newsfirstkannada.com

ರಾಜ್ಯಕ್ಕೆ ಒಬ್ಬ ಡೈನಾಮಿಕ್​​ ಲೀಡರ್​ ಸಿಕ್ಕಿದ್ದಾರೆ.. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಪ್ರಜ್ವಲ್​​ ರೇವಣ್ಣ ಮಾತು!

Share :

13-11-2023

    ವಿಜಯೇಂದ್ರ ನೇಮಕದಿಂದ ಇಡಿ ರಾಜ್ಯದ ಯುವಕರಲ್ಲಿ ಹೊಸ ಸಂಚಲನ

    ಇವತ್ತು ದೇವೇಗೌಡರನ್ನ ಭೇಟಿ ಮಾಡಿ ಸಲಹೆ ಪಡೆದುಕೊಂಡ ವಿಜಯೇಂದ್ರ

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುತ್ತೇವೆ

ಬೆಂಗಳೂರು: ದೀಪಾವಳಿ ಹಬ್ಬದ ಮುನ್ನ ದಿನವೇ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ BY ವಿಜಯೇಂದ್ರ ಅವರು ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ರಾಜಕಾರಣಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಅದರಂತೆ ಇಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಯಾವುದೇ ಎಲೆಕ್ಷನ್​ನಲ್ಲಿ ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಮಾಣ ಮಾಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಅಣ್ಣನ ಜೊತೆ ಸೇರಿ ದೊಡ್ಡ ಮಟ್ಟದ ಹೋರಾಟಗಳನ್ನು ಮಾಡುತ್ತೇವೆ. ಇದರಿಂದ ಎಲೆಕ್ಷನ್​​ನಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಅನುಕೂಲವಾಗುತ್ತದೆ. ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 22 ರಿಂದ 24 ಸ್ಥಾನಗಳಷ್ಟು ಗೆಲ್ಲುತ್ತೇವೆ ಎಂದು ಸಂಸರ ರೇವಣ್ಣ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಣ್ಣನ ಹೆಸರನ್ನು ಹೈಕಮಾಂಡ್​ ಘೋಷಣೆ ಮಾಡಿದೆ. ಇದರಿಂದ ಎಲ್ಲ ಯುವಕರಲ್ಲಿ ಸಂಚಲನ ಮೂಡಿದೆ. 2024 ಎಲೆಕ್ಷನ್​ಗೆ ಒಬ್ಬ ಡೈನಾಮಿಕ್​ ಲೀಡರ್ ಬೇಕು ಎನ್ನುವ ಭಾವನೆಯಿತ್ತು. ಅದರಂತೆ ವಿಜಯೇಂದ್ರ ಅವರು ನೇಮಕವು ಆ ಭಾವನೆಯನ್ನು ಹೋಗಲಾಡಿಸಿದೆ. ಹೀಗಾಗಿ ಇಂದು ಅವರು ದೇವೇಗೌಡರನ್ನು ಭೇಟಿ ಮಾಡಿ ಸಣ್ಣಪುಟ್ಟ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯಕ್ಕೆ ಒಬ್ಬ ಡೈನಾಮಿಕ್​​ ಲೀಡರ್​ ಸಿಕ್ಕಿದ್ದಾರೆ.. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಪ್ರಜ್ವಲ್​​ ರೇವಣ್ಣ ಮಾತು!

https://newsfirstlive.com/wp-content/uploads/2023/11/HDD_PRAJWAL.jpg

    ವಿಜಯೇಂದ್ರ ನೇಮಕದಿಂದ ಇಡಿ ರಾಜ್ಯದ ಯುವಕರಲ್ಲಿ ಹೊಸ ಸಂಚಲನ

    ಇವತ್ತು ದೇವೇಗೌಡರನ್ನ ಭೇಟಿ ಮಾಡಿ ಸಲಹೆ ಪಡೆದುಕೊಂಡ ವಿಜಯೇಂದ್ರ

    ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಕೆಲಸ ಮಾಡುತ್ತೇವೆ

ಬೆಂಗಳೂರು: ದೀಪಾವಳಿ ಹಬ್ಬದ ಮುನ್ನ ದಿನವೇ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಶಾಸಕ BY ವಿಜಯೇಂದ್ರ ಅವರು ಆಯ್ಕೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಹಿರಿಯ ರಾಜಕಾರಣಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದಾರೆ. ಅದರಂತೆ ಇಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರನ್ನು ವಿಜಯೇಂದ್ರ ಭೇಟಿ ಮಾಡಿದ್ದಾರೆ. ಈ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಯಾವುದೇ ಎಲೆಕ್ಷನ್​ನಲ್ಲಿ ನಾವೆಲ್ಲರೂ ಒಟ್ಟಾಗಿ ಎದುರಿಸುತ್ತೇವೆ ಎಂದು ಪ್ರಮಾಣ ಮಾಡಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಅಣ್ಣನ ಜೊತೆ ಸೇರಿ ದೊಡ್ಡ ಮಟ್ಟದ ಹೋರಾಟಗಳನ್ನು ಮಾಡುತ್ತೇವೆ. ಇದರಿಂದ ಎಲೆಕ್ಷನ್​​ನಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಅನುಕೂಲವಾಗುತ್ತದೆ. ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿ ಮಾಡುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 22 ರಿಂದ 24 ಸ್ಥಾನಗಳಷ್ಟು ಗೆಲ್ಲುತ್ತೇವೆ ಎಂದು ಸಂಸರ ರೇವಣ್ಣ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಅಣ್ಣನ ಹೆಸರನ್ನು ಹೈಕಮಾಂಡ್​ ಘೋಷಣೆ ಮಾಡಿದೆ. ಇದರಿಂದ ಎಲ್ಲ ಯುವಕರಲ್ಲಿ ಸಂಚಲನ ಮೂಡಿದೆ. 2024 ಎಲೆಕ್ಷನ್​ಗೆ ಒಬ್ಬ ಡೈನಾಮಿಕ್​ ಲೀಡರ್ ಬೇಕು ಎನ್ನುವ ಭಾವನೆಯಿತ್ತು. ಅದರಂತೆ ವಿಜಯೇಂದ್ರ ಅವರು ನೇಮಕವು ಆ ಭಾವನೆಯನ್ನು ಹೋಗಲಾಡಿಸಿದೆ. ಹೀಗಾಗಿ ಇಂದು ಅವರು ದೇವೇಗೌಡರನ್ನು ಭೇಟಿ ಮಾಡಿ ಸಣ್ಣಪುಟ್ಟ ಸಲಹೆಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More