newsfirstkannada.com

ಕ್ರಿಕೆಟಿಗ ಮುಶೀರ್ ಖಾನ್​ ಹೇಗಿದ್ದಾರೆ..? ಭೀಕರ ಅಪಘಾತಕ್ಕೆ ಕಾರಣ ರಿವೀಲ್

Share :

Published September 29, 2024 at 2:53pm

Update September 29, 2024 at 3:02pm

    ಭವಿಷ್ಯದ ಸೂಪರ್​ ಸ್ಟಾರ್​ ಬೆನ್ನುಬಿದ್ದ ದುರಾದೃಷ್ಟ

    ಡೆಡ್ಲಿ ಆಕ್ಸಿಡೆಂಟ್​​ನಲ್ಲಿ ಸಿಲುಕಿದ ಮುಶೀರ್ ಖಾನ್

    ಡ್ರೈವರ್​​ ಯಡವಟ್ಟು.. ಡಿವೈಡರ್​ಗೆ ಕಾರು ಡಿಕ್ಕಿ

ಕೆಲ ದಿನಗಳ ಹಿಂದಷ್ಟೇ ದುಲೀಪ್​ ಟ್ರೋಫಿ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ಮುಷೀರ್​ ಖಾನ್ ಎಲ್ಲರಿಂದ ಶಹಬ್ಬಾಸ್​​ಗಿರಿ ಗಿಟ್ಟಿಸಿಕೊಂಡಿದ್ರು. ಅದ್ಭುತ ಆಟವನ್ನ ನೋಡಿ ಎಲ್ಲರೂ ಭವಿಷ್ಯದ ಸೂಪರ್​ ಸ್ಟಾರ್​ ಎಂದಿದ್ರು. ಅದಾಗಿ ಕೆಲವೇ ದಿನಕ್ಕೆ ದುರಾದೃಷ್ಟ ಬೆನ್ನುಬಿದ್ದಿದೆ. ಇರಾನಿ ಟ್ರೋಫಿಯಲ್ಲಿ ಮಿಂಚೋ ಕನಸು ಕಂಡಿದ್ದ ಮುಷೀರ್, ಆಸ್ಪತ್ರೆ ಸೇರಿದ್ದಾರೆ. ಡೆಡ್ಲಿ ಆ್ಯಕ್ಸಿಡೆಂಟ್​ಗೆ ಸಿಲುಕಿದ ಮುಶೀರ್ ಈಗ ಹೇಗಿದ್ದಾರೆ.

ಡಿಸೆಂಬರ್​​ 30.. 2022. ಭಾರತೀಯ ಕ್ರಿಕೆಟ್​​ ಲೋಕ ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಧಗಧಗನೇ ಹೊತ್ತಿ ಉರಿತಿದ್ದ ಕಾರು. ಸದಾ ನಗುವೇ ತುಂಬಿರ್ತಾ ಇದ್ದ ಮುಖದ ತುಂಬೆಲ್ಲಾ ಇದ್ದ ರಕ್ತ. ನುಜ್ಜು ಗುಜ್ಜಾದ ಡಿವೈಡರ್​​. ಈ ಭೀಕರ ಆ್ಯಕ್ಸಿಡೆಂಟ್​ನ ದೃಶ್ಯಗಳು ಎಲ್ಲೆಡೆ ವೈರಲ್​ ಆಗಿದ್ವು. ಅಂದ್ಹಾಗೆ ಅಂದು ಡೆಡ್ಲಿ ಆ್ಯಕ್ಸಿಡೆಂಟ್​ನಲ್ಲಿ ಸಿಲುಕಿದ್ದು ಡೆಲ್ಲಿ ಡ್ಯಾಶರ್​ ರಿಷಭ್​ ಪಂತ್​.

