ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್ನಲ್ಲಿ ಇರೋರು
ನಾನು ಕಾಂಗ್ರೆಸ್ ಪಕ್ಷದ ಚೇಲಾ ಎಂದ ಸಚಿವ ಎಂ ಬಿ ಪಾಟೀಲ್
ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು ಎಂದ ಸಚಿವ
ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು. ಇವರು ಚೇಲಾ ಅಂತಾರೆ, ಬಿ. ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥಾ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
‘ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ’
ಸಂಸದ ಪ್ರತಾಪ್ ಸಿಂಹ ಅವರು ಎಂಬಿ ಪಾಟೀಲ್ ಸಿದ್ದರಾಮಯ್ಯ ಚೇಲಾ ಎಂದು ಹೇಳಿರುವ ಹೇಳಿಕೆಯ ವಿಚಾರವಾಗಿ ಎಂ.ಬಿ ಪಾಟೀಲ್ ಮಾತನಾಡಿದ್ದು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು. ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್ ನಲ್ಲಿ ಇರೋರು. ಇನ್ನೊಬ್ಬರ ಮೇಲೆ ಬಂದೂಕು ಇಟ್ಟು ಹೊಡೆಯುವಂತದ್ದು ಏನೂ ಇಲ್ಲ. ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ. ನಾವು ಬಿಜಾಪುರದವರು. ನಮಗೆ ಆ ತಾಕತ್ ಇದೆ. ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೈಗಾರಿಕಾ ಇಲಾಖೆ ಚಿಲ್ಲರೆ ಖಾತೆ ಎಂದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಸಚಿವ ಎಂ.ಬಿ ಪಾಟೀಲ್ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews #Siddaramaiah #Karnataka@Siddaramaiah@Dkshivakumar@INCKarnataka@BJP4Karnataka@MBPatil@CTRavi_BJP@mepratap… pic.twitter.com/8SqYcA7UT0
— NewsFirst Kannada (@NewsFirstKan) June 20, 2023
ಪ್ರತಾಪ್ ಸಿಂಹ ಅಕ್ಕಿ ಕೊಡಿಸುವ ಕೆಲಸ ಮಾಡಲಿ
ನಂತರ ಮಾತನಾಡಿದ ಎಂ.ಬಿ ಪಾಟೀಲ್ ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಮುತುವರ್ಜಿ ವಹಿಸಿ ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಚೇಲಾಗಿರಿ ಮಾಡಿಸಿಕೊಂಡು ರೂಢಿಯಿದೆ. ಅವರ ಬುಟ್ಟಿಯಲ್ಲಿ ಬಹಳಷ್ಟು ಚೇಳುಗಳಿರಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews #Siddaramaiah #Karnataka @Siddaramaiah @Dkshivakumar… pic.twitter.com/9rwDDOdhxu
— NewsFirst Kannada (@NewsFirstKan) June 20, 2023
ನಾನು ಕಾಂಗ್ರೆಸ್ ಪಕ್ಷದ ಚೇಲಾ
ನಾನು ಕಾಂಗ್ರೆಸ್ ಪಕ್ಷದ ಚೇಲಾ. ನಾನು ಸಿದ್ದರಾಮಯ್ಯ ಅವರಿಗಿಂತ ಮೊದಲೇ ಕಾಂಗ್ರೆಸ್ ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದೇನೆ. ನಾನು ಯಾರಿಗೂ ಚೇಲಾ ಅಲ್ಲ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವ ಇರಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್ನಲ್ಲಿ ಇರೋರು
ನಾನು ಕಾಂಗ್ರೆಸ್ ಪಕ್ಷದ ಚೇಲಾ ಎಂದ ಸಚಿವ ಎಂ ಬಿ ಪಾಟೀಲ್
ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು ಎಂದ ಸಚಿವ
ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು. ಇವರು ಚೇಲಾ ಅಂತಾರೆ, ಬಿ. ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥಾ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.
‘ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ’
ಸಂಸದ ಪ್ರತಾಪ್ ಸಿಂಹ ಅವರು ಎಂಬಿ ಪಾಟೀಲ್ ಸಿದ್ದರಾಮಯ್ಯ ಚೇಲಾ ಎಂದು ಹೇಳಿರುವ ಹೇಳಿಕೆಯ ವಿಚಾರವಾಗಿ ಎಂ.ಬಿ ಪಾಟೀಲ್ ಮಾತನಾಡಿದ್ದು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು. ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್ ನಲ್ಲಿ ಇರೋರು. ಇನ್ನೊಬ್ಬರ ಮೇಲೆ ಬಂದೂಕು ಇಟ್ಟು ಹೊಡೆಯುವಂತದ್ದು ಏನೂ ಇಲ್ಲ. ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ. ನಾವು ಬಿಜಾಪುರದವರು. ನಮಗೆ ಆ ತಾಕತ್ ಇದೆ. ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೈಗಾರಿಕಾ ಇಲಾಖೆ ಚಿಲ್ಲರೆ ಖಾತೆ ಎಂದ ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ ಸಚಿವ ಎಂ.ಬಿ ಪಾಟೀಲ್ ಫೈನಲ್ ವಾರ್ನಿಂಗ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews #Siddaramaiah #Karnataka@Siddaramaiah@Dkshivakumar@INCKarnataka@BJP4Karnataka@MBPatil@CTRavi_BJP@mepratap… pic.twitter.com/8SqYcA7UT0
— NewsFirst Kannada (@NewsFirstKan) June 20, 2023
ಪ್ರತಾಪ್ ಸಿಂಹ ಅಕ್ಕಿ ಕೊಡಿಸುವ ಕೆಲಸ ಮಾಡಲಿ
ನಂತರ ಮಾತನಾಡಿದ ಎಂ.ಬಿ ಪಾಟೀಲ್ ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಮುತುವರ್ಜಿ ವಹಿಸಿ ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದು ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಿಗೆ ಚೇಲಾಗಿರಿ ಮಾಡಿಸಿಕೊಂಡು ರೂಢಿಯಿದೆ. ಅವರ ಬುಟ್ಟಿಯಲ್ಲಿ ಬಹಳಷ್ಟು ಚೇಳುಗಳಿರಬಹುದು ಎಂದು ಸಚಿವ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews #Siddaramaiah #Karnataka @Siddaramaiah @Dkshivakumar… pic.twitter.com/9rwDDOdhxu
— NewsFirst Kannada (@NewsFirstKan) June 20, 2023
ನಾನು ಕಾಂಗ್ರೆಸ್ ಪಕ್ಷದ ಚೇಲಾ
ನಾನು ಕಾಂಗ್ರೆಸ್ ಪಕ್ಷದ ಚೇಲಾ. ನಾನು ಸಿದ್ದರಾಮಯ್ಯ ಅವರಿಗಿಂತ ಮೊದಲೇ ಕಾಂಗ್ರೆಸ್ ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದೇನೆ. ನಾನು ಯಾರಿಗೂ ಚೇಲಾ ಅಲ್ಲ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವ ಇರಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