ಪ್ರಯಾಣಿಕರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಜೀವ ಕೈಗೆ ಬಂದಿತ್ತು
48 ಪ್ರಯಾಣಿಕರ ಜೀವ ಉಳಿಸಿದ ಚಾಲಕ ಬದುಕಿ ಬರಲಿಲ್ಲ
ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ದಾರುಣ ಘಟನೆ
48 ಪ್ರಯಾಣಿಕರನ್ನು ಕೂರಿಸಿಕೊಂಡು ಕರೆದೊಯ್ಯುತ್ತಿದ್ದ ಬಸ್ ಡ್ರೈವರ್ಗೆ ರಾತ್ರಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ತನಗೆ ಏನೋ ಆಗುತ್ತಿದೆ ಅನ್ನೋದನ್ನು ಅರಿತ ಡ್ರೈವರ್, ರಸ್ತೆಯ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಈ ಮೂಲಕ 48 ಪ್ರಯಾಣಿಕರ ಜೀವ ಉಳಿಸಿ, ಚಾಲಕ ಸಾವನ್ನಪ್ಪಿದ್ದಾನೆ.
ಒಡಿಶಾದ ಕಂಧಮಲ್ ಜಿಲ್ಲೆಯ ಪಬುರಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಸನಾ ಪ್ರಧಾನ್ ಕಾರ್ಡಿಯಾಕ್ಗೆ ಒಳಗಾಗಿ ಸಾವನ್ನಪ್ಪಿದ ಡ್ರೈವರ್. ಬಸ್ ಚಾಲನೆಯಲ್ಲಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಬಸ್ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಆತ, ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ.
ಡ್ರೈವರ್ನ ಜಾಗೃತೆಯಿಂದ 48 ಪ್ರಯಾಣಿಕರು ಬದುಕುಳಿದಿದ್ದಾರೆ. ‘ಮಾ ಲಕ್ಷ್ಮೀ’ ಎಂಬ ಖಾಸಗಿ ಬಸ್ ಡ್ರೈವರ್ಗೆ ಹೃದಯಸ್ತಂಬನ ಆಗಿದೆ. ರಾತ್ರಿಯಾಗಿದ್ದರೂ ಕೂಡ ಬಸ್ ಡ್ರೈವರ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆಯೇ ವೈದ್ಯರು ಮೃತಪಟ್ಟಿರುವ ಬಗ್ಗೆ ಖಚಿತ ವ್ಯಕ್ತಪಡಿಸಿದರು ಎಂದು ಟಿಕಬಲಿ ಠಾಣೆಯ ಇನ್ಸ್ಪೆಕ್ಟರ್ ಕಲ್ಯಾಣಮಯಿ ಸೆಂಧ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಯಾಣಿಕರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಜೀವ ಕೈಗೆ ಬಂದಿತ್ತು
48 ಪ್ರಯಾಣಿಕರ ಜೀವ ಉಳಿಸಿದ ಚಾಲಕ ಬದುಕಿ ಬರಲಿಲ್ಲ
ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ದಾರುಣ ಘಟನೆ
48 ಪ್ರಯಾಣಿಕರನ್ನು ಕೂರಿಸಿಕೊಂಡು ಕರೆದೊಯ್ಯುತ್ತಿದ್ದ ಬಸ್ ಡ್ರೈವರ್ಗೆ ರಾತ್ರಿ ಹಠಾತ್ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ತನಗೆ ಏನೋ ಆಗುತ್ತಿದೆ ಅನ್ನೋದನ್ನು ಅರಿತ ಡ್ರೈವರ್, ರಸ್ತೆಯ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಈ ಮೂಲಕ 48 ಪ್ರಯಾಣಿಕರ ಜೀವ ಉಳಿಸಿ, ಚಾಲಕ ಸಾವನ್ನಪ್ಪಿದ್ದಾನೆ.
ಒಡಿಶಾದ ಕಂಧಮಲ್ ಜಿಲ್ಲೆಯ ಪಬುರಿಯಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಸನಾ ಪ್ರಧಾನ್ ಕಾರ್ಡಿಯಾಕ್ಗೆ ಒಳಗಾಗಿ ಸಾವನ್ನಪ್ಪಿದ ಡ್ರೈವರ್. ಬಸ್ ಚಾಲನೆಯಲ್ಲಿದ್ದಾಗ ಏಕಾಏಕಿ ಎದೆನೋವು ಕಾಣಿಸಿಕೊಂಡಿದೆ. ಇದರಿಂದ ಬಸ್ ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ. ಇದನ್ನು ಮನಗಂಡ ಆತ, ರಸ್ತೆಯ ತಡೆಗೋಡೆಗೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ.
ಡ್ರೈವರ್ನ ಜಾಗೃತೆಯಿಂದ 48 ಪ್ರಯಾಣಿಕರು ಬದುಕುಳಿದಿದ್ದಾರೆ. ‘ಮಾ ಲಕ್ಷ್ಮೀ’ ಎಂಬ ಖಾಸಗಿ ಬಸ್ ಡ್ರೈವರ್ಗೆ ಹೃದಯಸ್ತಂಬನ ಆಗಿದೆ. ರಾತ್ರಿಯಾಗಿದ್ದರೂ ಕೂಡ ಬಸ್ ಡ್ರೈವರ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆಯೇ ವೈದ್ಯರು ಮೃತಪಟ್ಟಿರುವ ಬಗ್ಗೆ ಖಚಿತ ವ್ಯಕ್ತಪಡಿಸಿದರು ಎಂದು ಟಿಕಬಲಿ ಠಾಣೆಯ ಇನ್ಸ್ಪೆಕ್ಟರ್ ಕಲ್ಯಾಣಮಯಿ ಸೆಂಧ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