newsfirstkannada.com

ಇನ್ನೆರಡು ದಿನದಲ್ಲಿ ಮದುವೆ.. ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಐಶ್ವರ್ಯ ರೈ

Share :

20-11-2023

    ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದ ಯುವತಿ

    ಕೆಳ ಜಾತಿಯ ಯುವತಿಯನ್ನು ಷರತ್ತುಗಳ ಮೇಲೆ ಒಪ್ಪಿಕೊಂಡಿದ್ರು

    ಮಗಳ ಮದುವೆಗೆ ಬರಬೇಡಿ ಎಂದಿದ್ದ ಯುವಕನ ಮನೆಯವರು

ವಿಜಯನಗರ: ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ನಲ್ಲಿ ನಡೆದಿದೆ. ಐಶ್ವರ್ಯ ರೈ ಮೃತಪಟ್ಟ ಯುವತಿ.

ಐಶ್ವರ್ಯ ರೈ ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದಳು. ಆದರೆ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಯುವಕನ ಕಡೆಯವರು ಕೆಳ ಜಾತಿಯವರು ಎಂಬ ಕಾರಣಕ್ಕೆ ಯುವತಿಯನ್ನು ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ. ಹೀಗಾಗಿ ಕೊಲೆಗೆ ಪ್ರಚೋದನೆ ಮಾಡಲಾಗಿದೆ ಅಂತ ಪೋಷಕರು ಆರೋಪ ಮಾಡಿದ್ದಾರೆ.

ಇದನ್ನು ಓದಿ: KSRTC ಬಸ್ ಓವರ್​ ಟೇಕ್ ಮಾಡಲು ಹೋಗಿ ಆ್ಯಕ್ಸಿಡೆಂಟ್ ಮಾಡಿದ ಟ್ರಕ್ ಡ್ರೈವರ್

ಯುವತಿ ಐಶ್ವರ್ಯ ಅಶೋಕ್ ಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ 7-8 ವರ್ಷಗಳಿಂದ ಪ್ರೀತಿಸುತ್ತಿದ್ದಳು. ನಮಗೂ ಅವರಿಗೂ ಹೊಂದಾಣಿಕೆಯಾಗೋಲ್ಲ. ನಾನು ಬೇಡ ಮಗಳೇ ಅಂತ ನನ್ನ ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಸಂಪ್ರದಾಯದಂತೆ ನಾವು ಮದುವೆ ಮಾಡಿಕೊಳ್ತೇವೆ ಎಂದು ಶಾಸ್ತ್ರಕ್ಕೆ ಕರ್ಕೊಂಡು ಹೋಗಿದ್ರು. ಹುಡುಗಿ ಕಡೆಯವರು ಯಾರೂ ಬರಬಾರದು ಅಂತ ಅವರು ಕಂಡಿಷನ್ ಹಾಕಿದ್ರು. ಹೀಗಾಗಿ, ನಾವು ಮಗಳ ಪ್ರೀತಿ ಮುಖ್ಯ ಅಂತ ಒಪ್ಪಿಕೊಂಡಿದ್ವಿ ಎಂದು ಐಶ್ವರ್ಯ ಪೋಷಕರು ಹೇಳಿದ್ದಾರೆ.

ಬಳಿಕ ನನಗೆ ಫೋನ್ ಮಾಡಿ, ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಅವರೇ, ಮೂರ್ನಾಲ್ಕು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ, ಆದ್ರೆ ಜೀವ ಉಳಿದಿಲ್ಲ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ, ಇದು ಸರಿಯಾಗಿ ತನಿಖೆಯಾಗಬೇಕಿದೆ ಎಂದು ಯುವತಿಯ ತಂದೆ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೆರಡು ದಿನದಲ್ಲಿ ಮದುವೆ.. ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಐಶ್ವರ್ಯ ರೈ

https://newsfirstlive.com/wp-content/uploads/2023/11/BLY_GIRL.jpg

    ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದ ಯುವತಿ

    ಕೆಳ ಜಾತಿಯ ಯುವತಿಯನ್ನು ಷರತ್ತುಗಳ ಮೇಲೆ ಒಪ್ಪಿಕೊಂಡಿದ್ರು

    ಮಗಳ ಮದುವೆಗೆ ಬರಬೇಡಿ ಎಂದಿದ್ದ ಯುವಕನ ಮನೆಯವರು

ವಿಜಯನಗರ: ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ನಲ್ಲಿ ನಡೆದಿದೆ. ಐಶ್ವರ್ಯ ರೈ ಮೃತಪಟ್ಟ ಯುವತಿ.

