newsfirstkannada.com

ಮತ್ತೊಮ್ಮೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ.. ನೂತನ ವಿವಾದಾತ್ಮಕ ಆದೇಶ ಏನು ಗೊತ್ತಾ..?

Share :

15-07-2023

    ಶಿಕ್ಷಣ ಇಲಾಖೆಯಿಂದ ಅಡುಗೆ ಸಿಬ್ಬಂದಿಗೆ ವಿವಾದಾತ್ಮಕ ಗೈಡ್​ಲೈನ್ಸ್

    ಗೈಡ್​ಲೈನ್ಸ್​​ಗೆ ಬೆನ್ನಲ್ಲೇ ಕೆಲ ಸಂಪ್ರದಾಯಸ್ಥ ಅಡುಗೆ ಸಿಬ್ಬಂದಿ ಬೇಸರ

    ಇದು ಸಿದ್ದು ಸರ್ಕಾರದ ದ್ವೇಷದ ಆಡಳಿತ ಎಂದ ಹಿಂದೂ ಪರ ಸಂಘಟನೆ

ಬೆಂಗಳೂರು: ಬಿಸಿಯೂಟ ತಯಾರು ಮಾಡುವಾಗ ಅಡುಗೆ ಸಿಬ್ಬಂದಿ ಕೈಗೆ ಬಳೆ ತೊಟ್ಟಿರಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶ, ಕೆಲವು ಹಿಂದೂ ಸಂಪ್ರದಾಯಸ್ಥ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಕರ್ನಾಟಕ ಸರ್ಕಾರ ಸುತ್ತೋಲೆ ಒಂದನ್ನು ಹೊರಡಿಸಿದೆ. ಶಿಕ್ಷಣ ಇಲಾಖೆಯು ಪಿಎಂ ಪೋಷಣ್ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮದ ಪ್ರತಿದಿನ ಬಿಸಿಯೂಟ ವಿತರಣೆಯ ಪೂರ್ವದಲ್ಲಿ ಎಸ್​ಡಿಎಂಸಿ ಸಮಿತಿ ಶಾಲೆಗೆ ಭೇಟಿ ನೀಡಬೇಕು. ಭೇಟಿ ವೇಳೆ ಅಡುಗೆ ಸಿಬ್ಬಂದಿ ಮಕ್ಕಳಿಗೆ ವಿತರಿಸಲು ಸಿದ್ಧಪಡಿಸಿರುವ ಬಿಸಿಯೂಟದ ಶುಚಿ-ರುಚಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಅಂತಾ ಸುತ್ತೋಲೆ ಹೊರಡಿಸಿದೆ.

ವಿವಾದಾತ್ಮಕ ಆದೇಶ
ವಿವಾದಾತ್ಮಕ ಆದೇಶ

 

 

ಈ ಸುತ್ತೋಲೆಯಲ್ಲಿ ಏನೆಲ್ಲ ಎಸ್​ಡಿಎಂಸಿ ಸದಸ್ಯರು ಏನೆಲ್ಲ ಪರಿಶೀಲನೆ ಮಾಡಬೇಕು ಅನ್ನೋದ್ರ ಬಗ್ಗೆ ಗೈಡ್​​ಲೈನ್ಸ್​ ಕೊಡಲಾಗಿದೆ. ಅದರ 7ನೇ ಕಾಲಂನಲ್ಲಿ ಅಡುಗೆ ಸಿಬ್ಬಂದಿ ಎಪ್ರಾನ್, ತಲೆಗವಸ ಮತ್ತು ಕೈಗವಸಗಳನ್ನು ಧರಿಸಿರಬೇಕು. ಕೈಗಳಲ್ಲಿ ಬಳೆಗಳನ್ನು ತೊಟ್ಟಿರಬಾರದು ಎಂದು ಬರೆಯಲಾಗಿದೆ. ಸರ್ಕಾರದ ಈ ಆದೇಶ ವಿವಾದಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸುಮಾರು 55 ಸಾವಿರ ಅಡುಗೆ ಸಿಬ್ಬಂದಿಯಿದ್ದು, ಅವರಲ್ಲಿ ಬಹುತೇಕ ಮಂದಿ ಕುಂಕುಮ, ಬಳೆ ತೊಡುವವರೇ ಹೆಚ್ಚಿದ್ದಾರೆ. ಇಲಾಖೆಯ ಈ ಆದೇಶ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ. ಮಕ್ಕಳ ಮೇಲೆ ಕಾಳಜಿ ಇದ್ದರೆ, ಈ ನಿಯಮವನ್ನು ಹಿಂದೆಯೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಇದು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ದ್ವೇಷದ ರಾಜಕಾರಣ ಎಂದು ಹಿಂದೂ ಜನಜಾಗೃತಿ ವೇದಿಕೆಯ ಭವ್ಯ ಗೌಡ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೊಮ್ಮೆ ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ.. ನೂತನ ವಿವಾದಾತ್ಮಕ ಆದೇಶ ಏನು ಗೊತ್ತಾ..?

