ಐಟಿ ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ಮೆಟ್ರೋ
ನೇರಳೆ ವಿಸ್ತೃತ ಮಾರ್ಗ ಉದ್ಘಾಟನೆ ಇನ್ನೂ ವಿಳಂಬ..!
ಕೆಆರ್ ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಸದ್ಯಕ್ಕಿಲ್ಲ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರ ಟ್ರಾಫಿಕ್ ಕಿರಿಕಿರಿಗೆ ಸ್ವಲ್ಪನಾದ್ರೂ ಮದ್ದರೆದಿರೋದು ಅಂದ್ರೆ ಅದು ನಮ್ಮ ಮೆಟ್ರೋ. ಈ ಮೆಟ್ರೋ ಭಾಗ್ಯ ನಮ್ಗೂ ಸಿಗ್ಲಿ ಅಂತ ಕಾಯ್ತಿರೋರು ಕೆ.ಆರ್ ಪುರಂ ಮಂದಿ. ಆದ್ರೆ ಇನ್ನೇನು ಎರಡ್ಮೂರು ದಿನದಲ್ಲಿ ಆ ಭಾಗ್ಯ ಸಿಕ್ಕೇಬಿಡುತ್ತೆ ಅಂತ ಕಾಯ್ತಿದ್ದವ್ರಿಗೆ ಶಾಕ್ ಆಗಿದೆ.
ನೇರಳೆ ಮೆಟ್ರೋ ಹತ್ತಿ ಸುಯ್ ಅಂತಾ ಸಂಚಾರ ಮಾಡಿ ಟ್ರಾಫಿಕ್ಗೆ ಗೋಲಿ ಹೊಡೀಬೇಕು ಅಂತ ಕಾಯ್ತಿರೋರು ಕೆ.ಆರ್ ಪುರಂ ಮಂದಿ. ಅದಾಗ್ಬೇಕು ಅಂದ್ರೆ ಕೆಂಗೇರಿ ಚಲ್ಲಘಟ್ಟ – ಕೆ.ಆರ್.ಪುರ – ಬೈಯ್ಯಪ್ಪನಹಳ್ಳಿ ವಿಸ್ತರಿತ ಮಾರ್ಗ ಉದ್ಘಾಟನೆ ಆಗ್ಬೇಕು. ಆಗ್ಬೇಕಿತ್ತು ಕೂಡ. ಆದ್ರೆ ಈ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಮೆಟ್ರೋ ಸುರಕ್ಷತಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪ್ರಯಾಣಿಕರ ಅಚ್ಚುಮೆಚ್ಚಿನ ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಉದ್ಘಾಟನೆ ಭಾಗ್ಯ ದೊರಕೋ ಹಾಗೆ ಕಾಣ್ತಿಲ್ಲ. ಇಂದು ಅಧಿಕಾರಿಗಳು ಕೆ.ಆರ್.ಪುರ-ಬೈಯಪ್ಪನಹಳ್ಳಿ ಎರಡು ಕಿಲೋಮೀಟರ್ ತಪಾಸಣೆ ನಡೆಸಿ ನೇರಳೆ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡ್ಬೇಕಿತ್ತು. ಆದ್ರೆ ಕೊನೇ ಘಳಿಗೆಯಲ್ಲಿ ಮೆಟ್ರೋ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮುಂದೂಡಿದ್ದಾರೆ.
ಈ ಮೀನಾ ಮೇಷ ಕಳೆದೆರಡು ತಿಂಗಳಿನಿಂದಲೂ ನಡೀತಾನೇ ಇದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕಾದ್ರೆ ಜನಸಾಮಾನ್ಯರಿಗೆ ಮೆಟ್ರೋ ಸಂಚಾರ ಉತ್ತಮ ಪರಿಹಾರವಾಗಿತ್ತು. ಇತ್ತ ಸೆಪ್ಟೆಂಬರ್ 18 ರಂದು ಗಣಪತಿ ಹಬ್ಬ ಕೂಡ ಇದ್ದು, ಆ ದಿನ ಕೂಡ ಸಾರ್ವಜನಿಕರಿಗೆ ನೇರಳೆ ಮಾರ್ಗ ಭಾಗ್ಯ ದೊರಕುವಂತೆ ಕಾಣ್ತಿಲ್ಲ.
ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿದಿದ್ದು, ಬಿಎಂಆರ್ಸಿಎಲ್ ಟ್ರಯಲ್ ನಡೆಸಿತ್ತು. ಆದ್ರೆ ಇದೀಗ ಸೆಪ್ಟೆಂಬರ್ ಅಂತ್ಯದವರೆಗೂ ನೇರಳೆ ವಿಸ್ತೃತ ಸೇವೆ ಸಿಗೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಸಂಪೂರ್ಣ ತಪಾಸಣೆ ಮುಗಿಸಿ 43 ಕಿಲೋ ಮೀಟರ್ ಉದ್ದದ ನೇರಳೆ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ದೊರಕುವ ಸಾಧ್ಯತೆ ಇದೆ. ಒಟ್ನಲ್ಲಿ ಬೇಗ ಮೆಟ್ರೋ ಸೇವೆ ಸಿಗ್ಲಪ್ಪ, ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ದೊರಕ್ಲಪ್ಪ ಅನ್ನೋದು ಪ್ರಯಾಣಿಕರ ಬಯಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಐಟಿ ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್ ಕೊಟ್ಟ ಮೆಟ್ರೋ
ನೇರಳೆ ವಿಸ್ತೃತ ಮಾರ್ಗ ಉದ್ಘಾಟನೆ ಇನ್ನೂ ವಿಳಂಬ..!
