ಆ ಒಂದು ಡಿಶ್ ಎಂದರೆ ಮಾಜಿ ಕ್ಯಾಪ್ಟನ್ಗೆ ತುಂಬಾ ಇಷ್ಟ
ಧೋನಿ 3 ಐಸಿಸಿ ಮಾದರಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ
ಇದನ್ನು ತಿಂದರೆ ವಿಶ್ವಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ- ಧೋನಿ
ಮಾಸ್ಟರ್ಮೈಂಡ್ ಧೋನಿಯ ಆನ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ಹಲವು ವಿಚಾರಗಳು ಅಭಿಮಾನಿಗಳಿಗೆ ಗೊತ್ತಿದೆ. ಆದರೆ ಧೋನಿ, 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದು ಹೇಗೆ ಅನ್ನೋ ಇನ್ಸೈಡ್ ಸ್ಟೋರಿ ಯಾರಿಗೂ ಗೊತ್ತಿಲ್ಲ. ಮೈದಾನದಲ್ಲಿ ಆಡಿದ್ದು ಬಿಡಿ, ಆಫ್ ದ ಫೀಲ್ಡ್ನಲ್ಲಿ ಹೀಗೆ ಮಾಡಿದ್ದೇ ಕಪ್ ಗೆಲ್ಲೋಕೆ ಕಾರಣವಾಯ್ತಂತೆ. ಇವತ್ತಿನ ಸಖತ್ ಸ್ಟೋರಿಯಲ್ಲಿ ಏನಿದು ಕಥೆ..?
ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 3 ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ. ಆದ್ರಲ್ಲೂ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿದ್ದಂತೂ ಮಾಹಿ ಕ್ರಿಕೆಟ್ ಬದುಕಿನ ಎವರ್ಗ್ರೀನ್ ಮೂಮೆಂಟ್. ಪಂದ್ಯದಲ್ಲಿ ನಾಯಕನಾಗಿ ಬಡ್ತಿ ಪಡೆದು ಬಂದ ಧೋನಿ 91 ರನ್ ಗಳಿಸಿ, 28 ವರ್ಷಗಳ ಬಳಿಕ ಭಾರತಕ್ಕೆ ಒನ್ಡೇ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ರು. ಇಂತಹ ಐತಿಹಾಸಿಕ ಕ್ಷಣದ ಸೃಷ್ಟಿಗೆ ಮಾಹಿಯ ಆಟ ಎಷ್ಟು ಕಾರಣನೋ? ಈ ಡಿಶ್ ಕೂಡ ಅಷ್ಟೇ ಕಾರಣವಂತೆ. ಇದು ಅಚ್ಚರಿ ಅನ್ನಿಸಿದ್ರೂ ಇದು ಸತ್ಯ.
ಇದನ್ನು ಓದಿ: ಕಷ್ಟದಲ್ಲಿ ಕೈ ಹಿಡಿದಿದ್ದ ಫ್ರೆಂಡ್ನನ್ನು ಮರೆತ್ತಿಲ್ಲ ಕೂಲ್ ಕ್ಯಾಪ್ಟನ್.. ಧೋನಿ ಗೆಳೆಯ ಚಿಟ್ಟು ಈಗ ಏನಾಗಿದ್ದಾರೆ?
ಧೋನಿ ಒಬ್ಬ ಸೂಪರ್ಸ್ಟಿಶಿಯಸ್, ಮೂಢನಂಬಿಕೆಯನ್ನ ಸಿಕ್ಕಾಪಟ್ಟೆ ನಂಬುತ್ತಾರೆ. 2011ರ ಏಕದಿನ ವಿಶ್ವಕಪ್ ಪೂರ್ತಿ ಕ್ಯಾಪ್ಟನ್ ಧೋನಿ, ಬರೀ ಕಿಚಡಿಯನ್ನ ಸೇವಿಸಿದ್ರಂತೆ. ಕಿಚಡಿ ತಿಂದ್ರೆ ವಿಶ್ವಕಪ್ ಗೆಲ್ತೀವಿ ಅಂತಾ ಧೋನಿ ಎಷ್ಟು ನಂಬಿದ್ದರು ಅಂದರೆ, ನಾನು ರನ್ ಹೊಡೆಯದಿದ್ದರು ಪರವಾಗಿಲ್ಲ. ಆದರೆ ಮೂಢನಂಬಿಕೆ ವರ್ಕ್ ಆಗುತ್ತೆ ಅಂತಿದ್ದರಂತೆ. ಈ ಬಗ್ಗೆ ಸೆಹ್ವಾಗ್ ಮಾತನಾಡಿದ್ದು, ಕೊನೆಗೂ ಧೋನಿಯ ಮೂಢನಂಬಿಕೆಯೇ ನಿಜವಾಯಿತು. ನಾವು ಫೈನಲ್ ಪಂದ್ಯ ಗೆದ್ದು ಇತಿಹಾಸ ರಚಿಸಿದೆವು ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಆ ಒಂದು ಡಿಶ್ ಎಂದರೆ ಮಾಜಿ ಕ್ಯಾಪ್ಟನ್ಗೆ ತುಂಬಾ ಇಷ್ಟ
ಧೋನಿ 3 ಐಸಿಸಿ ಮಾದರಿ ಟ್ರೋಫಿ ಗೆಲ್ಲಿಸಿಕೊಟ್ಟ ನಾಯಕ
ಇದನ್ನು ತಿಂದರೆ ವಿಶ್ವಕಪ್ ಗೆಲ್ಲುತ್ತೇವೆ ಎಂಬ ನಂಬಿಕೆ- ಧೋನಿ
ಮಾಸ್ಟರ್ಮೈಂಡ್ ಧೋನಿಯ ಆನ್ ಮತ್ತು ಆಫ್ ದಿ ಫೀಲ್ಡ್ನಲ್ಲಿ ಹಲವು ವಿಚಾರಗಳು ಅಭಿಮಾನಿಗಳಿಗೆ ಗೊತ್ತಿದೆ. ಆದರೆ ಧೋನಿ, 2011ರ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದು ಹೇಗೆ ಅನ್ನೋ ಇನ್ಸೈಡ್ ಸ್ಟೋರಿ ಯಾರಿಗೂ ಗೊತ್ತಿಲ್ಲ. ಮೈದಾನದಲ್ಲಿ ಆಡಿದ್ದು ಬಿಡಿ, ಆಫ್ ದ ಫೀಲ್ಡ್ನಲ್ಲಿ ಹೀಗೆ ಮಾಡಿದ್ದೇ ಕಪ್ ಗೆಲ್ಲೋಕೆ ಕಾರಣವಾಯ್ತಂತೆ. ಇವತ್ತಿನ ಸಖತ್ ಸ್ಟೋರಿಯಲ್ಲಿ ಏನಿದು ಕಥೆ..?
ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ 3 ಐಸಿಸಿ ಮಾದರಿ ಟ್ರೋಫಿಗಳನ್ನ ಗೆಲ್ಲಿಸಿಕೊಟ್ಟ ಶ್ರೇಷ್ಠ ನಾಯಕ. ಆದ್ರಲ್ಲೂ 2011ರ ಏಕದಿನ ವಿಶ್ವಕಪ್ ಗೆಲ್ಲಿಸಿದ್ದಂತೂ ಮಾಹಿ ಕ್ರಿಕೆಟ್ ಬದುಕಿನ ಎವರ್ಗ್ರೀನ್ ಮೂಮೆಂಟ್. ಪಂದ್ಯದಲ್ಲಿ ನಾಯಕನಾಗಿ ಬಡ್ತಿ ಪಡೆದು ಬಂದ ಧೋನಿ 91 ರನ್ ಗಳಿಸಿ, 28 ವರ್ಷಗಳ ಬಳಿಕ ಭಾರತಕ್ಕೆ ಒನ್ಡೇ ವಿಶ್ವಕಪ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ರು. ಇಂತಹ ಐತಿಹಾಸಿಕ ಕ್ಷಣದ ಸೃಷ್ಟಿಗೆ ಮಾಹಿಯ ಆಟ ಎಷ್ಟು ಕಾರಣನೋ? ಈ ಡಿಶ್ ಕೂಡ ಅಷ್ಟೇ ಕಾರಣವಂತೆ. ಇದು ಅಚ್ಚರಿ ಅನ್ನಿಸಿದ್ರೂ ಇದು ಸತ್ಯ.
ಇದನ್ನು ಓದಿ: ಕಷ್ಟದಲ್ಲಿ ಕೈ ಹಿಡಿದಿದ್ದ ಫ್ರೆಂಡ್ನನ್ನು ಮರೆತ್ತಿಲ್ಲ ಕೂಲ್ ಕ್ಯಾಪ್ಟನ್.. ಧೋನಿ ಗೆಳೆಯ ಚಿಟ್ಟು ಈಗ ಏನಾಗಿದ್ದಾರೆ?
ಧೋನಿ ಒಬ್ಬ ಸೂಪರ್ಸ್ಟಿಶಿಯಸ್, ಮೂಢನಂಬಿಕೆಯನ್ನ ಸಿಕ್ಕಾಪಟ್ಟೆ ನಂಬುತ್ತಾರೆ. 2011ರ ಏಕದಿನ ವಿಶ್ವಕಪ್ ಪೂರ್ತಿ ಕ್ಯಾಪ್ಟನ್ ಧೋನಿ, ಬರೀ ಕಿಚಡಿಯನ್ನ ಸೇವಿಸಿದ್ರಂತೆ. ಕಿಚಡಿ ತಿಂದ್ರೆ ವಿಶ್ವಕಪ್ ಗೆಲ್ತೀವಿ ಅಂತಾ ಧೋನಿ ಎಷ್ಟು ನಂಬಿದ್ದರು ಅಂದರೆ, ನಾನು ರನ್ ಹೊಡೆಯದಿದ್ದರು ಪರವಾಗಿಲ್ಲ. ಆದರೆ ಮೂಢನಂಬಿಕೆ ವರ್ಕ್ ಆಗುತ್ತೆ ಅಂತಿದ್ದರಂತೆ. ಈ ಬಗ್ಗೆ ಸೆಹ್ವಾಗ್ ಮಾತನಾಡಿದ್ದು, ಕೊನೆಗೂ ಧೋನಿಯ ಮೂಢನಂಬಿಕೆಯೇ ನಿಜವಾಯಿತು. ನಾವು ಫೈನಲ್ ಪಂದ್ಯ ಗೆದ್ದು ಇತಿಹಾಸ ರಚಿಸಿದೆವು ಎಂದು ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