ಏಕದಿನ ವಿಶ್ವಕಪ್ ಟೂರ್ನಿಗೆ ಎರಡೂವರೆ ತಿಂಗಳು ಬಾಕಿ
ಇಂಜುರಿಗೆ ತುತ್ತಾದ ಆಟಗಾರರ ಕಮ್ಬ್ಯಾಕ್ ಯಾವಾಗ?
ಆಟಗಾರರ ಬಗ್ಗೆ NCA ಹೊರ ಹಾಖಿದ ಮಾಹಿತಿ ಏನು ಗೊತ್ತಾ?
ಏಕದಿನ ವಿಶ್ವಕಪ್ ಟೂರ್ನಿಗೆ ಜಸ್ಟ್ ಎರಡೂವರೆ ತಿಂಗಳು ಮಾತ್ರ ಬಾಕಿ. ತವರಿನಲ್ಲಿ ನಡೆಯೋ ಪ್ರತಿಷ್ಟಿತ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ಅಭಿಮಾನಿಗಳ ಕನಸಾಗಿದೆ. ಟೀಮ್ ಇಂಡಿಯಾ ತವರಿನಲ್ಲಿ ಟ್ರೋಫಿ ಎತ್ತಿ ಹಿಡಿಬೇಕು ಎಂದು ಕನಸು ಕಾಣ್ತಿರೋ ಫ್ಯಾನ್ಸ್, ಒಂದು ಆತಂಕವೂ ಬಿಡದೇ ಕಾಡ್ತಿದೆ.
NCA ಸೇರಿದ ಆಟಗಾರರ ಕಮ್ಬ್ಯಾಕ್ ಯಾವಾಗ.?
ಹೌದು. ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಗಾಯಗೊಂಡು ತಂಡದಿಂದ ಹೊರ ಬಿದ್ದು ಕಾಲವೇ ಉರುಳಿದೆ. ಇವರ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡ್ತಿದ್ದು, ಎನ್ಸಿಎ ಸೇರಿರುವ ಇವರ ಕಮ್ಬ್ಯಾಕ್ ಬಗ್ಗೆ ಸ್ಪಷ್ಟತೆಯೇ ಇಲ್ಲ. ಬಿಸಿಸಿಐ ಅಧಿಕೃತ ಮಾಹಿತಿಯನ್ನ ರಿಲೀಸ್ ಮಾಡಿಲ್ಲ. ಆದ್ರೆ, ಎನ್ಸಿಎ ಮೂಲಗಳು ಲೇಟೆಸ್ಟ್ ಅಪ್ಡೇಟ್ ಬಗ್ಗೆ ಮಾಹಿತಿ ನೀಡಿವೆ.
ಏಷ್ಯಾಕಪ್ಗೆ ಶ್ರೇಯಸ್ ಅಯ್ಯರ್ ಡೌಟ್.!
ಕಳೆದ ಮಾರ್ಚ್ನಲ್ಲಿ ಇಂಡೋ – ಆಸಿಸ್ ಟೆಸ್ಟ್ ಸರಣಿ ನಡುವೆ ಬ್ಯಾಕ್ ಇಂಜುರಿಗೆ ತುತ್ತಾದ ಶ್ರೇಯಸ್ ಅಯ್ಯರ್, ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದಾರೆ. ಎರಡೂ ದಿನದ ಹಿಂದೆ ಬ್ಯಾಟಿಂಗ್ ಅಭ್ಯಾಸವನ್ನೂ ನಡೆಸಿದ್ದಾರೆ. ಆದ್ರೂ ಕಮ್ಬ್ಯಾಕ್ ಮಾಡೋದು ಅನುಮಾನವಾಗಿದೆ. ಎನ್ಸಿಎ ಮೂಲಗಳು ಹೇಳೋ ಪ್ರಕಾರ ಶ್ರೇಯಸ್ ಚೇತರಿಕೆ ಅಂದುಕೊಂಡಿದ್ದಕ್ಕಿಂತ ನಿಧಾನಗತಿಯಲ್ಲಿದ್ದು, ಏಷ್ಯಾಕಪ್ ವೇಳೆಗೆ ತಂಡದ ಸೇರೋದು ಅನುಮಾನವಾಗಿದೆ.
ಐರ್ಲೆಂಡ್ ಸರಣಿಯಲ್ಲಿ ಬೂಮ್ರಾ ಕಣಕ್ಕೆ.!
