Advertisment

ಪಾದಯಾತ್ರೆ ಹೊರಟ ಅಮ್ಮ-ಮಗಳಿಗೆ ಟಾಟಾ ಏಸ್​ ಡಿಕ್ಕಿ.. ದೇವರ ಪಾದ ಸೇರಿದ ತಾಯಿ, ಸಾವು ಬದುಕಿನ ಮಧ್ಯೆ ಮಗಳು

author-image
AS Harshith
Updated On
ಪಾದಯಾತ್ರೆ ಹೊರಟ ಅಮ್ಮ-ಮಗಳಿಗೆ ಟಾಟಾ ಏಸ್​ ಡಿಕ್ಕಿ.. ದೇವರ ಪಾದ ಸೇರಿದ ತಾಯಿ, ಸಾವು ಬದುಕಿನ ಮಧ್ಯೆ ಮಗಳು
Advertisment
  • ಪಾದಯಾತ್ರೆ ಹೊರಟಿದ್ದ ತಾಯಿ ಮಗಳಿಗೆ ಯಮನಾದ ಟಾಟಾ ಏಸ್​ ವಾಹನ
  • ಬೆಳ್ಳಂ ಬೆಳಗ್ಗೆ ತಾಯಿ-ಮಗಳಿಗೆ ಡಿಕ್ಕಿ.. ಸ್ಥಳದಲ್ಲೇ ಸಾವನ್ನಪ್ಪಿದ ಅಮ್ಮ
  • ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ಮಗಳು

ರಾಯಚೂರು: ಪಾದಯಾತ್ರೆ ಹೊರಟಿದ್ದ ತಾಯಿ ಮಗಳು ರಸ್ತೆ ಅಪಘಾತದಲ್ಲಿ ಬಲಿಯಾದ ಘಟನೆ ಲಿಂಗಸೂಗೂರು ತಾಲ್ಲೂಕಿನ ನಾಗಲಾಪೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಅಪಘಾತದಲ್ಲಿ ತಾಯಿ ಸಾವನ್ನಪ್ಪಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

Advertisment

ಬೆಳ್ಳಂ ಬೆಳಗ್ಗೆ ತಾಯಿ-ಮಗಳಿಗೆ ಟಾಟಾ ಏಸ್​ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಭಾಗ್ಯಮ್ಮ (35) ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: 81ನೇ ವಯಸ್ಸಿಗೆ ಎರಡನೇ ಮದುವೆಯಾದ ನಿವೃತ್ತ IPS​ ಅಧಿಕಾರಿ.. ಮತ್ತೊಂದು ಮದುವೆಯಾಗಲು ಕಾರಣ?

ಭಾಗ್ಯಮ್ಮ ವ್ಯಾಸ ನಂದಿಹಾಳ ಗ್ರಾಮದ ನಿವಾಸಿಯಾಗಿದ್ದು, ಭಾಗ್ಯಮ್ಮಳ ಮಗಳು ಸಾವು -ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

Advertisment

ಇದನ್ನೂ ಓದಿ: Alto K10ನಲ್ಲಿ ಕಾಣಿಸಿಕೊಂಡ ದೋಷ.. 2555 ಕಾರುಗಳನ್ನು ಹಿಂಪಡೆಯಲು ಮುಂದಾದ ಮಾರುತಿ ಸುಜುಕಿ

ಭಾಗ್ಯಮ್ಮ ಛತ್ತರದ ಹನುಮಾನ್ ದೇವಸ್ಥಾನಕ್ಕೆ ಇಬ್ಬರೂ ಪಾದಯಾತ್ರೆ ಹೊರಟಿದ್ದರು. ದೇವರನ್ನು ಕಾಣಲೆಂದು ಮಗಳ ಜೊತೆಗೆ ಹೋಗುತ್ತಿದ್ದರು. ಈ ವೇಳೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಮುದಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment