ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ
ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳು ಸಾವು
ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಥಾರ್ ಚಾಲಕ
ಮೈಸೂರು: ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಪೊಲೀಸ್ ಪೇದೆಗಳಿಬ್ಬರ ದುರ್ಮರಣ ಹೊಂದಿದ್ದಾರೆ. ಮೃತರನ್ನು ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟೆ (24) ಎಂದು ಗುರುತಿಸಲಾಗಿದೆ.
ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳಿಬ್ಬರು ತಡರಾತ್ರಿ ಲಲಿತಮಹಲ್ ಹೋಟೆಲ್ ಸಮೀಪ ಚಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಫುಡ್ ಸ್ಟ್ರೀಟ್ನಲ್ಲಿ ಊಟದ ಮಾಡಿದ ಪೇದೆಗಳು ಬಳಿಕ ತಮ್ಮ ಪಲ್ಸರ್ ಬೈಕ್ನಲ್ಲಿ ಕೆಎಸ್ಆರ್ಪಿ ಬಟಾಲಿಯನ್ ಕಡೆ ಹೋಗುವಾಗ ಅಪಘಾತ ನಡೆದಿದೆ.
ಎದುರಿಗೆ ಬಂದ ಮಹೀಂದ್ರಾ ಥಾರ್ ಕಾರು ಬೈಕ್ನಲ್ಲಿ ಚಲಿಸುತ್ತಿದ್ದ ಪಿ.ಮಹೇಶ್, ಅಮರನಾಥ ತಾಳಿಕೋಟಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಪೇದೆಗಳ ಸಾವನ್ನಪ್ಪಿದ್ದಾರೆ. ಡಿಕ್ಕಿ ಮಾಡಿ ಎಸ್ಕೇಪ್ ಆಗ್ತಿದ್ದ ಚಾಲಕನನ್ನ ಸಾರ್ವಜನಿಕರು ಹಿಡಿದಿದ್ದಾರೆ. ಸಿದ್ಧಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ
ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳು ಸಾವು
ಡಿಕ್ಕಿ ಹೊಡೆದು ಎಸ್ಕೇಪ್ ಆಗಲು ಯತ್ನಿಸಿದ ಥಾರ್ ಚಾಲಕ
ಮೈಸೂರು: ಪಲ್ಸರ್ ಮತ್ತು ಮಹೀಂದ್ರಾ ಥಾರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಪೊಲೀಸ್ ಪೇದೆಗಳಿಬ್ಬರ ದುರ್ಮರಣ ಹೊಂದಿದ್ದಾರೆ. ಮೃತರನ್ನು ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟೆ (24) ಎಂದು ಗುರುತಿಸಲಾಗಿದೆ.
ರಾಜ್ಯ ಮೀಸಲು ಪಡೆಯ 5ನೇ ಬಟಾಲಿಯನ್ ಪೇದೆಗಳಿಬ್ಬರು ತಡರಾತ್ರಿ ಲಲಿತಮಹಲ್ ಹೋಟೆಲ್ ಸಮೀಪ ಚಲಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಲ್ಲೇ ಪಕ್ಕದಲ್ಲಿದ್ದ ಫುಡ್ ಸ್ಟ್ರೀಟ್ನಲ್ಲಿ ಊಟದ ಮಾಡಿದ ಪೇದೆಗಳು ಬಳಿಕ ತಮ್ಮ ಪಲ್ಸರ್ ಬೈಕ್ನಲ್ಲಿ ಕೆಎಸ್ಆರ್ಪಿ ಬಟಾಲಿಯನ್ ಕಡೆ ಹೋಗುವಾಗ ಅಪಘಾತ ನಡೆದಿದೆ.
ಎದುರಿಗೆ ಬಂದ ಮಹೀಂದ್ರಾ ಥಾರ್ ಕಾರು ಬೈಕ್ನಲ್ಲಿ ಚಲಿಸುತ್ತಿದ್ದ ಪಿ.ಮಹೇಶ್, ಅಮರನಾಥ ತಾಳಿಕೋಟಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಇಬ್ಬರು ಪೇದೆಗಳ ಸಾವನ್ನಪ್ಪಿದ್ದಾರೆ. ಡಿಕ್ಕಿ ಮಾಡಿ ಎಸ್ಕೇಪ್ ಆಗ್ತಿದ್ದ ಚಾಲಕನನ್ನ ಸಾರ್ವಜನಿಕರು ಹಿಡಿದಿದ್ದಾರೆ. ಸಿದ್ಧಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