newsfirstkannada.com

ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಬೆಳ್ಳಕ್ಕಿಗಳ ಜಾತರೆ.. ಮುಂಗಾರು ಮಳೆಗೆ ಅವು ಇಲ್ಲಿಗೆ ಯಾಕೆ ಬರುತ್ತವೆ ಗೊತ್ತಾ..?

Share :

04-07-2023

    ಪ್ರಸಿದ್ಧ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಹೊಸ ಕಳೆ

    ಸ್ವರ್ಣವಲ್ಲಿ ಶ್ರೀ ಮಾರ್ಗದರ್ಶನದಲ್ಲಿ ಕೆರೆ ರಕ್ಷಣೆ

    ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೇಕೆರೆ

ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಇದೀಗ ಸಂಭ್ರಮವೋ ಸಂಭ್ರಮ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಮುಂಡಿಗೆಕೆರೆ ಪಕ್ಷಿಧಾಮ. ಸುತ್ತಲೂ ಗುಡ್ಡಗಳಿಂದ ಆವೃತವಾಗಿ ಬೃಹತ್ ಮುಂಡಿಗೆ ಗಿಡಗಳಿಂದ ಕೂಡಿದ ಮುಂಡಿಗೆಕೆರೆ ಈಗ ಅಕ್ಷರಶಃ ನಿಸರ್ಗ ನಿರ್ಮಿತ, ಸುರಕ್ಷಿತ ಹೆರಿಗೆ ತಾಣವಾಗಿ ಮಾರ್ಪಟ್ಟಿದೆ. ಇದರ ಕುರಿತ ಒಂದು ವರದಿ ಇಲ್ಲಿದೆ.

ಪ್ರತೀ ವರ್ಷ ಮಳೆಗಾಲದ ಆರಂಭಕ್ಕೆ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಇಲ್ಲಿಗೆ ಬಂದು ತಮ್ಮ ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುವ ಪರಿಪಾಠ ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ನಡುವಲ್ಲಿ ಪಕ್ಷಿಗಳು ಗೂಡು ಕಟ್ಟುವ ಏಕೈಕ ಸ್ಥಳ ಇದಾಗಿದೆ. ಸುಮಾರು 6 ಪ್ರಬೇಧದ ಹಕ್ಕಿಗಳು ಇಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತಿದ್ದು, 1980ರ ವೇಳೆಯಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ಪಿ.ಡಿ ಸುದರ್ಶನ್ ಅಜ್ಞಾತವಾಗಿದ್ದ ಈ ಪಕ್ಷಿಧಾಮವನ್ನು ಹೊರ ಜಗತ್ತಿಗೆ ಪರಿಚಯಿಸಿದರು. 1995 ರಿಂದ ಜಾಗೃತ ವೇದಿಕೆ ಸೋಂದಾ ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ ಇದರ ಸಂರಕ್ಷಣೆಯಾಗುತ್ತಿದೆ.

2019-20ರಲ್ಲಿ ಗ್ರಾಮ ಪಂಚಾಯತ್ ಸೋಂದಾ ಇವರು, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಲಹೆಯಂತೆ ಮುಂಡಿಗೇಕೆರೆ ಪಕ್ಷಿಧಾಮವನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಅಧಿಕೃತವಾಗಿ ಘೋಷಿಸಿ ಪಕ್ಷಿಧಾಮಕ್ಕೆ ರಕ್ಷಣಾ ಕವಚ ತೊಡಿಸಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಹೆರಿಗೆಗೆ ಬಂದ ಪಕ್ಷಿಗಳಿಗೆ ಅರಣ್ಯ ಇಲಾಖೆಯು 2003 ರಿಂದ ಕಾವಲುಗಾರರನ್ನು ನಿಯಮಿಸಿ ರಕ್ಷಿಸುತ್ತಾ ಬಂದಿದೆ.

ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೇಕೆರೆಗೆ ನಿರ್ದಿಷ್ಟ ಸಮಯದಲ್ಲಿ ತಮ್ಮ ಸಂತಾನಾಭಿವೃದ್ಧಿಗಾಗಿ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವದು ಅತ್ಯಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತಾಗಿ ಕ್ರಮ ಕೈಗೊಂಡು ಕಾವಲುಗಾರರನ್ನು ನೇಮಿಸಿ ಪಕ್ಷಿಗಳಿಗೆ ರಕ್ಷಣೆ ನೀಡುವಂತಾಗಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಒಟ್ಟಾರೆಯಾಗಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪಿರುವ ಇಂದಿನ ಸಂದರ್ಭದಲ್ಲಿ ಇಂತಹ ಕೆರೆಗಳನ್ನು ರಕ್ಷಿಸಿ ಉಳಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಈ ಕೆರೆ ಸುತ್ತ ಮುತ್ತ ಸಹಸ್ರಲಿಂಗ, ಸೋದೆ ವಾದಿರಾಜ ಮಠ, ಸ್ವಾದಿ ಜೈನ ಮಠ ಸೇರಿ ಹಲವು ಧಾರ್ಮಿಕ ಕೇಂದ್ರಗಳೂ, ಜಲಪಾತಗಳೂ ಇದ್ದು, ಪ್ರವಾಸಿಗರಿಗೆ ಮುಂಡಿಗೆ ಕೆರೆಯೂ ಸಹ ವಿಶೇಷ ಸ್ಥಳವಾಗಿದೆ.

ವಿಶೇಷ ವರದಿ: ಶ್ರೀಧರ ಹೆಗಡೆ, ನ್ಯೂಸ್ ಫಸ್ಟ್ ಶಿರಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂಡಿಗೆಕೆರೆ ಪಕ್ಷಿಧಾಮದಲ್ಲಿ ಬೆಳ್ಳಕ್ಕಿಗಳ ಜಾತರೆ.. ಮುಂಗಾರು ಮಳೆಗೆ ಅವು ಇಲ್ಲಿಗೆ ಯಾಕೆ ಬರುತ್ತವೆ ಗೊತ್ತಾ..?

https://newsfirstlive.com/wp-content/uploads/2023/07/SRS_BIRD-3.jpg

    ಪ್ರಸಿದ್ಧ ಮುಂಡಿಗೆಕೆರೆ ಪಕ್ಷಿಧಾಮಕ್ಕೆ ಹೊಸ ಕಳೆ

    ಸ್ವರ್ಣವಲ್ಲಿ ಶ್ರೀ ಮಾರ್ಗದರ್ಶನದಲ್ಲಿ ಕೆರೆ ರಕ್ಷಣೆ

    ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೇಕೆರೆ

ಶಿರಸಿ ತಾಲೂಕಿನ ಸುಧಾಪುರ ಕ್ಷೇತ್ರದಲ್ಲಿಯ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಇದೀಗ ಸಂಭ್ರಮವೋ ಸಂಭ್ರಮ. ಇದಕ್ಕೆ ಪ್ರಮುಖ ಕಾರಣ ಅಲ್ಲಿನ ಮುಂಡಿಗೆಕೆರೆ ಪಕ್ಷಿಧಾಮ. ಸುತ್ತಲೂ ಗುಡ್ಡಗಳಿಂದ ಆವೃತವಾಗಿ ಬೃಹತ್ ಮುಂಡಿಗೆ ಗಿಡಗಳಿಂದ ಕೂಡಿದ ಮುಂಡಿಗೆಕೆರೆ ಈಗ ಅಕ್ಷರಶಃ ನಿಸರ್ಗ ನಿರ್ಮಿತ, ಸುರಕ್ಷಿತ ಹೆರಿಗೆ ತಾಣವಾಗಿ ಮಾರ್ಪಟ್ಟಿದೆ. ಇದರ ಕುರಿತ ಒಂದು ವರದಿ ಇಲ್ಲಿದೆ.

ಪ್ರತೀ ವರ್ಷ ಮಳೆಗಾಲದ ಆರಂಭಕ್ಕೆ ಬೆಳ್ಳಕ್ಕಿಗಳು ಗುಂಪು ಗುಂಪಾಗಿ ಇಲ್ಲಿಗೆ ಬಂದು ತಮ್ಮ ಸಂತಾನಾಭಿವೃದ್ಧಿ ಮಾಡಿಕೊಂಡು ಹೋಗುವ ಪರಿಪಾಠ ನೂರಾರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ್ಯಾದ್ರಿಯ ಮಡಿಲಲ್ಲಿ ಮಳೆಗಾಲದಲ್ಲಿ ಮುಂಡಿಗೆ ಗಿಡಗಳ ನಡುವಲ್ಲಿ ಪಕ್ಷಿಗಳು ಗೂಡು ಕಟ್ಟುವ ಏಕೈಕ ಸ್ಥಳ ಇದಾಗಿದೆ. ಸುಮಾರು 6 ಪ್ರಬೇಧದ ಹಕ್ಕಿಗಳು ಇಲ್ಲಿ ತಮ್ಮ ಸಂತಾನ ಅಭಿವೃದ್ಧಿಯನ್ನು ಮಾಡುತ್ತಿದ್ದು, 1980ರ ವೇಳೆಯಲ್ಲಿ ಕರ್ನಾಟಕದ ಖ್ಯಾತ ಪಕ್ಷಿತಜ್ಞ ಪಿ.ಡಿ ಸುದರ್ಶನ್ ಅಜ್ಞಾತವಾಗಿದ್ದ ಈ ಪಕ್ಷಿಧಾಮವನ್ನು ಹೊರ ಜಗತ್ತಿಗೆ ಪರಿಚಯಿಸಿದರು. 1995 ರಿಂದ ಜಾಗೃತ ವೇದಿಕೆ ಸೋಂದಾ ಶ್ರೀ ಸೋಂದಾ ಸ್ವರ್ಣವಲ್ಲಿ ಶ್ರೀ ಶ್ರೀಗಳವರ ಮಾರ್ಗದರ್ಶನದಲ್ಲಿ ಇದರ ಸಂರಕ್ಷಣೆಯಾಗುತ್ತಿದೆ.

