newsfirstkannada.com

BREAKING: ಸರ್ಕಾರಿ- ಖಾಸಗಿ ಬಸ್​ ನಡುವೆ ಭೀಕರ ಡಿಕ್ಕಿ.. 10 ಸಾವು, ಹಲವರು ಗಂಭೀರ

Share :

26-06-2023

    ಭೀಕರ ಬಸ್​ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರು

    ಇವತ್ತು ರಾತ್ರಿ 1ಗಂಟೆ ಸುಮಾರಿಗೆ 2 ಬಸ್​ಗಳ ನಡುವೆ ಡಿಕ್ಕಿ

    ಕತ್ತಲಲ್ಲೇ ಪ್ರಯಾಣಿಕರು ನೋವಿನಿಂದ ಕಿರುಚಾಟ, ಚೀರಾಟ

ಒಡಿಶಾ: ಸರ್ಕಾರಿ ಬಸ್​ ಮತ್ತು ಖಾಸಗಿ ಬಸ್​ ನಡುವೆ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲೇ 12 ಜನರು ಸಾವನ್ನಪ್ಪಿದ್ದು ಇನ್ನು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಒಡಿಶಾದ ಗಂಜಾಂ ಜಿಲ್ಲೆಯ ದಿಗಪಹಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವತ್ತು ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.

ಎರಡು ಬಸ್​ನಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಬರ್ಹಾಂಪುರದಲ್ಲಿನ MKCG ಮೆಡಿಕಲ್ ಕಾಲೇಜು​ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಕಟಕ್​ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್​ನಲ್ಲಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಮತ್ತು ಗಾಯಗೊಂಡಿರುವುದು ಎನ್ನಲಾಗಿದೆ. ಇದು ಅಲ್ಲದೇ ಅಪಘಾತಕ್ಕೀಡಾದ ಬಸ್​ಗಳ ಪೈಕಿ ಒಬ್ಬ ಡ್ರೈವರ್​ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ಇನ್ನೊಬ್ಬ ಬಸ್​ ಚಾಲಕನಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನು ಒಡಿಶಾ ಸರ್ಕಾರಿ ಬಸ್​ ರಾಯಗಡದಿಂದ ಭುವನೇಶ್ವರಕ್ಕೆ ತೆರಳುತ್ತಿತ್ತು. ಖಾಸಗಿ ಬಸ್ ಬೆರ್ಹಾಂಪುರ ಜಿಲ್ಲೆಯ ಖಂಡದೇಲಿ ಗ್ರಾಮದ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿತ್ತು. ಈ ವೇಳೆ ಗಂಜಾಂ ಜಿಲ್ಲೆಯ ದಿಗಪಹಂಡಿ ಬಳಿಯ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಎರಡು ಬಸ್​ಗಳು ರಭಸದಿಂದ ಡಿಕ್ಕಿ ಹೊಡೆದಿವೆ. ಪರಿಣಾಮ ಎರಡು ಬಸ್​ನಲ್ಲಿದ್ದವರು ಕೆಲವರು ಮೃತಪಟ್ಟರೇ ಇನ್ನು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಗಾಯಗೊಂಡ ಪ್ರಯಾಣಿಕರನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು. ಆದ್ರೆ ಎರಡು ಬಸ್​ಗಳ ನಡುವೆ ಡಿಕ್ಕಿ ಯಾಕೆ ಸಂಭವಿಸಿತು ಎಂಬುವುದಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಬೆರ್ಹಾಂಪುರ ಠಾಣೆಯ ಎಸ್​ಪಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಸರ್ಕಾರಿ- ಖಾಸಗಿ ಬಸ್​ ನಡುವೆ ಭೀಕರ ಡಿಕ್ಕಿ.. 10 ಸಾವು, ಹಲವರು ಗಂಭೀರ