ಕಳೆದ ಮಾರ್ಚ್ನಲ್ಲಿ ಬೆನ್ನಿನ ಸರ್ಜರಿಗೆ ಒಳಗಾಗಿರುವ ವೇಗಿ ಜಸ್ಪ್ರಿತ್ ಬೂಮ್ರಾ, ಶೀಘ್ರದಲ್ಲೇ ಮೈದಾನಕ್ಕಿಳಿಯಲಿದ್ದಾರೆ. ಸದ್ಯ ಎನ್ಸಿಎನಲ್ಲಿ ರಿಹ್ಯಾಬ್ ಒಳಗಾಗಿರುವ ಬೂಮ್ರಾ, ಬೌಲಿಂಗ್ ಅಭ್ಯಾಸವನ್ನ ಆರಂಭಿಸಿದ್ದಾರೆ. ಮುಂಬರುವ ಐರ್ಲೆಂಡ್ ಸರಣಿಯ ವೇಳೆಗೆ ಬೂಮ್ರಾ ಫುಲ್ ಫಿಟ್ ಆಗೋ ಸಾಧ್ಯತೆ ದಟ್ಟವಾಗಿದೆ.
ರಾಹುಲ್ ಕಮ್ಬ್ಯಾಕ್ ಬಗ್ಗೆ ಕ್ಲಾರಿಟಿನೇ ಇಲ್ಲ..!
ಕನ್ನಡಿಗ ಕೆ.ಎಲ್ ರಾಹುಲ್ ಯಾವಾಗ ಕಮ್ಬ್ಯಾಕ್ ಮಾಡ್ತಾರೆ ಅನ್ನೋದ್ರ ಬಗ್ಗೆ ಕ್ಲಾರಿಟಿನೇ ಇಲ್ಲದಂತಾಗಿದೆ. ಲಂಡನ್ನಲ್ಲಿ ಸರ್ಜರಿ ಒಳಗಾಗಿ ಬಂದ ರಾಹುಲ್, ವಿಶ್ರಾಂತಿಯ ಬಳಿ ಎನ್ಸಿಎ ಸೇರಿದ್ದಾರೆ. ಫಿಟ್ನೆಸ್ ವರ್ಕೌಟ್ಗಳನ್ನ ಮಾಡ್ತಿರೋ ರಾಹುಲ್, ಇನ್ನೂ ಬ್ಯಾಟಿಂಗ್ ಅಭ್ಯಾಸ ಮಾಡುವಷ್ಟು ಫಿಟ್ ಆಗಿಲ್ಲ ಅನ್ನೋದು ಎನ್ಸಿಎ ಮಾಹಿತಿಯಾಗಿದೆ. ಹೀಗಾಗಿ ಏಷ್ಯಾಕಪ್ ಲಭ್ಯರಾಗೋದು ಅನುಮಾನವೇ..!
ವಿಶ್ವಕಪ್ನಿಂದ ರಿಷಭ್ ಪಂತ್ ಔಟ್.!
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳೋದು ಬಹುತೇಕ ಕನ್ಫರ್ಮ್. ಸದ್ಯ ಯಾವುದರ ಸಹಾಯವಿಲ್ಲದೆ ಪಂತ್ ನಡೆಯಲು ಆರಂಭಿಸಿದ್ದಾರೆ. ವೇಗವಾಗಿ ಚೇತರಿಸಿಕೊಳ್ತಾ ಇದ್ರೂ, ಫುಲ್ ಫಿಟ್ ಆಗಲು ಇನ್ನೂ ಹೆಚ್ಚಿನ ಸಮಯಬೇಕಿದೆ. ಚೇತರಿಕೆ ಕಂಡರೂ ವಿಕೆಟ್ ಕೀಪಿಂಗ್ ಮಾಡುವಷ್ಟು ಫಿಟ್ ಆಗ್ತಾರಾ ಅನ್ನೋದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ.
ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ಈ ಸ್ಟಾರ್ಗಳು ಇಂಜುರಿ ಸದ್ಯ ತಲೆನೋವಾಗಿದೆ. ಪ್ರಮುಖರು ಅಲಭ್ಯರಾದ್ರೆ, ಇವರ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕು ಎಂಬುದು ಗೊಂದಲಕ್ಕೀಡು ಮಾಡಿದೆ. ಹೀಗಾಗಿ ಬ್ಯಾಕ್ ಅಪ್ ಪ್ಲೇಯರ್ಗಳ ಆಯ್ಕೆಗೆ ಸರ್ಕಸ್ ಶುರುವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಏಕದಿನ ವಿಶ್ವಕಪ್ ಟೂರ್ನಿಗೆ ಎರಡೂವರೆ ತಿಂಗಳು ಬಾಕಿ
ಇಂಜುರಿಗೆ ತುತ್ತಾದ ಆಟಗಾರರ ಕಮ್ಬ್ಯಾಕ್ ಯಾವಾಗ?
