ಕಾಡಂಚಿನ ಗ್ರಾಮಗಳಲ್ಲಿ ನಿಲ್ಲದ ವನ್ಯಜೀವಿ- ಮಾನವ ಸಂಘರ್ಷ
ಟೀ ಕುಡಿದು ಶುಂಠಿ ಹೊಲ ನೋಡಲು ಹೋಗಿದ್ದ ರೈತ ಹುಲಿಗೆ ಬಲಿ
ಮೃತದೇಹದ ಮುಂದೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೈಸೂರು: ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ನಡೆದಿದೆ.
ರೈತ ಬಾಲಾಜಿ ನಾಯ್ಕ್ (45) ಮೃತ ದುರ್ದೈವಿ. ರೈತ ಟೀ ಕುಡಿದು ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದರು. ಈ ವೇಳೆ ಹೊಲ ಎಲ್ಲ ನೋಡಿಕೊಂಡು ವಿಶ್ರಾಂತಿಗೆಂದು ಕುಳಿತುಕೊಂಡಿದ್ದರು. ಈ ವೇಳೆ ರೈತನ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿ ಸಾಯಿಸಿ, ಎಳೆದುಕೊಂಡು ಹೋಗುತ್ತಿತ್ತು. ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದ ಬೈಕ್ನಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಕೂಗಾಡಿ, ಕಿರುಚಿ ಹುಲಿಯನ್ನು ಓಡಿಸಿದ್ದಾರೆ.
ಹುಲಿ ಮೃತ ದೇಹವನ್ನು ಬಿಟ್ಟು ಓಡಿ ಹೋಗಿದ್ದರಿಂದ ಬಳಿಕ ಮಾಹಿತಿ ತಿಳಿದು ಸಂಬಂಧಿಕರು, ಗ್ರಾಮಸ್ಥರು ಬಂದು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಾಜಿ ನಾಯ್ಕ್ ಅವರು ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಾಡಂಚಿನ ಗ್ರಾಮಗಳಲ್ಲಿ ನಿಲ್ಲದ ವನ್ಯಜೀವಿ- ಮಾನವ ಸಂಘರ್ಷ
ಟೀ ಕುಡಿದು ಶುಂಠಿ ಹೊಲ ನೋಡಲು ಹೋಗಿದ್ದ ರೈತ ಹುಲಿಗೆ ಬಲಿ
ಮೃತದೇಹದ ಮುಂದೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಮೈಸೂರು: ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದ ರೈತನ ಮೇಲೆ ಹುಲಿ ದಾಳಿ ಮಾಡಿ ಸಾಯಿಸಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಕಾಡಬೇಗೂರು ಕಾಲೋನಿಯಲ್ಲಿ ನಡೆದಿದೆ.
ರೈತ ಬಾಲಾಜಿ ನಾಯ್ಕ್ (45) ಮೃತ ದುರ್ದೈವಿ. ರೈತ ಟೀ ಕುಡಿದು ತಮ್ಮ ಶುಂಠಿ ಹೊಲ ನೋಡಲೆಂದು ಹೋಗಿದ್ದರು. ಈ ವೇಳೆ ಹೊಲ ಎಲ್ಲ ನೋಡಿಕೊಂಡು ವಿಶ್ರಾಂತಿಗೆಂದು ಕುಳಿತುಕೊಂಡಿದ್ದರು. ಈ ವೇಳೆ ರೈತನ ಮೇಲೆ ಹುಲಿ ಏಕಾಏಕಿ ದಾಳಿ ಮಾಡಿ ಸಾಯಿಸಿ, ಎಳೆದುಕೊಂಡು ಹೋಗುತ್ತಿತ್ತು. ಮೃತದೇಹವನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಿದ ಬೈಕ್ನಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಕೂಗಾಡಿ, ಕಿರುಚಿ ಹುಲಿಯನ್ನು ಓಡಿಸಿದ್ದಾರೆ.
ಹುಲಿ ಮೃತ ದೇಹವನ್ನು ಬಿಟ್ಟು ಓಡಿ ಹೋಗಿದ್ದರಿಂದ ಬಳಿಕ ಮಾಹಿತಿ ತಿಳಿದು ಸಂಬಂಧಿಕರು, ಗ್ರಾಮಸ್ಥರು ಬಂದು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಾಜಿ ನಾಯ್ಕ್ ಅವರು ಬಿ.ಮಟಗೆರೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