ಐಶ್ವರ್ಯ ರೈ ಎರಡು ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಅಂತರ್ಜಾತಿ ವಿವಾಹವಾಗಲು ರೆಡಿಯಾಗಿದ್ದಳು. ಆದರೆ ಮದುವೆಯಾಗಬೇಕಿದ್ದ ವರನ ಮನೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಯುವಕನ ಕಡೆಯವರು ಕೆಳ ಜಾತಿಯವರು ಎಂಬ ಕಾರಣಕ್ಕೆ ಯುವತಿಯನ್ನು ಕೆಲವು ಷರತ್ತುಗಳ ಮೇಲೆ ಮದುವೆಯಾಗಲು ಒಪ್ಪಿದ್ದರಂತೆ. ಹೀಗಾಗಿ ಕೊಲೆಗೆ ಪ್ರಚೋದನೆ ಮಾಡಲಾಗಿದೆ ಅಂತ ಪೋಷಕರು ಆರೋಪ ಮಾಡಿದ್ದಾರೆ.

ಇದನ್ನು ಓದಿ: KSRTC ಬಸ್ ಓವರ್​ ಟೇಕ್ ಮಾಡಲು ಹೋಗಿ ಆ್ಯಕ್ಸಿಡೆಂಟ್ ಮಾಡಿದ ಟ್ರಕ್ ಡ್ರೈವರ್

ಯುವತಿ ಐಶ್ವರ್ಯ ಅಶೋಕ್ ಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ 7-8 ವರ್ಷಗಳಿಂದ ಪ್ರೀತಿಸುತ್ತಿದ್ದಳು. ನಮಗೂ ಅವರಿಗೂ ಹೊಂದಾಣಿಕೆಯಾಗೋಲ್ಲ. ನಾನು ಬೇಡ ಮಗಳೇ ಅಂತ ನನ್ನ ಮಗಳಿಗೆ ಹೇಳಿದ್ದೆ. ನನ್ನ ಮಗಳು ಬಹಳ ಗಟ್ಟಿ. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಅವರ ಸಂಪ್ರದಾಯದಂತೆ ನಾವು ಮದುವೆ ಮಾಡಿಕೊಳ್ತೇವೆ ಎಂದು ಶಾಸ್ತ್ರಕ್ಕೆ ಕರ್ಕೊಂಡು ಹೋಗಿದ್ರು. ಹುಡುಗಿ ಕಡೆಯವರು ಯಾರೂ ಬರಬಾರದು ಅಂತ ಅವರು ಕಂಡಿಷನ್ ಹಾಕಿದ್ರು. ಹೀಗಾಗಿ, ನಾವು ಮಗಳ ಪ್ರೀತಿ ಮುಖ್ಯ ಅಂತ ಒಪ್ಪಿಕೊಂಡಿದ್ವಿ ಎಂದು ಐಶ್ವರ್ಯ ಪೋಷಕರು ಹೇಳಿದ್ದಾರೆ.

ಬಳಿಕ ನನಗೆ ಫೋನ್ ಮಾಡಿ, ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಅವರೇ, ಮೂರ್ನಾಲ್ಕು ಆಸ್ಪತ್ರೆಗೆ ಕರ್ಕೊಂಡು ಹೋಗಿದ್ದಾರೆ, ಆದ್ರೆ ಜೀವ ಉಳಿದಿಲ್ಲ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ, ಇದು ಸರಿಯಾಗಿ ತನಿಖೆಯಾಗಬೇಕಿದೆ ಎಂದು ಯುವತಿಯ ತಂದೆ ಆರೋಪ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More