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ಆ್ಯಕ್ಸಿಡೆಂಟ್​ನ ನೋಡಿದ ಪ್ರತಿಯೊಬ್ಬರೂ ಹೇಳಿದ್ದು ಒಂದೇ ಮಾತು. ಪಂತ್​ ಬದುಕಿಳಿದಿದ್ದೇ ಪವಾಡ ಎಂದು. ಅಪಘಾತದಲ್ಲಿ ಬದುಕಿದ ಪವಾಡ ಪುರುಷ ಪಂತ್​, ಇದೀ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದಾಗಿದೆ. ಹಳೆ ಖದರ್​​ನಲ್ಲೇ ಆರ್ಭಟವನ್ನೂ ಶುರುವಿಟ್ಟುಕೊಂಡಿದ್ದಾಗಿದೆ. ಇದೀಗ ಮತ್ತೊಬ್ಬ ಯುವ ಕ್ರಿಕೆಟಿಗ ಅಂತದ್ದೇ ಡೆಡ್ಲಿ ಆಕ್ಸಿಡೆಂಟ್​ನಲ್ಲಿ ಸಿಲುಕಿಕೊಂಡಿದ್ದಾನೆ.

ಡೆಡ್ಲಿ ಆಕ್ಸಿಡೆಂಟ್​​ನಲ್ಲಿ ಸಿಲುಕಿದ ಮುಶೀರ್​ ಖಾನ್
ತನ್ನ ಸಾಲಿಡ್​ ಆಟದಿಂದಲೇ ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್​ ಎನಿಸಿಕೊಂಡಿರೋ ಮುಶೀರ್ ​ ಖಾನ್​ ಡೆಡ್ಲಿ ಆ್ಯಕ್ಸಿಡೆಂಟ್​ಗೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿ ಪಂದ್ಯವನ್ನಾಡಲು ಅಝಮ್​​ಘಡ್​​ನಿಂದ ಲಕ್ನೋಗೆ ಪ್ರಯಾಣಿಸ್ತಿದ್ದ ವೇಳೆ ಅಪಘಾತಕ್ಕೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿಯಲ್ಲಿ ಮುಂಬೈ ಪರ ಮಿಂಚೋ ಕನಸು ಕಂಡಿದ್ದ ಕ್ರಿಕೆಟಿಗ ಈಗ ಆಸ್ಪತ್ರೆ ಸೇರಿದ್ದಾರೆ.

ಡ್ರೈವರ್​​ ಯಡವಟ್ಟು.. ಡಿವೈಡರ್​ಗೆ ಕಾರು ಡಿಕ್ಕಿ
ಇರಾನಿ ಟ್ರೋಫಿಯನ್ನಾಡಲು ತಂಡದೊಂದಿಗೆ ತೆರಳದೇ ವೈಯಕ್ತಿಕ ಕಾರಿನಲ್ಲಿ ತಂದೆ ನೌಶದ್​ ಖಾನ್​ ಜೊತೆಗೆ ಮುಶೀರ್ ​ ಖಾನ್​ ಪ್ರಯಾಣಿಸ್ತಾ ಇದ್ರು. ಪ್ರಯಾಣದ ವೇಳೆ ಡ್ರೈವರ್​ ನಿದ್ದೆಯ ಮಂಪರಿನಲ್ಲಿದ್ದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಪೂರ್ವಾಂಚಲ್​ ಎಕ್ಸ್​ಪ್ರೆಸ್​ ವೇನಲ್ಲಿ ಮುಷೀರ್​ ಪ್ರಯಾಣಿಸ್ತಿದ್ದ ಟೋಯೊಟಾ ಫಾರ್ಚುನರ್​ ಕಾರು ಅಪಘಾತಕ್ಕೀಡಾಗಿದೆ.

