಾ ಟೀಕೆ ಮಾಡಿದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಪಾಲಿಗೆ ರಿಯಲ್ ಟೆಸ್ಟ್ ಆಗಿ ಮಾರ್ಪಟ್ಟಿದೆ. ಕೋಚ್ – ಕ್ಯಾಪ್ಟನ್ ಸರಣಿ ಗೆದ್ದು ಮಾಜಿ ಕ್ಯಾಪ್ಟನ್ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡ್ತಾರಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದ್ರಾವಿಡ್ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್
ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಸುನಿಲ್ ಗವಾಸ್ಕರ್.!
ರೋಹಿತ್ - ದ್ರಾವಿಡ್ಗೆ ವಿಂಡೀಸ್ನಲ್ಲಿ ‘ರಿಯಲ್ ಟೆಸ್ಟ್’
ಇಂಡೋ – ವಿಂಡೀಸ್ ಟೆಸ್ಟ್ ಸರಣಿಗೆ ಕೌಂಟ್ಡೌನ್ ಶುರುವಾಗಿದೆ. ಇನ್ನೊಂದು ದಿನ ಕಳೆದ್ರೆ ಡೊಮಿನಿಕಾದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಭರ್ಜರಿ ಸಿದ್ಧತೆ ನಡೆಸಿರೋ ಟೀಮ್ ಇಂಡಿಯಾ ಶುಭಾರಂಭದ ನಿರೀಕ್ಷೆಯಲ್ಲಿದೆ. ಇದರ ನಡುವೆ ಕ್ಯಾಪ್ಟನ್ ರೋಹಿತ್ ಶರ್ಮಾ ಸಾಮರ್ಥ್ಯದ ಬಗ್ಗೆ ಬಿಗ್ ಡಿಬೆಟ್ ನಡೀತಿದೆ. ಲೆಜೆಂಡ್ ಸುನಿಲ್ ಗವಾಸ್ಕರ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕನ ಪಟ್ಟದಿಂದ ಕೊಹ್ಲಿಯನ್ನ ಕೆಳಗಿಳಿಸಿದಾಗ ರೋಹಿತ್ ಶರ್ಮಾ ಪರ ಲೆಜೆಂಡ್ ಸುನಿಲ್ ಗವಾಸ್ಕರ್ ಬ್ಯಾಟಿಂಗ್ ಮಾಡಿದ್ರು. ಐಪಿಎಲ್ನಲ್ಲಿ 5 ಟ್ರೋಫಿ ಗೆಲ್ಲಿಸಿಕೊಟ್ಟ ಮುಂಬೈಕರ್, ಟೀಮ್ ಇಂಡಿಯಾದ ನಾಯಕನಾಗಿಯೂ ಸಕ್ಸಸ್ ಕಾಣ್ತಾರೆ ಅನ್ನೋ ಗವಾಸ್ಕರ್ ಅಭಿಪ್ರಾಯವಾಗಿತ್ತು. ಇಷ್ಟೇ ಅಲ್ಲ.. ಕ್ಯಾಪ್ಟನ್ ರೋಹಿತ್ ಶರ್ಮಾ – ಕೋಚ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದಲ್ಲಿ ಕ್ರಾಂತಿ ಮಾಡ್ತಾರೆ ಎಂದಿದ್ರು. ಆದ್ರೆ, ಈಗ ಆಗಿರೋದೆ ಬೇರೆ..!
ನಾಯಕನಾಗಿ ವೈಫಲ್ಯ ಕಂಡ ರೋಹಿತ್ ಶರ್ಮಾ.!
