/newsfirstlive-kannada/media/post_attachments/wp-content/uploads/2023/11/Kantara.jpg)
ಕಾಂತಾರ ರಿಷಬ್​ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್​ಗೆ ಇಂದು ಮಹೂರ್ತ ಫಿಕ್ಸ್​ ಆಗಿದೆ. ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿ ಚಿತ್ರತಂಡವು ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ
ಇದರೊಂದಿಗೆ ಇಂದು ಬಹುನಿರೀಕ್ಷಿತ ಕಾಂತಾರ ಸಿನಿಮಾ ಮೊದಲ ಅಧ್ಯಾಯದ ಪೋಸ್ಟರ್​ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಮಧ್ಯಾಹ್ನ 12.25ಕ್ಕೆ ಪೋಸ್ಟರ್​ ರಿಲೀಸ್​ ಮಾಡಲಿದೆ. ಹೀಗಾಗಿ ಸಿನಿ ಪ್ರೇಕ್ಷಕರು ಕಾಂತಾರ ತಂಡ ಬಿಡುಗಡೆ ಮಾಡಲಿರುವ ಪೋಸ್ಟರ್​ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ಇದು ಬರಿ ಬೆಳಕಲ್ಲ ,ದರ್ಶನ, Revealing the first look on 27th nov @ 12:25pm @hombalefilms@VKiragandur@ChaluveGpic.twitter.com/HEvj27yeQU
— Rishab Shetty (@shetty_rishab)
ಇದು ಬರಿ ಬೆಳಕಲ್ಲ ,ದರ್ಶನ, Revealing the first look on 27th nov @ 12:25pm @hombalefilms@VKiragandur@ChaluveGpic.twitter.com/HEvj27yeQU
— Rishab Shetty (@shetty_rishab) November 25, 2023
">November 25, 2023
ಕಾಂತಾರ ಹೊಂಬಾಳೆ ಫೀಲಂ, ವಿಜಯ್ ಕಿರಗಂದೂರ್​ ನಿರ್ಮಾಣ ಹಾಗೂ​ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ಚಿತ್ರವಾಗಿದೆ. ಸದ್ಯ ಚಿತ್ರತಂಡ ಕುಂದಾಪುರದಲ್ಲಿ ಬೀಡುಬಿಟ್ಟಿದೆ ಎಂಬ ಸುದ್ದಿ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us