ಜೆಪಿ ನಗರದ ವೇಗಾ ಸಿಟಿ ಜಂಕ್ಷನ್ ಮತ್ತು ಮಾಗಡಿ ರಸ್ತೆಯವರೆಗೆ
32.15 ಕಿ.ಮೀನಲ್ಲಿ ಹೊಸಹಳ್ಳಿ ಮತ್ತು ಕಡಬಗೆರೆ ನಡುವೆ 9 ನಿಲ್ದಾಣ
ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತವು ಜೆ.ಪಿ ನಗರದಿಂದ ಪ್ರಾರಂಭವಾಗಿ ಮಾಗಡಿ ರಸ್ತೆಯವರೆಗೆ ಸಾಗಲಿದ್ದು ಇದರ ಡಿಪಿಆರ್ಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಂಸದ ಸೂರ್ಯ ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 3ನೇ ಹಂತದ ನಮ್ಮ ಮೆಟ್ರೋ ಕಾರ್ಯಚರಣೆ ಜೆ.ಪಿ ನಗರದಿಂದ ಮಾಗಡಿ ರಸ್ತೆಯವರೆಗೆ ನಡೆಯಲಿದೆ. ಇದು ನನ್ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುತ್ತದೆ. ಮೆಟ್ರೋ ಕಾರ್ಯಾಚರಣೆ ವೇಳೆ ದಕ್ಷಿಣ ಕ್ಷೇತ್ರ ಗೇಮ್ ಚೇಂಜರ್ ಆಗಿರಲಿದೆ. ಹೀಗಾಗಿ 3ನೇ ಹಂತದ ಡಿಪಿಆರ್ಗೆ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಸಚಿವರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸಿಲ್ಕ್ ಬೋರ್ಡ್ದಿಂದ ಏರ್ಪೋರ್ಟ್ ಮೆಟ್ರೋ ಲೈನ್ ಯೋಜನೆ ವೇಳೆಯು ಬೆಂಗಳೂರು ನಗರದ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದೀರಿ. ನಗರದ ಬೆಳವಣಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಚಿವರಿಗೆ ಧನ್ಯವಾದಗಳೆಂದು ಸಂಸದ ಸೂರ್ಯ ಹೇಳಿದ್ದಾರೆ.
Bengaluru Metro's Phase 3 from JP Nagar to Magadi Road passes majorly through my constituency & will be a gamechanger when operational.
Met with Union Housing & Urban Affairs Minister Shri @HardeepSPuri Ji today & sought expeditious approval of the DPR of Phase 3.
1/2 pic.twitter.com/UnAVouNUUu
— Tejasvi Surya (@Tejasvi_Surya) August 18, 2023
ಇನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂಸದ ಸೂರ್ಯ ಅವರು ಭೇಟಿ ಮಾಡಿ ಮನವಿ ಮಾಡಿರುವ ಬಗ್ಗೆ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ ಸೂರ್ಯ ಜೊತೆ ಬೆಂಗಳೂರಿನ 3ನೇ ಹಂತದ ಮೆಟ್ರೋ ಕುರಿತು ಕಚೇರಿಯಲ್ಲಿ ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಜೆಪಿ ನಗರದ ವೇಗಾ ಸಿಟಿ ಜಂಕ್ಷನ್ ಮತ್ತು ಮಾಗಡಿ ರಸ್ತೆಯವರೆಗೆ
32.15 ಕಿ.ಮೀನಲ್ಲಿ ಹೊಸಹಳ್ಳಿ ಮತ್ತು ಕಡಬಗೆರೆ ನಡುವೆ 9 ನಿಲ್ದಾಣ
ಕೇಂದ್ರ ಸಚಿವರಿಗೆ ಮನವಿ ಮಾಡಿದ ಸಂಸದ ತೇಜಸ್ವಿ ಸೂರ್ಯ
ಬೆಂಗಳೂರಿನ ನಮ್ಮ ಮೆಟ್ರೋದ 3ನೇ ಹಂತವು ಜೆ.ಪಿ ನಗರದಿಂದ ಪ್ರಾರಂಭವಾಗಿ ಮಾಗಡಿ ರಸ್ತೆಯವರೆಗೆ ಸಾಗಲಿದ್ದು ಇದರ ಡಿಪಿಆರ್ಗೆ ತ್ವರಿತವಾಗಿ ಅನುಮೋದನೆ ನೀಡುವಂತೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.
ಈ ಬಗ್ಗೆ ಸಂಸದ ಸೂರ್ಯ ತಮ್ಮ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 3ನೇ ಹಂತದ ನಮ್ಮ ಮೆಟ್ರೋ ಕಾರ್ಯಚರಣೆ ಜೆ.ಪಿ ನಗರದಿಂದ ಮಾಗಡಿ ರಸ್ತೆಯವರೆಗೆ ನಡೆಯಲಿದೆ. ಇದು ನನ್ನ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೂಲಕ ಹಾದು ಹೋಗುತ್ತದೆ. ಮೆಟ್ರೋ ಕಾರ್ಯಾಚರಣೆ ವೇಳೆ ದಕ್ಷಿಣ ಕ್ಷೇತ್ರ ಗೇಮ್ ಚೇಂಜರ್ ಆಗಿರಲಿದೆ. ಹೀಗಾಗಿ 3ನೇ ಹಂತದ ಡಿಪಿಆರ್ಗೆ ಆದಷ್ಟು ಬೇಗ ಅನುಮೋದನೆ ನೀಡಬೇಕೆಂದು ಸಚಿವರಿಗೆ ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆಯು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಸಿಲ್ಕ್ ಬೋರ್ಡ್ದಿಂದ ಏರ್ಪೋರ್ಟ್ ಮೆಟ್ರೋ ಲೈನ್ ಯೋಜನೆ ವೇಳೆಯು ಬೆಂಗಳೂರು ನಗರದ ಬಗ್ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದೀರಿ. ನಗರದ ಬೆಳವಣಿಗೆ ಪ್ರೋತ್ಸಾಹ ನೀಡುತ್ತಿರುವುದಕ್ಕೆ ಸಚಿವರಿಗೆ ಧನ್ಯವಾದಗಳೆಂದು ಸಂಸದ ಸೂರ್ಯ ಹೇಳಿದ್ದಾರೆ.
Bengaluru Metro's Phase 3 from JP Nagar to Magadi Road passes majorly through my constituency & will be a gamechanger when operational.
Met with Union Housing & Urban Affairs Minister Shri @HardeepSPuri Ji today & sought expeditious approval of the DPR of Phase 3.
1/2 pic.twitter.com/UnAVouNUUu
— Tejasvi Surya (@Tejasvi_Surya) August 18, 2023
ಇನ್ನು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಸಂಸದ ಸೂರ್ಯ ಅವರು ಭೇಟಿ ಮಾಡಿ ಮನವಿ ಮಾಡಿರುವ ಬಗ್ಗೆ ಫೋಟೋ ಶೇರ್ ಮಾಡಿದ್ದಾರೆ. ಅಲ್ಲದೇ ಸೂರ್ಯ ಜೊತೆ ಬೆಂಗಳೂರಿನ 3ನೇ ಹಂತದ ಮೆಟ್ರೋ ಕುರಿತು ಕಚೇರಿಯಲ್ಲಿ ಚರ್ಚಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