newsfirstkannada.com

ಬಿಜೆಪಿ ನೇತೃತ್ವದಲ್ಲಿ NDA ಮಹತ್ವದ ಸಭೆ; ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

Share :

18-07-2023

    ‘NDAಗೆ ಬೇಕಾಗಿರುವುದು ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ’

    2014, 2019ರಲ್ಲಿ ಬಿಜೆಪಿಗೆ ಬಹುಮತ, ಆದರು NDA ಸರ್ಕಾರ ರಚನೆ

    ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿ ನಾವು ಸಾಧಿಸಬೇಕಾಗಿದೆ..!

ನವದೆಹಲಿ: ಎನ್​ಡಿಎ ಮೈತ್ರಿಕೂಟ ದೇಶದ ಜನರ ವಿಶ್ವಾಸ ಗಳಿಸಿದ್ದು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಎನ್​ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್​ಮೆಂಟ್​ ಆಸ್ಪಿರೇಷನ್ (NDA means N-New India, D-Development, A-Aspiration) ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಎನ್​ಡಿಎ ಒಕ್ಕೂಟದ ಮಿತ್ರಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೊದಿ ವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಅವರು, ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ ಜೊತೆ ಜೊತೆಗೆ ಜನರ ಸಬಲೀಕರಣವೇ ಎನ್​ಡಿಎಗೆ ಮೊದಲು ಬೇಕಾಗಿರುವುದು. ಎನ್​ಡಿಎಯ 25 ವರ್ಷಗಳ ಪ್ರಯಾಣದಲ್ಲಿ ದೇಶಕ್ಕಾಗಿಯೇ ದುಡಿಯುತ್ತಿದೆ. ಹಾಗೇ ನಮ್ಮ ದೇಶವು ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಹೆಜ್ಜೆಗಳನ್ನು ಇಡಲು ಇದು ಸುಸಂದರ್ಭ. ಭಾರತ ಈಗ ಸ್ವಾವಲಂಬಿ ದೇಶವಾಗಿದೆ ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರು.

ಎನ್​​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?

  • IMF ವರದಿಯಂತೆ 2015-16ರ ನಂತರ ಬಡತನ ಪ್ರಮಾಣ ಇಳಿಕೆಯಾಗಿದೆ
  • ಅಸ್ಥಿರತೆಗಾಗಿ ಕಾಂಗ್ರೆಸ್ ಮೈತ್ರಿ, ವಿಪಕ್ಷದಲ್ಲಿದ್ದಾಗ ಸರ್ಕಾರವನ್ನ ವಿರೋಧಿಸಿದ್ದೇವೆ
  • NDAನಲ್ಲಿ ಯಾವುದೇ ದೊಡ್ಡದು, ಚಿಕ್ಕ ಪಕ್ಷವಿಲ್ಲ ಎಲ್ಲರು ಒಗ್ಗೂಡಿ ಹೋಗುತ್ತಿದ್ದೇವೆ
  • 2014, 2019ರಲ್ಲಿ ಬಿಜೆಪಿಗೆ ಬಹುಮತ, ಆದರೂ NDA ಸರ್ಕಾರ ರಚನೆ
  • ನಾವು ವಿರೋಧಿಗಳನ್ನೂ ಗೌರವಿಸಿದ್ದೇವೆ, ತೆಗಳುವುದರಲ್ಲಿ ವಿಪಕ್ಷಗಳು ಬ್ಯುಸಿ
  • ನಾವು ದೇಶದ ಜನರನ್ನು ಒಗ್ಗೂಡಿಸುತ್ತೇವೆ, ವಿಪಕ್ಷಗಳು ಜನರನ್ನ ಒಡೆಯುತ್ತಿವೆ
  • ವಿಪಕ್ಷಗಳು ಲಾಭ-ನಷ್ಟದ ಬಗ್ಗೆ ಯೋಚಿಸಿವುದರಿಂದ ದೇಶದ ಬಗ್ಗೆ ಕಾಳಜಿ ಇಲ್ಲ


