ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಮಾಜಿ ಸಿಎಂ ಪುತ್ರ
ಸಹೋದರ ಬಗ್ಗೆ ಅರುಣಾ ದೇವಿ ಅವರು ನ್ಯೂಸ್ಫಸ್ಟ್ಗೆ ಹೇಳಿದ್ದೇನು?
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕ ಹಿನ್ನೆಲೆ, ನಿವಾಸದಲ್ಲಿ ಸಂಭ್ರಮ
ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ವೈ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ವಿಜಯೇಂದ್ರ ಅವರು ನೇಮಕವಾದ ಹಿನ್ನೆಲೆಯಲ್ಲಿ ಬಿಎಸ್ವೈ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲೇ ಅವರ ಸಹೋದರಿ ಅರುಣಾ ದೇವಿಯವರು ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದಾರೆ.
ಅರುಣಾ ದೇವಿಯವರು ಮಾತನಾಡಿ, ಬಿ.ವೈ ವಿಜಯೇಂದ್ರ ಅವರಿಗೆ ಹೈಕಮಾಂಡ್ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ನಮ್ಮ ತಂದೆಯವರ ಜವಾಬ್ದಾರಿಯನ್ನು ನೋಡಿಕೊಂಡು ಬಂದಿರುವ ವಿಜಯೇಂದ್ರ, ಅವರ ತಂದೆಯಷ್ಟೇ ಯಶಸ್ವಿಯಾಗಿ ಕೆಲಸ ಮಾಡುತ್ತಾರೆ. ಮುಂಬರುವ ಲೋಕಸಭೆ ಎಲೆಕ್ಷನ್ನಲ್ಲಿ ಎಲ್ಲರೊಂದಿಗೆ ಬೆರೆತು ಬಹುದೊಡ್ಡ ಗೆಲುವನ್ನು ಪಕ್ಷಕ್ಕೆ ತಂದು ಕೊಡುತ್ತಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಜವಾಬ್ದಾರಿ ನೀಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.
ಯಾರು ನೇಮಕ ಆಗುತ್ತಾರೆ ಎಂದು ಖಂಡಿತವಾಗಿ ಗೊತ್ತಿರಲಿಲ್ಲ. ಮನೆ ಬಳಿ ವಾಕ್ ಮಾಡುವಾಗ ಈ ಸುದ್ದಿ ಕೇಳಿ ತುಂಬಾ ಖುಷಿಯಾಯಿತು. ಡಾಲರ್ಸ್ ಕಾಲೋನಿಯ ದವಳಗಿರಿ ಮನೆಯಲ್ಲಿ ಎಲ್ಲರೂ ಇದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಅಪ್ಪ, ವಿಜಯೇಂದ್ರ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಇದನ್ನು ಓದಿ: BREAKING: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ ವಿಜಯೇಂದ್ರ ನೇಮಕ
ರಾಜ್ಯದಲ್ಲಿ ಯಾರಾದ್ರೂ ಜನರಿಗೆ ಒಳ್ಳೆಯದು ಮಾಡಿದರೆ ಸಾಕು. ಆದ್ರೆ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಗೊತ್ತಿರಲಿಲ್ಲ. 6-7 ತಿಂಗಳ ಹಿಂದೆ ಈ ಬಗ್ಗೆ ಅಂದುಕೊಂಡಿದ್ದೇವು. ಆ ಮೇಲೆ ಇದರ ಬಗ್ಗೆ ಏನೆಂದು ಕೂಡ ಗೊತ್ತಿರಲಿಲ್ಲ. ಸಡನ್ ಆಗಿ ಈ ಸಂತಸದ ವಿಷ್ಯ ಕೇಳಿದಾಗ ತುಂಬಾ ಖುಷಿ ಎನಿಸಿತು. ಅಧಿಕಾರ ಅನ್ನುವುದಕ್ಕಿಂತ ಇದೊಂದು ಹಾಟ್ ಸೀಟ್ ಆಗಿದೆ. ಅದನ್ನು ಸೂಕ್ತವಾಗಿ ನಿರ್ವಹಿಸಬೇಕು. ಅನುಭವ ಪಡೆದು ರಾಜಕೀಯದಲ್ಲಿ ಓಡಬೇಕು. ಈಗೀಗ ವಿಜಯೇಂದ್ರ ಅವರು ಎಲ್ಲರ ಜೊತೆ ಬೆರೆತು ಕೋಪ ಮಾಡಿಕೊಳ್ಳದೇ ಸಾಗುತ್ತಿದ್ದಾರೆ. ಅದೇ ಅವರಿಗೆ ಒಳ್ಳೆಯದು ಮಾಡುತ್ತದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಮಾಜಿ ಸಿಎಂ ಪುತ್ರ
ಸಹೋದರ ಬಗ್ಗೆ ಅರುಣಾ ದೇವಿ ಅವರು ನ್ಯೂಸ್ಫಸ್ಟ್ಗೆ ಹೇಳಿದ್ದೇನು?
ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕ ಹಿನ್ನೆಲೆ, ನಿವಾಸದಲ್ಲಿ ಸಂಭ್ರಮ
ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ವೈ ಅವರ ಪುತ್ರ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ವಿಜಯೇಂದ್ರ ಅವರು ನೇಮಕವಾದ ಹಿನ್ನೆಲೆಯಲ್ಲಿ ಬಿಎಸ್ವೈ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದಲ್ಲೇ ಅವರ ಸಹೋದರಿ ಅರುಣಾ ದೇವಿಯವರು ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದಾರೆ.
ಅರುಣಾ ದೇವಿಯವರು ಮಾತನಾಡಿ, ಬಿ.ವೈ ವಿಜಯೇಂದ್ರ ಅವರಿಗೆ ಹೈಕಮಾಂಡ್ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ನಮ್ಮ ತಂದೆಯವರ ಜವಾಬ್ದಾರಿಯನ್ನು ನೋಡಿಕೊಂಡು ಬಂದಿರುವ ವಿಜಯೇಂದ್ರ, ಅವರ ತಂದೆಯಷ್ಟೇ ಯಶಸ್ವಿಯಾಗಿ ಕೆಲಸ ಮಾಡುತ್ತಾರೆ. ಮುಂಬರುವ ಲೋಕಸಭೆ ಎಲೆಕ್ಷನ್ನಲ್ಲಿ ಎಲ್ಲರೊಂದಿಗೆ ಬೆರೆತು ಬಹುದೊಡ್ಡ ಗೆಲುವನ್ನು ಪಕ್ಷಕ್ಕೆ ತಂದು ಕೊಡುತ್ತಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲೇ ಜವಾಬ್ದಾರಿ ನೀಡಿರುವುದು ನಮಗೆ ಸಂತಸ ತಂದಿದೆ ಎಂದಿದ್ದಾರೆ.
ಯಾರು ನೇಮಕ ಆಗುತ್ತಾರೆ ಎಂದು ಖಂಡಿತವಾಗಿ ಗೊತ್ತಿರಲಿಲ್ಲ. ಮನೆ ಬಳಿ ವಾಕ್ ಮಾಡುವಾಗ ಈ ಸುದ್ದಿ ಕೇಳಿ ತುಂಬಾ ಖುಷಿಯಾಯಿತು. ಡಾಲರ್ಸ್ ಕಾಲೋನಿಯ ದವಳಗಿರಿ ಮನೆಯಲ್ಲಿ ಎಲ್ಲರೂ ಇದ್ದಾರೆ. ಜವಾಬ್ದಾರಿಯನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಅಪ್ಪ, ವಿಜಯೇಂದ್ರ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.
ಇದನ್ನು ಓದಿ: BREAKING: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ ಬಿ.ವೈ ವಿಜಯೇಂದ್ರ ನೇಮಕ
ರಾಜ್ಯದಲ್ಲಿ ಯಾರಾದ್ರೂ ಜನರಿಗೆ ಒಳ್ಳೆಯದು ಮಾಡಿದರೆ ಸಾಕು. ಆದ್ರೆ ಯಾರು ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಗೊತ್ತಿರಲಿಲ್ಲ. 6-7 ತಿಂಗಳ ಹಿಂದೆ ಈ ಬಗ್ಗೆ ಅಂದುಕೊಂಡಿದ್ದೇವು. ಆ ಮೇಲೆ ಇದರ ಬಗ್ಗೆ ಏನೆಂದು ಕೂಡ ಗೊತ್ತಿರಲಿಲ್ಲ. ಸಡನ್ ಆಗಿ ಈ ಸಂತಸದ ವಿಷ್ಯ ಕೇಳಿದಾಗ ತುಂಬಾ ಖುಷಿ ಎನಿಸಿತು. ಅಧಿಕಾರ ಅನ್ನುವುದಕ್ಕಿಂತ ಇದೊಂದು ಹಾಟ್ ಸೀಟ್ ಆಗಿದೆ. ಅದನ್ನು ಸೂಕ್ತವಾಗಿ ನಿರ್ವಹಿಸಬೇಕು. ಅನುಭವ ಪಡೆದು ರಾಜಕೀಯದಲ್ಲಿ ಓಡಬೇಕು. ಈಗೀಗ ವಿಜಯೇಂದ್ರ ಅವರು ಎಲ್ಲರ ಜೊತೆ ಬೆರೆತು ಕೋಪ ಮಾಡಿಕೊಳ್ಳದೇ ಸಾಗುತ್ತಿದ್ದಾರೆ. ಅದೇ ಅವರಿಗೆ ಒಳ್ಳೆಯದು ಮಾಡುತ್ತದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