newsfirstkannada.com

VIDEO: ಬಿಸಿಲಿನ ತಾಪಕ್ಕೆ ಕುಸಿದು ಕುಳಿತ ಸಚಿವ ಎಚ್.ಸಿ ಮಹದೇವಪ್ಪ; ಮುಂದೇನಾಯ್ತು?

Share :

15-08-2023

    ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಘಟನೆ

    14 ಪುಟಗಳ ಸುದೀರ್ಘ ಭಾಷಣ ಮಾಡಿದ ಎಚ್.ಸಿ ಮಹದೇವಪ್ಪ

    ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡ ಸಚಿವ

ಮೈಸೂರು: ಬಿಸಿಲಿನ ತಾಪಕ್ಕೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಕುಸಿದು‌ ಕುಳಿತ ಘಟನೆ ಮೈಸೂರಿನ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದಿದೆ. ಸುದೀರ್ಘ ಭಾಷಣ ಮಾಡಿ ಬಸವಳಿದು ಧ್ವಜಸ್ತಂಭದ ಬಳಿಯೇ ಕುರ್ಚಿಯಲ್ಲಿ ಕುಳಿತಿದ್ದಾರೆ.

ಸಚಿವ ಎಚ್.ಸಿ ಮಹದೇವಪ್ಪ 14 ಪುಟಗಳ ಸುದೀರ್ಘ ಭಾಷಣ ಮಾಡಿದ್ದರು. ನೀರು ಕುಡಿದು ಆಯಾಸ ನೀಗಿಸುತ್ತಾ ಭಾಷಣ ಮಾಡಿದ್ದರು. ಕಡೆ ಗಳಿಗೆಯಲ್ಲಿ ಆತುರದಿಂದ ಭಾಷಣ ಓದಿ ಮುಗಿಸಿದರು. ಬಳಿಕ ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡು ದಣಿವಾರಿಸಿಕೊಂಡ‌ರು.

ಆದರೆ ಸಚಿವರು ಸುತ್ತಾಗಿರೊದನ್ನ ಕಂಡು ಕೆಲ ಸಮಯ ಸ್ಥಳದಲ್ಲಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಜನತೆಯಲ್ಲಿ ಆತಂಕ ಮನೆಮಾಡಿತು. ನಂತರ ಸಚಿವ ಮಹದೇವಪ್ಪ ಆಯಾಸ ನಿವಾರಿಸಿಕೊಂಡು ಸುಧಾರಿಸಿಕೊಂಡಿದ್ದಾರೆ. ನಂತರ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಿಸಿಲಿನ ತಾಪಕ್ಕೆ ಕುಸಿದು ಕುಳಿತ ಸಚಿವ ಎಚ್.ಸಿ ಮಹದೇವಪ್ಪ; ಮುಂದೇನಾಯ್ತು?

https://newsfirstlive.com/wp-content/uploads/2023/08/H-C-Mahadevappa.jpg

    ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಘಟನೆ

    14 ಪುಟಗಳ ಸುದೀರ್ಘ ಭಾಷಣ ಮಾಡಿದ ಎಚ್.ಸಿ ಮಹದೇವಪ್ಪ

    ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡ ಸಚಿವ

ಮೈಸೂರು: ಬಿಸಿಲಿನ ತಾಪಕ್ಕೆ ಸಚಿವ ಡಾ.ಎಚ್.ಸಿ ಮಹದೇವಪ್ಪ ಕುಸಿದು‌ ಕುಳಿತ ಘಟನೆ ಮೈಸೂರಿನ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆದಿದೆ. ಸುದೀರ್ಘ ಭಾಷಣ ಮಾಡಿ ಬಸವಳಿದು ಧ್ವಜಸ್ತಂಭದ ಬಳಿಯೇ ಕುರ್ಚಿಯಲ್ಲಿ ಕುಳಿತಿದ್ದಾರೆ.

ಸಚಿವ ಎಚ್.ಸಿ ಮಹದೇವಪ್ಪ 14 ಪುಟಗಳ ಸುದೀರ್ಘ ಭಾಷಣ ಮಾಡಿದ್ದರು. ನೀರು ಕುಡಿದು ಆಯಾಸ ನೀಗಿಸುತ್ತಾ ಭಾಷಣ ಮಾಡಿದ್ದರು. ಕಡೆ ಗಳಿಗೆಯಲ್ಲಿ ಆತುರದಿಂದ ಭಾಷಣ ಓದಿ ಮುಗಿಸಿದರು. ಬಳಿಕ ಬಿಸಿಲಿನ ಬೇಗೆಗೆ ಸುಸ್ತಾಗಿ ಕುರ್ಚಿ ತರಿಸಿಕೊಂಡು ದಣಿವಾರಿಸಿಕೊಂಡ‌ರು.

ಆದರೆ ಸಚಿವರು ಸುತ್ತಾಗಿರೊದನ್ನ ಕಂಡು ಕೆಲ ಸಮಯ ಸ್ಥಳದಲ್ಲಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಜನತೆಯಲ್ಲಿ ಆತಂಕ ಮನೆಮಾಡಿತು. ನಂತರ ಸಚಿವ ಮಹದೇವಪ್ಪ ಆಯಾಸ ನಿವಾರಿಸಿಕೊಂಡು ಸುಧಾರಿಸಿಕೊಂಡಿದ್ದಾರೆ. ನಂತರ ಮುಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More