ಜನಪ್ರಿಯತೆ ಸಿಕ್ಕಿದ್ದರೂ ಧೋನಿ ಅಂದು ಸಂಕಷ್ಟದಲ್ಲಿದ್ದರು
ಧೋನಿ ಸ್ಥಿತಿ ತಿಳಿದು ಮರುಗಿದ್ದ ರೆಬಲ್ ಸ್ಟಾರ್ ಅಂಬರೀಶ್
ವಿಶೇಷ ಮಾಹಿತಿ ಹಂಚಿಕೊಂಡ ಸುಮಲತಾ ಅಂಬರೀಶ್
ವಿಶ್ವ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಟ ಕ್ಯಾಪ್ಟನ್ ಎಮ್.ಎಸ್ ಧೋನಿ ಹಾಗೂ ಕನ್ನಡ ಚಿತ್ರರಂಗದ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ನಡುವೆ ಒಂದು ಇಂಟರೆಸ್ಟಿಂಗ್ ಸಂಗತಿ ನಡೆದಿತ್ತು. ಈ ಕಥೆ ಹಲವರಿಗೆ ಗೊತ್ತಿದ್ರೂ, ಇಷ್ಟು ದಿನ ಇದು ಅಂತೆ ಕಂತೆ ಸುದ್ದಿಯಾಗಿತ್ತು. ಅದಕ್ಕೆ ಈಗ ಸಾಕ್ಷಿ ಸಿಕ್ಕಿದೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ 3 ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ವೀರ, ಎಮ್.ಎಸ್ ಧೋನಿಗೆ ಇಂದು ಕೋಟ್ಯಧಿಪತಿ. ಆದರೆ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಕಾಲಿಟ್ಟ ದಿನಗಳಲ್ಲಿ ಧೋನಿಯ ಆರ್ಥಿಕ ಸ್ಥಿತಿ ಅಷ್ಟು ಚನ್ನಾಗಿರಲಿಲ್ಲ. ಅವರ ತಂದೆಯೇ ಆಗ ಹೇಳಿಕೊಂಡಂತೆ ಧೋನಿಯ ಆಟದಿಂದ ಹೆಸರು ಫೇಮಸ್ ಆಗ್ತಿದ್ದಂತೆ ಮನೆಗೆ ಗಣ್ಯ ವ್ಯಕ್ತಿಗಳು, ಅಭಿಮಾನಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದ್ರಂತೆ. ಆ ಸಂದರ್ಭದಲ್ಲಿ ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೂಡ ಒದಗಿಸಲಾಗದ ಪರಿಸ್ಥಿತಿ ಕುಟುಂಬದ್ದಾಗಿತ್ತಂತೆ.
ಒಂದು ಖ್ಯಾತಿ ಹೆಚ್ಚುತ್ತಿದ್ದರೂ ಆರ್ಥಿಕವಾಗಿ ಬಲಿಷ್ಠಗೊಳ್ಳದ ಸಂದರ್ಭದಲ್ಲಿ ಪರೋಕ್ಷವಾಗಿ ಮಾಹಿಯ ಕೈ ಹಿಡಿದಿದ್ದು, ರೆಬಲ್ ಸ್ಟಾರ್ ಅಂಬರೀಶ್. ಅಂಬರೀಶ್, ತಮ್ಮ ಜೊತೆಗಿದ್ದ ಅದೆಷ್ಟೋ ಜನರ ಸಂಕಷ್ಟದ ಸಂದರ್ಭದಲ್ಲಿ ಹೆಗಲಾಗಿ ನಿಂತಿರೋ ಉದಾಹರಣೆ ಸಾಕಷ್ಟಿವೆ. ಅದೇ ರೀತಿ ಧೋನಿಗೂ ಅಂಬರೀಶ್ ಸಹಾಯಹಸ್ತ ಚಾಚಿದ್ದರು.
2006-07ರಲ್ಲಿ ಟೀಮ್ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಆಡಿದಾಗ ನಡೆದ ಘಟನೆಯಿದು. ಧೋನಿಯ ಆಟಕ್ಕೆ ಕ್ಲೀನ್ಬೋಲ್ಡ್ ಆಗಿದ್ದ ಅಂಬರೀಶ್ಗೆ ಮಾಹಿ ಕುಟುಂಬದ ಬಡತನದ ಬಗ್ಗೆಯೂ ತಿಳಿದಿತ್ತು. ಹೀಗಾಗಿ ಹೇಗಾದ್ರೂ ಸಹಾಯ ಮಾಡಬೇಕು ಅನ್ನೋದು ಅಂಬರೀಶ್ ತುಡಿತವಾಗಿತ್ತಂತೆ. ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಪಂದ್ಯದ ಬಳಿಕ ಧೋನಿಯನ್ನ ಭೇಟಿಯಾಗಿದ್ದ ಅಂಬಿ, 2 ಲಕ್ಷ ರೂಪಾಯಿಗಳ ಸಹಾಯಧನ ನೀಡಿ ಉದಾರತೆ ಮೆರೆದಿದದ್ದರು. ಈ ಸಂದರ್ಭದ ಫೋಟೋವನ್ನು ಇದೀಗ ಸುಮಲತಾ ಅಂಬರೀಷ್ ಹಂಚಿಕೊಂಡಿದ್ದು ಘಟನೆಯನ್ನ ನೆನೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜನಪ್ರಿಯತೆ ಸಿಕ್ಕಿದ್ದರೂ ಧೋನಿ ಅಂದು ಸಂಕಷ್ಟದಲ್ಲಿದ್ದರು