ಕುತ್ತಿಗೆ ಭಾಗದಲ್ಲಿ ಮುಷೀರ್​ಗೆ ಗಂಭೀರ​ ಗಾಯ.!
ಮುಶೀರ್ ಖಾನ್​​, ಔಟ್​ ಅಫ್​ ಡೇಂಜರ್​ ಎಂದು ಮೆಂದಾಂತ ಆಸ್ಪತ್ರೆ ಅಧಿಕೃತವಾಗಿ ಹೇಳಿದೆ. ಮುಷೀರ್​ ತಂದೆ ನೌಶದ್​ ಖಾನ್​ಗೂ ಹೆಚ್ಚೇನು ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದ್ರೆ, ಮುಷೀರ್​ ಖಾನ್​ರ​ ಕುತ್ತಿಗೆ ಹಾಗೂ ಕೈ ಫ್ರಾಕ್ಟರ್​ ಆಗಿದ್ದು, ವೈದ್ಯರ ನಿಗಾದಲ್ಲಿ ಇಡಲಾಗಿದೆ. ಆಸ್ಪತ್ರೆಯ ಆರ್ಥೋಪಿಡಿಕ್ಸ್​ ಡಿಪಾರ್ಟ್​​ಮೆಂಟ್​ನ ಡೈರೆಕ್ಟರ್​ ಡಾಕ್ಟರ್​​ ಧರ್ಮೆಂದ್ರ ಸಿಂಗ್​ ಮುಷೀರ್​ ಖಾನ್​ಗೆ ಚಿಕಿತ್ಸೆ ನೀಡ್ತಿದ್ದಾರೆ. ಮೆಡಿಕಲಿ ಫಿಟ್​ ಆದ ಬಳಿಕ ಮುಂಬೈಗೆ ಕರೆ ತಂಡು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ತಿಳಿಸಿದೆ.

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ಮುಷೀರ್​ ಅರೋಗ್ಯ ಸ್ಥಿರವಾಗಿದೆ
ಲಕ್ನೋದ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಶೀರ್ ಖಾನ್​ ಅರೋಗ್ಯ ಸ್ಥಿರವಾಗಿದೆ. ಕುತ್ತಿಗೆಯ ಬಳಿ ಫ್ರಾಕ್ಚರ್​ ಆಗಿದೆ. ಆಸ್ಪತ್ರೆಯ ವೈದ್ಯರೊಂದಿಗೆ BCCI ಹಾಗೂ MCAನ ಮೆಡಿಕಲ್​ ಟೀಮ್ ಕೂಡ​​ ನಿಗಾ ವಹಿಸುತ್ತಿವೆ. ಮುಷೀರ್​​ ಪ್ರಯಾಣಿಸುವಷ್ಟು ಫಿಟ್​ ಆದ ಬಳಿಕ ಮುಂಬೈಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆ ನೀಡಲಾಗುವುದು.
ಅಭಯ್​ ಹಡಪ್​, ಸೆಕ್ರೆಟರಿ, MCA

