ಎಲೆಕ್ಷನ್ ಗಿಮಿಕ್ಗಾಗಿ ಸಿಲಿಂಡರ್ ಬೆಲೆ ಇಳಿಸಲಾಯ್ತಾ?
ಕೇಂದ್ರ ಸರ್ಕಾರವನ್ನು ಕುಟುಕಿದ ಮಾಜಿ ಸಿಎಂ ಶೆಟ್ಟರ್
LPG ವಾಕ್ ಸಮರ, ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಇದು ಕಾಂಗ್ರೆಸ್ ನಾಯಕರ ವ್ಯಂಗ್ಯಕ್ಕೆ ಗುರಿಯಾಗಿದೆ. ಕೇಂದ್ರದ ಬೆಲೆ ಇಳಿಕೆ ಲೋಕಸಭಾ ಚುನಾವಣೆಯ ಗಿಮಿಕ್ ಅಂತ ಕೈಪಾಳಯ ವಾಕ್ ಸಮರಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರ ಯೋಜನೆಗಳ ಮುಂದೆ ಕೇಂದ್ರ ಬೆಲೆ ಇಳಿಕೆ ಯಾವ ಲೆಕ್ಕ ಅಂತ ಸಮರಸಾರಿದೆ.
ತರಕಾರಿ, ದಿನಸಿ ಸಾಮಾಗ್ರಿ, ಸಿಲಿಂಡರ್ನಂತ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದ್ದಿದ್ದ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನ ನೀಡಿತ್ತು. ಗಗನಕ್ಕೇರಿದ್ದ ಅಡುಗೆ ಅನಿಲದ ಬೆಲೆಯನ್ನ ಕೊಂಚ ಇಳಿಕೆ ಮಾಡಿತ್ತು. ಸೆಪ್ಟೆಂಬರ್ 1ನೇ ತಾರೀಖಿನಿಂದ ಪರಿಷ್ಕೃತ ದರ ಜಾರಿಗೆ ಬರುತ್ತೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಸಿಲಿಂಡರ್ ಬೆಲೆ 200 ರೂ. ಆದ್ರೂ ಕಡಿಮೆ ಆಯ್ತಲ್ಲ ಎಂದು ಜನ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೇ ಸಿಲಿಂಡರ್ ಬೆಲೆ ಇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಇದೇ ವಾಗ್ಯುದ್ದಕ್ಕೆ ಕಾರಣವಾಗಿದೆ.
ಕೇಂದ್ರದ ಮೇಲೆ ವಾಗ್ಯುದ್ದಕ್ಕೆ ಕಾಂಗ್ರೆಸ್ ನಾಯಕರು ಅಣಿ
ಲೋಕಸಭಾ ಚುನಾವಣೆಗೆ ಜನರನ್ನ ಸೆಳೆಯಲು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲಾಯ್ತಾ. ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಮರಕ್ಕೆ ಕಾರಣವಾಗಿದೆ. ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆಯಾಗಿರೋದು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದೇ ಅಸ್ತ್ರವನ್ನ ಇಟ್ಟುಕೊಂಡು ಕೇಂದ್ರದ ಮೇಲೆ ವಾಗ್ಯುದ್ದ ನಡೆಸಲು ರಾಜ್ಯ ಕಾಂಗ್ರೆಸ್ ನಾಯಕರು ಅಣಿಯಾಗಿದ್ದಾರೆ.
ಸಿಲಿಂಡರ್ ಬೆಲೆ ಇಳಿಕೆ.. ಶೆಟ್ಟರ್ ವಾಕ್ ಸಮರ!
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆ ಮಾಡಿರೋ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ ಅಂತ ಕೇಂದ್ರ ಸರ್ಕಾರವನ್ನ ಕುಟುಕಿದ್ದಾರೆ.
‘ಭಯ ಶುರುವಾಗಿದೆ’
ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಸಿರೋದು ನೋಡಿದ್ರೆ ಕೇಂದ್ರದಲ್ಲಿ ಕಾಂಗ್ರೆಸ್ ಬರುತ್ತೆಂದು ಅನಿಸುತ್ತಿದೆ. ಈಗಾಗಲೇ ನಾಲ್ಕೈದು ರಾಜ್ಯಗಳ ಸಮಿಕ್ಷೆಯಲ್ಲಿ ಕಾಂಗ್ರೆಸ್ ಬರುತ್ತೆ ಎಂದು ಭವಿಷ್ಯ ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿಗೆ ಹೆದರಿಕೆ ಸ್ಟಾರ್ಟ್ ಆಗಿದೆ.
ಎಲೆಕ್ಷನ್ ಬಂದಿದ್ದರಿಂದ ಡಿಸೆಂಬರ್ನಲ್ಲಿ ಇನ್ನಷ್ಟು ರಿಯಾಯತಿ ಕೊಡಬಹುದು. ಈ ಬಗ್ಗೆ ಮೋದಿ ಬಹಳ ತಲೆ ಕೆಡಿಸಿಕೊಳ್ಳಬಹುದು. ಅವರು ಉಚಿತ ಘೋಷಣೆಗಳು ಮಾಡುವ ಚಾನ್ಸ್ ಇದೆ ಅನಿಸುತ್ತಿದೆ.ಜಗದೀಶ್ ಶೆಟ್ಟರ್, ಮಾಜಿ ಸಿಎಂ
‘2000ದ ಮುಂದೆ ಸಿಲಿಂಡರ್ ದರ ಏನೂ ಅಲ್ಲ’!
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಸಹ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಗೃಹಲಕ್ಷ್ಮಿಯ 2,000 ಹಣದ ಮುಂದೆ ಸಿಲಿಂಡರ್ ದರ ಏನೂ ಅಲ್ಲ ಅಂತ ಬೆಲೆ ಇಳಿಕೆಯನ್ನ ಅಲ್ಲಗೆಳೆದಿದ್ದಾರೆ.
ಅನ್ನದಾತರ ಓಲೈಕೆಗೆ ಸಜ್ಜಾದ ಮೋದಿ ಸರ್ಕಾರ!
ಗ್ಯಾಸ್ ಸಿಲಿಂಡರ್ ದರವನ್ನ 200 ರೂಪಾಯಿ ಇಳಿಕೆ ಮಾಡಿ ಜನಸಾಮಾನ್ಯರ ಮನವೊಲಿಕೆಗೆ ಮುಂದಾಗಿರೋ ಕೇಂದ್ರ ಸರ್ಕಾರ ಅನ್ನದಾತರಿಗೂ ಗಿಫ್ಟ್ ನೀಡಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿದ್ದ 6,000 ಸಹಾಯಧನದ ಮೊತ್ತವನ್ನ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗ್ತಿದೆ.
ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ದಾಳ ಉರುಳಿಸೋಕೆ ಸಜ್ಜಾಗಿರೋದು ಕಾಂಗ್ರೆಸ್ಸಿಗರನ್ನ ಕೆರಳಿಸಿದೆ. ಎಲೆಕ್ಷನ್ ನೆಪದಲ್ಲಾದ್ರೂ ಬೆಲೆ ಏರಿಕೆ ಬಿಸಿ ಇಂದ ಕೊಂಚ ರಿಲೀಫ್ ಸಿಗ್ತಲ್ಲ ಅಂತ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಲೆಕ್ಷನ್ ಗಿಮಿಕ್ಗಾಗಿ ಸಿಲಿಂಡರ್ ಬೆಲೆ ಇಳಿಸಲಾಯ್ತಾ?
ಕೇಂದ್ರ ಸರ್ಕಾರವನ್ನು ಕುಟುಕಿದ ಮಾಜಿ ಸಿಎಂ ಶೆಟ್ಟರ್
LPG ವಾಕ್ ಸಮರ, ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಕೆ ಮಾಡಲು ನಿರ್ಧರಿಸಿದೆ. ಇದು ಕಾಂಗ್ರೆಸ್ ನಾಯಕರ ವ್ಯಂಗ್ಯಕ್ಕೆ ಗುರಿಯಾಗಿದೆ. ಕೇಂದ್ರದ ಬೆಲೆ ಇಳಿಕೆ ಲೋಕಸಭಾ ಚುನಾವಣೆಯ ಗಿಮಿಕ್ ಅಂತ ಕೈಪಾಳಯ ವಾಕ್ ಸಮರಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರ ಯೋಜನೆಗಳ ಮುಂದೆ ಕೇಂದ್ರ ಬೆಲೆ ಇಳಿಕೆ ಯಾವ ಲೆಕ್ಕ ಅಂತ ಸಮರಸಾರಿದೆ.
ತರಕಾರಿ, ದಿನಸಿ ಸಾಮಾಗ್ರಿ, ಸಿಲಿಂಡರ್ನಂತ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದ್ದಿದ್ದ ಜನತೆಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಒಂದನ್ನ ನೀಡಿತ್ತು. ಗಗನಕ್ಕೇರಿದ್ದ ಅಡುಗೆ ಅನಿಲದ ಬೆಲೆಯನ್ನ ಕೊಂಚ ಇಳಿಕೆ ಮಾಡಿತ್ತು. ಸೆಪ್ಟೆಂಬರ್ 1ನೇ ತಾರೀಖಿನಿಂದ ಪರಿಷ್ಕೃತ ದರ ಜಾರಿಗೆ ಬರುತ್ತೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ. ಸದ್ಯ ಸಿಲಿಂಡರ್ ಬೆಲೆ 200 ರೂ. ಆದ್ರೂ ಕಡಿಮೆ ಆಯ್ತಲ್ಲ ಎಂದು ಜನ ನಿಟ್ಟುಸಿರು ಬಿಟ್ಟಿದ್ರು. ಆದ್ರೆ ಇದೇ ಸಿಲಿಂಡರ್ ಬೆಲೆ ಇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ಇದೇ ವಾಗ್ಯುದ್ದಕ್ಕೆ ಕಾರಣವಾಗಿದೆ.
ಕೇಂದ್ರದ ಮೇಲೆ ವಾಗ್ಯುದ್ದಕ್ಕೆ ಕಾಂಗ್ರೆಸ್ ನಾಯಕರು ಅಣಿ
ಲೋಕಸಭಾ ಚುನಾವಣೆಗೆ ಜನರನ್ನ ಸೆಳೆಯಲು ಗ್ಯಾಸ್ ಸಿಲಿಂಡರ್ ಬೆಲೆ ಇಳಿಸಲಾಯ್ತಾ. ಹೀಗೊಂದು ಪ್ರಶ್ನೆ ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಮರಕ್ಕೆ ಕಾರಣವಾಗಿದೆ. ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆಯಾಗಿರೋದು ರಾಜ್ಯ ಕಾಂಗ್ರೆಸ್ ನಾಯಕರ ಪಾಲಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇದೇ ಅಸ್ತ್ರವನ್ನ ಇಟ್ಟುಕೊಂಡು ಕೇಂದ್ರದ ಮೇಲೆ ವಾಗ್ಯುದ್ದ ನಡೆಸಲು ರಾಜ್ಯ ಕಾಂಗ್ರೆಸ್ ನಾಯಕರು ಅಣಿಯಾಗಿದ್ದಾರೆ.
ಸಿಲಿಂಡರ್ ಬೆಲೆ ಇಳಿಕೆ.. ಶೆಟ್ಟರ್ ವಾಕ್ ಸಮರ!
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆ ಮಾಡಿರೋ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ. ಚುನಾವಣೆ ಹೊಸ್ತಿಲಲ್ಲೇ ಸಿಲಿಂಡರ್ ಬೆಲೆ ಇಳಿಸಿದ್ದು ಚುನಾವಣೆ ಗಿಮಿಕ್ ಅಲ್ವಾ ಅಂತ ಕೇಂದ್ರ ಸರ್ಕಾರವನ್ನ ಕುಟುಕಿದ್ದಾರೆ.
