newsfirstkannada.com

ಟೀಂ ಇಂಡಿಯಾದಲ್ಲಿ ಸಿಗಲಿಲ್ಲ ಅವಕಾಶ; ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ನಿತೀಶ್​ ರಾಣಾ

Share :

06-07-2023

    ಆಗಸ್ಟ್​​ ತಿಂಗಳಲ್ಲಿ ವೆಸ್ಟ್​​ ಇಂಡೀಸ್​ ವಿರುದ್ಧ 5 ಪಂದ್ಯಗಳ ಟಿ20 ಸರಣಿ

    ವಿಂಡೀಸ್​​ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ

    ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯಂಗ್​ಸ್ಟರ್​​ ನಿತೀಶ್​​ ರಾಣಾ

ಟೆಸ್ಟ್​, ​ಒನ್​ ಡೇ ಬೆನ್ನಲ್ಲೇ ವೆಸ್ಟ್​​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಆಗಸ್ಟ್​​ ತಿಂಗಳಲ್ಲಿ ನಡೆಯಲಿರೋ ಈ ಟಿ20 ಸರಣಿಗೆ ಈಗಾಗಲೇ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾಗೆ ರೆಸ್ಟ್​ ನೀಡಿದ್ದು, ಹೊಸಬರಿಗೆ ಟೀಂ ಬಿಸಿಸಿಐ ಮಣೆ ಹಾಕಿದೆ.

ಇನ್ನು, ಟೀಂ ಇಂಡಿಯಾದ ಟಿ20 ಕ್ಯಾಪ್ಟನ್​​ ಆಗಿ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್ ಯಾದವ್‌ ವೈಸ್​ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್‌ ಕಿಶನ್​​​ ಇಬ್ಬರಿಗೂ ವಿಕೆಟ್‌ ಕೀಪಿಂಗ್​​ ಕೋಟಾದಲ್ಲಿ ಅವಕಾಶ ನೀಡಲಾಗಿದೆ.

ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾಗೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ T20 ಸರಣಿಗೆ ಅವಕಾಶ ನೀಡಿರೋ ಸೆಲೆಕ್ಷನ್​​ ಕಮಿಟಿ ನಿತೀಶ್​​ ರಾಣಾ, ರಿಂಕು ಸಿಂಗ್‌ಗೆ ಅವಕಾಶ ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಕೆಕೆಆರ್​ ತಂಡದ ಕ್ಯಾಪ್ಟನ್​​ ನಿತೀಶ್​ ರಾಣಾ ಪೋಸ್ಟ್​ವೊಂದು ಹಾಕಿದ್ದು, ಭಾರೀ ವೈರಲ್​ ಆಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕ್ಯಾಪ್ಟನ್​​ ನಿತೀಶ್​ ರಾಣಾ, ಕೆಟ್ಟ ದಿನಗಳು ಒಳ್ಳೆಯ ದಿನಗಳನ್ನು ತರಲಿವೆ ಎಂದು ಪೋಸ್ಟ್​​​ ಹಾಕಿದ್ದಾರೆ. ಈ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಿತೀಶ್​ ರಾಣಾ, ರಿಂಕು ಸಿಂಗ್​​ ಇಬ್ಬರು ಕೆಕೆಆರ್​ ತಂಡದ ಪಿಲ್ಲರ್ಸ್​​. ಈ ವರ್ಷ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ನಿತೀಶ್​​ ಆಡಿದ 14 ಪಂದ್ಯಗಳಲ್ಲಿ 413 ರನ್​ ಸಿಡಿಸಿದ್ರೆ, ರಿಂಕು ಮಾತ್ರ 14 ಪಂದ್ಯಗಳಲ್ಲಿ 149 ಸ್ಟ್ರೈಕ್​ ರೇಟ್​ನೊಂದಿಗೆ 474 ರನ್​​ ಕಲೆ ಹಾಕಿದ್ರು.

ಟೀಂ ಇಂಡಿಯಾ ಟಿ20 ಟೀಂ ಹೀಗಿದೆ..!

ಇಶಾನ್ ಕಿಶನ್ ( ವಿಕೆಟ್​ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ ( ಉಪ ನಾಯಕ ), ಸಂಜು ಸ್ಯಾಮ್ಸನ್ ( ವಿಕೆಟ್ ಕಿಪರ್), ಹಾರ್ದಿಕ್ ಪಾಂಡ್ಯ ( ನಾಯಕ ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾದಲ್ಲಿ ಸಿಗಲಿಲ್ಲ ಅವಕಾಶ; ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ನಿತೀಶ್​ ರಾಣಾ

