ಧೋನಿ ಬಂದ್ರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದು ಪಕ್ಕಾ
ತಂಡಕ್ಕೆ ಧೋನಿ ಬಂದರೆ ಕೋಚ್ ದ್ರಾವಿಡ್ ಭಾರ ಕಡಿಮೆ ಆಗುತ್ತೆ
ಹೆಚ್ಚಿದ ಒತ್ತಡ, ಕೂಲ್ ಕ್ಯಾಪ್ಟನ್ ಧೋನಿಯೆ ಭಾರತಕ್ಕೆ ಪರಿಹಾರ
ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ತವರಿನಲ್ಲಿ ನಡೆಯಲಿರುವ ಈ ಟೂರ್ನಿ ಪ್ರತಿಷ್ಟೆಯ ಕಣ. ಶತಾಯಗತಾಯ ಚಾಂಪಿಯನ್ ಆಗಲೆಬೇಕು ಎಂದು ಬಿಸಿಸಿಐ ಪಣ ತೊಟ್ಟಿದೆ. ಇದಕ್ಕಾಗಿ ಮಾಸ್ಟರ್ ಧೋನಿಯ ಮೊರೆ ಹೋಗಿದೆ.
ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು 96 ದಿನ ಮಾತ್ರ ಬಾಕಿ. ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಐಸಿಸಿ ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಲು ಟೀಮ್ ಇಂಡಿಯಾ ಪಣ ತೊಟ್ಟಿದೆ. ಆದ್ರೆ, ಅದು ಅಷ್ಟು ಸುಲಭಕ್ಕಿಲ್ಲ.. ವೇಳಾಪಟ್ಟಿಯನ್ನ ನೋಡಿದ್ರೆ, ಸೆಮಿಸ್ ತಲುಪುವುದು ಕಷ್ಟದ ಹಾದಿಯಾಗಿದೆ.
ಪ್ರತಿಷ್ಠೆಯ ವಿಶ್ವಕಪ್ ಗೆಲ್ಲಲು ಬಿಸಿಸಿಐ ಮಾಸ್ಟರ್ ಪ್ಲಾನ್.!
ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಸಿದ್ಧತೆ ಜೋರಾಗಿವೆ. ಟೂರ್ನಿ ಆಯೋಜನೆಗಿಂತ, ಕಪ್ ಗೆಲುವಿನ ಹಂಬಲ ಹೆಚ್ಚಾಗಿದೆ. ಐಸಿಸಿ ಟೂರ್ನಿಗಳಲ್ಲಿ 10 ವರ್ಷಗಳಿಂದಾದ ಸೋಲು, ಅವಮಾನಗಳಿಗೆ ಉತ್ತರ ಕೊಡೋಕೆ ಇದೇ ಬೆಸ್ಟ್ ವೇದಿಕೆ. ತವರಿನಲ್ಲೇ ಟೂರ್ನಿ ನಡೆತ್ತಿರುವುದರಿಂದ ಇದು ಬಿಸಿಸಿಐ ಬಾಸ್ಗಳ ಪಾಲಿಗೆ ಪ್ರತಿಷ್ಟೆಯ ಕಣವಾಗಿದೆ. ಹೀಗಾಗಿ ಟ್ರೋಫಿ ಗೆಲುವಿಗೆ ಬ್ಲ್ಯೂಪ್ರಿಂಟ್ ರೂಪಿಸ್ತಿರೋ ಬಿಸಿಸಿಐ, ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ.
ಮಹೇಂದ್ರನ ಮೊರೆ ಹೋಗಲು ಮುಂದಾದ ಬಾಸ್ಗಳು.!
12 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಇದು ಸಹಜವಾಗಿ ಅಭಿಮಾನಿಗಳ ಎಕ್ಸೈಟ್ಮೆಂಟ್ ಹೆಚ್ಚಿಸಿದೆ. ಅಂದು ಧೋನಿ ನೇತೃತ್ವದ ತಂಡ ಇತಿಹಾಸ ಜಯಿಸಿದಂತೆ, ಇಂದು ರೋಹಿತ್ ಪಡೆ ಗೆದ್ದು ಬೀಗುತ್ತೆ ಎಂಬ ನಿರೀಕ್ಷೆ ಫ್ಯಾನ್ಸ್ದ್ದಾಗಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಪರಿಹಾರ ಹುಡುಕ್ತಿರೋ ಬಿಸಿಸಿಐ, ಮಾಜಿ ನಾಯಕನ ಎಮ್.ಎಸ್ ಧೋನಿಯ ಮೊರೆ ಹೋಗಲು ಚಿಂತನೆ ನಡೆಸಿದೆ.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮಾಹಿ ಮೆಂಟರ್.?
