Advertisment

BBK11: ಭವ್ಯಾ, ತ್ರಿವಿಕ್ರಮ್​ ಮಧ್ಯೆ ಸಖತ್​ ಪ್ಲಾನ್​; ಮೋಕ್ಷಿತಾ ಹೇಳಿಕೆಗೆ ಕಕ್ಕಾಬಿಕ್ಕಿಯಾಯ್ತು ಈ ಜೋಡಿ

author-image
Veena Gangani
Updated On
BBK11: ಭವ್ಯಾ, ತ್ರಿವಿಕ್ರಮ್​ ಮಧ್ಯೆ ಸಖತ್​ ಪ್ಲಾನ್​; ಮೋಕ್ಷಿತಾ ಹೇಳಿಕೆಗೆ ಕಕ್ಕಾಬಿಕ್ಕಿಯಾಯ್ತು ಈ ಜೋಡಿ
Advertisment
  • ಬಿಗ್​ಬಾಸ್​ ಶೋಗೆ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದ ರಾಧಾ ಹಿರೇಗೌಡರ್
  • ಕೆಲವೊಂದು ಅಚ್ಚರಿಯ ಹೇಳಿಕೆಗಳು ಎಲ್ಲರ ಮುಂದೆ ಬಿಚ್ಚಿಟ್ಟ ಸ್ಪರ್ಧಿಗಳು
  • ಮನೆಯಲ್ಲಿ ಜಾಸ್ತಿ ಕಾಲ ಉಳಿಯಬೇಕು ಅಂತ ಒಬ್ಬರು ಪ್ಲಾನ್ ಮಾಡಿದ್ದಾರಂತೆ!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಶುರುವಾಗಿ 26 ದಿನ ಕಳೆದಿದೆ. ಆದರೆ ನಾಲ್ಕು ವಾರದಲ್ಲಿ ಬಿಗ್​ಬಾಸ್​ ಮನೆ ಸಾಕಷ್ಟು ಬದಲಾವಣೆಗಳು ಆಗಿವೆ. ನಿನ್ನೆ ನಡೆದ ಎಪಿಸೋಡ್​ನಲ್ಲೂ ಸ್ಪರ್ಧಿಗಳ ಬಾಯಿಂದ ಕೆಲವೊಂದು ಅಚ್ಚರಿಯ ಹೇಳಿಕೆಗಳು ಹೊರ ಬಿದ್ದಿವೆ.

Advertisment

ಇದನ್ನೂ ಓದಿ: BBK11: ಅಮ್ಮನ ಅಗಲಿಕೆಯ ನೋವಲ್ಲಿ ಕಿಚ್ಚ ಸುದೀಪ್​.. ಈ ವಾರ ಇಬ್ಬರಿಂದ ಬಿಗ್ ಬಾಸ್ ನಿರೂಪಣೆ; ಯಾರವರು?

publive-image

ಬಿಗ್​ಬಾಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ರಾಧಾ ಹಿರೇಗೌಡರ್ ಎಂಟ್ರಿ ಕೊಟ್ಟಿದ್ದರು. ಎರಡು ಪಕ್ಷಗಳ ಮುಖಾಮುಖಿ ಚಟುವಟಿಕೆಯನ್ನ ರಾಧಾ ಹಿರೇಗೌಡರ್ ನಡೆಸಿಕೊಟ್ಟರು. ಈ ಚಟುವಟಿಕೆಯಲ್ಲಿ ಮೋಕ್ಷಿತಾ ಪೈ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅದು ಕೂಡ ಚೈತ್ರಾ ಕುಂದಾಪುರ, ಐಶ್ವರ್ಯಾ ಅವರ ಮುಂದೆ ಹೇಳಿದ ಕೆಲವೊಂದು ಮಾತಿಯನ್ನು ಬಿಚ್ಚಿಟ್ಟಿದ್ದಾರೆ.

publive-image

ಈ ವಾರ ದೊಡ್ಮನೆಯಲ್ಲಿ ಬಿಗ್​ಬಾಸ್ ಸೌಧ ಆಗಿ ಪರಿವರ್ತನೆ ಆಗಿದೆ. ಒಂದು ಪಕ್ಷಕ್ಕೆ ತ್ರಿವಿಕ್ರಮ್ ನಾಯಕನಾದರೆ, ಇನ್ನೊಂದು ಪಕ್ಷಕ್ಕೆ ಐಶ್ವರ್ಯಾ ಸಿಂಧೋಗಿ ನಾಯಕಿಯಾಗಿದ್ದಾರೆ. ಪಕ್ಷಗಳ ಚರ್ಚಾಕೂಟ ನಡೆಸಲು ‘ಮುಖಾಮುಖಿ’ ಎಂಬ ವಿಶೇಷ ಚಟುವಟಿಕೆಯನ್ನ ಬಿಗ್​ಬಾಸ್ ಆಯೋಜಿಸಿದ್ದರು.

Advertisment

ಇದನ್ನೂ ಓದಿ:ಹಸುವಿನ ಸಗಣಿಯಿಂದ ತಯಾರಿಸಲಾದ ಗಡಿಯಾರವಿದು.. ವಿದೇಶದಲ್ಲಿ ಇದಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

publive-image

ಇದೇ ಚರ್ಚಾ ಕೂಟದಲ್ಲಿ ಮೋಕ್ಷಿತಾ ಅವರು ನನ್ನ ಪ್ರಕಾರ ನಯವಂಚಕಿ ಚೈತ್ರಾ ಕುಂದಾಪುರ ಅಂತ ಹೇಳಿದ್ದಾರೆ. ಕಳೆದ ವಾರ ಅಪ್ರಾಮಾಣಿಕ, ಕುತಂತ್ರಿ ಚಟುವಟಿಕೆ ನೀಡಲಾಗಿತ್ತು. ಅದರಲ್ಲಿ ಅತೀ ಹೆಚ್ಚು ವೋಟ್ ಬಂದಿದ್ದು ಚೈತ್ರಾ ಅವರಿಗೆ. ಇದೇ ವೇಳೆ ತ್ರಿವಿಕ್ರಮ್ ಜೊತೆ ಚೆನ್ನಾಗಿದ್ದರೆ ಈ ಮನೆಯಲ್ಲಿ ಜಾಸ್ತಿ ಕಾಲ ಉಳಿಯಬಹುದು. ಆ ತರಹ ಒಬ್ಬರು ಪ್ಲಾನ್ ಮಾಡುತ್ತಿದ್ದಾರೆ ಅಂತ ಐಶ್ವರ್ಯಾ ಬಳಿ ಚೈತ್ರಾ ಕುಂದಾಪುರ ಹೇಳಿದ್ದಾರೆ. ಯಾರು ಅಂತ ಕೇಳಿದಾಗ ಚೈತ್ರಾ ಭವ್ಯಾ ಅವರನ್ನ ತೋರಿಸಿದ್ದಾರೆ ಎಂದು ಮೋಕ್ಷಿತಾ ಪೈ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಭ್ಯವಾ ಹಾಗೂ ತ್ರಿವಿಕ್ರಮ್​ ಶಾಕ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment