ತಂಗಿಗೆ ಮಸೇಜ್ ಮಾಡಬೇಡಿ ಎಂದು ಬೈದಿದ್ದ ಸಹೋದರ
ಬೈದಿದ್ದಕ್ಕೆ ಸಹೋದರನ ವಿರುದ್ಧ ಸೇಡು ತೀರಿಸಿಕೊಂಡ ಪುಂಡರು
ಸ್ನೇಹಿತನ ಮೂಲಕ ಕರೆಸಿ ಆತನನ್ನು ಬರ್ಬರವಾಗಿ ಕೊಂದ ಆರೋಪ
ರಾಯಚೂರು: ತಂಗಿಗೆ ಮೆಸೇಜ್ ಮಾಡಬೇಡಿ ಎಂದಿದ್ದಕ್ಕೆ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರಾಜ್ (23) ಎಂಬಾತ ಮೃತ ಯುವಕ. ಬಸವರಾಜ್ ಮತ್ತು ಹನುಮಂತ ಎಂಬುವರ ವಿರುದ್ಧ ಕೊಲೆಗೈದ ಆರೋಪ ಕೇಳಿ ಬಂದಿದೆ.
ಆರೋಪಿಗಳು ಮೃತ ದೇವರಾಜ್ ತಂಗಿಗೆ ಲವ್ ಮಾಡಿ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ದೇವರಾಜ್ ತನ್ನ ತಂಗಿಗೆ ಮೆಸೇಜ್ ಮಾಡೋದು ನಿಲ್ಲಿಸಿ ಎಂದು ಬೈದು ಬುದ್ಧಿ ಹೇಳಿದ್ದ. ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳಲು ದೇವರಾಜ್ಗೆ ಸ್ನೇಹಿತನಿಂದ ಮೆಸೇಜ್ ಮಾಡಿ ಕರೆಸಿಕೊಂಡಿದ್ದರು ಆರೋಪಿಗಳು.
ಇನ್ನು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಲ್ಲಿ ದೇವರಾಜ್ಗೆ ಬಸವರಾಜ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಆರೋಪ ಇದೆ. ಬಸವರಾಜ್ ಕಡೆಯವರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಮೃತ ದೇವರಾಜ್ ವಿರುದ್ಧ ಜಾತಿ ನಿಂದನೆ ಅಡಿಯಲ್ಲಿ ಕೌಂಟರ್ ಕೇಸ್ ಮಾಡಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್, ಕೌಂಟರ್ ಕೇಸ್ ದಾಖಲಾಗಿದೆ.
ತಂಗಿಗೆ ಮಸೇಜ್ ಮಾಡಬೇಡಿ ಎಂದು ಬೈದಿದ್ದ ಸಹೋದರ
ಬೈದಿದ್ದಕ್ಕೆ ಸಹೋದರನ ವಿರುದ್ಧ ಸೇಡು ತೀರಿಸಿಕೊಂಡ ಪುಂಡರು
ಸ್ನೇಹಿತನ ಮೂಲಕ ಕರೆಸಿ ಆತನನ್ನು ಬರ್ಬರವಾಗಿ ಕೊಂದ ಆರೋಪ
ರಾಯಚೂರು: ತಂಗಿಗೆ ಮೆಸೇಜ್ ಮಾಡಬೇಡಿ ಎಂದಿದ್ದಕ್ಕೆ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರಾಜ್ (23) ಎಂಬಾತ ಮೃತ ಯುವಕ. ಬಸವರಾಜ್ ಮತ್ತು ಹನುಮಂತ ಎಂಬುವರ ವಿರುದ್ಧ ಕೊಲೆಗೈದ ಆರೋಪ ಕೇಳಿ ಬಂದಿದೆ.
ಆರೋಪಿಗಳು ಮೃತ ದೇವರಾಜ್ ತಂಗಿಗೆ ಲವ್ ಮಾಡಿ ಎಂದು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ದೇವರಾಜ್ ತನ್ನ ತಂಗಿಗೆ ಮೆಸೇಜ್ ಮಾಡೋದು ನಿಲ್ಲಿಸಿ ಎಂದು ಬೈದು ಬುದ್ಧಿ ಹೇಳಿದ್ದ. ಇದೇ ವಿಚಾರಕ್ಕೆ ಸೇಡು ತೀರಿಸಿಕೊಳ್ಳಲು ದೇವರಾಜ್ಗೆ ಸ್ನೇಹಿತನಿಂದ ಮೆಸೇಜ್ ಮಾಡಿ ಕರೆಸಿಕೊಂಡಿದ್ದರು ಆರೋಪಿಗಳು.
ಇನ್ನು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಗಲಾಟೆಯಲ್ಲಿ ದೇವರಾಜ್ಗೆ ಬಸವರಾಜ್ ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂಬ ಆರೋಪ ಇದೆ. ಬಸವರಾಜ್ ಕಡೆಯವರಿಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಮೃತ ದೇವರಾಜ್ ವಿರುದ್ಧ ಜಾತಿ ನಿಂದನೆ ಅಡಿಯಲ್ಲಿ ಕೌಂಟರ್ ಕೇಸ್ ಮಾಡಲಾಗಿದೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್, ಕೌಂಟರ್ ಕೇಸ್ ದಾಖಲಾಗಿದೆ.