ತವರು ಮುಂಬೈ ಆಟಗಾರ ಎಂಬ ವ್ಯಾಮೋಹಕ್ಕೋ ಏನೋ ರೋಹಿತ್ ಶರ್ಮಾ ಪರ ಗವಾಸ್ಕರ್ ಆರಂಭದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೊಹ್ಲಿ ನಾಯಕತ್ವ ತ್ಯಜಿಸಿದ ಬೆನ್ನಲ್ಲೇ ಆ ಸ್ಥಾನಕ್ಕೆ ರೋಹಿತ್ ಸೂಕ್ತ ಎಂದಿದ್ರು. ಇಷ್ಟೇ ಅಲ್ಲ, ರೋಹಿತ್ ಶರ್ಮಾ ಭಾರೀ ಬದಲಾವಣೆ ತರ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು. ಆದ್ರೆ, ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ. ಗವಾಸ್ಕರ್ ಕೂಡ ವರಸೆ ಬದಲಿಸಿದ್ದಾರೆ. ಅಂದು ಭರ್ಜರಿ ಬ್ಯಾಟಿಂಗ್ ಮಾಡಿದ್ದ ರೋಹಿತ್ ಪರವೇ ಇಂದು ಕಿಡಿಕಾರ್ತಿದ್ದಾರೆ.
ರೋಹಿತ್ ನಿರಾಸೆ ಮೂಡಿಸಿದ್ದಾರೆ
‘ನಾನು ರೋಹಿತ್ ಶರ್ಮಾರಿಂದ ಇನ್ನೂ ಹೆಚ್ಚನ್ನ ನಿರೀಕ್ಷಿಸಿದ್ದೆ. ಭಾರತ ಬೇರೆ. ವಿದೇಶದಲ್ಲಿ ಏನು ಮಾಡ್ತೀರಿ ಅನ್ನೋದು ನಿಜವಾದ ಪರೀಕ್ಷೆ. ಅಲ್ಲಿ ರೋಹಿತ್ ನಿರಾಸೆ ಮೂಡಿಸಿದ್ದಾರೆ. ಟಿ20 ಮಾದರಿಯಲ್ಲಿ ಕೂಡ. ಐಪಿಎಲ್ನಲ್ಲಿ ಆಡಿದ ಅನುಭವವಿದೆ. ನಾಯಕನಾಗಿ 100ಕ್ಕೂ ಹೆಚ್ಚು ಪಂದ್ಯ ಆಡಿದ್ದಾರೆ. ಐಪಿಎಲ್ ಆಡಿದ ಉತ್ತಮ ಆಟಗಾರರ ತಂಡವಿದ್ದೂ ಫೈನಲ್ಗೂ ಕ್ವಾಲಿಫೈ ಆಗಲಿಲ್ಲ ಅನ್ನೋದು ನಿರಾಶದಾಯಕ’
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ನಾಯಕನಾಗಿ ರೋಹಿತ್ ಫೇಲ್ ಎಂದ್ರಾ ಗವಾಸ್ಕರ್.?
ಟಿ20 ವಿಶ್ವಕಪ್ನ ಹೀನಾಯ ನಿರ್ಗಮನ ಮಾತ್ರವಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಗ್ಗೆಯೂ ಗವಾಸ್ಕರ್ ಪ್ರಶ್ನಿಸಿದ್ದಾರೆ. ಫೈನಲ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ್ದ ರೋಹಿತ್ ಶರ್ಮಾ, ನಮಗೆ ಸಿದ್ಧತೆಗೆ 20 ದಿನಗಳು ಬೇಕಿದ್ವು ಎಂದಿದ್ರು. ಇದನ್ನ ಈಗ ಗವಾಸ್ಕರ್ ಪ್ರಶ್ನಿಸಿದ್ದು, ವಿಂಡೀಸ್ ಪ್ರವಾಸದಲ್ಲಿ ಈಗ ಏನ್ ಮಾಡ್ತಿದ್ದೀರಿ ಎಂದು ಕೇಳಿದ್ದಾರೆ.
ಈಗ ಪಂದ್ಯವನ್ನ ಆಡ್ತಾ ಇದ್ದೀರಾ.?
