newsfirstkannada.com

‘ಪ್ರೀತಿಸಿ ಮದುವೆಯಾದೆ.. ಈಗ ಜಾತಿ ಹೆಸರಲ್ಲಿ ಟಾರ್ಚರ್​..’ ಸೆಲ್ಫಿ ವಿಡಿಯೋ ಮಾಡಿ ಜೀವ ತೆಗೆದುಕೊಂಡ ವ್ಯಕ್ತಿ

Share :

16-08-2023

    ಬೆಂಗಳೂರಿನ ಕಾಟನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ

    6 ವರ್ಷ ಪ್ರೀತಿಸಿ ಮದುವೆಯಾದ ಮೇಲೆ ಟಾರ್ಚರ್ ಆರೋಪ

    ವಿಜಯಪುರದಿಂದ ಬೆಂಗಳೂರಿಗೆ ಬಂದು ಪ್ರಾಣಬಿಟ್ಟ ಯುವಕ

ಸೆಲ್ಫಿ ವಿಡಿಯೋ ಮಾಡಿಟ್ಟು ಲಾಡ್ಜ್​​ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಶಿಧರ್ ಆತ್ಮಹತ್ಯೆಗೆ ಶರಣಾದ ಯುವಕ.

ಏನಿದು ಪ್ರಕರಣ..?
ವರದಿಗಳ ಪ್ರಕಾರ ಶಶಿಧರ್ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದ್ವೆ ಆಗಿದ್ದ. ಶಶಿಧರ್ ವಿರುದ್ಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೋಕ್ಸೋ ಆಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶಶಿಧರ್​ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ಅರೆಸ್ಟ್ ಮಾಡ್ತಾರೆಂದು ಹೆದರಿ ಯುವಕ ಬೆಂಗಳೂರಿಗೆ ಬಂದಿದ್ದ. ಮೊನ್ನೆ ಕಾಟನ್ ಪೇಟೆಯ ಗಜಾನನ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ. ರಾತ್ರಿ ರೂಮ್​​ನ ಫ್ಯಾನ್​ಗೆ ನೇಣುಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಆರು ವರ್ಷ ಲವ್ ಮಾಡಿ ನಾನು ಮದುವೆಯಾದೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ-ಅಮ್ಮ ಮತ್ತೆ ಅವರ ಕಾಕಾ, ಅವರಜ್ಜಿ ಮತ್ತೆ ಅವರ ಸಮಾಜದರು ನನಗೆ ಟಾರ್ಚರ್ ನೀಡಲು ಶುರುಮಾಡಿದ್ದಾರೆ. ನನ್ನ ಸಾವಿಗೆ ಇವರೇ ಕಾರಣ. ಪೊಲೀಸರು ಕೂಡ ನಾನು ನೀಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾವಿಗೆ ಶರಣಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪ್ರೀತಿಸಿ ಮದುವೆಯಾದೆ.. ಈಗ ಜಾತಿ ಹೆಸರಲ್ಲಿ ಟಾರ್ಚರ್​..’ ಸೆಲ್ಫಿ ವಿಡಿಯೋ ಮಾಡಿ ಜೀವ ತೆಗೆದುಕೊಂಡ ವ್ಯಕ್ತಿ

https://newsfirstlive.com/wp-content/uploads/2023/08/BNG_YOUTH_DIED.jpg

    ಬೆಂಗಳೂರಿನ ಕಾಟನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ

    6 ವರ್ಷ ಪ್ರೀತಿಸಿ ಮದುವೆಯಾದ ಮೇಲೆ ಟಾರ್ಚರ್ ಆರೋಪ

    ವಿಜಯಪುರದಿಂದ ಬೆಂಗಳೂರಿಗೆ ಬಂದು ಪ್ರಾಣಬಿಟ್ಟ ಯುವಕ

ಸೆಲ್ಫಿ ವಿಡಿಯೋ ಮಾಡಿಟ್ಟು ಲಾಡ್ಜ್​​ನಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಶಶಿಧರ್ ಆತ್ಮಹತ್ಯೆಗೆ ಶರಣಾದ ಯುವಕ.

ಏನಿದು ಪ್ರಕರಣ..?
ವರದಿಗಳ ಪ್ರಕಾರ ಶಶಿಧರ್ ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮದ್ವೆ ಆಗಿದ್ದ. ಶಶಿಧರ್ ವಿರುದ್ಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೋಕ್ಸೋ ಆಕ್ಟ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಶಶಿಧರ್​ನನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಪೊಲೀಸರು ಅರೆಸ್ಟ್ ಮಾಡ್ತಾರೆಂದು ಹೆದರಿ ಯುವಕ ಬೆಂಗಳೂರಿಗೆ ಬಂದಿದ್ದ. ಮೊನ್ನೆ ಕಾಟನ್ ಪೇಟೆಯ ಗಜಾನನ ಲಾಡ್ಜ್ ನಲ್ಲಿ ರೂಮ್ ಮಾಡಿಕೊಂಡಿದ್ದ. ರಾತ್ರಿ ರೂಮ್​​ನ ಫ್ಯಾನ್​ಗೆ ನೇಣುಬೀಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆತ್ಮಹತ್ಯೆಗೂ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ಆರು ವರ್ಷ ಲವ್ ಮಾಡಿ ನಾನು ಮದುವೆಯಾದೆ. ಇವಾಗ ಜಾತಿ ಸಲುವಾಗಿ ಅವರ ಅಪ್ಪ-ಅಮ್ಮ ಮತ್ತೆ ಅವರ ಕಾಕಾ, ಅವರಜ್ಜಿ ಮತ್ತೆ ಅವರ ಸಮಾಜದರು ನನಗೆ ಟಾರ್ಚರ್ ನೀಡಲು ಶುರುಮಾಡಿದ್ದಾರೆ. ನನ್ನ ಸಾವಿಗೆ ಇವರೇ ಕಾರಣ. ಪೊಲೀಸರು ಕೂಡ ನಾನು ನೀಡುತ್ತಿರುವ ದೂರನ್ನು ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಸಾವಿಗೆ ಶರಣಾಗಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More