ಅಪರೂಪದ ಸಾಧನೆ ಮಾಡಿ ಬೇಷ್ ಎನಿಸಿಕೊಂಡ ವ್ಯಕ್ತಿ
24 ಕಿಲೋ ಮೀಟರ್ ಹಿಮ್ಮಖವಾಗಿ ಟ್ರ್ಯಾಕ್ಟರ್ ಚಲಾವಣೆ
1 ಗಂಟೆ 45 ನಿಮಿಷ ದೂರವನ್ನು ಕ್ರಮಿಸಿ ಬಹುಮಾನ ಗೆದ್ದ ಚಾಲಕ
ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಿಸಿ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.
ಹಿಮ್ಮುಖವಾಗಿ ಚಲಾಯಿಸಿದ ಬಸಲಿಂಗಪ್ಪ
ಹೌದು ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಬೇಷ್ ಎನಿಸಿಕೊಂಡಿದ್ದಾನೆ. ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದ್ರೆ ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
1 ತಾಸು 45 ನಿಮಿಷದಲ್ಲಿ ದೂರ
ಬಸಲಿಂಗಪ್ಪ ವಿಜಯಪುರ ಹೈದ್ರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್ ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ತಲುಪಿದ್ದಾನೆ. ಇನ್ನೋರ್ವ ಪ್ರತಿಸ್ಪರ್ಧಿ ಪರಶುರಾಮ ಟೋಕಾಪುರ ಎಂಬುವವರು ಸಹ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದರೂ ಸಹ 1 ತಾಸು 45 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಆದರೆ ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ವ್ಯಕ್ತಿಯೋರ್ವ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಿಸಿ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.#Tractor #Yadagiri #reverse #newsfirstkannada pic.twitter.com/ZltwFT9KSq
— NewsFirst Kannada (@NewsFirstKan) August 23, 2023
ಸುಮಾರು 24 ಕಿ.ಮೀ. ದೂರದವರೆಗೆ ಇರುವ ಈ ದೂರವನ್ನು ತಲುಪಿದಾಗ ನೆರೆಸಿಧಸ ಗ್ರಾಮಸ್ಥರು ಶಿಳ್ಳೆ, ಕೇಕೇ ಹಾಕಿ ವಿಜೇತ ಬಸಲಿಂಗಪ್ಪನನ್ನ ಹೊತ್ತು ಸಂಭ್ರಮಾಚರಣೆ ಮಾಡಿದ್ರು. ದೋರನಹಳ್ಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಒಟ್ಟು 1 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಬಹುಮಾನವಾಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ ವಿಜೇತನಾದ ಬಸಲಿಂಗಪ್ಪ ಹುರಸಗುಂಡಿಗಿ ನೀಡಲಾಯಿತು. ಗ್ರಾಮೀಣ ಸೊಗಡಿನ ಕ್ರೀಡೆಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಿದ್ದು ವಿಶೇಷವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಅಪರೂಪದ ಸಾಧನೆ ಮಾಡಿ ಬೇಷ್ ಎನಿಸಿಕೊಂಡ ವ್ಯಕ್ತಿ
24 ಕಿಲೋ ಮೀಟರ್ ಹಿಮ್ಮಖವಾಗಿ ಟ್ರ್ಯಾಕ್ಟರ್ ಚಲಾವಣೆ
1 ಗಂಟೆ 45 ನಿಮಿಷ ದೂರವನ್ನು ಕ್ರಮಿಸಿ ಬಹುಮಾನ ಗೆದ್ದ ಚಾಲಕ
ಇಲ್ಲೊಬ್ಬ ಅಪರೂಪದ ಸಾಹಸಿ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಿಸಿ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.
ಹಿಮ್ಮುಖವಾಗಿ ಚಲಾಯಿಸಿದ ಬಸಲಿಂಗಪ್ಪ
ಹೌದು ಯಾದಗಿರಿ ಜಿಲ್ಲೆಯ ದೋರನಹಳ್ಳಿ ಗ್ರಾಮದ ನಿವಾಸಿ ಬಸಲಿಂಗಪ್ಪ ಹುರಸಗುಂಡಗಿ ಈ ಅಪರೂಪದ ಸಾಧನೆ ಮಾಡಿ ಬೇಷ್ ಎನಿಸಿಕೊಂಡಿದ್ದಾನೆ. ನಾಗರ ಪಂಚಮಿ ಅಂಗವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿಶೇಷವಾಗಿ ವಿಭಿನ್ನ ಸಾಹಸ ಸ್ಪರ್ಧೆಗಳು ನಡೆಯುತ್ತವೆ. ಆದ್ರೆ ಇದೇ ಮೊದಲ ಬಾರಿಗೆ ಯಾದಗಿರಿ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಬಹುದೂರ ಚಲಾಯಿಸುವ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು.