ಹೌದು.. ಬಿಸಿಸಿಐ ಪಡಸಾಲೆಯಲ್ಲಿ ಹೀಗೊಂದು ಸುದ್ದಿ ಓಡಾಡ್ತಿದೆ. ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಸಕ್ಸಸ್ಫುಲ್ ಕ್ಯಾಪ್ಟನ್ ಆಗಿರೋ ಧೋನಿಯನ್ನ, ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮೆಂಟರ್ ಆಗಿ ಕರೆತರುವ ಕಸರತ್ತು ಶುರುವಾಗಿದೆ. ಬಿಸಿಸಿಐ ಬಾಸ್ಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಶೀಘ್ರದಲ್ಲೇ ಧೋನಿಗೆ ಮುಂದೆ ಇದನ್ನ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲೇ ನಡೀತಾ ಇರೋದು ತಂಡಕ್ಕೆ ಅಡ್ವಾಂಟೇಜ್ ಆಗಿದೆ. ಆಟಗಾರರಿಗೆಲ್ಲ ತವರಿನ ಪಿಚ್ಗಳು, ಕಂಡೀಷನ್ ಬಗ್ಗೆ ಸ್ಪಷ್ಟ ಅರಿವಿದೆ. ಇದ್ರಿಂದ ಟೀಮ್ ಇಂಡಿಯಾಗೆ ಗೆಲುವಿನ ಅವಕಾಶ ಹೆಚ್ಚಿದೆ. ಹಾರ್ಡ್ ವರ್ಕ್, ಎಫರ್ಟ್ ಜೊತೆಗೆ ಸ್ಮಾರ್ಟ್ ಗೇಮ್ ಸೇರಿದ್ರೆ, ಟ್ರೋಫಿ ಪಕ್ಕಾ ನಮ್ದೇ. ಸ್ಮಾರ್ಟ್ ಗೇಮ್ ಆಡೋದ್ರಲ್ಲಿ ಧೋನಿಗಿಂತ ಪಂಟರ್ ಯಾರಾದ್ರೂ ಇದಾರಾ ಹಾಗಾಗಿಯೇ ಬಿಸಿಸಿಐ ಮಹೇಂದ್ರ ಮೊರೆ ಹೋಗಲು ಮುಂದಾಗಿದೆ.
ಇದನ್ನು ಓದಿ: ಚಿನ್ನದ ಹುಡುಗನಿಗೆ ಮತ್ತೊಂದು ‘ಚಿನ್ನ’; ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ..!
ಕಡಿಮೆಯಾಗಲಿದೆ ದ್ರಾವಿಡ್ ಭಾರ, ಹೆಚ್ಚಲಿದೆ ಒಗ್ಗಟ್ಟು .!
ಒಂದು ವೇಳೆ ಧೋನಿ ಮೆಂಟರ್ ಆಗಿ ಎಂಟ್ರಿ ಕೊಟ್ರೆ, ಹೆಡ್ ಕೋಚ್ ದ್ರಾವಿಡ್ ಭಾರ ಕಡಿಮೆಯಾಗಲಿದೆ. ಗೇಮ್ಪ್ಲಾನ್, ಸ್ಟ್ರಾಟಜಿಗಳನ್ನ ಮಾಡಲು ನೆರವಾಗಲಿದ್ದಾರೆ. ಜೊತೆಗೆ ಈಗಾಗಲೇ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗೂ ಅದಕ್ಕೂ ಮದ್ದಾಗಲಿದ್ದಾರೆ. ಧೋನಿ ಡ್ರೆಸ್ಸಿಂಗ್ ರೂಮ್ನಲ್ಲಿದ್ರೆ, ರೋಹಿತ್- ಕೊಹ್ಲಿಯಂತಹ ಸೀನಿಯರ್ ಪ್ಲೇಯರ್ಗಳ ನಡುವೆ ಒಗ್ಗಟ್ಟು ಹೆಚ್ಚಾಗಲಿದೆ.