https://newsfirstlive.com/wp-content/uploads/2023/07/Hardik-Pandya_1.jpg

    ಆಗಸ್ಟ್​​ ತಿಂಗಳಲ್ಲಿ ವೆಸ್ಟ್​​ ಇಂಡೀಸ್​ ವಿರುದ್ಧ 5 ಪಂದ್ಯಗಳ ಟಿ20 ಸರಣಿ

    ವಿಂಡೀಸ್​​ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ

    ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ ಯಂಗ್​ಸ್ಟರ್​​ ನಿತೀಶ್​​ ರಾಣಾ

ಟೆಸ್ಟ್​, ​ಒನ್​ ಡೇ ಬೆನ್ನಲ್ಲೇ ವೆಸ್ಟ್​​ ಇಂಡೀಸ್​ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿ ಆಡಲಿದೆ. ಆಗಸ್ಟ್​​ ತಿಂಗಳಲ್ಲಿ ನಡೆಯಲಿರೋ ಈ ಟಿ20 ಸರಣಿಗೆ ಈಗಾಗಲೇ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. ವಿರಾಟ್​​ ಕೊಹ್ಲಿ, ರೋಹಿತ್​ ಶರ್ಮಾಗೆ ರೆಸ್ಟ್​ ನೀಡಿದ್ದು, ಹೊಸಬರಿಗೆ ಟೀಂ ಬಿಸಿಸಿಐ ಮಣೆ ಹಾಕಿದೆ.

ಇನ್ನು, ಟೀಂ ಇಂಡಿಯಾದ ಟಿ20 ಕ್ಯಾಪ್ಟನ್​​ ಆಗಿ ಹಾರ್ದಿಕ್​ ಪಾಂಡ್ಯ, ಸೂರ್ಯಕುಮಾರ್ ಯಾದವ್‌ ವೈಸ್​ ಕ್ಯಾಪ್ಟನ್​ ಆಗಿ ಆಯ್ಕೆಯಾಗಿದ್ದಾರೆ. ಸಂಜು ಸ್ಯಾಮ್ಸನ್, ಇಶಾನ್‌ ಕಿಶನ್​​​ ಇಬ್ಬರಿಗೂ ವಿಕೆಟ್‌ ಕೀಪಿಂಗ್​​ ಕೋಟಾದಲ್ಲಿ ಅವಕಾಶ ನೀಡಲಾಗಿದೆ.

ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾಗೆ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ T20 ಸರಣಿಗೆ ಅವಕಾಶ ನೀಡಿರೋ ಸೆಲೆಕ್ಷನ್​​ ಕಮಿಟಿ ನಿತೀಶ್​​ ರಾಣಾ, ರಿಂಕು ಸಿಂಗ್‌ಗೆ ಅವಕಾಶ ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಕೆಕೆಆರ್​ ತಂಡದ ಕ್ಯಾಪ್ಟನ್​​ ನಿತೀಶ್​ ರಾಣಾ ಪೋಸ್ಟ್​ವೊಂದು ಹಾಕಿದ್ದು, ಭಾರೀ ವೈರಲ್​ ಆಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಕ್ಯಾಪ್ಟನ್​​ ನಿತೀಶ್​ ರಾಣಾ, ಕೆಟ್ಟ ದಿನಗಳು ಒಳ್ಳೆಯ ದಿನಗಳನ್ನು ತರಲಿವೆ ಎಂದು ಪೋಸ್ಟ್​​​ ಹಾಕಿದ್ದಾರೆ. ಈ ಮೂಲಕ ಬಿಸಿಸಿಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ನಿತೀಶ್​ ರಾಣಾ, ರಿಂಕು ಸಿಂಗ್​​ ಇಬ್ಬರು ಕೆಕೆಆರ್​ ತಂಡದ ಪಿಲ್ಲರ್ಸ್​​. ಈ ವರ್ಷ ನಡೆದ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ನಿತೀಶ್​​ ಆಡಿದ 14 ಪಂದ್ಯಗಳಲ್ಲಿ 413 ರನ್​ ಸಿಡಿಸಿದ್ರೆ, ರಿಂಕು ಮಾತ್ರ 14 ಪಂದ್ಯಗಳಲ್ಲಿ 149 ಸ್ಟ್ರೈಕ್​ ರೇಟ್​ನೊಂದಿಗೆ 474 ರನ್​​ ಕಲೆ ಹಾಕಿದ್ರು.

ಟೀಂ ಇಂಡಿಯಾ ಟಿ20 ಟೀಂ ಹೀಗಿದೆ..!

ಇಶಾನ್ ಕಿಶನ್ ( ವಿಕೆಟ್​ ಕೀಪರ್), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ ( ಉಪ ನಾಯಕ ), ಸಂಜು ಸ್ಯಾಮ್ಸನ್ ( ವಿಕೆಟ್ ಕಿಪರ್), ಹಾರ್ದಿಕ್ ಪಾಂಡ್ಯ ( ನಾಯಕ ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More