newsfirstkannada.com

ಬಳ್ಳಾರಿಯಲ್ಲಿಂದು ಉಚಿತ ಸಾಮೂಹಿಕ ವಿವಾಹ.. ಸುಷ್ಮಾ ಸ್ವರಾಜ್​ಗೆ ಮಾತು ಕೊಟ್ಟಿದ್ದ ಹಳೆಯ ದಿನಗಳನ್ನು ನೆನೆದ ಜನಾರ್ದನ್ ರೆಡ್ಡಿ..!

Share :

25-08-2023

    ಬಳ್ಳಾರಿಯ ವರ ಮಹಾಲಕ್ಷ್ಮಿ ಹಬ್ಬದ ದಿನಗಳ ನೆನೆದ ಗಣಿಧಣಿ

    ಕೆಆರ್​ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ

    ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುತ್ತೇನೆ ಎಂದಿದ್ದ ಸ್ವರಾಜ್

ಬಳ್ಳಾರಿ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಸಕ ಗಾಲಿ ಜನಾರ್ದನ್​ ರೆಡ್ಡಿಯವರ ಧರ್ಮಪತ್ನಿ ಅರುಣ ಲಕ್ಷ್ಮಿಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೆಲ ವರ್ಷಗಳಿಂದ ನಿಂತು ಹೋಗಿದ್ದ ಈ ಕಾರ್ಯಕ್ರಮವನ್ನು ಮತ್ತೆ ಅರುಣ ಲಕ್ಷ್ಮಿಯವರು ಆರಂಭಿಸಿದ್ದು, ಇದಕ್ಕೆ ಜನಾರ್ದನ್​ ರೆಡ್ಡಿ ಫೇಸ್​ ಬುಕ್​ನಲ್ಲಿ ಮಾಹಿತಿ ಹಂಚಿಕೊಳ್ಳುವುದರ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

ಶಾಸಕ ಗಾಲಿ ಜನಾರ್ದನ್​ ರೆಡ್ಡಿ, ಪತ್ನಿ ಅರುಣ ಲಕ್ಷ್ಮಿ

ಇಂದು ಬಳ್ಳಾರಿಯಲ್ಲಿ ಅರುಣ ಲಕ್ಷ್ಮಿಯವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಕೆಆರ್​ಪಿಪಿ ಸಂಸ್ಥಾಪಕ ಹಾಗೂ ಗಂಗಾವತಿ ಎಂಎಲ್​ಎ ಜನಾರ್ದನರೆಡ್ಡಿಯವರು ಫೇಸ್​ಬುಕ್​ ಪೋಸ್ಟ್​ನಲ್ಲಿ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಳ್ಳಾರಿಯಲ್ಲಿನ ವರ ಮಹಾಲಕ್ಷ್ಮಿ ಹಬ್ಬದ ದಿನಗಳು, ದಿವಂಗತ ಸುಷ್ಮಾ ಸ್ವರಾಜ್, ಬಡವರಿಗಾಗಿ ಸಾಮೂಹಿಕ ವಿವಾಹ ಸೇರಿದಂತೆ ಎಲೆಕ್ಷನ್​ನ ಸೋಲು, ಗೆಲುವಿನ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಅಲ್ಲದೇ ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು ಎಲೆಕ್ಷನ್​ನಲ್ಲಿ ಸೋತ ಸಂದರ್ಭದಲ್ಲಿ ರೆಡ್ಡಿಯವರು ಭಾವುಕರಾಗಿದ್ದರು. ಆಗ ಸುಷ್ಮಾ ಸ್ವರಾಜ್ ಅವರು ಚುನಾವಣೆಯ ಫಲಿತಾಂಶದ ಬಗ್ಗೆ ನೋವು ಬೇಡ. ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬಳ್ಳಾರಿಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಇದಕ್ಕಾಗಿ ಬಡವರಿಗಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತೇನೆ ಎಂದು ಅವತ್ತೆ ಹೇಳಿದ್ದೆ. ಆ ತಾಯಿ-ಮಕ್ಕಳ ಬಾಂಧವ್ಯದ ಬೆಸುಗೆಯಿಂದ ಕೂಡಿದ ಈ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಒಂದು ಇತಿಹಾಸವಿದೆ ಎಂದು ಹೇಳಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಇಂದು ಜನಾರ್ದನ್​ ರೆಡ್ಡಿ ಅನುಪಸ್ಥಿತಿಯಲ್ಲಿ ಪತ್ನಿ ಅರುಣ ಲಕ್ಷ್ಮಿ ಅವರು ಉಚಿತ ವಿವಾಹ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯಲ್ಲಿಂದು ಉಚಿತ ಸಾಮೂಹಿಕ ವಿವಾಹ.. ಸುಷ್ಮಾ ಸ್ವರಾಜ್​ಗೆ ಮಾತು ಕೊಟ್ಟಿದ್ದ ಹಳೆಯ ದಿನಗಳನ್ನು ನೆನೆದ ಜನಾರ್ದನ್ ರೆಡ್ಡಿ..!