https://newsfirstlive.com/wp-content/uploads/2023/06/ODISHA_BUS_ACCIDENT_1.jpg

    ಭೀಕರ ಬಸ್​ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರು

    ಇವತ್ತು ರಾತ್ರಿ 1ಗಂಟೆ ಸುಮಾರಿಗೆ 2 ಬಸ್​ಗಳ ನಡುವೆ ಡಿಕ್ಕಿ

    ಕತ್ತಲಲ್ಲೇ ಪ್ರಯಾಣಿಕರು ನೋವಿನಿಂದ ಕಿರುಚಾಟ, ಚೀರಾಟ

ಒಡಿಶಾ: ಸರ್ಕಾರಿ ಬಸ್​ ಮತ್ತು ಖಾಸಗಿ ಬಸ್​ ನಡುವೆ ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲೇ 12 ಜನರು ಸಾವನ್ನಪ್ಪಿದ್ದು ಇನ್ನು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಒಡಿಶಾದ ಗಂಜಾಂ ಜಿಲ್ಲೆಯ ದಿಗಪಹಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇವತ್ತು ರಾತ್ರಿ 1 ಗಂಟೆ ಸುಮಾರಿಗೆ ನಡೆದಿದೆ.

ಎರಡು ಬಸ್​ನಲ್ಲಿ ಗಾಯಗೊಂಡ ಪ್ರಯಾಣಿಕರನ್ನು ಬರ್ಹಾಂಪುರದಲ್ಲಿನ MKCG ಮೆಡಿಕಲ್ ಕಾಲೇಜು​ ಮತ್ತು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಚಿಂತಾಜನಕ ಪರಿಸ್ಥಿತಿಯಲ್ಲಿರುವ ಪ್ರಯಾಣಿಕರನ್ನು ಕಟಕ್​ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಖಾಸಗಿ ಬಸ್​ನಲ್ಲಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದು ಮತ್ತು ಗಾಯಗೊಂಡಿರುವುದು ಎನ್ನಲಾಗಿದೆ. ಇದು ಅಲ್ಲದೇ ಅಪಘಾತಕ್ಕೀಡಾದ ಬಸ್​ಗಳ ಪೈಕಿ ಒಬ್ಬ ಡ್ರೈವರ್​ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೇ, ಇನ್ನೊಬ್ಬ ಬಸ್​ ಚಾಲಕನಿಗಾಗಿ ಹುಡುಕಾಟ ನಡೆದಿದೆ ಎಂದು ತಿಳಿದು ಬಂದಿದೆ.

ಇನ್ನು ಒಡಿಶಾ ಸರ್ಕಾರಿ ಬಸ್​ ರಾಯಗಡದಿಂದ ಭುವನೇಶ್ವರಕ್ಕೆ ತೆರಳುತ್ತಿತ್ತು. ಖಾಸಗಿ ಬಸ್ ಬೆರ್ಹಾಂಪುರ ಜಿಲ್ಲೆಯ ಖಂಡದೇಲಿ ಗ್ರಾಮದ ಮದುವೆ ಸಮಾರಂಭ ಮುಗಿಸಿ ಹಿಂದಿರುಗುತ್ತಿತ್ತು. ಈ ವೇಳೆ ಗಂಜಾಂ ಜಿಲ್ಲೆಯ ದಿಗಪಹಂಡಿ ಬಳಿಯ ಹೆದ್ದಾರಿಯಲ್ಲಿ ಬರುತ್ತಿದ್ದಂತೆ ಎರಡು ಬಸ್​ಗಳು ರಭಸದಿಂದ ಡಿಕ್ಕಿ ಹೊಡೆದಿವೆ. ಪರಿಣಾಮ ಎರಡು ಬಸ್​ನಲ್ಲಿದ್ದವರು ಕೆಲವರು ಮೃತಪಟ್ಟರೇ ಇನ್ನು ಹಲವು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಗಾಯಗೊಂಡ ಪ್ರಯಾಣಿಕರನ್ನು ಆಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕಳುಹಿಸಲಾಯಿತು. ಆದ್ರೆ ಎರಡು ಬಸ್​ಗಳ ನಡುವೆ ಡಿಕ್ಕಿ ಯಾಕೆ ಸಂಭವಿಸಿತು ಎಂಬುವುದಕ್ಕೆ ನಿಖರ ಕಾರಣ ತಿಳಿದಿಲ್ಲ ಎಂದು ಬೆರ್ಹಾಂಪುರ ಠಾಣೆಯ ಎಸ್​ಪಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More