ಇರಾನಿ ಟ್ರೋಫಿಯಿಂದ ಔಟ್​.. ರಣಜಿಗೂ ಡೌಟ್​.!
ಆಸ್ಪತ್ರೆ ಸೇರಿರುವ ಮುಶೀರ್ ​ ಖಾನ್​ ಇರಾನಿ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸಂಪೂರ್ಣ ಚೇತರಿಕೆಗೆ 16 ವಾರಗಳ ಕಾಲಾವಕಾಶ ಬೇಕಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮುಂಬರುವ ರಣಜಿ ಟೂರ್ನಿಯ ಕೆಲ ಪಂದ್ಯಗಳಿಂದಲೂ ಮುಶೀರ್ ​ ಖಾನ್​ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಮುಶೀರ್ ​ ಖಾನ್​ ಅಂಡರ್​​ 19 ವಿಶ್ವಕಪ್​, ರಣಜಿ ಟೂರ್ನಿ.. ಕೆಲ ದಿನಗಳ ಹಿಂದಷ್ಟೇ ದುಲೀಪ್​ ಟ್ರೋಫಿಯಲ್ಲಿ ಮಿಂಚು ಹರಿಸಿದ್ರು. ಅನುಭವಿ ಆಟಗಾರರೇ ತಡಬಡಾಯಿಸಿದ ಪಿಚ್​ಗಳಲ್ಲಿ 19 ವರ್ಷದ ಮುಷೀರ್​ ಸಾಲಿಡ್​​ ಬ್ಯಾಟಿಂಗ್​ ನಡೆಸಿ ಗಮನ ಸೆಳೆದಿದ್ರು. ಟೀಮ್​ ಇಂಡಿಯಾದ ಭವಿಷ್ಯದ ಸೂಪರ್​ ಸ್ಟಾರ್​ ಎನಿಸಿಕೊಂಡಿದ್ದ ಮುಶೀರ್ , ದುರಾದೃಷ್ಟವಶಾತ್ ಸದ್ಯ​ ಆಸ್ಪತ್ರೆಯ ಬೆಡ್​​ ಮೇಲಿದ್ದಾರೆ. ಆದಷ್ಟು ಬೇಗ ಯುವ ಕ್ರಿಕೆಟಿಗ ಚೇತರಿಸಿಕೊಳ್ಳಲಿ.. ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಲಿ ಅನ್ನೋದು ಕ್ರಿಕೆಟ್​ ಅಭಿಮಾನಿಗಳ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ರಿಕೆಟಿಗ ಮುಶೀರ್ ಖಾನ್​ ಹೇಗಿದ್ದಾರೆ..? ಭೀಕರ ಅಪಘಾತಕ್ಕೆ ಕಾರಣ ರಿವೀಲ್

https://newsfirstlive.com/wp-content/uploads/2024/09/MUSHEER-KHAN.jpg

    ಭವಿಷ್ಯದ ಸೂಪರ್​ ಸ್ಟಾರ್​ ಬೆನ್ನುಬಿದ್ದ ದುರಾದೃಷ್ಟ

    ಡೆಡ್ಲಿ ಆಕ್ಸಿಡೆಂಟ್​​ನಲ್ಲಿ ಸಿಲುಕಿದ ಮುಶೀರ್ ಖಾನ್

    ಡ್ರೈವರ್​​ ಯಡವಟ್ಟು.. ಡಿವೈಡರ್​ಗೆ ಕಾರು ಡಿಕ್ಕಿ

ಕೆಲ ದಿನಗಳ ಹಿಂದಷ್ಟೇ ದುಲೀಪ್​ ಟ್ರೋಫಿ ಟೂರ್ನಿಯಲ್ಲಿ ಮಿಂಚು ಹರಿಸಿದ್ದ ಮುಷೀರ್​ ಖಾನ್ ಎಲ್ಲರಿಂದ ಶಹಬ್ಬಾಸ್​​ಗಿರಿ ಗಿಟ್ಟಿಸಿಕೊಂಡಿದ್ರು. ಅದ್ಭುತ ಆಟವನ್ನ ನೋಡಿ ಎಲ್ಲರೂ ಭವಿಷ್ಯದ ಸೂಪರ್​ ಸ್ಟಾರ್​ ಎಂದಿದ್ರು. ಅದಾಗಿ ಕೆಲವೇ ದಿನಕ್ಕೆ ದುರಾದೃಷ್ಟ ಬೆನ್ನುಬಿದ್ದಿದೆ. ಇರಾನಿ ಟ್ರೋಫಿಯಲ್ಲಿ ಮಿಂಚೋ ಕನಸು ಕಂಡಿದ್ದ ಮುಷೀರ್, ಆಸ್ಪತ್ರೆ ಸೇರಿದ್ದಾರೆ. ಡೆಡ್ಲಿ ಆ್ಯಕ್ಸಿಡೆಂಟ್​ಗೆ ಸಿಲುಕಿದ ಮುಶೀರ್ ಈಗ ಹೇಗಿದ್ದಾರೆ.

