newsfirstkannada.com

ಎಚ್ಚರ! ಕೇರಳದಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ಜ್ವರ.. ಮೈಸೂರಿನ ಜನತೆಯಲ್ಲಿ ಮನೆ ಮಾಡಿದ ಆತಂಕ

Share :

27-08-2023

    ಹೊಸದಾಗಿ ಕಾಣಿಸಿಕೊಂಡಿದೆ ಆಫ್ರಿಕನ್ ಸ್ಪ್ರೈನ್ ಜ್ವರಕ್ಕೆ

    ಕರ್ನಾಟಕ- ಕೇರಳ ಎರಡು ಭಾಗದಲ್ಲೂ ಕಟ್ಟೆಚ್ಚರ

    ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ

ನೆರೆಯ ರಾಜ್ಯ ಕೇರಳದಲ್ಲಿ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಇತ್ತ ಮೈಸೂರಿನ ಜನತೆಯಲ್ಲೂ ಆತಂಕ ಹೆಚ್ಚಾಗಿದೆ. ಸದ್ಯ ಹೊಸ ಮಾದರಿಯ ಜ್ವರವನ್ನು ಆಫ್ರಿಕನ್ ಸ್ವೈನ್ ಫೀವರ್ ಎಂದು ಹೇಳಲಾಗುತ್ತಿದೆ.

ಆಫ್ರಿಕನ್ ಸ್ವೈನ್ ಜ್ವರಕ್ಕೆ ಕರ್ನಾಟಕ- ಕೇರಳ ಎರಡು ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ ನಡೆಸುತ್ತಿದ್ದಾರೆ.

ಅಂದಹಾಗೆಯೇ ಈ ಜ್ವರ ಹಂದಿಗಳಲ್ಲಿ ಕಾಣಿಸಿಕೊಂಡು ಹರಡುತ್ತದೆ. ಮುಖ ಮತ್ತು ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ವಾಂತಿ-ಬೇಧಿಯ ರೋಗ ಲಕ್ಷಣವನ್ನು ಹೊಂದಿದೆ.

ಇದು ಪ್ರಾಣಿಗಳಿಂದ- ಪ್ರಾಣಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಗಡಿಭಾಗದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ರೋಗ ಪತ್ತೆಗಾಗಿ ಎರಡು ತಂಡಗಳ ನಿಯೋಜನೆ ಮಾಡಿದ್ದಾರೆ.

ಇನ್ನು ಪ್ರಾಣಿಗಳ ಸಾಗಾಣಿಕೆಗೆ ಸಂಪೂರ್ಣ ತಡೆ ನೀಡಲಾಗಿದೆ. ಅಧಿಕಾರಿಗಳು ಹಂದಿಮಾಂಸವನ್ನು ಸಂಪೂರ್ಣ ನಿಷೇಧ ಮಾಡಿದ್ದಾರೆ. ಎಚ್.ಡಿ.ಕೋಟೆ ತಹಶಿಲ್ದಾರ್, ಆರೋಗ್ಯಾಧಿಕಾರಿ, ಪಶುಪಾಲನ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಚ್ಚರ! ಕೇರಳದಲ್ಲಿ ಕಾಣಿಸಿಕೊಂಡ ಹೊಸ ಮಾದರಿಯ ಜ್ವರ.. ಮೈಸೂರಿನ ಜನತೆಯಲ್ಲಿ ಮನೆ ಮಾಡಿದ ಆತಂಕ

https://newsfirstlive.com/wp-content/uploads/2023/08/Pig.jpg

    ಹೊಸದಾಗಿ ಕಾಣಿಸಿಕೊಂಡಿದೆ ಆಫ್ರಿಕನ್ ಸ್ಪ್ರೈನ್ ಜ್ವರಕ್ಕೆ

    ಕರ್ನಾಟಕ- ಕೇರಳ ಎರಡು ಭಾಗದಲ್ಲೂ ಕಟ್ಟೆಚ್ಚರ

    ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ

ನೆರೆಯ ರಾಜ್ಯ ಕೇರಳದಲ್ಲಿ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿದ್ದು, ಇತ್ತ ಮೈಸೂರಿನ ಜನತೆಯಲ್ಲೂ ಆತಂಕ ಹೆಚ್ಚಾಗಿದೆ. ಸದ್ಯ ಹೊಸ ಮಾದರಿಯ ಜ್ವರವನ್ನು ಆಫ್ರಿಕನ್ ಸ್ವೈನ್ ಫೀವರ್ ಎಂದು ಹೇಳಲಾಗುತ್ತಿದೆ.

ಆಫ್ರಿಕನ್ ಸ್ವೈನ್ ಜ್ವರಕ್ಕೆ ಕರ್ನಾಟಕ- ಕೇರಳ ಎರಡು ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಮೈಸೂರು ಜಿಲ್ಲೆಯ ಗಡಿಭಾಗದಲ್ಲಿ ಆರೋಗ್ಯಾಧಿಕಾರಿಗಳಿಂದ ತಪಾಸಣೆ ನಡೆಸುತ್ತಿದ್ದಾರೆ.

ಅಂದಹಾಗೆಯೇ ಈ ಜ್ವರ ಹಂದಿಗಳಲ್ಲಿ ಕಾಣಿಸಿಕೊಂಡು ಹರಡುತ್ತದೆ. ಮುಖ ಮತ್ತು ದೇಹದಲ್ಲಿ ಕೆಂಪು ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಬಾಯಿಯಲ್ಲಿ ಜೊಲ್ಲು ಸುರಿಯುತ್ತದೆ. ವಾಂತಿ-ಬೇಧಿಯ ರೋಗ ಲಕ್ಷಣವನ್ನು ಹೊಂದಿದೆ.

ಇದು ಪ್ರಾಣಿಗಳಿಂದ- ಪ್ರಾಣಿಗಳಿಗೆ ಹರಡುವ ಕಾಯಿಲೆಯಾಗಿದ್ದು, ಗಡಿಭಾಗದಲ್ಲಿ ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ. ರೋಗ ಪತ್ತೆಗಾಗಿ ಎರಡು ತಂಡಗಳ ನಿಯೋಜನೆ ಮಾಡಿದ್ದಾರೆ.

ಇನ್ನು ಪ್ರಾಣಿಗಳ ಸಾಗಾಣಿಕೆಗೆ ಸಂಪೂರ್ಣ ತಡೆ ನೀಡಲಾಗಿದೆ. ಅಧಿಕಾರಿಗಳು ಹಂದಿಮಾಂಸವನ್ನು ಸಂಪೂರ್ಣ ನಿಷೇಧ ಮಾಡಿದ್ದಾರೆ. ಎಚ್.ಡಿ.ಕೋಟೆ ತಹಶಿಲ್ದಾರ್, ಆರೋಗ್ಯಾಧಿಕಾರಿ, ಪಶುಪಾಲನ ಅಧಿಕಾರಿಗಳಿಂದ ಜಂಟಿ ಕಾರ್ಯಾಚರಣೆ ನಡೆಸಿ ತಪಾಸಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More