ಜ್ವರ ಬರುವ ಮುನ್ನವೇ ಆರೋಗ್ಯದ ಬಗ್ಗೆ ಎಚ್ಚರವಹಿಸಿ!
ಜ್ವರ ಬಂತು ಎಂದು ಇಂಜೆಕ್ಷನ್ ಹಾಕಿಸಿದ್ರೆ ಮುಗೀತು ಕಥೆ
ಎಲ್ಲಾರು ಓದಲೇಬೇಕಾದ ಸ್ಟೋರಿ ಇದು! ಯಾಕೆ ಗೊತ್ತಾ?
ಬೆಂಗಳೂರು: ಒಳ್ಳೆ ಹೈಟು ಮತ್ತು ಪರ್ಸನಾಲಿಟಿ. ಮುಖದಲ್ಲಿ ಎಂದೂ ಮಾಸದ ನಗು. ನೋಡ್ದೋರೆಲ್ಲಾ ವ್ಹಾವ್ ಎಂಥಾ ಪರ್ಸನಾಲಿಟಿ ಮಾರೆೇ! ಚೆಂದ ಇದ್ದಾನೆ ಹುಡುಗ ಅಂತಿದ್ರು. ವಯಸ್ಸೂ ಅಷ್ಟೇ, ಜಸ್ಟ್ 31. ಇತ್ತೀಚೆಗೆ ಅಣ್ಣನ ಮದುವೆಯಲ್ಲಿ ಹೀಗೆ ಚೆಂದ ಸೂಟ್ ಹಾಕ್ಕೊಂಡು ಮಿಂಚಿದ್ದ ಈ ಯುವಕ ಅಮರ್ ಶೆಟ್ಟಿ. ಆದ್ರೀಗ ಈ ಯುವಕ ತನ್ನವರ ನೆನಪಿನಲ್ಲಷ್ಟೇ ‘ಅಮರ’!
ಆಸ್ಪತ್ರೆಯಲ್ಲಿ ಪಡೆದ ಒಂದು ಇಂಜೆಕ್ಷನ್ ಸಾವಿಗೆ ಕಾರಣವಾಯ್ತಾ?
ಮೂಲತಃ ಕುಂದಾಪುರದ ಅಮರ್ ಶೆಟ್ಟಿ ವರ್ಷದ ಹಿಂದೆ ದುಬೈನಿಂದ ವಾಪಾಸಾಗಿದ್ದು ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡ್ತಿದ್ದ. ಆದ್ರೆ ಕಳೆದ 13ನೇ ತಾರೀಕು ಅಮರ್ಗೆ ಜ್ವರ ಕಾಡಿತ್ತು. ಹೀಗಾಗಿ ಮಾಗಡಿಯ ಭಾಗ್ಯಶ್ರೀ ಕ್ಲಿನಿಕ್ ಹೋಗಿ ಇಂಜೆಕ್ಷನ್ ಪಡ್ಕೊಂಡಿದ್ದ. ಆದ್ರೆ ಜ್ವರ ಕಡಿಮೆ ಮಾಡ್ಬೇಕಿದ್ದ ಇಂಜೆಕ್ಷನ್ ಬರೆದಿದ್ದು ಸಾವಿನ ಶರ. ಅದನ್ನ ಸಾಯೋ ಮೊದಲಿ ಅಮರ್ ಶೆಟ್ಟಿ ಹೇಳಿದ್ದ.
ಯಾವಾಗ ಇಂಜೆಕ್ಷನ್ ಕೊಟ್ಟ ಜಾಗ ದೊಡ್ಡದಾಗಿಬಿಡ್ತೋ ಗುರುವಾಗ ಅಮರ್ ಶೆಟ್ಟಿಯನ್ನ ಕಿಮ್ಸ್ಗೆ ದಾಖಲು ಮಾಡಲಾಗಿದೆ. ಆದ್ರೆ ಅಷ್ಟೊತ್ತಿಗಾಗ್ಲೇ ದೇಹದ ಹಲವು ಅಂಗಾಂಗಳು ವೈಫಲ್ಯ ಕಾಣೋಕೆ ಶುರುವಾಗಿವೆ. ಶುಕ್ರವಾರ ಸಂಜೆಯಾಗ್ತಿದ್ದಂತೆ ಅಮರ್ ಶೆಟ್ಟಿ ತನ್ನ ಉಸಿರಾಟವನ್ನೇ ನಿಲ್ಲಿಸಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಪೋಷಕರು ಆರೋಪಿಸ್ತಿದ್ದಾರೆ.
ಕಳೆದ ಮೂರು ವರ್ಷದ ಹಿಂದಷ್ಟೇ ಅಮರ್ ಶೆಟ್ಟಿ ತಂದೆಯನ್ನ ಕಳ್ಕೊಂಡಿದ್ದ. ತಮ್ಮ, ತಂಗಿ ಹಾಗೂ ತಾಯಿ ಇರೋ ಕುಟುಂಬಕ್ಕೆ ಈಗ ಮತ್ತೊಂದು ಆಘಾತ. ಸದ್ಯ ಕುಟುಂಬಸ್ಥರು ಈ ಬಗ್ಗೆ ಕೆ.ಪಿ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಅದೇನೇ ಇದ್ರೂ ಕೇವಲ ಜ್ವರ ಅಂತ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಪಡೆದ ಯುವಕ ಸಾವನ್ನಪ್ಪಿದ್ದು ಮಾತ್ರ ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜ್ವರ ಬರುವ ಮುನ್ನವೇ ಆರೋಗ್ಯದ ಬಗ್ಗೆ ಎಚ್ಚರವಹಿಸಿ!