ಡಿಸೆಂಬರ್​​ 30.. 2022. ಭಾರತೀಯ ಕ್ರಿಕೆಟ್​​ ಲೋಕ ಬೆಳ್ಳಂಬೆಳಗ್ಗೆ ಬೆಚ್ಚಿ ಬಿದ್ದಿತ್ತು. ಧಗಧಗನೇ ಹೊತ್ತಿ ಉರಿತಿದ್ದ ಕಾರು. ಸದಾ ನಗುವೇ ತುಂಬಿರ್ತಾ ಇದ್ದ ಮುಖದ ತುಂಬೆಲ್ಲಾ ಇದ್ದ ರಕ್ತ. ನುಜ್ಜು ಗುಜ್ಜಾದ ಡಿವೈಡರ್​​. ಈ ಭೀಕರ ಆ್ಯಕ್ಸಿಡೆಂಟ್​ನ ದೃಶ್ಯಗಳು ಎಲ್ಲೆಡೆ ವೈರಲ್​ ಆಗಿದ್ವು. ಅಂದ್ಹಾಗೆ ಅಂದು ಡೆಡ್ಲಿ ಆ್ಯಕ್ಸಿಡೆಂಟ್​ನಲ್ಲಿ ಸಿಲುಕಿದ್ದು ಡೆಲ್ಲಿ ಡ್ಯಾಶರ್​ ರಿಷಭ್​ ಪಂತ್​.

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ಆ್ಯಕ್ಸಿಡೆಂಟ್​ನ ನೋಡಿದ ಪ್ರತಿಯೊಬ್ಬರೂ ಹೇಳಿದ್ದು ಒಂದೇ ಮಾತು. ಪಂತ್​ ಬದುಕಿಳಿದಿದ್ದೇ ಪವಾಡ ಎಂದು. ಅಪಘಾತದಲ್ಲಿ ಬದುಕಿದ ಪವಾಡ ಪುರುಷ ಪಂತ್​, ಇದೀ ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಕ್ರಿಕೆಟ್​ಗೆ ಕಮ್​ಬ್ಯಾಕ್​ ಮಾಡಿದ್ದಾಗಿದೆ. ಹಳೆ ಖದರ್​​ನಲ್ಲೇ ಆರ್ಭಟವನ್ನೂ ಶುರುವಿಟ್ಟುಕೊಂಡಿದ್ದಾಗಿದೆ. ಇದೀಗ ಮತ್ತೊಬ್ಬ ಯುವ ಕ್ರಿಕೆಟಿಗ ಅಂತದ್ದೇ ಡೆಡ್ಲಿ ಆಕ್ಸಿಡೆಂಟ್​ನಲ್ಲಿ ಸಿಲುಕಿಕೊಂಡಿದ್ದಾನೆ.

ಡೆಡ್ಲಿ ಆಕ್ಸಿಡೆಂಟ್​​ನಲ್ಲಿ ಸಿಲುಕಿದ ಮುಶೀರ್​ ಖಾನ್
ತನ್ನ ಸಾಲಿಡ್​ ಆಟದಿಂದಲೇ ಟೀಮ್​ ಇಂಡಿಯಾದ ಫ್ಯೂಚರ್​ ಸ್ಟಾರ್​ ಎನಿಸಿಕೊಂಡಿರೋ ಮುಶೀರ್ ​ ಖಾನ್​ ಡೆಡ್ಲಿ ಆ್ಯಕ್ಸಿಡೆಂಟ್​ಗೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿ ಪಂದ್ಯವನ್ನಾಡಲು ಅಝಮ್​​ಘಡ್​​ನಿಂದ ಲಕ್ನೋಗೆ ಪ್ರಯಾಣಿಸ್ತಿದ್ದ ವೇಳೆ ಅಪಘಾತಕ್ಕೆ ತುತ್ತಾಗಿದ್ದಾರೆ. ಇರಾನಿ ಟ್ರೋಫಿಯಲ್ಲಿ ಮುಂಬೈ ಪರ ಮಿಂಚೋ ಕನಸು ಕಂಡಿದ್ದ ಕ್ರಿಕೆಟಿಗ ಈಗ ಆಸ್ಪತ್ರೆ ಸೇರಿದ್ದಾರೆ.