2019-20ರಲ್ಲಿ ಗ್ರಾಮ ಪಂಚಾಯತ್ ಸೋಂದಾ ಇವರು, ಕರ್ನಾಟಕ ರಾಜ್ಯ ಜೀವ ವೈವಿಧ್ಯ ಮಂಡಳಿಯ ಸಲಹೆಯಂತೆ ಮುಂಡಿಗೇಕೆರೆ ಪಕ್ಷಿಧಾಮವನ್ನು ಪಾರಂಪರಿಕ ಜೀವ ವೈವಿಧ್ಯ ತಾಣ ಎಂದು ಅಧಿಕೃತವಾಗಿ ಘೋಷಿಸಿ ಪಕ್ಷಿಧಾಮಕ್ಕೆ ರಕ್ಷಣಾ ಕವಚ ತೊಡಿಸಿದೆ. ಇದರ ಜೊತೆಗೆ ಮಳೆಗಾಲದಲ್ಲಿ ಹೆರಿಗೆಗೆ ಬಂದ ಪಕ್ಷಿಗಳಿಗೆ ಅರಣ್ಯ ಇಲಾಖೆಯು 2003 ರಿಂದ ಕಾವಲುಗಾರರನ್ನು ನಿಯಮಿಸಿ ರಕ್ಷಿಸುತ್ತಾ ಬಂದಿದೆ.

ಪಾರಂಪರಿಕ ಜೀವವೈವಿಧ್ಯ ತಾಣ ಮುಂಡಿಗೇಕೆರೆಗೆ ನಿರ್ದಿಷ್ಟ ಸಮಯದಲ್ಲಿ ತಮ್ಮ ಸಂತಾನಾಭಿವೃದ್ಧಿಗಾಗಿ ಬರುವ ಬೆಳ್ಳಕ್ಕಿಗಳಿಗೆ ರಕ್ಷಣೆ ನೀಡುವದು ಅತ್ಯಗತ್ಯವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ತುರ್ತಾಗಿ ಕ್ರಮ ಕೈಗೊಂಡು ಕಾವಲುಗಾರರನ್ನು ನೇಮಿಸಿ ಪಕ್ಷಿಗಳಿಗೆ ರಕ್ಷಣೆ ನೀಡುವಂತಾಗಬೇಕು ಎನ್ನುವುದು ಸ್ಥಳೀಯರ ಬೇಡಿಕೆಯಾಗಿದೆ.

ಒಟ್ಟಾರೆಯಾಗಿ ಪಕ್ಷಿ ಸಂಕುಲ ಅಳಿವಿನಂಚಿಗೆ ತಲುಪಿರುವ ಇಂದಿನ ಸಂದರ್ಭದಲ್ಲಿ ಇಂತಹ ಕೆರೆಗಳನ್ನು ರಕ್ಷಿಸಿ ಉಳಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಈ ಕೆರೆ ಸುತ್ತ ಮುತ್ತ ಸಹಸ್ರಲಿಂಗ, ಸೋದೆ ವಾದಿರಾಜ ಮಠ, ಸ್ವಾದಿ ಜೈನ ಮಠ ಸೇರಿ ಹಲವು ಧಾರ್ಮಿಕ ಕೇಂದ್ರಗಳೂ, ಜಲಪಾತಗಳೂ ಇದ್ದು, ಪ್ರವಾಸಿಗರಿಗೆ ಮುಂಡಿಗೆ ಕೆರೆಯೂ ಸಹ ವಿಶೇಷ ಸ್ಥಳವಾಗಿದೆ.

ವಿಶೇಷ ವರದಿ: ಶ್ರೀಧರ ಹೆಗಡೆ, ನ್ಯೂಸ್ ಫಸ್ಟ್ ಶಿರಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More