https://newsfirstlive.com/wp-content/uploads/2023/08/JANARDHANA_REDDY.jpg

    ಬಳ್ಳಾರಿಯ ವರ ಮಹಾಲಕ್ಷ್ಮಿ ಹಬ್ಬದ ದಿನಗಳ ನೆನೆದ ಗಣಿಧಣಿ

    ಕೆಆರ್​ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ್ ರೆಡ್ಡಿ

    ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬರುತ್ತೇನೆ ಎಂದಿದ್ದ ಸ್ವರಾಜ್

ಬಳ್ಳಾರಿ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಸಕ ಗಾಲಿ ಜನಾರ್ದನ್​ ರೆಡ್ಡಿಯವರ ಧರ್ಮಪತ್ನಿ ಅರುಣ ಲಕ್ಷ್ಮಿಯವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕೆಲ ವರ್ಷಗಳಿಂದ ನಿಂತು ಹೋಗಿದ್ದ ಈ ಕಾರ್ಯಕ್ರಮವನ್ನು ಮತ್ತೆ ಅರುಣ ಲಕ್ಷ್ಮಿಯವರು ಆರಂಭಿಸಿದ್ದು, ಇದಕ್ಕೆ ಜನಾರ್ದನ್​ ರೆಡ್ಡಿ ಫೇಸ್​ ಬುಕ್​ನಲ್ಲಿ ಮಾಹಿತಿ ಹಂಚಿಕೊಳ್ಳುವುದರ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.

ಶಾಸಕ ಗಾಲಿ ಜನಾರ್ದನ್​ ರೆಡ್ಡಿ, ಪತ್ನಿ ಅರುಣ ಲಕ್ಷ್ಮಿ

ಇಂದು ಬಳ್ಳಾರಿಯಲ್ಲಿ ಅರುಣ ಲಕ್ಷ್ಮಿಯವರ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಈ ಬಗ್ಗೆ ಕೆಆರ್​ಪಿಪಿ ಸಂಸ್ಥಾಪಕ ಹಾಗೂ ಗಂಗಾವತಿ ಎಂಎಲ್​ಎ ಜನಾರ್ದನರೆಡ್ಡಿಯವರು ಫೇಸ್​ಬುಕ್​ ಪೋಸ್ಟ್​ನಲ್ಲಿ, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಬಳ್ಳಾರಿಯಲ್ಲಿನ ವರ ಮಹಾಲಕ್ಷ್ಮಿ ಹಬ್ಬದ ದಿನಗಳು, ದಿವಂಗತ ಸುಷ್ಮಾ ಸ್ವರಾಜ್, ಬಡವರಿಗಾಗಿ ಸಾಮೂಹಿಕ ವಿವಾಹ ಸೇರಿದಂತೆ ಎಲೆಕ್ಷನ್​ನ ಸೋಲು, ಗೆಲುವಿನ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಅಲ್ಲದೇ ಬಿಜೆಪಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಅವರು ಎಲೆಕ್ಷನ್​ನಲ್ಲಿ ಸೋತ ಸಂದರ್ಭದಲ್ಲಿ ರೆಡ್ಡಿಯವರು ಭಾವುಕರಾಗಿದ್ದರು. ಆಗ ಸುಷ್ಮಾ ಸ್ವರಾಜ್ ಅವರು ಚುನಾವಣೆಯ ಫಲಿತಾಂಶದ ಬಗ್ಗೆ ನೋವು ಬೇಡ. ಪ್ರತಿ ವರ್ಷ ವರಮಹಾಲಕ್ಷ್ಮಿ ಪೂಜೆಗೆ ಬಳ್ಳಾರಿಗೆ ಬರುತ್ತೇನೆ ಎಂದು ಮಾತು ಕೊಟ್ಟಿದ್ದರು. ಇದಕ್ಕಾಗಿ ಬಡವರಿಗಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತೇನೆ ಎಂದು ಅವತ್ತೆ ಹೇಳಿದ್ದೆ. ಆ ತಾಯಿ-ಮಕ್ಕಳ ಬಾಂಧವ್ಯದ ಬೆಸುಗೆಯಿಂದ ಕೂಡಿದ ಈ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಒಂದು ಇತಿಹಾಸವಿದೆ ಎಂದು ಹೇಳಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಇಂದು ಜನಾರ್ದನ್​ ರೆಡ್ಡಿ ಅನುಪಸ್ಥಿತಿಯಲ್ಲಿ ಪತ್ನಿ ಅರುಣ ಲಕ್ಷ್ಮಿ ಅವರು ಉಚಿತ ವಿವಾಹ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More