ಡ್ರೈವರ್​​ ಯಡವಟ್ಟು.. ಡಿವೈಡರ್​ಗೆ ಕಾರು ಡಿಕ್ಕಿ
ಇರಾನಿ ಟ್ರೋಫಿಯನ್ನಾಡಲು ತಂಡದೊಂದಿಗೆ ತೆರಳದೇ ವೈಯಕ್ತಿಕ ಕಾರಿನಲ್ಲಿ ತಂದೆ ನೌಶದ್​ ಖಾನ್​ ಜೊತೆಗೆ ಮುಶೀರ್ ​ ಖಾನ್​ ಪ್ರಯಾಣಿಸ್ತಾ ಇದ್ರು. ಪ್ರಯಾಣದ ವೇಳೆ ಡ್ರೈವರ್​ ನಿದ್ದೆಯ ಮಂಪರಿನಲ್ಲಿದ್ದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ. ಪೂರ್ವಾಂಚಲ್​ ಎಕ್ಸ್​ಪ್ರೆಸ್​ ವೇನಲ್ಲಿ ಮುಷೀರ್​ ಪ್ರಯಾಣಿಸ್ತಿದ್ದ ಟೋಯೊಟಾ ಫಾರ್ಚುನರ್​ ಕಾರು ಅಪಘಾತಕ್ಕೀಡಾಗಿದೆ.

ಕುತ್ತಿಗೆ ಭಾಗದಲ್ಲಿ ಮುಷೀರ್​ಗೆ ಗಂಭೀರ​ ಗಾಯ.!
ಮುಶೀರ್ ಖಾನ್​​, ಔಟ್​ ಅಫ್​ ಡೇಂಜರ್​ ಎಂದು ಮೆಂದಾಂತ ಆಸ್ಪತ್ರೆ ಅಧಿಕೃತವಾಗಿ ಹೇಳಿದೆ. ಮುಷೀರ್​ ತಂದೆ ನೌಶದ್​ ಖಾನ್​ಗೂ ಹೆಚ್ಚೇನು ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಆದ್ರೆ, ಮುಷೀರ್​ ಖಾನ್​ರ​ ಕುತ್ತಿಗೆ ಹಾಗೂ ಕೈ ಫ್ರಾಕ್ಟರ್​ ಆಗಿದ್ದು, ವೈದ್ಯರ ನಿಗಾದಲ್ಲಿ ಇಡಲಾಗಿದೆ. ಆಸ್ಪತ್ರೆಯ ಆರ್ಥೋಪಿಡಿಕ್ಸ್​ ಡಿಪಾರ್ಟ್​​ಮೆಂಟ್​ನ ಡೈರೆಕ್ಟರ್​ ಡಾಕ್ಟರ್​​ ಧರ್ಮೆಂದ್ರ ಸಿಂಗ್​ ಮುಷೀರ್​ ಖಾನ್​ಗೆ ಚಿಕಿತ್ಸೆ ನೀಡ್ತಿದ್ದಾರೆ. ಮೆಡಿಕಲಿ ಫಿಟ್​ ಆದ ಬಳಿಕ ಮುಂಬೈಗೆ ಕರೆ ತಂಡು ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ತಿಳಿಸಿದೆ.