ಆಟಗಾರರ ಬಗ್ಗೆ NCA ಹೊರ ಹಾಖಿದ ಮಾಹಿತಿ ಏನು ಗೊತ್ತಾ?
ಏಕದಿನ ವಿಶ್ವಕಪ್ ಟೂರ್ನಿಗೆ ಜಸ್ಟ್ ಎರಡೂವರೆ ತಿಂಗಳು ಮಾತ್ರ ಬಾಕಿ. ತವರಿನಲ್ಲಿ ನಡೆಯೋ ಪ್ರತಿಷ್ಟಿತ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಬೇಕು ಅನ್ನೋದು ಅಭಿಮಾನಿಗಳ ಕನಸಾಗಿದೆ. ಟೀಮ್ ಇಂಡಿಯಾ ತವರಿನಲ್ಲಿ ಟ್ರೋಫಿ ಎತ್ತಿ ಹಿಡಿಬೇಕು ಎಂದು ಕನಸು ಕಾಣ್ತಿರೋ ಫ್ಯಾನ್ಸ್, ಒಂದು ಆತಂಕವೂ ಬಿಡದೇ ಕಾಡ್ತಿದೆ.
NCA ಸೇರಿದ ಆಟಗಾರರ ಕಮ್ಬ್ಯಾಕ್ ಯಾವಾಗ.?
ಹೌದು. ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಗಾಯಗೊಂಡು ತಂಡದಿಂದ ಹೊರ ಬಿದ್ದು ಕಾಲವೇ ಉರುಳಿದೆ. ಇವರ ಅಲಭ್ಯತೆ ಟೀಮ್ ಇಂಡಿಯಾವನ್ನ ಕಾಡ್ತಿದ್ದು, ಎನ್ಸಿಎ ಸೇರಿರುವ ಇವರ ಕಮ್ಬ್ಯಾಕ್ ಬಗ್ಗೆ ಸ್ಪಷ್ಟತೆಯೇ ಇಲ್ಲ. ಬಿಸಿಸಿಐ ಅಧಿಕೃತ ಮಾಹಿತಿಯನ್ನ ರಿಲೀಸ್ ಮಾಡಿಲ್ಲ. ಆದ್ರೆ, ಎನ್ಸಿಎ ಮೂಲಗಳು ಲೇಟೆಸ್ಟ್ ಅಪ್ಡೇಟ್ ಬಗ್ಗೆ ಮಾಹಿತಿ ನೀಡಿವೆ.
ಏಷ್ಯಾಕಪ್ಗೆ ಶ್ರೇಯಸ್ ಅಯ್ಯರ್ ಡೌಟ್.!
ಕಳೆದ ಮಾರ್ಚ್ನಲ್ಲಿ ಇಂಡೋ – ಆಸಿಸ್ ಟೆಸ್ಟ್ ಸರಣಿ ನಡುವೆ ಬ್ಯಾಕ್ ಇಂಜುರಿಗೆ ತುತ್ತಾದ ಶ್ರೇಯಸ್ ಅಯ್ಯರ್, ಎನ್ಸಿಎನಲ್ಲಿ ರಿಹ್ಯಾಬ್ಗೆ ಒಳಗಾಗಿದ್ದಾರೆ. ಎರಡೂ ದಿನದ ಹಿಂದೆ ಬ್ಯಾಟಿಂಗ್ ಅಭ್ಯಾಸವನ್ನೂ ನಡೆಸಿದ್ದಾರೆ. ಆದ್ರೂ ಕಮ್ಬ್ಯಾಕ್ ಮಾಡೋದು ಅನುಮಾನವಾಗಿದೆ. ಎನ್ಸಿಎ ಮೂಲಗಳು ಹೇಳೋ ಪ್ರಕಾರ ಶ್ರೇಯಸ್ ಚೇತರಿಕೆ ಅಂದುಕೊಂಡಿದ್ದಕ್ಕಿಂತ ನಿಧಾನಗತಿಯಲ್ಲಿದ್ದು, ಏಷ್ಯಾಕಪ್ ವೇಳೆಗೆ ತಂಡದ ಸೇರೋದು ಅನುಮಾನವಾಗಿದೆ.
ಐರ್ಲೆಂಡ್ ಸರಣಿಯಲ್ಲಿ ಬೂಮ್ರಾ ಕಣಕ್ಕೆ.!