https://newsfirstlive.com/wp-content/uploads/2023/07/MIDDAY_MEAL.jpg

    ಶಿಕ್ಷಣ ಇಲಾಖೆಯಿಂದ ಅಡುಗೆ ಸಿಬ್ಬಂದಿಗೆ ವಿವಾದಾತ್ಮಕ ಗೈಡ್​ಲೈನ್ಸ್

    ಗೈಡ್​ಲೈನ್ಸ್​​ಗೆ ಬೆನ್ನಲ್ಲೇ ಕೆಲ ಸಂಪ್ರದಾಯಸ್ಥ ಅಡುಗೆ ಸಿಬ್ಬಂದಿ ಬೇಸರ

    ಇದು ಸಿದ್ದು ಸರ್ಕಾರದ ದ್ವೇಷದ ಆಡಳಿತ ಎಂದ ಹಿಂದೂ ಪರ ಸಂಘಟನೆ

ಬೆಂಗಳೂರು: ಬಿಸಿಯೂಟ ತಯಾರು ಮಾಡುವಾಗ ಅಡುಗೆ ಸಿಬ್ಬಂದಿ ಕೈಗೆ ಬಳೆ ತೊಟ್ಟಿರಬಾರದು ಎಂಬ ಶಿಕ್ಷಣ ಇಲಾಖೆಯ ಆದೇಶ, ಕೆಲವು ಹಿಂದೂ ಸಂಪ್ರದಾಯಸ್ಥ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂಬಂಧ ಕರ್ನಾಟಕ ಸರ್ಕಾರ ಸುತ್ತೋಲೆ ಒಂದನ್ನು ಹೊರಡಿಸಿದೆ. ಶಿಕ್ಷಣ ಇಲಾಖೆಯು ಪಿಎಂ ಪೋಷಣ್ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮದ ಪ್ರತಿದಿನ ಬಿಸಿಯೂಟ ವಿತರಣೆಯ ಪೂರ್ವದಲ್ಲಿ ಎಸ್​ಡಿಎಂಸಿ ಸಮಿತಿ ಶಾಲೆಗೆ ಭೇಟಿ ನೀಡಬೇಕು. ಭೇಟಿ ವೇಳೆ ಅಡುಗೆ ಸಿಬ್ಬಂದಿ ಮಕ್ಕಳಿಗೆ ವಿತರಿಸಲು ಸಿದ್ಧಪಡಿಸಿರುವ ಬಿಸಿಯೂಟದ ಶುಚಿ-ರುಚಿ ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು ಅಂತಾ ಸುತ್ತೋಲೆ ಹೊರಡಿಸಿದೆ.

ವಿವಾದಾತ್ಮಕ ಆದೇಶ
ವಿವಾದಾತ್ಮಕ ಆದೇಶ

 

 

ಈ ಸುತ್ತೋಲೆಯಲ್ಲಿ ಏನೆಲ್ಲ ಎಸ್​ಡಿಎಂಸಿ ಸದಸ್ಯರು ಏನೆಲ್ಲ ಪರಿಶೀಲನೆ ಮಾಡಬೇಕು ಅನ್ನೋದ್ರ ಬಗ್ಗೆ ಗೈಡ್​​ಲೈನ್ಸ್​ ಕೊಡಲಾಗಿದೆ. ಅದರ 7ನೇ ಕಾಲಂನಲ್ಲಿ ಅಡುಗೆ ಸಿಬ್ಬಂದಿ ಎಪ್ರಾನ್, ತಲೆಗವಸ ಮತ್ತು ಕೈಗವಸಗಳನ್ನು ಧರಿಸಿರಬೇಕು. ಕೈಗಳಲ್ಲಿ ಬಳೆಗಳನ್ನು ತೊಟ್ಟಿರಬಾರದು ಎಂದು ಬರೆಯಲಾಗಿದೆ. ಸರ್ಕಾರದ ಈ ಆದೇಶ ವಿವಾದಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಸುಮಾರು 55 ಸಾವಿರ ಅಡುಗೆ ಸಿಬ್ಬಂದಿಯಿದ್ದು, ಅವರಲ್ಲಿ ಬಹುತೇಕ ಮಂದಿ ಕುಂಕುಮ, ಬಳೆ ತೊಡುವವರೇ ಹೆಚ್ಚಿದ್ದಾರೆ. ಇಲಾಖೆಯ ಈ ಆದೇಶ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ. ಮಕ್ಕಳ ಮೇಲೆ ಕಾಳಜಿ ಇದ್ದರೆ, ಈ ನಿಯಮವನ್ನು ಹಿಂದೆಯೇ ಮಾಡಬೇಕಿತ್ತು. ಅಷ್ಟಕ್ಕೂ ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ? ಇದು ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ದ್ವೇಷದ ರಾಜಕಾರಣ ಎಂದು ಹಿಂದೂ ಜನಜಾಗೃತಿ ವೇದಿಕೆಯ ಭವ್ಯ ಗೌಡ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More