2021ರ ಟಿ20 ವಿಶ್ವಕಪ್ ಟೂರ್ನಿ ವೇಳೆ ದಿಢೀರ್ ಎಂಬಂತೆ ಧೋನಿ ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕವಾಗಿದ್ರು. ಯುಎಇ & ದುಬೈನಲ್ಲಿ ನಡೆದ ಆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗ್ರೂಪ್ ಸ್ಟೇಜ್ನಲ್ಲೇ ಹೊರ ಬಿದ್ದಿತ್ತು. ಆದ್ರೆ, ಈಗ ವಿಶ್ವಕಪ್ ನಡೀತಾ ಇರೋದು ತವರಿನಲ್ಲಿ. ಭಾರತದ ಪಿಚ್ಗಳು, ಪ್ಲೇಯಿಂಗ್ ಕಂಡಿಷನ್.. ಎಲ್ಲದರ ಬಗ್ಗೆ ಮಾಜಿ ಕ್ಯಾಪ್ಟನ್ ಮಾಹಿಗೆ ಇಂಚಿಚೂ ಮಾಹಿತಿ ಗೊತ್ತಿದೆ. ಹೀಗಾಗಿ ಧೋನಿ ಬಂದ್ರೆ, ಟೀಮ್ ಇಂಡಿಯಾ ಬಲ ಹೆಚ್ಚೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಬಿಸಿಸಿಐ ಮನವಿಯನ್ನ ಮಾಹಿ ಒಪ್ತಾರಾ.? ಅನ್ನೋದೆ ಈಗ ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಧೋನಿ ಬಂದ್ರೆ ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲುವುದು ಪಕ್ಕಾ
ತಂಡಕ್ಕೆ ಧೋನಿ ಬಂದರೆ ಕೋಚ್ ದ್ರಾವಿಡ್ ಭಾರ ಕಡಿಮೆ ಆಗುತ್ತೆ
ಹೆಚ್ಚಿದ ಒತ್ತಡ, ಕೂಲ್ ಕ್ಯಾಪ್ಟನ್ ಧೋನಿಯೆ ಭಾರತಕ್ಕೆ ಪರಿಹಾರ
ವಿಶ್ವಕಪ್ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಚಟುವಟಿಕೆಗಳು ಜೋರಾಗಿವೆ. ತವರಿನಲ್ಲಿ ನಡೆಯಲಿರುವ ಈ ಟೂರ್ನಿ ಪ್ರತಿಷ್ಟೆಯ ಕಣ. ಶತಾಯಗತಾಯ ಚಾಂಪಿಯನ್ ಆಗಲೆಬೇಕು ಎಂದು ಬಿಸಿಸಿಐ ಪಣ ತೊಟ್ಟಿದೆ. ಇದಕ್ಕಾಗಿ ಮಾಸ್ಟರ್ ಧೋನಿಯ ಮೊರೆ ಹೋಗಿದೆ.
ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು 96 ದಿನ ಮಾತ್ರ ಬಾಕಿ. ತವರಿನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಐಸಿಸಿ ಟ್ರೋಫಿ ಗೆಲುವಿನ ಬರಕ್ಕೆ ಬ್ರೇಕ್ ಹಾಕಲು ಟೀಮ್ ಇಂಡಿಯಾ ಪಣ ತೊಟ್ಟಿದೆ. ಆದ್ರೆ, ಅದು ಅಷ್ಟು ಸುಲಭಕ್ಕಿಲ್ಲ.. ವೇಳಾಪಟ್ಟಿಯನ್ನ ನೋಡಿದ್ರೆ, ಸೆಮಿಸ್ ತಲುಪುವುದು ಕಷ್ಟದ ಹಾದಿಯಾಗಿದೆ.
ಪ್ರತಿಷ್ಠೆಯ ವಿಶ್ವಕಪ್ ಗೆಲ್ಲಲು ಬಿಸಿಸಿಐ ಮಾಸ್ಟರ್ ಪ್ಲಾನ್.!
ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಬಿಸಿಸಿಐ ವಲಯದಲ್ಲಿ ಸಿದ್ಧತೆ ಜೋರಾಗಿವೆ. ಟೂರ್ನಿ ಆಯೋಜನೆಗಿಂತ, ಕಪ್ ಗೆಲುವಿನ ಹಂಬಲ ಹೆಚ್ಚಾಗಿದೆ. ಐಸಿಸಿ ಟೂರ್ನಿಗಳಲ್ಲಿ 10 ವರ್ಷಗಳಿಂದಾದ ಸೋಲು, ಅವಮಾನಗಳಿಗೆ ಉತ್ತರ ಕೊಡೋಕೆ ಇದೇ ಬೆಸ್ಟ್ ವೇದಿಕೆ. ತವರಿನಲ್ಲೇ ಟೂರ್ನಿ ನಡೆತ್ತಿರುವುದರಿಂದ ಇದು ಬಿಸಿಸಿಐ ಬಾಸ್ಗಳ ಪಾಲಿಗೆ ಪ್ರತಿಷ್ಟೆಯ ಕಣವಾಗಿದೆ. ಹೀಗಾಗಿ ಟ್ರೋಫಿ ಗೆಲುವಿಗೆ ಬ್ಲ್ಯೂಪ್ರಿಂಟ್ ರೂಪಿಸ್ತಿರೋ ಬಿಸಿಸಿಐ, ಮಾಸ್ಟರ್ ಪ್ಲಾನ್ ಒಂದನ್ನ ರೂಪಿಸಿದೆ.
ಮಹೇಂದ್ರನ ಮೊರೆ ಹೋಗಲು ಮುಂದಾದ ಬಾಸ್ಗಳು.!
12 ವರ್ಷಗಳ ಬಳಿಕ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತಿದೆ. ಇದು ಸಹಜವಾಗಿ ಅಭಿಮಾನಿಗಳ ಎಕ್ಸೈಟ್ಮೆಂಟ್ ಹೆಚ್ಚಿಸಿದೆ. ಅಂದು ಧೋನಿ ನೇತೃತ್ವದ ತಂಡ ಇತಿಹಾಸ ಜಯಿಸಿದಂತೆ, ಇಂದು ರೋಹಿತ್ ಪಡೆ ಗೆದ್ದು ಬೀಗುತ್ತೆ ಎಂಬ ನಿರೀಕ್ಷೆ ಫ್ಯಾನ್ಸ್ದ್ದಾಗಿದೆ. ಈ ನಿರೀಕ್ಷೆಯ ಭಾರವೇ ಆಟಗಾರರನ್ನ ಒತ್ತಡಕ್ಕೆ ಸಿಲುಕಿದೆ. ಇದಕ್ಕೆ ಪರಿಹಾರ ಹುಡುಕ್ತಿರೋ ಬಿಸಿಸಿಐ, ಮಾಜಿ ನಾಯಕನ ಎಮ್.ಎಸ್ ಧೋನಿಯ ಮೊರೆ ಹೋಗಲು ಚಿಂತನೆ ನಡೆಸಿದೆ.
ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮಾಹಿ ಮೆಂಟರ್.?
ಹೌದು.. ಬಿಸಿಸಿಐ ಪಡಸಾಲೆಯಲ್ಲಿ ಹೀಗೊಂದು ಸುದ್ದಿ ಓಡಾಡ್ತಿದೆ. ಐಸಿಸಿ ಟೂರ್ನಿಯ ಇತಿಹಾಸದಲ್ಲೇ ಸಕ್ಸಸ್ಫುಲ್ ಕ್ಯಾಪ್ಟನ್ ಆಗಿರೋ ಧೋನಿಯನ್ನ, ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮೆಂಟರ್ ಆಗಿ ಕರೆತರುವ ಕಸರತ್ತು ಶುರುವಾಗಿದೆ. ಬಿಸಿಸಿಐ ಬಾಸ್ಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಶೀಘ್ರದಲ್ಲೇ ಧೋನಿಗೆ ಮುಂದೆ ಇದನ್ನ ಪ್ರಸ್ತಾಪಿಸುವ ಸಾಧ್ಯತೆಯಿದೆ.