ಯಾವ ಬಗೆಯ ಸಿದ್ದತೆಯ ಬಗ್ಗೆ ನೀವು ಕೇಳಿದ್ರಿ. ಈಗ ವೆಸ್ಟ್ ಇಂಡೀಸ್ಗೆ ಹೋಗಿದ್ದಿರಿ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಸೋತ ಉದಾಹರಣೆ ಎದುರಿಗೆ ಇದೆ. ಈಗ ಪಂದ್ಯವನ್ನ ಆಡ್ತಾ ಇದ್ದೀರಾ.? ಹಾಗಾದ್ರೆ, 20-25 ದಿನದ ಬಗ್ಗೆ ಯಾಕೆ ಮಾತಾಡಿದ್ರಿ. ನೀವು ಸಿದ್ಧತೆಯ ಬಗ್ಗೆ ಮಾತನಾಡಿದ್ರೆ, 15 ದಿನ ಮುಂಚೆ ಹೋಗಿ, 2 ವಾರ್ಮ್ಅಪ್ ಪಂದ್ಯಗಳನ್ನಾಡಿ. ಸತ್ಯ ಏನಂದ್ರೆ, ಮುಖ್ಯವಾದ ಆಟಗಾರರು ಬೇಗ ಹೋಗಲು ಇಷ್ಟ ಪಡಲ್ಲ. ಯಾಕಂದ್ರೆ ಏನಾದ್ರೂ ನಾವು ಆಯ್ಕೆಯಾಗ್ತೀವಿ ಎಂದು ಅವರಿಗೆ ತಿಳಿದಿದೆ.
ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟಿಗ
ದ್ರಾವಿಡ್ ಸಾಮರ್ಥ್ಯವನ್ನೂ ಪ್ರಶ್ನಿಸಿದ ಲೆಜೆಂಡ್.!
ರೋಹಿತ್ ಶರ್ಮಾ ಮಾತ್ರವಲ್ಲ. ಕೋಚ್ ದ್ರಾವಿಡ್ರನ್ನೂ ಸುನಿಲ್ ಗವಾಸ್ಕರ್ ಬಿಟ್ಟಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟ್ರಾವಿಡ್ ಹೆಡ್ ವಿರುದ್ಧ ಬೌನ್ಸರ್ ಅಸ್ತ್ರವನ್ನ ಪ್ರಯೋಗಿಸದ್ದರ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ. ಬೌನ್ಸರ್ ಟ್ರಾವಿಸ್ ಹೆಡ್ರ ವೀಕ್ನೆಸ್ ಪಾಯಿಂಟ್ ಎಂದು ಗೊತ್ತಿದ್ರೂ, ಆ ಅಸ್ತ್ರವನ್ನ ಪ್ರಯೋಗಿಸಲೇ ಇಲ್ಲ ಏಕೆ ಎಂದು ಗವಾಸ್ಕರ್, ದ್ರಾವಿಡ್ ಗೇಮ್ ಪ್ಲಾನ್ ಅನ್ನ ಟೀಕಿಸಿದ್ದಾರೆ.
ಇನ್ನು ಕೋಚಿಂಗ್ ಸ್ಟಾಫ್ಗಳ ಕಾರ್ಯವೈಖರಿಯನ್ನೂ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಬ್ಯಾಟ್ಸ್ಮನ್ ಮತ್ತೆ ಮತ್ತೆ ಒಂದೇ ತೆರನಾಗಿ ಔಟ್ ಆಗ್ತಿದ್ರೂ, ನೀವು ಟೆಕ್ನಿಕ್ ಬದಲಾಯಿಸಲು ಯಾಕೆ ಮುಂದಾಗಲಿಲ್ಲ ಎಂದು ಕೇಳಿದ್ದಾರೆ.
ಗವಾಸ್ಕರ್ ಇಷ್ಟೇಲ್ಲಾ ಟೀಕೆ ಮಾಡಿದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ ರೋಹಿತ್ ಶರ್ಮಾ ಹಾಗೂ ರಾಹುಲ್ ದ್ರಾವಿಡ್ ಪಾಲಿಗೆ ರಿಯಲ್ ಟೆಸ್ಟ್ ಆಗಿ ಮಾರ್ಪಟ್ಟಿದೆ. ಕೋಚ್ – ಕ್ಯಾಪ್ಟನ್ ಸರಣಿ ಗೆದ್ದು ಮಾಜಿ ಕ್ಯಾಪ್ಟನ್ ಪ್ರಶ್ನೆಗಳಿಗೆ ಖಡಕ್ ಉತ್ತರ ನೀಡ್ತಾರಾ.? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