newsfirstkannada.com

‘ಕಾಂಗ್ರೆಸ್​​ನಿಂದ 3 ಬಾರಿ ಗೆದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ’- MTB ನಾಗರಾಜ್​​​ ಅಳಲು

Share :

08-06-2023

    ಕಾಂಗ್ರೆಸ್​​ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸೋಲು

    'ನನ್ನ ಸೋಲಿಗೆ ಬಿಜೆಪಿಯೇ ಕಾರಣ' ಎಂದ ಎಂಟಿಬಿ

    ಬಿಜೆಪಿ ನಾಯಕರ ಮುಂದೆಯೇ ಎಂಟಿಬಿ ಅಳಲು

ಬೆಂಗಳೂರು: ಇಂದು ನಡೆದ ಪರಾರ್ಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್​​ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ತನ್ನ ಸೋಲಿಗೆ ಬಿಜೆಪಿಯೇ ಕಾರಣ ಎಂದಿದ್ದಾರೆ ಎಂಟಿಬಿ ನಾಗರಾಜ್.

ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಮೂರು ಬಾರಿ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ 2 ಬಾರಿ ಸೋತಿದ್ದೇನೆ. ನನ್ನ ಸೋಲಿಗೆ ಬಿಜೆಪಿಯೇ ಕಾರಣ. ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಮರ್ಯಾದೆ ಕೊಟ್ಟು ಬಿಜೆಪಿಗೆ ಬಂದಿದ್ದೇನೆ. ಇದರಿಂದಲೇ ನನಗೆ ಸೋಲಾಗಿದೆ ಎಂದು ರಾಜ್ಯ ಬಿಜೆಪಿ ನಾಯಕರ ಮುಂದೆ ಎಂಟಿಬಿ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.

ಡಾ. ಸುಧಾಕರ್​ಗೆ ಉಸ್ತುವಾರಿ ನೀಡಿದ್ರಿ. ಆತ ಕೂಡ ಸೋತ, ನಮ್ಮನ್ನು ಸೋಲಿಸಿದ. ಡಾ. ಸುಧಾಕರ್​ ಉಸ್ತುವಾರಿಯಾಗಿ ಸರಿಯಾಗಿ ಕೆಲಸ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕಡಿಮೆ ಅಕ್ಕಿ ಕೊಟ್ಟಿದ್ದು, 40 ಪರ್ಸೆಂಟ್​ ಆರೋಪಕ್ಕೆ ಕೌಂಟರ್​​ ನೀಡದಿರುವುದು ನಮ್ಮ ಸೋಲಿಗೆ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಕಾಂಗ್ರೆಸ್​​ನಿಂದ 3 ಬಾರಿ ಗೆದ್ದೆ, ಬಿಜೆಪಿಗೆ ಬಂದು 2 ಬಾರಿ ಸೋತೆ’- MTB ನಾಗರಾಜ್​​​ ಅಳಲು

https://newsfirstlive.com/wp-content/uploads/2023/06/MTB-Nagaraj.jpg

    ಕಾಂಗ್ರೆಸ್​​ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಸೋಲು

    'ನನ್ನ ಸೋಲಿಗೆ ಬಿಜೆಪಿಯೇ ಕಾರಣ' ಎಂದ ಎಂಟಿಬಿ

    ಬಿಜೆಪಿ ನಾಯಕರ ಮುಂದೆಯೇ ಎಂಟಿಬಿ ಅಳಲು

ಬೆಂಗಳೂರು: ಇಂದು ನಡೆದ ಪರಾರ್ಜಿತ ಬಿಜೆಪಿ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್​​ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ತನ್ನ ಸೋಲಿಗೆ ಬಿಜೆಪಿಯೇ ಕಾರಣ ಎಂದಿದ್ದಾರೆ ಎಂಟಿಬಿ ನಾಗರಾಜ್.

ನಾನು ಕಾಂಗ್ರೆಸ್ಸಿನಲ್ಲಿದ್ದಾಗ ಮೂರು ಬಾರಿ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ 2 ಬಾರಿ ಸೋತಿದ್ದೇನೆ. ನನ್ನ ಸೋಲಿಗೆ ಬಿಜೆಪಿಯೇ ಕಾರಣ. ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಮರ್ಯಾದೆ ಕೊಟ್ಟು ಬಿಜೆಪಿಗೆ ಬಂದಿದ್ದೇನೆ. ಇದರಿಂದಲೇ ನನಗೆ ಸೋಲಾಗಿದೆ ಎಂದು ರಾಜ್ಯ ಬಿಜೆಪಿ ನಾಯಕರ ಮುಂದೆ ಎಂಟಿಬಿ ನಾಗರಾಜ್ ಅಳಲು ತೋಡಿಕೊಂಡಿದ್ದಾರೆ.

ಡಾ. ಸುಧಾಕರ್​ಗೆ ಉಸ್ತುವಾರಿ ನೀಡಿದ್ರಿ. ಆತ ಕೂಡ ಸೋತ, ನಮ್ಮನ್ನು ಸೋಲಿಸಿದ. ಡಾ. ಸುಧಾಕರ್​ ಉಸ್ತುವಾರಿಯಾಗಿ ಸರಿಯಾಗಿ ಕೆಲಸ ಮಾಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಕಡಿಮೆ ಅಕ್ಕಿ ಕೊಟ್ಟಿದ್ದು, 40 ಪರ್ಸೆಂಟ್​ ಆರೋಪಕ್ಕೆ ಕೌಂಟರ್​​ ನೀಡದಿರುವುದು ನಮ್ಮ ಸೋಲಿಗೆ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Load More