newsfirstkannada.com

ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್..!

Share :

26-05-2023

    ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್..!

    ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರ ಸಭೆ

    24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ!

ಬೆಂಗಳೂರು: ಮೇ 27ರಂದು (ಶನಿವಾರ) ಅಂದರೆ ನಾಡಿದ್ದು ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಶನಿವಾರ ಬೆಳಗ್ಗೆ 11.45ಕ್ಕೆ ಪದಗ್ರಹಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ನೂತನ ಸಚಿವರಿಗೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಈಗಾಗಲೇ ದೆಹಲಿಗೆ ಹೋಗಿದ್ದಾರೆ. ಇವರ ಬೆನ್ನಲ್ಲೇ ಕೆಲವು ನಾಯಕರು ಸಚಿವ ಸ್ಥಾನಕ್ಕೆ ಲಾಬಿ ಮಾಡಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಇವತ್ತು ರಾತ್ರಿಯವರೆಗೂ ಯಾವುದೇ ಫೈನಲ್ ಆಗಿಲ್ಲ. ನಾಳೆ ಸಂಜೆ ವೇಳೆಗೆ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ನಾಡಿದ್ದು ಸುಮಾರು 20 ರಿಂದ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಸಚಿವರಾಗುವ ಸಂಭವನೀಯರ ಲಿಸ್ಟ್..!

  • ಈಶ್ವರ್ ಖಂಡ್ರೆ- ಭಾಲ್ಕಿ
  • ಶಿವಾನಂದ್ ಪಾಟೀಲ್- ಬಸವನಬಾಗೇವಾಡಿ
  • ಲಕ್ಷ್ಮೀ ಹೆಬ್ಬಾಳ್ಕರ್- ಬೆಳಗಾವಿ ಗ್ರಾಮೀಣ
  • ಎಸ್ ಎಸ್ ಮಲ್ಲಿಕಾರ್ಜುನ್- ದಾವಣಗೆರೆ ಉತ್ತರ
  • ಶರಣ ಬಸಪ್ಪಗೌಡ ದರ್ಶನಾಪೂರ್- ಶಹಾಪುರ
  • ಬಸವರಾಜ್ ರಾಯರೆಡ್ಡಿ- ಯಲಬುರ್ಗಾ
  • ಹೆಚ್​ಸಿ ಮಹದೇವಪ್ಪ- ಟಿ ನರಸೀಪುರ
  • ಕೆ ವೆಂಕಟೇಶ್- ಪಿರಿಯಾಪಟ್ಟಣ
  • ಚಲುವರಾಯಸ್ವಾಮಿ- ನಾಗಮಂಗಲ
  • ನರೇಂದ್ರಸ್ವಾಮಿ- ಮಳವಳ್ಳಿ
  • ಪುಟ್ಟರಂಗಶೆಟ್ಟಿ- ಚಾಮರಾಜನಗರ
  • ಆರ್ ಬಿ ತಿಮ್ಮಾಪುರ್- ಮುಧೋಳ
  • ಅಜಯ್ ಧರ್ಮಸಿಂಗ್- ಜೇವರ್ಗಿ
  • ಡಿ.ಸುಧಾಕರ್- ಹಿರಿಯೂರು
  • ಡಾ. ಎಂ.ಸಿ.ಸುಧಾಕರ್- ಚಿಂತಾಮಣಿ
  • ಕೃಷ್ಣಭೈರೇಗೌಡ- ಬ್ಯಾಟರಾಯಪುರ
  • ಬೈರತಿ ಸುರೇಶ್- ಹೆಬ್ಬಾಳ
  • ರಹೀಂ ಖಾನ್- ಬೀದರ್
  • ಮಂಕಾಳು ವೈದ್ಯ- ಭಟ್ಕಳ
  • ಹೆಚ್.ಕೆ.ಪಾಟೀಲ್- ಗದಗ
  • ಮಧು ಬಂಗಾರಪ್ಪ- ಸೊರಬ
  • ಶಿವರಾಜ್ ತಂಗಡಗಿ- ಕನಕಗಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್..!

https://newsfirstlive.com/wp-content/uploads/2023/05/SIDDU_DKS.jpg

    ನೂತನ ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಮುಹೂರ್ತ ಫಿಕ್ಸ್..!

    ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರ ಸಭೆ

    24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ!

