newsfirstkannada.com

ಗಗನಸಖಿ ಕೊಲೆ ಕೇಸ್​: ಪೊಲೀಸ್​ ಕಸ್ಟಡಿಯಲ್ಲೇ ಆರೋಪಿ ಸಾವು.. ಹಲವು ಅನುಮಾನ..!

Share :

08-09-2023

    ಸಾವಿಗೆ ಪ್ಯಾಂಟ್​ ನೇಣಿನ ಕುಣಿಕೆಯಾಯಿತಾ? ಏನಿದು ಕೇಸ್?

    ಪೊಲೀಸ್​ ಕಸ್ಟಡಿಯಲ್ಲೇ ಸಾವು, ಹಲವು ಅನುಮಾನಗಳು..!

    ಚಾಕುವಿನಿಂದ ಗಗನಸಖಿಯ ಕತ್ತು ಸೀಳಿದ್ದ ಮೃತ ಆರೋಪಿ

ಮುಂಬೈ: ಏರ್ ಇಂಡಿಯಾದ ಟ್ರೇನಿ ಗಗನಸಖಿ ರೂಪಾಲ್ ಓಗ್ರೆರವರ ಹತ್ಯೆ ಕೇಸ್​ನಲ್ಲಿ ಬಂಧಿತನಾಗಿದ್ದ ಆರೋಪಿಯು ಮುಂಬೈಯ ಅಂಧೇರಿ ಪೊಲೀಸ್​ ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಪೊಲೀಸ್​ ಕಸ್ಟಡಿಯಲ್ಲೇ ಆರೋಪಿ ಮೃತ ಪಟ್ಟಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಹೇಳಲಾಗಿದೆ.

ಆರೋಪಿ ವಿಕ್ರಮ್ ಅಥ್ವಾಲ್ (40) ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ. ಆರೋಪಿಯು ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಪ್ಯಾಂಟ್​ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಈತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.

ಮೃತ ಟ್ರೇನಿ ಗಗನಸಖಿ ರೂಪಾಲ್ ಓಗ್ರೆ

ರೂಪಾಲ್ ಓಗ್ರೆ ವಾಸಿಸುತ್ತಿದ್ದ ಐಷಾರಾಮಿ ಫ್ಲ್ಯಾಟ್​ನಲ್ಲಿ ಕಳೆದ ಒಂದು ವರ್ಷದಿಂದ ಮೃತ ಆರೋಪಿ ಹೌಸ್​ ಕೀಪಿಂಗ್ ಕೆಲಸ ಮಾಡುತ್ತಿದ್ದನು. ರೂಪಾಲ್ ಹತ್ಯೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದ್ದರು. ಬಳಿಕ ನ್ಯಾಯಾಲಯ ಸೆಪ್ಟೆಂಬರ್ 8ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಆದ್ರೆ ಆರೋಪಿಯು ಠಾಣೆಯ ಶೌಚಾಲಯದಲ್ಲಿಯೇ ನೇಣು ಬಿಗಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇನ್ನು ಪೊಲೀಸರ ತನಿಖೆ ವೇಳೆ ಆರೋಪಿಯು ಚಾಕುವಿನಿಂದ ಗಗನಸಖಿಯ ಕತ್ತು ಸೀಳಿದ್ದನು. ಈ ಸಂಬಂಧ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ.

ಇದನ್ನು ಓದಿ: ಮುಂಬೈ ಫ್ಲಾಟ್​​ನಲ್ಲಿ ಗಗನಸಖಿ ಅನುಮಾನಾಸ್ಪದ ಸಾವು; ಕಾರಣವೇನು..?

ಭಾನುವಾರ ತಡರಾತ್ರಿ ಅಂಧೇರಿಯ ಮರೋಲ್ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ರೂಪಲ್ ಓಗ್ರೆ ಕುತ್ತಿಗೆ ಸೀಳಿ ಶವವಾಗಿ ಪತ್ತೆಯಾಗಿದ್ದರು. ಇವರು ಮೂಲತಹ ಛತ್ತೀಸ್‌ಗಢದವರಾಗಿದ್ದು ಕಳೆದ ಏಪ್ರಿಲ್‌ನಲ್ಲಿ ಏರ್​ಲೈನ್​ನಲ್ಲಿ ತರಬೇತಿ ಪಡೆಯಲೆಂದು ಮುಂಬೈಗೆ ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಗನಸಖಿ ಕೊಲೆ ಕೇಸ್​: ಪೊಲೀಸ್​ ಕಸ್ಟಡಿಯಲ್ಲೇ ಆರೋಪಿ ಸಾವು.. ಹಲವು ಅನುಮಾನ..!

https://newsfirstlive.com/wp-content/uploads/2023/09/MUMBAI.jpg

    ಸಾವಿಗೆ ಪ್ಯಾಂಟ್​ ನೇಣಿನ ಕುಣಿಕೆಯಾಯಿತಾ? ಏನಿದು ಕೇಸ್?