ರಾಜಕೀಯದಲ್ಲಿ ಪೈಪೋಟಿ ಇರಬೇಕು. ಆದರೆ ನಾಯಕರು ಶತ್ರುಗಳಂತೆ ವರ್ತಿಸಬಾರದು. ಎನ್​ಡಿಎ ಮೈತ್ರಿಕೂಟವು ದೇಶದ ಎಲ್ಲ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ. ದೇಶದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಜಾಗತಿಕವಾಗಿ ಭಾರತದ ಮೇಲೆ ಭರವಸೆಗಳು ಹೆಚ್ಚಿವೆ. ಹೀಗಾಗಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ 9 ವರ್ಷಗಳಲ್ಲಿ ನಮ್ಮ ಸರ್ಕಾರವು 30 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಅಕೌಂಟ್​ಗೆ ಹಾಕಿದ್ದೇವೆ. ಇದರಿಂದ 3 ಲಕ್ಷ ಕೋಟಿಯಷ್ಟು ಭ್ರಷ್ಟಾಚಾರ ತಡೆದಿದ್ದೇವೆ. ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಎಲ್ಲ ಭ್ರಷ್ಟಾಚಾರವನ್ನು ಹೋಗಲಾಡಿಸಿದ್ದೇವೆ. ಸರ್ಕಾರದ ಯೋಜನೆಗಳಲ್ಲಿ ಆಗುತ್ತಿದ್ದ ಲೀಕೇಜ್​ ಅನ್ನು ತಡೆದು ಜನರಿಗೆ ಒಳ್ಳೆಯದು ಮಾಡಲಾಗಿದೆ. ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಕಷ್ಟು ಶ್ರಮಿಸಲಾಗಿದೆ. ಈ ಬಗ್ಗೆ ಸಂಶೋಧಕರು, ಶಿಕ್ಷಣ ತಜ್ಞರು ಬೆಳಕು ಚೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ನೇತೃತ್ವದಲ್ಲಿ NDA ಮಹತ್ವದ ಸಭೆ; ಈ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

https://newsfirstlive.com/wp-content/uploads/2023/07/PM_MODI_DELHI.jpg

    ‘NDAಗೆ ಬೇಕಾಗಿರುವುದು ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ’

    2014, 2019ರಲ್ಲಿ ಬಿಜೆಪಿಗೆ ಬಹುಮತ, ಆದರು NDA ಸರ್ಕಾರ ರಚನೆ

    ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿ ನಾವು ಸಾಧಿಸಬೇಕಾಗಿದೆ..!

ನವದೆಹಲಿ: ಎನ್​ಡಿಎ ಮೈತ್ರಿಕೂಟ ದೇಶದ ಜನರ ವಿಶ್ವಾಸ ಗಳಿಸಿದ್ದು ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ. ಎನ್​ಡಿಎ ಅಂದರೆ ನ್ಯೂ ಇಂಡಿಯಾ ಡೆವಲಪ್​ಮೆಂಟ್​ ಆಸ್ಪಿರೇಷನ್ (NDA means N-New India, D-Development, A-Aspiration) ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದೆಹಲಿಯಲ್ಲಿ ನಡೆದ ಎನ್​ಡಿಎ ಒಕ್ಕೂಟದ ಮಿತ್ರಪಕ್ಷಗಳ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೊದಿ ವಹಿಸಿದ್ದರು. ಸಭೆಯ ಬಳಿಕ ಮಾತನಾಡಿದ ಅವರು, ರಾಷ್ಟ, ರಾಷ್ಟ್ರದ ಭದ್ರತೆ ಮತ್ತು ಅಭಿವೃದ್ಧಿ ಜೊತೆ ಜೊತೆಗೆ ಜನರ ಸಬಲೀಕರಣವೇ ಎನ್​ಡಿಎಗೆ ಮೊದಲು ಬೇಕಾಗಿರುವುದು. ಎನ್​ಡಿಎಯ 25 ವರ್ಷಗಳ ಪ್ರಯಾಣದಲ್ಲಿ ದೇಶಕ್ಕಾಗಿಯೇ ದುಡಿಯುತ್ತಿದೆ. ಹಾಗೇ ನಮ್ಮ ದೇಶವು ಮುಂಬರುವ 25 ವರ್ಷಗಳಲ್ಲಿ ದೊಡ್ಡ ಗುರಿಯನ್ನು ಸಾಧಿಸಲು ಹೆಜ್ಜೆಗಳನ್ನು ಇಡಲು ಇದು ಸುಸಂದರ್ಭ. ಭಾರತ ಈಗ ಸ್ವಾವಲಂಬಿ ದೇಶವಾಗಿದೆ ಎಂದು ಪ್ರಧಾನಿ ಮೋದಿಯವರು ಅಭಿಪ್ರಾಯಪಟ್ಟರು.