ಇದನ್ನೂ ಓದಿ:ಸರ್ಫರಾಜ್ ಖಾನ್​ ಸಹೋದರ ಮುಶೀರ್ ಖಾನ್ ಕಾರು ಅಪಘಾತ.. ತಲೆಗೆ ಬಲವಾದ ಪೆಟ್ಟು

ಮುಷೀರ್​ ಅರೋಗ್ಯ ಸ್ಥಿರವಾಗಿದೆ
ಲಕ್ನೋದ ಆಸ್ಪತ್ರೆಯಲ್ಲಿ ದಾಖಲಾಗಿರುವ ಮುಶೀರ್ ಖಾನ್​ ಅರೋಗ್ಯ ಸ್ಥಿರವಾಗಿದೆ. ಕುತ್ತಿಗೆಯ ಬಳಿ ಫ್ರಾಕ್ಚರ್​ ಆಗಿದೆ. ಆಸ್ಪತ್ರೆಯ ವೈದ್ಯರೊಂದಿಗೆ BCCI ಹಾಗೂ MCAನ ಮೆಡಿಕಲ್​ ಟೀಮ್ ಕೂಡ​​ ನಿಗಾ ವಹಿಸುತ್ತಿವೆ. ಮುಷೀರ್​​ ಪ್ರಯಾಣಿಸುವಷ್ಟು ಫಿಟ್​ ಆದ ಬಳಿಕ ಮುಂಬೈಗೆ ಕರೆದುಕೊಂಡು ಬಂದು ಹೆಚ್ಚಿನ ಚಿಕಿತ್ಸೆ ನೀಡಲಾಗುವುದು.
ಅಭಯ್​ ಹಡಪ್​, ಸೆಕ್ರೆಟರಿ, MCA

ಇರಾನಿ ಟ್ರೋಫಿಯಿಂದ ಔಟ್​.. ರಣಜಿಗೂ ಡೌಟ್​.!
ಆಸ್ಪತ್ರೆ ಸೇರಿರುವ ಮುಶೀರ್ ​ ಖಾನ್​ ಇರಾನಿ ಟ್ರೋಫಿ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಸಂಪೂರ್ಣ ಚೇತರಿಕೆಗೆ 16 ವಾರಗಳ ಕಾಲಾವಕಾಶ ಬೇಕಿದೆ ಎಂದು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ ಮುಂಬರುವ ರಣಜಿ ಟೂರ್ನಿಯ ಕೆಲ ಪಂದ್ಯಗಳಿಂದಲೂ ಮುಶೀರ್ ​ ಖಾನ್​ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಮುಶೀರ್ ​ ಖಾನ್​ ಅಂಡರ್​​ 19 ವಿಶ್ವಕಪ್​, ರಣಜಿ ಟೂರ್ನಿ.. ಕೆಲ ದಿನಗಳ ಹಿಂದಷ್ಟೇ ದುಲೀಪ್​ ಟ್ರೋಫಿಯಲ್ಲಿ ಮಿಂಚು ಹರಿಸಿದ್ರು. ಅನುಭವಿ ಆಟಗಾರರೇ ತಡಬಡಾಯಿಸಿದ ಪಿಚ್​ಗಳಲ್ಲಿ 19 ವರ್ಷದ ಮುಷೀರ್​ ಸಾಲಿಡ್​​ ಬ್ಯಾಟಿಂಗ್​ ನಡೆಸಿ ಗಮನ ಸೆಳೆದಿದ್ರು. ಟೀಮ್​ ಇಂಡಿಯಾದ ಭವಿಷ್ಯದ ಸೂಪರ್​ ಸ್ಟಾರ್​ ಎನಿಸಿಕೊಂಡಿದ್ದ ಮುಶೀರ್ , ದುರಾದೃಷ್ಟವಶಾತ್ ಸದ್ಯ​ ಆಸ್ಪತ್ರೆಯ ಬೆಡ್​​ ಮೇಲಿದ್ದಾರೆ. ಆದಷ್ಟು ಬೇಗ ಯುವ ಕ್ರಿಕೆಟಿಗ ಚೇತರಿಸಿಕೊಳ್ಳಲಿ.. ಫೀಲ್ಡ್​ಗೆ ಕಮ್​ಬ್ಯಾಕ್​ ಮಾಡಲಿ ಅನ್ನೋದು ಕ್ರಿಕೆಟ್​ ಅಭಿಮಾನಿಗಳ ಹಾರೈಕೆಯಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Load More