ಜ್ವರ ಬಂತು ಎಂದು ಇಂಜೆಕ್ಷನ್ ಹಾಕಿಸಿದ್ರೆ ಮುಗೀತು ಕಥೆ
ಎಲ್ಲಾರು ಓದಲೇಬೇಕಾದ ಸ್ಟೋರಿ ಇದು! ಯಾಕೆ ಗೊತ್ತಾ?
ಬೆಂಗಳೂರು: ಒಳ್ಳೆ ಹೈಟು ಮತ್ತು ಪರ್ಸನಾಲಿಟಿ. ಮುಖದಲ್ಲಿ ಎಂದೂ ಮಾಸದ ನಗು. ನೋಡ್ದೋರೆಲ್ಲಾ ವ್ಹಾವ್ ಎಂಥಾ ಪರ್ಸನಾಲಿಟಿ ಮಾರೆೇ! ಚೆಂದ ಇದ್ದಾನೆ ಹುಡುಗ ಅಂತಿದ್ರು. ವಯಸ್ಸೂ ಅಷ್ಟೇ, ಜಸ್ಟ್ 31. ಇತ್ತೀಚೆಗೆ ಅಣ್ಣನ ಮದುವೆಯಲ್ಲಿ ಹೀಗೆ ಚೆಂದ ಸೂಟ್ ಹಾಕ್ಕೊಂಡು ಮಿಂಚಿದ್ದ ಈ ಯುವಕ ಅಮರ್ ಶೆಟ್ಟಿ. ಆದ್ರೀಗ ಈ ಯುವಕ ತನ್ನವರ ನೆನಪಿನಲ್ಲಷ್ಟೇ ‘ಅಮರ’!
ಆಸ್ಪತ್ರೆಯಲ್ಲಿ ಪಡೆದ ಒಂದು ಇಂಜೆಕ್ಷನ್ ಸಾವಿಗೆ ಕಾರಣವಾಯ್ತಾ?
ಮೂಲತಃ ಕುಂದಾಪುರದ ಅಮರ್ ಶೆಟ್ಟಿ ವರ್ಷದ ಹಿಂದೆ ದುಬೈನಿಂದ ವಾಪಾಸಾಗಿದ್ದು ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡ್ತಿದ್ದ. ಆದ್ರೆ ಕಳೆದ 13ನೇ ತಾರೀಕು ಅಮರ್ಗೆ ಜ್ವರ ಕಾಡಿತ್ತು. ಹೀಗಾಗಿ ಮಾಗಡಿಯ ಭಾಗ್ಯಶ್ರೀ ಕ್ಲಿನಿಕ್ ಹೋಗಿ ಇಂಜೆಕ್ಷನ್ ಪಡ್ಕೊಂಡಿದ್ದ. ಆದ್ರೆ ಜ್ವರ ಕಡಿಮೆ ಮಾಡ್ಬೇಕಿದ್ದ ಇಂಜೆಕ್ಷನ್ ಬರೆದಿದ್ದು ಸಾವಿನ ಶರ. ಅದನ್ನ ಸಾಯೋ ಮೊದಲಿ ಅಮರ್ ಶೆಟ್ಟಿ ಹೇಳಿದ್ದ.
ಯಾವಾಗ ಇಂಜೆಕ್ಷನ್ ಕೊಟ್ಟ ಜಾಗ ದೊಡ್ಡದಾಗಿಬಿಡ್ತೋ ಗುರುವಾಗ ಅಮರ್ ಶೆಟ್ಟಿಯನ್ನ ಕಿಮ್ಸ್ಗೆ ದಾಖಲು ಮಾಡಲಾಗಿದೆ. ಆದ್ರೆ ಅಷ್ಟೊತ್ತಿಗಾಗ್ಲೇ ದೇಹದ ಹಲವು ಅಂಗಾಂಗಳು ವೈಫಲ್ಯ ಕಾಣೋಕೆ ಶುರುವಾಗಿವೆ. ಶುಕ್ರವಾರ ಸಂಜೆಯಾಗ್ತಿದ್ದಂತೆ ಅಮರ್ ಶೆಟ್ಟಿ ತನ್ನ ಉಸಿರಾಟವನ್ನೇ ನಿಲ್ಲಿಸಿದ್ದಾನೆ. ವೈದ್ಯರ ನಿರ್ಲಕ್ಷ್ಯದಿಂದಲೇ ಹೀಗಾಗಿದೆ ಎಂದು ಪೋಷಕರು ಆರೋಪಿಸ್ತಿದ್ದಾರೆ.
ಕಳೆದ ಮೂರು ವರ್ಷದ ಹಿಂದಷ್ಟೇ ಅಮರ್ ಶೆಟ್ಟಿ ತಂದೆಯನ್ನ ಕಳ್ಕೊಂಡಿದ್ದ. ತಮ್ಮ, ತಂಗಿ ಹಾಗೂ ತಾಯಿ ಇರೋ ಕುಟುಂಬಕ್ಕೆ ಈಗ ಮತ್ತೊಂದು ಆಘಾತ. ಸದ್ಯ ಕುಟುಂಬಸ್ಥರು ಈ ಬಗ್ಗೆ ಕೆ.ಪಿ ಅಗ್ರಹಾರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಅದೇನೇ ಇದ್ರೂ ಕೇವಲ ಜ್ವರ ಅಂತ ಆಸ್ಪತ್ರೆಗೆ ಹೋಗಿ ಇಂಜೆಕ್ಷನ್ ಪಡೆದ ಯುವಕ ಸಾವನ್ನಪ್ಪಿದ್ದು ಮಾತ್ರ ನಿಜಕ್ಕೂ ದುರಂತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