1 ತಾಸು 45 ನಿಮಿಷದಲ್ಲಿ ದೂರ
ಬಸಲಿಂಗಪ್ಪ ವಿಜಯಪುರ ಹೈದ್ರಾಬಾದ್ ಹೆದ್ದಾರಿಯಲ್ಲಿ ಬರುವ ದೋರನಹಳ್ಳಿ ಗ್ರಾಮದಿಂದ ಯಾದಗಿರಿ ಹೊರವಲಯದ ವಡಗೇರಿ ಕ್ರಾಸ್ ವರೆಗೆ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದು ಒಂದು ತಾಸು 43 ನಿಮಿಷದಲ್ಲಿ ತಲುಪಿದ್ದಾನೆ. ಇನ್ನೋರ್ವ ಪ್ರತಿಸ್ಪರ್ಧಿ ಪರಶುರಾಮ ಟೋಕಾಪುರ ಎಂಬುವವರು ಸಹ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿಕೊಂಡು ಬಂದರೂ ಸಹ 1 ತಾಸು 45 ನಿಮಿಷದಲ್ಲಿ ದೂರವನ್ನು ಕ್ರಮಿಸಿದರು. ಆದರೆ ಅಂತಿಮವಾಗಿ 2 ನಿಮಿಷ ಮೊದಲು ತಲುಪಿದ ಬಸಲಿಂಗಪ್ಪ ಹುರಸಗುಂಡಿಗಿ ಅವರನ್ನು ವಿಜೇತರನ್ನಾಗಿ ಘೋಷಿಸಲಾಯಿತು.
ವ್ಯಕ್ತಿಯೋರ್ವ 1 ಗಂಟೆ 43 ನಿಮಿಷಗಳಲ್ಲಿ ಬರೋಬ್ಬರಿ 24 ಕಿಲೋ ಮೀಟರ್ ದೂರ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಿಸಿ 1 ಲಕ್ಷದ 45 ಸಾವಿರ ರೂಪಾಯಿ ಭರ್ಜರಿ ಮೊತ್ತದ ಬಹುಮಾನವನ್ನು ಬಾಚಿಕೊಂಡಿದ್ದಾನೆ.#Tractor #Yadagiri #reverse #newsfirstkannada pic.twitter.com/ZltwFT9KSq
— NewsFirst Kannada (@NewsFirstKan) August 23, 2023
ಸುಮಾರು 24 ಕಿ.ಮೀ. ದೂರದವರೆಗೆ ಇರುವ ಈ ದೂರವನ್ನು ತಲುಪಿದಾಗ ನೆರೆಸಿಧಸ ಗ್ರಾಮಸ್ಥರು ಶಿಳ್ಳೆ, ಕೇಕೇ ಹಾಕಿ ವಿಜೇತ ಬಸಲಿಂಗಪ್ಪನನ್ನ ಹೊತ್ತು ಸಂಭ್ರಮಾಚರಣೆ ಮಾಡಿದ್ರು. ದೋರನಹಳ್ಳಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಒಟ್ಟು 1 ಲಕ್ಷ 45 ಸಾವಿರ ರೂಪಾಯಿ ಹಣವನ್ನು ಬಹುಮಾನವಾಗಿ ಟ್ರ್ಯಾಕ್ಟರ್ ಹಿಮ್ಮುಖವಾಗಿ ಚಲಾಯಿಸಿ ವಿಜೇತನಾದ ಬಸಲಿಂಗಪ್ಪ ಹುರಸಗುಂಡಿಗಿ ನೀಡಲಾಯಿತು. ಗ್ರಾಮೀಣ ಸೊಗಡಿನ ಕ್ರೀಡೆಗಳು ಮರೆಯಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ವಿಶೇಷ ಸ್ಪರ್ಧೆ ಆಯೋಜಿಸಿದ್ದು ವಿಶೇಷವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