ಕಳೆದ ಮಾರ್ಚ್ನಲ್ಲಿ ಬೆನ್ನಿನ ಸರ್ಜರಿಗೆ ಒಳಗಾಗಿರುವ ವೇಗಿ ಜಸ್ಪ್ರಿತ್ ಬೂಮ್ರಾ, ಶೀಘ್ರದಲ್ಲೇ ಮೈದಾನಕ್ಕಿಳಿಯಲಿದ್ದಾರೆ. ಸದ್ಯ ಎನ್ಸಿಎನಲ್ಲಿ ರಿಹ್ಯಾಬ್ ಒಳಗಾಗಿರುವ ಬೂಮ್ರಾ, ಬೌಲಿಂಗ್ ಅಭ್ಯಾಸವನ್ನ ಆರಂಭಿಸಿದ್ದಾರೆ. ಮುಂಬರುವ ಐರ್ಲೆಂಡ್ ಸರಣಿಯ ವೇಳೆಗೆ ಬೂಮ್ರಾ ಫುಲ್ ಫಿಟ್ ಆಗೋ ಸಾಧ್ಯತೆ ದಟ್ಟವಾಗಿದೆ.
ರಾಹುಲ್ ಕಮ್ಬ್ಯಾಕ್ ಬಗ್ಗೆ ಕ್ಲಾರಿಟಿನೇ ಇಲ್ಲ..!
ಕನ್ನಡಿಗ ಕೆ.ಎಲ್ ರಾಹುಲ್ ಯಾವಾಗ ಕಮ್ಬ್ಯಾಕ್ ಮಾಡ್ತಾರೆ ಅನ್ನೋದ್ರ ಬಗ್ಗೆ ಕ್ಲಾರಿಟಿನೇ ಇಲ್ಲದಂತಾಗಿದೆ. ಲಂಡನ್ನಲ್ಲಿ ಸರ್ಜರಿ ಒಳಗಾಗಿ ಬಂದ ರಾಹುಲ್, ವಿಶ್ರಾಂತಿಯ ಬಳಿ ಎನ್ಸಿಎ ಸೇರಿದ್ದಾರೆ. ಫಿಟ್ನೆಸ್ ವರ್ಕೌಟ್ಗಳನ್ನ ಮಾಡ್ತಿರೋ ರಾಹುಲ್, ಇನ್ನೂ ಬ್ಯಾಟಿಂಗ್ ಅಭ್ಯಾಸ ಮಾಡುವಷ್ಟು ಫಿಟ್ ಆಗಿಲ್ಲ ಅನ್ನೋದು ಎನ್ಸಿಎ ಮಾಹಿತಿಯಾಗಿದೆ. ಹೀಗಾಗಿ ಏಷ್ಯಾಕಪ್ ಲಭ್ಯರಾಗೋದು ಅನುಮಾನವೇ..!
ವಿಶ್ವಕಪ್ನಿಂದ ರಿಷಭ್ ಪಂತ್ ಔಟ್.!
ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಈ ಬಾರಿಯ ವಿಶ್ವಕಪ್ ಟೂರ್ನಿಯಿಂದ ಹೊರ ಬೀಳೋದು ಬಹುತೇಕ ಕನ್ಫರ್ಮ್. ಸದ್ಯ ಯಾವುದರ ಸಹಾಯವಿಲ್ಲದೆ ಪಂತ್ ನಡೆಯಲು ಆರಂಭಿಸಿದ್ದಾರೆ. ವೇಗವಾಗಿ ಚೇತರಿಸಿಕೊಳ್ತಾ ಇದ್ರೂ, ಫುಲ್ ಫಿಟ್ ಆಗಲು ಇನ್ನೂ ಹೆಚ್ಚಿನ ಸಮಯಬೇಕಿದೆ. ಚೇತರಿಕೆ ಕಂಡರೂ ವಿಕೆಟ್ ಕೀಪಿಂಗ್ ಮಾಡುವಷ್ಟು ಫಿಟ್ ಆಗ್ತಾರಾ ಅನ್ನೋದು ಇನ್ನೂ ಉತ್ತರ ಸಿಗದ ಪ್ರಶ್ನೆಯಾಗಿದೆ.
ವಿಶ್ವಕಪ್ಗೆ ಸಿದ್ಧತೆ ಆರಂಭಿಸಿರೋ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ಈ ಸ್ಟಾರ್ಗಳು ಇಂಜುರಿ ಸದ್ಯ ತಲೆನೋವಾಗಿದೆ. ಪ್ರಮುಖರು ಅಲಭ್ಯರಾದ್ರೆ, ಇವರ ಸ್ಥಾನಕ್ಕೆ ಯಾರನ್ನ ಆಯ್ಕೆ ಮಾಡಬೇಕು ಎಂಬುದು ಗೊಂದಲಕ್ಕೀಡು ಮಾಡಿದೆ. ಹೀಗಾಗಿ ಬ್ಯಾಕ್ ಅಪ್ ಪ್ಲೇಯರ್ಗಳ ಆಯ್ಕೆಗೆ ಸರ್ಕಸ್ ಶುರುವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