newsfirstkannada.com

ಇದು ಪ್ರಜಾಪ್ರಭುತ್ವದ ‘ಭವ್ಯ ಮಂದಿರ’; ಎಷ್ಟು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ ಗೊತ್ತಾ..?

Share :

28-05-2023

    ಸಂಸತ್​ ಭವನ ಉದ್ಘಾಟನೆ ಹಿನ್ನಲೆ ಬಿಗಿ ಭದ್ರತೆ!

    862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣ

    25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿ

ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ ಮೋದಿ ಕನಸಿನ ಭವ್ಯ ಸಂಸತ್​​ ಭವನ ತೀವ್ರ ವಿರೋಧದ ನಡುವೆಯೂ ಇವತ್ತು ಲೋಕಾರ್ಪಣೆಯಾಗಲಿದೆ. ನೂತನ ಸಂಸತ್​ ಭವನ ಉದ್ಘಾಟನೆಯ ಅಪೂರ್ವ ಕ್ಷಣವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರವಾಗಿದೆ.

2020ರ ಡಿಸೆಂಬರ್​​ನಲ್ಲಿ ಆರಂಭವಾಗಿದ್ದ ನಿರ್ಮಾಣ ಕಾರ್ಯ ಎರಡೂವರೆ ವರ್ಷಗಳ ಬಳಿಕ ಸುಮಾರು 862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. 20 ವಿಪಕ್ಷಗಳ ಬಹಿಷ್ಕಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್​​ ಭವನವನ್ನು ಇವತ್ತು ಉದ್ಘಾಟಿಸಲಿದ್ದಾರೆ. ಸುಮಾರು 25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.

ಸಮಾರಂಭದ ವೇಳಾಪಟ್ಟಿ

  • ಬೆಳಗ್ಗೆ 7.15 – ಸಂಸತ್ ಭವನಕ್ಕೆ ಆಗಮಿಸಲಿರುವ ಮೋದಿ
  • ಬೆಳಗ್ಗೆ 7.30 – ಹೋಮ-ಹವನ ಪೂಜೆ ಆರಂಭ
  • ಬೆಳಗ್ಗೆ 9 – ಸ್ಪೀಕರ್ ಪೀಠದ ಬಳಿ ರಾಜದಂಡ ‘ಸೆಂಗೊಲ್’ ಸ್ಥಾಪನೆ
  • ಮಧ್ಯಾಹ್ನ 12 – ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆರಂಭ
  • ಮಧ್ಯಾಹ್ನ 12.10- ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಭಾಷಣ
  • ಮಧ್ಯಾಹ್ನ 12.38- ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ
  • ಮಧ್ಯಾಹ್ನ 1.05 – 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ
  • ಮಧ್ಯಾಹ್ನ 1.10 – ಪ್ರಧಾನಿ ನರೇಂದ್ರ ಮೋದಿಯವರ ಭಾಷಣ

ಸಂಸತ್​ ಭವನ ಉದ್ಘಾಟನೆ ಹಿನ್ನಲೆ ಬಿಗಿ ಭದ್ರತೆ!
ನೂತನ ಸಂಸತ್​ ಭವನ ಉದ್ಘಾಟನೆ ಹಿನ್ನಲೆ ರಾಷ್ಟ್ರರಾಜಧಾನಿಯಲ್ಲಿ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ. ಸಂಸತ್​ ಭವನದ ಸುತ್ತಮುತ್ತ 70 ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.. ಕಾರ್ಯಕಮದ ಮೇಲೆ ಹದ್ದಿನ ಕಣ್ಣಿಡಲು ಎಲ್ಲೆಡೆ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಭವನದ ಸುತ್ತಮುತ್ತ ಸೂಕ್ತ ಭದ್ರತೆ ವಹಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ 7 ಸಿಎಂಗಳು ಚಕ್ಕರ್
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ನೀತಿ ಆಯೋಗದ ಕೌನ್ಸಿಲ್ ಸಭೆಗೆ ಏಳು ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗೈರಾಗಿದ್ದಕ್ಕೆ ಅನಾರೋಗ್ಯದ ಕಾರಣ ನೀಡಿದ್ದು, ಇನ್ನುಳಿದ 6 ಮಂದಿ ಸಿಎಂಗಳು ಯಾವುದೇ ಕಾರಣ ನೀಡಿಲ್ಲ ಅಂತ ತಿಳಿದುಬಂದಿದೆ.

ಒಟ್ನಲ್ಲಿ ವಿಪಕ್ಷಗಳ ಬಹಿಷ್ಕಾರದ ನಡುವೆ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಇಂದು ಅದ್ದೂರಿಯಾಗಿ ನೆರವೇರಲು ಸಜ್ಜಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಸಕಲ ರೀತಿಯಲ್ಲೂ ಸಿದ್ದತೆ ನಡೆಸಿದ್ದು, ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ರಾಷ್ಟ್ರ ರಾಜಧಾನಿ ಜನತೆ ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಪ್ರಜಾಪ್ರಭುತ್ವದ ‘ಭವ್ಯ ಮಂದಿರ’; ಎಷ್ಟು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ ಗೊತ್ತಾ..?

https://newsfirstlive.com/wp-content/uploads/2023/05/new-parliament-3.jpg

    ಸಂಸತ್​ ಭವನ ಉದ್ಘಾಟನೆ ಹಿನ್ನಲೆ ಬಿಗಿ ಭದ್ರತೆ!