ಧೋನಿ ಸ್ಥಿತಿ ತಿಳಿದು ಮರುಗಿದ್ದ ರೆಬಲ್ ಸ್ಟಾರ್ ಅಂಬರೀಶ್
ವಿಶೇಷ ಮಾಹಿತಿ ಹಂಚಿಕೊಂಡ ಸುಮಲತಾ ಅಂಬರೀಶ್
ವಿಶ್ವ ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಟ ಕ್ಯಾಪ್ಟನ್ ಎಮ್.ಎಸ್ ಧೋನಿ ಹಾಗೂ ಕನ್ನಡ ಚಿತ್ರರಂಗದ ಕರ್ಣ ರೆಬಲ್ ಸ್ಟಾರ್ ಅಂಬರೀಶ್ ನಡುವೆ ಒಂದು ಇಂಟರೆಸ್ಟಿಂಗ್ ಸಂಗತಿ ನಡೆದಿತ್ತು. ಈ ಕಥೆ ಹಲವರಿಗೆ ಗೊತ್ತಿದ್ರೂ, ಇಷ್ಟು ದಿನ ಇದು ಅಂತೆ ಕಂತೆ ಸುದ್ದಿಯಾಗಿತ್ತು. ಅದಕ್ಕೆ ಈಗ ಸಾಕ್ಷಿ ಸಿಕ್ಕಿದೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ 3 ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟ ವೀರ, ಎಮ್.ಎಸ್ ಧೋನಿಗೆ ಇಂದು ಕೋಟ್ಯಧಿಪತಿ. ಆದರೆ ಇಂಟರ್ನ್ಯಾಷನಲ್ ಕ್ರಿಕೆಟ್ಗೆ ಕಾಲಿಟ್ಟ ದಿನಗಳಲ್ಲಿ ಧೋನಿಯ ಆರ್ಥಿಕ ಸ್ಥಿತಿ ಅಷ್ಟು ಚನ್ನಾಗಿರಲಿಲ್ಲ. ಅವರ ತಂದೆಯೇ ಆಗ ಹೇಳಿಕೊಂಡಂತೆ ಧೋನಿಯ ಆಟದಿಂದ ಹೆಸರು ಫೇಮಸ್ ಆಗ್ತಿದ್ದಂತೆ ಮನೆಗೆ ಗಣ್ಯ ವ್ಯಕ್ತಿಗಳು, ಅಭಿಮಾನಿಗಳು ಹೆಚ್ಚು ಹೆಚ್ಚು ಬರಲಾರಂಭಿಸಿದ್ರಂತೆ. ಆ ಸಂದರ್ಭದಲ್ಲಿ ಅವರಿಗೆ ಕುಳಿತುಕೊಳ್ಳಲು ಆಸನವನ್ನು ಕೂಡ ಒದಗಿಸಲಾಗದ ಪರಿಸ್ಥಿತಿ ಕುಟುಂಬದ್ದಾಗಿತ್ತಂತೆ.
ಒಂದು ಖ್ಯಾತಿ ಹೆಚ್ಚುತ್ತಿದ್ದರೂ ಆರ್ಥಿಕವಾಗಿ ಬಲಿಷ್ಠಗೊಳ್ಳದ ಸಂದರ್ಭದಲ್ಲಿ ಪರೋಕ್ಷವಾಗಿ ಮಾಹಿಯ ಕೈ ಹಿಡಿದಿದ್ದು, ರೆಬಲ್ ಸ್ಟಾರ್ ಅಂಬರೀಶ್. ಅಂಬರೀಶ್, ತಮ್ಮ ಜೊತೆಗಿದ್ದ ಅದೆಷ್ಟೋ ಜನರ ಸಂಕಷ್ಟದ ಸಂದರ್ಭದಲ್ಲಿ ಹೆಗಲಾಗಿ ನಿಂತಿರೋ ಉದಾಹರಣೆ ಸಾಕಷ್ಟಿವೆ. ಅದೇ ರೀತಿ ಧೋನಿಗೂ ಅಂಬರೀಶ್ ಸಹಾಯಹಸ್ತ ಚಾಚಿದ್ದರು.
2006-07ರಲ್ಲಿ ಟೀಮ್ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯವನ್ನು ಆಡಿದಾಗ ನಡೆದ ಘಟನೆಯಿದು. ಧೋನಿಯ ಆಟಕ್ಕೆ ಕ್ಲೀನ್ಬೋಲ್ಡ್ ಆಗಿದ್ದ ಅಂಬರೀಶ್ಗೆ ಮಾಹಿ ಕುಟುಂಬದ ಬಡತನದ ಬಗ್ಗೆಯೂ ತಿಳಿದಿತ್ತು. ಹೀಗಾಗಿ ಹೇಗಾದ್ರೂ ಸಹಾಯ ಮಾಡಬೇಕು ಅನ್ನೋದು ಅಂಬರೀಶ್ ತುಡಿತವಾಗಿತ್ತಂತೆ. ಹೀಗಾಗಿಯೇ ಬೆಂಗಳೂರಿನಲ್ಲಿ ನಡೆದ ಪಂದ್ಯದ ಬಳಿಕ ಧೋನಿಯನ್ನ ಭೇಟಿಯಾಗಿದ್ದ ಅಂಬಿ, 2 ಲಕ್ಷ ರೂಪಾಯಿಗಳ ಸಹಾಯಧನ ನೀಡಿ ಉದಾರತೆ ಮೆರೆದಿದದ್ದರು. ಈ ಸಂದರ್ಭದ ಫೋಟೋವನ್ನು ಇದೀಗ ಸುಮಲತಾ ಅಂಬರೀಷ್ ಹಂಚಿಕೊಂಡಿದ್ದು ಘಟನೆಯನ್ನ ನೆನೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