newsfirstkannada.com

ಪೋಷಕರೇ ಎಚ್ಚರ: ಮಳೆಗಾಲದಲ್ಲಿ ಮಕ್ಕಳನ್ನೇ ಟಾರ್ಗೆಟ್​ ಮಾಡುತ್ತಿದೆ ಮದ್ರಾಸ್​ ಐ; ಏನಿದು ರೋಗ?

Share :

24-07-2023

    ಮಳೆಗಾಲದಲ್ಲೇ ಪೋಷಕರಿಗೆ ಕಾಡುತ್ತಿದೆ ಮತ್ತೊಂದು ಸಮಸ್ಯೆ..!

    ವರುಣನ ಆರ್ಭಟದ ಮಧ್ಯೆಯೂ ಮಕ್ಕಳಿಗೆ ಮದ್ರಾಸ್​ ಐ ಕಂಟಕ

    ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಲೇಬೇಕಾದ ಅನಿವಾರ್ಯ

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್‌ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್‌ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್​​ ಐ ಕಾಣಿಕೊಂಡಿದೆ. ಇದನ್ನು ಪಿಂಕ್​ ಐ ಎಂದು ಕರೆಯಲಾಗುತ್ತದೆ.

ಸಿಲಿಕಾನ್​ ಸಿಟಿ ಬೆಂಗಳೂರು ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.

ಏನಿದು ಮದ್ರಾಸ್​ ಐ?

ಮಳೆಗಾಲದಲ್ಲಿ ಮದ್ರಾಸ್‌ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್​ ಐ. ಇದಕ್ಕೆ ಕಂಜಂಕ್ಟಿವಿಟಿಸ್‌ ಎಂದೂ ಕರೆಯುತ್ತೇವೆ. ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ: ಮಳೆಗಾಲದಲ್ಲಿ ಮಕ್ಕಳನ್ನೇ ಟಾರ್ಗೆಟ್​ ಮಾಡುತ್ತಿದೆ ಮದ್ರಾಸ್​ ಐ; ಏನಿದು ರೋಗ?

https://newsfirstlive.com/wp-content/uploads/2023/07/Madras-Eye.jpg

    ಮಳೆಗಾಲದಲ್ಲೇ ಪೋಷಕರಿಗೆ ಕಾಡುತ್ತಿದೆ ಮತ್ತೊಂದು ಸಮಸ್ಯೆ..!

    ವರುಣನ ಆರ್ಭಟದ ಮಧ್ಯೆಯೂ ಮಕ್ಕಳಿಗೆ ಮದ್ರಾಸ್​ ಐ ಕಂಟಕ

    ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಲೇಬೇಕಾದ ಅನಿವಾರ್ಯ

ಬೆಂಗಳೂರು: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್‌ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್‌ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್​​ ಐ ಕಾಣಿಕೊಂಡಿದೆ. ಇದನ್ನು ಪಿಂಕ್​ ಐ ಎಂದು ಕರೆಯಲಾಗುತ್ತದೆ.

ಸಿಲಿಕಾನ್​ ಸಿಟಿ ಬೆಂಗಳೂರು ಮಾತ್ರ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.

ಏನಿದು ಮದ್ರಾಸ್​ ಐ?

ಮಳೆಗಾಲದಲ್ಲಿ ಮದ್ರಾಸ್‌ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್​ ಐ. ಇದಕ್ಕೆ ಕಂಜಂಕ್ಟಿವಿಟಿಸ್‌ ಎಂದೂ ಕರೆಯುತ್ತೇವೆ. ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More