    ಪೊಲೀಸ್​ ಕಸ್ಟಡಿಯಲ್ಲೇ ಸಾವು, ಹಲವು ಅನುಮಾನಗಳು..!

    ಚಾಕುವಿನಿಂದ ಗಗನಸಖಿಯ ಕತ್ತು ಸೀಳಿದ್ದ ಮೃತ ಆರೋಪಿ

ಮುಂಬೈ: ಏರ್ ಇಂಡಿಯಾದ ಟ್ರೇನಿ ಗಗನಸಖಿ ರೂಪಾಲ್ ಓಗ್ರೆರವರ ಹತ್ಯೆ ಕೇಸ್​ನಲ್ಲಿ ಬಂಧಿತನಾಗಿದ್ದ ಆರೋಪಿಯು ಮುಂಬೈಯ ಅಂಧೇರಿ ಪೊಲೀಸ್​ ಠಾಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಇನ್ನು ಪೊಲೀಸ್​ ಕಸ್ಟಡಿಯಲ್ಲೇ ಆರೋಪಿ ಮೃತ ಪಟ್ಟಿರುವುದು ಕೆಲ ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ ಎಂದು ಹೇಳಲಾಗಿದೆ.

ಆರೋಪಿ ವಿಕ್ರಮ್ ಅಥ್ವಾಲ್ (40) ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವ ವ್ಯಕ್ತಿ. ಆರೋಪಿಯು ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಪ್ಯಾಂಟ್​ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದಾನೆ. ಈತನಿಗೆ ಮದುವೆಯಾಗಿದ್ದು ಇಬ್ಬರು ಮಕ್ಕಳು ಕೂಡ ಇದ್ದಾರೆ ಎಂದು ಹೇಳಲಾಗುತ್ತಿದೆ.

ಮೃತ ಟ್ರೇನಿ ಗಗನಸಖಿ ರೂಪಾಲ್ ಓಗ್ರೆ

ರೂಪಾಲ್ ಓಗ್ರೆ ವಾಸಿಸುತ್ತಿದ್ದ ಐಷಾರಾಮಿ ಫ್ಲ್ಯಾಟ್​ನಲ್ಲಿ ಕಳೆದ ಒಂದು ವರ್ಷದಿಂದ ಮೃತ ಆರೋಪಿ ಹೌಸ್​ ಕೀಪಿಂಗ್ ಕೆಲಸ ಮಾಡುತ್ತಿದ್ದನು. ರೂಪಾಲ್ ಹತ್ಯೆಯ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ಪೊಲೀಸರು ಕೋರ್ಟ್​ಗೆ ಹಾಜರು ಪಡಿಸಿದ್ದರು. ಬಳಿಕ ನ್ಯಾಯಾಲಯ ಸೆಪ್ಟೆಂಬರ್ 8ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಆದ್ರೆ ಆರೋಪಿಯು ಠಾಣೆಯ ಶೌಚಾಲಯದಲ್ಲಿಯೇ ನೇಣು ಬಿಗಿದು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇನ್ನು ಪೊಲೀಸರ ತನಿಖೆ ವೇಳೆ ಆರೋಪಿಯು ಚಾಕುವಿನಿಂದ ಗಗನಸಖಿಯ ಕತ್ತು ಸೀಳಿದ್ದನು. ಈ ಸಂಬಂಧ ಚಾಕುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಹೇಳಲಾಗಿದೆ.

ಇದನ್ನು ಓದಿ: ಮುಂಬೈ ಫ್ಲಾಟ್​​ನಲ್ಲಿ ಗಗನಸಖಿ ಅನುಮಾನಾಸ್ಪದ ಸಾವು; ಕಾರಣವೇನು..?

ಭಾನುವಾರ ತಡರಾತ್ರಿ ಅಂಧೇರಿಯ ಮರೋಲ್ ಪ್ರದೇಶದ ಬಾಡಿಗೆ ಫ್ಲಾಟ್‌ನಲ್ಲಿ ರೂಪಲ್ ಓಗ್ರೆ ಕುತ್ತಿಗೆ ಸೀಳಿ ಶವವಾಗಿ ಪತ್ತೆಯಾಗಿದ್ದರು. ಇವರು ಮೂಲತಹ ಛತ್ತೀಸ್‌ಗಢದವರಾಗಿದ್ದು ಕಳೆದ ಏಪ್ರಿಲ್‌ನಲ್ಲಿ ಏರ್​ಲೈನ್​ನಲ್ಲಿ ತರಬೇತಿ ಪಡೆಯಲೆಂದು ಮುಂಬೈಗೆ ಬಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More