ಎನ್​​ಡಿಎ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು..?

  • IMF ವರದಿಯಂತೆ 2015-16ರ ನಂತರ ಬಡತನ ಪ್ರಮಾಣ ಇಳಿಕೆಯಾಗಿದೆ
  • ಅಸ್ಥಿರತೆಗಾಗಿ ಕಾಂಗ್ರೆಸ್ ಮೈತ್ರಿ, ವಿಪಕ್ಷದಲ್ಲಿದ್ದಾಗ ಸರ್ಕಾರವನ್ನ ವಿರೋಧಿಸಿದ್ದೇವೆ
  • NDAನಲ್ಲಿ ಯಾವುದೇ ದೊಡ್ಡದು, ಚಿಕ್ಕ ಪಕ್ಷವಿಲ್ಲ ಎಲ್ಲರು ಒಗ್ಗೂಡಿ ಹೋಗುತ್ತಿದ್ದೇವೆ
  • 2014, 2019ರಲ್ಲಿ ಬಿಜೆಪಿಗೆ ಬಹುಮತ, ಆದರೂ NDA ಸರ್ಕಾರ ರಚನೆ
  • ನಾವು ವಿರೋಧಿಗಳನ್ನೂ ಗೌರವಿಸಿದ್ದೇವೆ, ತೆಗಳುವುದರಲ್ಲಿ ವಿಪಕ್ಷಗಳು ಬ್ಯುಸಿ
  • ನಾವು ದೇಶದ ಜನರನ್ನು ಒಗ್ಗೂಡಿಸುತ್ತೇವೆ, ವಿಪಕ್ಷಗಳು ಜನರನ್ನ ಒಡೆಯುತ್ತಿವೆ
  • ವಿಪಕ್ಷಗಳು ಲಾಭ-ನಷ್ಟದ ಬಗ್ಗೆ ಯೋಚಿಸಿವುದರಿಂದ ದೇಶದ ಬಗ್ಗೆ ಕಾಳಜಿ ಇಲ್ಲ


ರಾಜಕೀಯದಲ್ಲಿ ಪೈಪೋಟಿ ಇರಬೇಕು. ಆದರೆ ನಾಯಕರು ಶತ್ರುಗಳಂತೆ ವರ್ತಿಸಬಾರದು. ಎನ್​ಡಿಎ ಮೈತ್ರಿಕೂಟವು ದೇಶದ ಎಲ್ಲ ಜನರ ವಿಶ್ವಾಸ ಗಳಿಸಿದೆ. ಇಡೀ ವಿಶ್ವವೇ ಭಾರತವನ್ನು ಅಭಿವೃದ್ಧಿ ದೃಷ್ಟಿಕೋನದಿಂದ ನೋಡುತ್ತಿದೆ. ದೇಶದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಜಾಗತಿಕವಾಗಿ ಭಾರತದ ಮೇಲೆ ಭರವಸೆಗಳು ಹೆಚ್ಚಿವೆ. ಹೀಗಾಗಿ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುವುದು ಜನರ ಆಶಯವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಳೆದ 9 ವರ್ಷಗಳಲ್ಲಿ ನಮ್ಮ ಸರ್ಕಾರವು 30 ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ಜನರ ಅಕೌಂಟ್​ಗೆ ಹಾಕಿದ್ದೇವೆ. ಇದರಿಂದ 3 ಲಕ್ಷ ಕೋಟಿಯಷ್ಟು ಭ್ರಷ್ಟಾಚಾರ ತಡೆದಿದ್ದೇವೆ. ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದ್ದ ಎಲ್ಲ ಭ್ರಷ್ಟಾಚಾರವನ್ನು ಹೋಗಲಾಡಿಸಿದ್ದೇವೆ. ಸರ್ಕಾರದ ಯೋಜನೆಗಳಲ್ಲಿ ಆಗುತ್ತಿದ್ದ ಲೀಕೇಜ್​ ಅನ್ನು ತಡೆದು ಜನರಿಗೆ ಒಳ್ಳೆಯದು ಮಾಡಲಾಗಿದೆ. ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಕಷ್ಟು ಶ್ರಮಿಸಲಾಗಿದೆ. ಈ ಬಗ್ಗೆ ಸಂಶೋಧಕರು, ಶಿಕ್ಷಣ ತಜ್ಞರು ಬೆಳಕು ಚೆಲ್ಲಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More