ತಂದೆಯೇ ಎದುರೇ ಅಣ್ಣನ ಮಗನನ್ನು ಕೊಂದ ಚಿಕ್ಕಪ್ಪ
ಯುವಕನ ಮೇಲೆ ಗನ್ನಲ್ಲಿ ಮೂರು ಬಾರಿ ಶೂಟ್ ಮಾಡಿ ಕೊಲೆ
ಜಮೀನು ವಿವಾದ ಇತ್ಯರ್ಥ ಮಾಡುವ ನೆಪದಲ್ಲಿ ನಡೆಯಿತು ಕೊಲೆ
ಮಂಡ್ಯ: ತಂದೆಯ ಎದುರು ಶೂಟ್ ಮಾಡಿ ಮಗನನ್ನು ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಜಯಪಾಲ್ (19) ಕೊಲೆಯಾಗಿದ್ದಾನೆ.
ಜಯಪಾಲ್ ತನ್ನ ಚಿಕ್ಕಪ್ಪ ಸೀಮೆಎಣ್ಣೆ ಕುಮಾರ್ನಿಂದ ಹತ್ಯೆಯಾಗಿದ್ದಾನೆ. ಗನ್ನಲ್ಲಿ ಶೂಟ್ ಮಾಡಿದ ಪರಿಣಾಮ ಜಯಪಾಲ್ ಸಾವನ್ನಪ್ಪಿದ್ದಾನೆ. ಜಯಪಾಲ್ಗೆ 3 ಬಾರಿ ಗುಂಡು ಹಾರಿಸಿದ್ದ ಕಾರಣ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಜಮೀನು ವಿವಾದ ಬಗ್ಗೆ ಗಲಾಟೆ ಪ್ರಾರಂಭವಾಗಿತ್ತು. ಈ ವಿವಾದ ಇತ್ಯರ್ಥ ಮಾಡಲು ಕುಮಾರ್ ಜಮೀನಿಗೆ ಜಯಪಾಲ್ ಹಾಗೂ ತಂದೆಯನ್ನು ಕರೆಸಿಕೊಂಡಿದ್ದನು. ಈ ವೇಳೆ ಜಯಪಾಲ್ಗೆ ಗುಂಡು ಹಾರಿಸಿ ಕುಮಾರ್ ಕೊಲೆಗೈದಿದ್ದಾನೆ.
ಕುಮಾರ್ ಅಣ್ಣ ವಾಸುವಿನ ಮಗ ಜಯಪಾಲ್ನ ಎದೆ, ತೋಳು, ಮುಗದ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗುಂಡಿನ ಹೊಡೆತಕ್ಕೆ ಜಯಪಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತಂದೆಯೇ ಎದುರೇ ಅಣ್ಣನ ಮಗನನ್ನು ಕೊಂದ ಚಿಕ್ಕಪ್ಪ
ಯುವಕನ ಮೇಲೆ ಗನ್ನಲ್ಲಿ ಮೂರು ಬಾರಿ ಶೂಟ್ ಮಾಡಿ ಕೊಲೆ
ಜಮೀನು ವಿವಾದ ಇತ್ಯರ್ಥ ಮಾಡುವ ನೆಪದಲ್ಲಿ ನಡೆಯಿತು ಕೊಲೆ
ಮಂಡ್ಯ: ತಂದೆಯ ಎದುರು ಶೂಟ್ ಮಾಡಿ ಮಗನನ್ನು ಹತ್ಯೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಹಿನ್ನಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಜಯಪಾಲ್ (19) ಕೊಲೆಯಾಗಿದ್ದಾನೆ.
ಜಯಪಾಲ್ ತನ್ನ ಚಿಕ್ಕಪ್ಪ ಸೀಮೆಎಣ್ಣೆ ಕುಮಾರ್ನಿಂದ ಹತ್ಯೆಯಾಗಿದ್ದಾನೆ. ಗನ್ನಲ್ಲಿ ಶೂಟ್ ಮಾಡಿದ ಪರಿಣಾಮ ಜಯಪಾಲ್ ಸಾವನ್ನಪ್ಪಿದ್ದಾನೆ. ಜಯಪಾಲ್ಗೆ 3 ಬಾರಿ ಗುಂಡು ಹಾರಿಸಿದ್ದ ಕಾರಣ ಆತನ ಪ್ರಾಣಪಕ್ಷಿ ಹಾರಿಹೋಗಿದೆ.
ಜಮೀನು ವಿವಾದ ಬಗ್ಗೆ ಗಲಾಟೆ ಪ್ರಾರಂಭವಾಗಿತ್ತು. ಈ ವಿವಾದ ಇತ್ಯರ್ಥ ಮಾಡಲು ಕುಮಾರ್ ಜಮೀನಿಗೆ ಜಯಪಾಲ್ ಹಾಗೂ ತಂದೆಯನ್ನು ಕರೆಸಿಕೊಂಡಿದ್ದನು. ಈ ವೇಳೆ ಜಯಪಾಲ್ಗೆ ಗುಂಡು ಹಾರಿಸಿ ಕುಮಾರ್ ಕೊಲೆಗೈದಿದ್ದಾನೆ.
ಕುಮಾರ್ ಅಣ್ಣ ವಾಸುವಿನ ಮಗ ಜಯಪಾಲ್ನ ಎದೆ, ತೋಳು, ಮುಗದ ಭಾಗಕ್ಕೆ ಗುಂಡು ಹಾರಿಸಿದ್ದಾನೆ. ಗುಂಡಿನ ಹೊಡೆತಕ್ಕೆ ಜಯಪಾಲ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಬಿಂಡಿಗನವಿಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