ಕೆಆರ್ ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಸೇವೆ ಸದ್ಯಕ್ಕಿಲ್ಲ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರ ಟ್ರಾಫಿಕ್ ಕಿರಿಕಿರಿಗೆ ಸ್ವಲ್ಪನಾದ್ರೂ ಮದ್ದರೆದಿರೋದು ಅಂದ್ರೆ ಅದು ನಮ್ಮ ಮೆಟ್ರೋ. ಈ ಮೆಟ್ರೋ ಭಾಗ್ಯ ನಮ್ಗೂ ಸಿಗ್ಲಿ ಅಂತ ಕಾಯ್ತಿರೋರು ಕೆ.ಆರ್ ಪುರಂ ಮಂದಿ. ಆದ್ರೆ ಇನ್ನೇನು ಎರಡ್ಮೂರು ದಿನದಲ್ಲಿ ಆ ಭಾಗ್ಯ ಸಿಕ್ಕೇಬಿಡುತ್ತೆ ಅಂತ ಕಾಯ್ತಿದ್ದವ್ರಿಗೆ ಶಾಕ್ ಆಗಿದೆ.
ನೇರಳೆ ಮೆಟ್ರೋ ಹತ್ತಿ ಸುಯ್ ಅಂತಾ ಸಂಚಾರ ಮಾಡಿ ಟ್ರಾಫಿಕ್ಗೆ ಗೋಲಿ ಹೊಡೀಬೇಕು ಅಂತ ಕಾಯ್ತಿರೋರು ಕೆ.ಆರ್ ಪುರಂ ಮಂದಿ. ಅದಾಗ್ಬೇಕು ಅಂದ್ರೆ ಕೆಂಗೇರಿ ಚಲ್ಲಘಟ್ಟ – ಕೆ.ಆರ್.ಪುರ – ಬೈಯ್ಯಪ್ಪನಹಳ್ಳಿ ವಿಸ್ತರಿತ ಮಾರ್ಗ ಉದ್ಘಾಟನೆ ಆಗ್ಬೇಕು. ಆಗ್ಬೇಕಿತ್ತು ಕೂಡ. ಆದ್ರೆ ಈ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಮೆಟ್ರೋ ಸುರಕ್ಷತಾ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಪ್ರಯಾಣಿಕರ ಅಚ್ಚುಮೆಚ್ಚಿನ ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಉದ್ಘಾಟನೆ ಭಾಗ್ಯ ದೊರಕೋ ಹಾಗೆ ಕಾಣ್ತಿಲ್ಲ. ಇಂದು ಅಧಿಕಾರಿಗಳು ಕೆ.ಆರ್.ಪುರ-ಬೈಯಪ್ಪನಹಳ್ಳಿ ಎರಡು ಕಿಲೋಮೀಟರ್ ತಪಾಸಣೆ ನಡೆಸಿ ನೇರಳೆ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡ್ಬೇಕಿತ್ತು. ಆದ್ರೆ ಕೊನೇ ಘಳಿಗೆಯಲ್ಲಿ ಮೆಟ್ರೋ ಸುರಕ್ಷತಾ ಅಧಿಕಾರಿಗಳು ತಪಾಸಣೆ ಮುಂದೂಡಿದ್ದಾರೆ.
ಈ ಮೀನಾ ಮೇಷ ಕಳೆದೆರಡು ತಿಂಗಳಿನಿಂದಲೂ ನಡೀತಾನೇ ಇದೆ. ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಬೇಕಾದ್ರೆ ಜನಸಾಮಾನ್ಯರಿಗೆ ಮೆಟ್ರೋ ಸಂಚಾರ ಉತ್ತಮ ಪರಿಹಾರವಾಗಿತ್ತು. ಇತ್ತ ಸೆಪ್ಟೆಂಬರ್ 18 ರಂದು ಗಣಪತಿ ಹಬ್ಬ ಕೂಡ ಇದ್ದು, ಆ ದಿನ ಕೂಡ ಸಾರ್ವಜನಿಕರಿಗೆ ನೇರಳೆ ಮಾರ್ಗ ಭಾಗ್ಯ ದೊರಕುವಂತೆ ಕಾಣ್ತಿಲ್ಲ.
ಈಗಾಗಲೇ ಸಂಪೂರ್ಣ ಕಾಮಗಾರಿ ಮುಗಿದಿದ್ದು, ಬಿಎಂಆರ್ಸಿಎಲ್ ಟ್ರಯಲ್ ನಡೆಸಿತ್ತು. ಆದ್ರೆ ಇದೀಗ ಸೆಪ್ಟೆಂಬರ್ ಅಂತ್ಯದವರೆಗೂ ನೇರಳೆ ವಿಸ್ತೃತ ಸೇವೆ ಸಿಗೋದಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸೆಪ್ಟೆಂಬರ್ ಅಂತ್ಯದೊಳಗೆ ಸಂಪೂರ್ಣ ತಪಾಸಣೆ ಮುಗಿಸಿ 43 ಕಿಲೋ ಮೀಟರ್ ಉದ್ದದ ನೇರಳೆ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ದೊರಕುವ ಸಾಧ್ಯತೆ ಇದೆ. ಒಟ್ನಲ್ಲಿ ಬೇಗ ಮೆಟ್ರೋ ಸೇವೆ ಸಿಗ್ಲಪ್ಪ, ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ದೊರಕ್ಲಪ್ಪ ಅನ್ನೋದು ಪ್ರಯಾಣಿಕರ ಬಯಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