ಬೆಂಗಳೂರು: ಮೇ 27ರಂದು (ಶನಿವಾರ) ಅಂದರೆ ನಾಡಿದ್ದು ಸಿದ್ದರಾಮಯ್ಯ ಸರ್ಕಾರದ ಸಂಪುಟ ವಿಸ್ತರಣೆ ನಡೆಯಲಿದೆ. ಶನಿವಾರ ಬೆಳಗ್ಗೆ 11.45ಕ್ಕೆ ಪದಗ್ರಹಣ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ನೂತನ ಸಚಿವರಿಗೆ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಈಗಾಗಲೇ ದೆಹಲಿಗೆ ಹೋಗಿದ್ದಾರೆ. ಇವರ ಬೆನ್ನಲ್ಲೇ ಕೆಲವು ನಾಯಕರು ಸಚಿವ ಸ್ಥಾನಕ್ಕೆ ಲಾಬಿ ಮಾಡಲು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಜೊತೆ ಹೈಕಮಾಂಡ್ ನಾಯಕರು ಸಭೆ ಮೇಲೆ ಸಭೆ ನಡೆಸುತ್ತಿದ್ದಾರೆ. ಇವತ್ತು ರಾತ್ರಿಯವರೆಗೂ ಯಾವುದೇ ಫೈನಲ್ ಆಗಿಲ್ಲ. ನಾಳೆ ಸಂಜೆ ವೇಳೆಗೆ ಹೈಕಮಾಂಡ್ ನಾಯಕರು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ನಾಡಿದ್ದು ಸುಮಾರು 20 ರಿಂದ 24 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ.

ಸಚಿವರಾಗುವ ಸಂಭವನೀಯರ ಲಿಸ್ಟ್..!

  • ಈಶ್ವರ್ ಖಂಡ್ರೆ- ಭಾಲ್ಕಿ
  • ಶಿವಾನಂದ್ ಪಾಟೀಲ್- ಬಸವನಬಾಗೇವಾಡಿ
  • ಲಕ್ಷ್ಮೀ ಹೆಬ್ಬಾಳ್ಕರ್- ಬೆಳಗಾವಿ ಗ್ರಾಮೀಣ
  • ಎಸ್ ಎಸ್ ಮಲ್ಲಿಕಾರ್ಜುನ್- ದಾವಣಗೆರೆ ಉತ್ತರ
  • ಶರಣ ಬಸಪ್ಪಗೌಡ ದರ್ಶನಾಪೂರ್- ಶಹಾಪುರ
  • ಬಸವರಾಜ್ ರಾಯರೆಡ್ಡಿ- ಯಲಬುರ್ಗಾ
  • ಹೆಚ್​ಸಿ ಮಹದೇವಪ್ಪ- ಟಿ ನರಸೀಪುರ
  • ಕೆ ವೆಂಕಟೇಶ್- ಪಿರಿಯಾಪಟ್ಟಣ
  • ಚಲುವರಾಯಸ್ವಾಮಿ- ನಾಗಮಂಗಲ
  • ನರೇಂದ್ರಸ್ವಾಮಿ- ಮಳವಳ್ಳಿ
  • ಪುಟ್ಟರಂಗಶೆಟ್ಟಿ- ಚಾಮರಾಜನಗರ
  • ಆರ್ ಬಿ ತಿಮ್ಮಾಪುರ್- ಮುಧೋಳ
  • ಅಜಯ್ ಧರ್ಮಸಿಂಗ್- ಜೇವರ್ಗಿ
  • ಡಿ.ಸುಧಾಕರ್- ಹಿರಿಯೂರು
  • ಡಾ. ಎಂ.ಸಿ.ಸುಧಾಕರ್- ಚಿಂತಾಮಣಿ
  • ಕೃಷ್ಣಭೈರೇಗೌಡ- ಬ್ಯಾಟರಾಯಪುರ
  • ಬೈರತಿ ಸುರೇಶ್- ಹೆಬ್ಬಾಳ
  • ರಹೀಂ ಖಾನ್- ಬೀದರ್
  • ಮಂಕಾಳು ವೈದ್ಯ- ಭಟ್ಕಳ
  • ಹೆಚ್.ಕೆ.ಪಾಟೀಲ್- ಗದಗ
  • ಮಧು ಬಂಗಾರಪ್ಪ- ಸೊರಬ
  • ಶಿವರಾಜ್ ತಂಗಡಗಿ- ಕನಕಗಿರಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More