‘ಭಯ ಶುರುವಾಗಿದೆ’
ಕೇಂದ್ರ ಸರ್ಕಾರ ಸಿಲಿಂಡರ್ ಬೆಲೆ ಇಳಿಸಿರೋದು ನೋಡಿದ್ರೆ ಕೇಂದ್ರದಲ್ಲಿ ಕಾಂಗ್ರೆಸ್ ಬರುತ್ತೆಂದು ಅನಿಸುತ್ತಿದೆ. ಈಗಾಗಲೇ ನಾಲ್ಕೈದು ರಾಜ್ಯಗಳ ಸಮಿಕ್ಷೆಯಲ್ಲಿ ಕಾಂಗ್ರೆಸ್ ಬರುತ್ತೆ ಎಂದು ಭವಿಷ್ಯ ಹೇಳಲಾಗುತ್ತಿದೆ. ಹೀಗಾಗಿ ಬಿಜೆಪಿಗೆ ಹೆದರಿಕೆ ಸ್ಟಾರ್ಟ್ ಆಗಿದೆ.
ಎಲೆಕ್ಷನ್ ಬಂದಿದ್ದರಿಂದ ಡಿಸೆಂಬರ್ನಲ್ಲಿ ಇನ್ನಷ್ಟು ರಿಯಾಯತಿ ಕೊಡಬಹುದು. ಈ ಬಗ್ಗೆ ಮೋದಿ ಬಹಳ ತಲೆ ಕೆಡಿಸಿಕೊಳ್ಳಬಹುದು. ಅವರು ಉಚಿತ ಘೋಷಣೆಗಳು ಮಾಡುವ ಚಾನ್ಸ್ ಇದೆ ಅನಿಸುತ್ತಿದೆ.ಜಗದೀಶ್ ಶೆಟ್ಟರ್, ಮಾಜಿ ಸಿಎಂ
‘2000ದ ಮುಂದೆ ಸಿಲಿಂಡರ್ ದರ ಏನೂ ಅಲ್ಲ’!
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಸಹ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಗೃಹಲಕ್ಷ್ಮಿಯ 2,000 ಹಣದ ಮುಂದೆ ಸಿಲಿಂಡರ್ ದರ ಏನೂ ಅಲ್ಲ ಅಂತ ಬೆಲೆ ಇಳಿಕೆಯನ್ನ ಅಲ್ಲಗೆಳೆದಿದ್ದಾರೆ.
ಅನ್ನದಾತರ ಓಲೈಕೆಗೆ ಸಜ್ಜಾದ ಮೋದಿ ಸರ್ಕಾರ!
ಗ್ಯಾಸ್ ಸಿಲಿಂಡರ್ ದರವನ್ನ 200 ರೂಪಾಯಿ ಇಳಿಕೆ ಮಾಡಿ ಜನಸಾಮಾನ್ಯರ ಮನವೊಲಿಕೆಗೆ ಮುಂದಾಗಿರೋ ಕೇಂದ್ರ ಸರ್ಕಾರ ಅನ್ನದಾತರಿಗೂ ಗಿಫ್ಟ್ ನೀಡಲು ಸಜ್ಜಾಗಿದೆ. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ನೀಡುತ್ತಿದ್ದ 6,000 ಸಹಾಯಧನದ ಮೊತ್ತವನ್ನ ಹೆಚ್ಚಳ ಮಾಡಲು ನಿರ್ಧರಿಸಿದೆ ಎನ್ನಲಾಗ್ತಿದೆ.
ಲೋಕಸಭೆ ಎಲೆಕ್ಷನ್ ಹೊತ್ತಲ್ಲೇ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ದಾಳ ಉರುಳಿಸೋಕೆ ಸಜ್ಜಾಗಿರೋದು ಕಾಂಗ್ರೆಸ್ಸಿಗರನ್ನ ಕೆರಳಿಸಿದೆ. ಎಲೆಕ್ಷನ್ ನೆಪದಲ್ಲಾದ್ರೂ ಬೆಲೆ ಏರಿಕೆ ಬಿಸಿ ಇಂದ ಕೊಂಚ ರಿಲೀಫ್ ಸಿಗ್ತಲ್ಲ ಅಂತ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