    862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣ

    25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿ

ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ಆತ್ಮ ಅಂತಲೇ ಕರೆಸಿಕೊಳ್ಳುವ ನೂತನ ಸಂಸತ್​ ಭವನ ಲೋಕಾರ್ಪಣೆಗೆ ಸಜ್ಜಾಗಿದೆ. ಪ್ರಧಾನಿ ಮೋದಿ ಕನಸಿನ ಭವ್ಯ ಸಂಸತ್​​ ಭವನ ತೀವ್ರ ವಿರೋಧದ ನಡುವೆಯೂ ಇವತ್ತು ಲೋಕಾರ್ಪಣೆಯಾಗಲಿದೆ. ನೂತನ ಸಂಸತ್​ ಭವನ ಉದ್ಘಾಟನೆಯ ಅಪೂರ್ವ ಕ್ಷಣವನ್ನ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರವಾಗಿದೆ.

2020ರ ಡಿಸೆಂಬರ್​​ನಲ್ಲಿ ಆರಂಭವಾಗಿದ್ದ ನಿರ್ಮಾಣ ಕಾರ್ಯ ಎರಡೂವರೆ ವರ್ಷಗಳ ಬಳಿಕ ಸುಮಾರು 862 ಕೋಟಿ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದೆ. 20 ವಿಪಕ್ಷಗಳ ಬಹಿಷ್ಕಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ನೂತನ ಸಂಸತ್​​ ಭವನವನ್ನು ಇವತ್ತು ಉದ್ಘಾಟಿಸಲಿದ್ದಾರೆ. ಸುಮಾರು 25 ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ.

ಸಮಾರಂಭದ ವೇಳಾಪಟ್ಟಿ

  • ಬೆಳಗ್ಗೆ 7.15 – ಸಂಸತ್ ಭವನಕ್ಕೆ ಆಗಮಿಸಲಿರುವ ಮೋದಿ
  • ಬೆಳಗ್ಗೆ 7.30 – ಹೋಮ-ಹವನ ಪೂಜೆ ಆರಂಭ
  • ಬೆಳಗ್ಗೆ 9 – ಸ್ಪೀಕರ್ ಪೀಠದ ಬಳಿ ರಾಜದಂಡ ‘ಸೆಂಗೊಲ್’ ಸ್ಥಾಪನೆ
  • ಮಧ್ಯಾಹ್ನ 12 – ರಾಷ್ಟ್ರಗೀತೆಯೊಂದಿಗೆ ಸಮಾರಂಭ ಆರಂಭ
  • ಮಧ್ಯಾಹ್ನ 12.10- ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಭಾಷಣ
  • ಮಧ್ಯಾಹ್ನ 12.38- ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಭಾಷಣ
  • ಮಧ್ಯಾಹ್ನ 1.05 – 75 ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ
  • ಮಧ್ಯಾಹ್ನ 1.10 – ಪ್ರಧಾನಿ ನರೇಂದ್ರ ಮೋದಿಯವರ ಭಾಷಣ

ಸಂಸತ್​ ಭವನ ಉದ್ಘಾಟನೆ ಹಿನ್ನಲೆ ಬಿಗಿ ಭದ್ರತೆ!
ನೂತನ ಸಂಸತ್​ ಭವನ ಉದ್ಘಾಟನೆ ಹಿನ್ನಲೆ ರಾಷ್ಟ್ರರಾಜಧಾನಿಯಲ್ಲಿ ಬಿಗಿ ಪೊಲೀಸ್​ ಭದ್ರತೆ ಒದಗಿಸಲಾಗಿದೆ. ಸಂಸತ್​ ಭವನದ ಸುತ್ತಮುತ್ತ 70 ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.. ಕಾರ್ಯಕಮದ ಮೇಲೆ ಹದ್ದಿನ ಕಣ್ಣಿಡಲು ಎಲ್ಲೆಡೆ ಸಿಸಿಟಿವಿಗಳನ್ನ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಭವನದ ಸುತ್ತಮುತ್ತ ಸೂಕ್ತ ಭದ್ರತೆ ವಹಿಸಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ 7 ಸಿಎಂಗಳು ಚಕ್ಕರ್
ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ನೀತಿ ಆಯೋಗದ ಕೌನ್ಸಿಲ್ ಸಭೆಗೆ ಏಳು ಮುಖ್ಯಮಂತ್ರಿಗಳು ಗೈರಾಗಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗೈರಾಗಿದ್ದಕ್ಕೆ ಅನಾರೋಗ್ಯದ ಕಾರಣ ನೀಡಿದ್ದು, ಇನ್ನುಳಿದ 6 ಮಂದಿ ಸಿಎಂಗಳು ಯಾವುದೇ ಕಾರಣ ನೀಡಿಲ್ಲ ಅಂತ ತಿಳಿದುಬಂದಿದೆ.

ಒಟ್ನಲ್ಲಿ ವಿಪಕ್ಷಗಳ ಬಹಿಷ್ಕಾರದ ನಡುವೆ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಇಂದು ಅದ್ದೂರಿಯಾಗಿ ನೆರವೇರಲು ಸಜ್ಜಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೇಂದ್ರ ಸರ್ಕಾರ ಸಕಲ ರೀತಿಯಲ್ಲೂ ಸಿದ್ದತೆ ನಡೆಸಿದ್ದು, ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ರಾಷ್ಟ್ರ ರಾಜಧಾನಿ ಜನತೆ ಕಾತುರರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More