ಚುನಾವಣಾ ಸೋಲಿನಿಂದ ಕಂಗೆಟ್ಟು ಈ ನಿರ್ಧಾರಕ್ಕೆ ಬರಲಾಗಿದ್ಯಾ?
ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ್ದ ಸಾಮಾನ್ಯ ಜನರಿಗೆ ಬಿಗ್ ರಿಲೀಫ್
ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ಹೊರೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೂ ದೇಶದ ಜನರ ಹೊರೆ ಇಳಿಸೋ ಪ್ರಯತ್ನಕ್ಕೆ ಕೈ ಹಾಕಿದೆ. ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ್ದ ಸಾಮಾನ್ಯ ಜನರಿಗೆ ಇವತ್ತು ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ (LPG) ಬೆಲೆಯನ್ನು ಬರೋಬ್ಬರಿ 200 ರೂಪಾಯಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಓಣಂ, ರಕ್ಷಾ ಬಂಧನ್ ಹಬ್ಬದ ಸಂಭ್ರಮದಲ್ಲಿ ಬಹುದೊಡ್ಡ ಕೊಡುಗೆಯನ್ನು ದೇಶದ ಜನತೆಗೆ ಮೋದಿ ಸರ್ಕಾರ ನೀಡಿದೆ.
LPG ದರ ಇಳಿಕೆಯ ಕುರಿತು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 200 ರೂಪಾಯಿ ದರ ಇಳಿಕೆಯ ಎಫೆಕ್ಟ್ ದೇಶದ ಎಲ್ಲಾ ಫಲಾನುಭವಿಗಳಿಗೂ ಅನ್ವಯವಾಗಲಿದೆ. ಅಂದ್ರೆ ಇದುವರೆಗೂ 1,100 ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸುತ್ತಿರುವ ಗ್ರಾಹಕರು ಇನ್ಮುಂದೆ 900 ರೂಪಾಯಿ ಕೊಡಬೇಕಾಗುತ್ತೆ. ದೇಶದ ಎಲ್ಲಾ ಫಲಾನುಭವಿಗಳಿಗೂ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆಯಾಗಲಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಗ್ರಾಹಕರಿಗೆ 200 ರೂ. ಸಬ್ಸಿಡಿ
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದುವರೆಗೂ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಇನ್ಮುಂದೆ 200 ರೂಪಾಯಿ ಜೊತೆ ಮತ್ತೆ 200 ರೂಪಾಯಿ ಸೇರಿಸಿ 400 ರೂಪಾಯಿ ಸಬ್ಸಿಡಿ ನೀಡಲಾಗುತ್ತೆ. ಇನ್ಮುಂದೆ ಉಜ್ವಲ ಯೋಜನೆಯ ಫಲಾನುಭವಿಗಳು ಒಂದು ಗ್ಯಾಸ್ ಸಿಲಿಂಡರ್ಗೆ 750 ರೂಪಾಯಿ ಮಾತ್ರ ಪಾವತಿಸಬೇಕು. ಉಜ್ವಲ ಯೋಜನೆ ಹೊರತುಪಡಿಸಿ ಉಳಿದ ಗ್ರಾಹಕರಿಗೆ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಬೆಂಗಳೂರಲ್ಲಿ 1100 ರೂಪಾಯಿಗೆ ಖರೀದಿಸುವ ಸಾಮಾನ್ಯ ಗ್ರಾಹಕರು ಇನ್ಮುಂದೆ 900 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ: BREAKING: ದೇಶದ ಜನತೆಗೆ ಗುಡ್ನ್ಯೂಸ್; ಅಡುಗೆ ಸಿಲಿಂಡರ್ ದರ ಭಾರೀ ಇಳಿಕೆ ಸಾಧ್ಯತೆ
ಗ್ಯಾಸ್ ಸಿಲಿಂಡರ್ನ 200 ರೂಪಾಯಿ ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ಹೊರೆಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರನ್ನು ತನ್ನತ್ತ ಸೆಳೆಯಲು ಯತ್ನಿಸಿದೆ. ಚುನಾವಣಾ ಸೋಲಿನಿಂದ ಕಂಗೆಟ್ಟು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚುನಾವಣಾ ಸೋಲಿನಿಂದ ಕಂಗೆಟ್ಟು ಈ ನಿರ್ಧಾರಕ್ಕೆ ಬರಲಾಗಿದ್ಯಾ?
ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ್ದ ಸಾಮಾನ್ಯ ಜನರಿಗೆ ಬಿಗ್ ರಿಲೀಫ್
ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ಹೊರೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊನೆಗೂ ದೇಶದ ಜನರ ಹೊರೆ ಇಳಿಸೋ ಪ್ರಯತ್ನಕ್ಕೆ ಕೈ ಹಾಕಿದೆ. ಬೆಲೆ ಏರಿಕೆಯ ಬಿಸಿಗೆ ತತ್ತರಿಸಿದ್ದ ಸಾಮಾನ್ಯ ಜನರಿಗೆ ಇವತ್ತು ಕೇಂದ್ರ ಸರ್ಕಾರ ಬಿಗ್ ರಿಲೀಫ್ ನೀಡಿದೆ. ಅಡುಗೆ ಮನೆಯ ಗ್ಯಾಸ್ ಸಿಲಿಂಡರ್ (LPG) ಬೆಲೆಯನ್ನು ಬರೋಬ್ಬರಿ 200 ರೂಪಾಯಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಓಣಂ, ರಕ್ಷಾ ಬಂಧನ್ ಹಬ್ಬದ ಸಂಭ್ರಮದಲ್ಲಿ ಬಹುದೊಡ್ಡ ಕೊಡುಗೆಯನ್ನು ದೇಶದ ಜನತೆಗೆ ಮೋದಿ ಸರ್ಕಾರ ನೀಡಿದೆ.
LPG ದರ ಇಳಿಕೆಯ ಕುರಿತು ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. 200 ರೂಪಾಯಿ ದರ ಇಳಿಕೆಯ ಎಫೆಕ್ಟ್ ದೇಶದ ಎಲ್ಲಾ ಫಲಾನುಭವಿಗಳಿಗೂ ಅನ್ವಯವಾಗಲಿದೆ. ಅಂದ್ರೆ ಇದುವರೆಗೂ 1,100 ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸುತ್ತಿರುವ ಗ್ರಾಹಕರು ಇನ್ಮುಂದೆ 900 ರೂಪಾಯಿ ಕೊಡಬೇಕಾಗುತ್ತೆ. ದೇಶದ ಎಲ್ಲಾ ಫಲಾನುಭವಿಗಳಿಗೂ ಗ್ಯಾಸ್ ಸಿಲಿಂಡರ್ ಬೆಲೆ 200 ರೂಪಾಯಿ ಇಳಿಕೆಯಾಗಲಿದೆ ಎಂದು ಕ್ಯಾಬಿನೆಟ್ ಸಭೆ ಬಳಿಕ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯ ಗ್ರಾಹಕರಿಗೆ 200 ರೂ. ಸಬ್ಸಿಡಿ
ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಇದುವರೆಗೂ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತಿತ್ತು. ಇನ್ಮುಂದೆ 200 ರೂಪಾಯಿ ಜೊತೆ ಮತ್ತೆ 200 ರೂಪಾಯಿ ಸೇರಿಸಿ 400 ರೂಪಾಯಿ ಸಬ್ಸಿಡಿ ನೀಡಲಾಗುತ್ತೆ. ಇನ್ಮುಂದೆ ಉಜ್ವಲ ಯೋಜನೆಯ ಫಲಾನುಭವಿಗಳು ಒಂದು ಗ್ಯಾಸ್ ಸಿಲಿಂಡರ್ಗೆ 750 ರೂಪಾಯಿ ಮಾತ್ರ ಪಾವತಿಸಬೇಕು. ಉಜ್ವಲ ಯೋಜನೆ ಹೊರತುಪಡಿಸಿ ಉಳಿದ ಗ್ರಾಹಕರಿಗೆ 200 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ. ಬೆಂಗಳೂರಲ್ಲಿ 1100 ರೂಪಾಯಿಗೆ ಖರೀದಿಸುವ ಸಾಮಾನ್ಯ ಗ್ರಾಹಕರು ಇನ್ಮುಂದೆ 900 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್ ಕೊಂಡುಕೊಳ್ಳಬಹುದಾಗಿದೆ.
ಇದನ್ನೂ ಓದಿ: BREAKING: ದೇಶದ ಜನತೆಗೆ ಗುಡ್ನ್ಯೂಸ್; ಅಡುಗೆ ಸಿಲಿಂಡರ್ ದರ ಭಾರೀ ಇಳಿಕೆ ಸಾಧ್ಯತೆ
ಗ್ಯಾಸ್ ಸಿಲಿಂಡರ್ನ 200 ರೂಪಾಯಿ ಸಬ್ಸಿಡಿಯಿಂದ ಕೇಂದ್ರ ಸರ್ಕಾರಕ್ಕೆ 7,500 ಕೋಟಿ ರೂಪಾಯಿ ಹೊರೆಯಾಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಪ್ರಧಾನಿ ಮೋದಿ ಸರ್ಕಾರ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರನ್ನು ತನ್ನತ್ತ ಸೆಳೆಯಲು ಯತ್ನಿಸಿದೆ. ಚುನಾವಣಾ ಸೋಲಿನಿಂದ ಕಂಗೆಟ್ಟು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