ಈ ಬಾರಿಯ ವಿಶ್ವಕಪ್ ಭಾರತದಲ್ಲೇ ನಡೀತಾ ಇರೋದು ತಂಡಕ್ಕೆ ಅಡ್ವಾಂಟೇಜ್ ಆಗಿದೆ. ಆಟಗಾರರಿಗೆಲ್ಲ ತವರಿನ ಪಿಚ್ಗಳು, ಕಂಡೀಷನ್ ಬಗ್ಗೆ ಸ್ಪಷ್ಟ ಅರಿವಿದೆ. ಇದ್ರಿಂದ ಟೀಮ್ ಇಂಡಿಯಾಗೆ ಗೆಲುವಿನ ಅವಕಾಶ ಹೆಚ್ಚಿದೆ. ಹಾರ್ಡ್ ವರ್ಕ್, ಎಫರ್ಟ್ ಜೊತೆಗೆ ಸ್ಮಾರ್ಟ್ ಗೇಮ್ ಸೇರಿದ್ರೆ, ಟ್ರೋಫಿ ಪಕ್ಕಾ ನಮ್ದೇ. ಸ್ಮಾರ್ಟ್ ಗೇಮ್ ಆಡೋದ್ರಲ್ಲಿ ಧೋನಿಗಿಂತ ಪಂಟರ್ ಯಾರಾದ್ರೂ ಇದಾರಾ ಹಾಗಾಗಿಯೇ ಬಿಸಿಸಿಐ ಮಹೇಂದ್ರ ಮೊರೆ ಹೋಗಲು ಮುಂದಾಗಿದೆ.
ಇದನ್ನು ಓದಿ: ಚಿನ್ನದ ಹುಡುಗನಿಗೆ ಮತ್ತೊಂದು ‘ಚಿನ್ನ’; ಜಾವೆಲಿನ್ ಸ್ಟಾರ್ ನೀರಜ್ ಚೋಪ್ರಾ ಮತ್ತೊಂದು ಐತಿಹಾಸಿಕ ಸಾಧನೆ..!
ಕಡಿಮೆಯಾಗಲಿದೆ ದ್ರಾವಿಡ್ ಭಾರ, ಹೆಚ್ಚಲಿದೆ ಒಗ್ಗಟ್ಟು .!
ಒಂದು ವೇಳೆ ಧೋನಿ ಮೆಂಟರ್ ಆಗಿ ಎಂಟ್ರಿ ಕೊಟ್ರೆ, ಹೆಡ್ ಕೋಚ್ ದ್ರಾವಿಡ್ ಭಾರ ಕಡಿಮೆಯಾಗಲಿದೆ. ಗೇಮ್ಪ್ಲಾನ್, ಸ್ಟ್ರಾಟಜಿಗಳನ್ನ ಮಾಡಲು ನೆರವಾಗಲಿದ್ದಾರೆ. ಜೊತೆಗೆ ಈಗಾಗಲೇ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋ ಸುದ್ದಿಗೂ ಅದಕ್ಕೂ ಮದ್ದಾಗಲಿದ್ದಾರೆ. ಧೋನಿ ಡ್ರೆಸ್ಸಿಂಗ್ ರೂಮ್ನಲ್ಲಿದ್ರೆ, ರೋಹಿತ್- ಕೊಹ್ಲಿಯಂತಹ ಸೀನಿಯರ್ ಪ್ಲೇಯರ್ಗಳ ನಡುವೆ ಒಗ್ಗಟ್ಟು ಹೆಚ್ಚಾಗಲಿದೆ.
2021ರ ಟಿ20 ವಿಶ್ವಕಪ್ ಟೂರ್ನಿ ವೇಳೆ ದಿಢೀರ್ ಎಂಬಂತೆ ಧೋನಿ ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕವಾಗಿದ್ರು. ಯುಎಇ & ದುಬೈನಲ್ಲಿ ನಡೆದ ಆ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗ್ರೂಪ್ ಸ್ಟೇಜ್ನಲ್ಲೇ ಹೊರ ಬಿದ್ದಿತ್ತು. ಆದ್ರೆ, ಈಗ ವಿಶ್ವಕಪ್ ನಡೀತಾ ಇರೋದು ತವರಿನಲ್ಲಿ. ಭಾರತದ ಪಿಚ್ಗಳು, ಪ್ಲೇಯಿಂಗ್ ಕಂಡಿಷನ್.. ಎಲ್ಲದರ ಬಗ್ಗೆ ಮಾಜಿ ಕ್ಯಾಪ್ಟನ್ ಮಾಹಿಗೆ ಇಂಚಿಚೂ ಮಾಹಿತಿ ಗೊತ್ತಿದೆ. ಹೀಗಾಗಿ ಧೋನಿ ಬಂದ್ರೆ, ಟೀಮ್ ಇಂಡಿಯಾ ಬಲ ಹೆಚ್ಚೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ, ಬಿಸಿಸಿಐ ಮನವಿಯನ್ನ ಮಾಹಿ ಒಪ್ತಾರಾ.? ಅನ್ನೋದೆ ಈಗ ಮಿಲಿಯನ್ ಡಾಲರ್ ಪ್ರಶ್ನೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