ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವ್ಯಕ್ತಿ
ಭೀಕರ ಕಾರು ಅಪಘಾತಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವು..!
ಬಲೂನ್ ವ್ಯಾಪಾರಿಯ ಬಲಿ ಪಡೆದ ಉದ್ಯಮಿ ಕಾರು
ಲಕ್ನೋ: ಖಾಲಿ ರಸ್ತೆಯಲ್ಲಿ ವೇಗವಾಗಿ ಬಂದ ಎಸ್ಯುವಿ ಕಾರೊಂದು, ಚಾಲಕನ ನಿಯಂತ್ರವಣನ್ನೇ ತಪ್ಪಿ ಪಲ್ಟಿ ಹೊಡೆದಿದೆ. ಅದು ಒಂದು ಬಾರಿಯಲ್ಲ. ಎರಡು ಬಾರಿ ಪಲ್ಟಿ ಹೊಡೆದಿದ್ದು, ಅಲ್ಲೇ ನಿಂತಿದ್ದ ಬಲೂನ್ ವ್ಯಾಪಾರಿ, ಉನ್ನಾವ್ ಮೂಲದ ಭಾನು ಎಂಬಾತನನ್ನ ಗುದ್ದಿದೆ. ಇದರ ಪರಿಣಾಮ ಆತ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಘಟನೆಯಲ್ಲಿ ಓರ್ವ ಬಲೂನ್ ವ್ಯಾಪಾರಿಯ ಜೀವವೇ ಹೋಗಿದೆ. ಇನ್ನು, ಕಾರು ಚಲಾಯಿಸುತ್ತಿದ್ದ, ಬ್ಯುಸಿನೆಸ್ ಮೆನ್ ಅನುಭವ್ ಗೋಯಲ್ ಕಠಂ ಪೂರ್ತಿ ಕುಡಿದು ವಾಹನ ಚಲಾಯಿಸುತ್ತಿದ್ದ. ಌಕ್ಸಿಡೆಂಟ್ ಬಳಿಕ ಅನುಭವನ್ ಜೊತೆ ಇದ್ದವರು ಕಾರ್ನ ಕಿಟಕಿಗಳಿಂದ ಹೊರ ಜಿಗಿದಿದ್ದಾರೆ.
ಕೂಡಲೇ ಸ್ಥಳೀಯರು ಜಮಾಯಿಸಿ, ಅನುಭವ್ ಗೋಯಲ್ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದ್ರೆ, ಪೊಲೀಸರು ಯಾವ ವಿಚಾರಣೆಯೂ ಮಾಡದೇ ಬಿಟ್ಟು ಕಳಿಸಿದ್ದರಂತೆ. ಕಡೆಗೆ ಹಿರಿಯ ಅಧಿಕಾರಿಗಳು ಪ್ರಶ್ನಿಸಿದಾಗ ನಾಪತ್ತೆಯಾಗಿದ್ದ ಅನುಭವ್ನನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎಣ್ಣೆ ಏಟಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವ್ಯಕ್ತಿ
ಭೀಕರ ಕಾರು ಅಪಘಾತಕ್ಕೆ ಸ್ಥಳದಲ್ಲೇ ವ್ಯಕ್ತಿ ಸಾವು..!
ಬಲೂನ್ ವ್ಯಾಪಾರಿಯ ಬಲಿ ಪಡೆದ ಉದ್ಯಮಿ ಕಾರು
ಲಕ್ನೋ: ಖಾಲಿ ರಸ್ತೆಯಲ್ಲಿ ವೇಗವಾಗಿ ಬಂದ ಎಸ್ಯುವಿ ಕಾರೊಂದು, ಚಾಲಕನ ನಿಯಂತ್ರವಣನ್ನೇ ತಪ್ಪಿ ಪಲ್ಟಿ ಹೊಡೆದಿದೆ. ಅದು ಒಂದು ಬಾರಿಯಲ್ಲ. ಎರಡು ಬಾರಿ ಪಲ್ಟಿ ಹೊಡೆದಿದ್ದು, ಅಲ್ಲೇ ನಿಂತಿದ್ದ ಬಲೂನ್ ವ್ಯಾಪಾರಿ, ಉನ್ನಾವ್ ಮೂಲದ ಭಾನು ಎಂಬಾತನನ್ನ ಗುದ್ದಿದೆ. ಇದರ ಪರಿಣಾಮ ಆತ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಘಟನೆಯಲ್ಲಿ ಓರ್ವ ಬಲೂನ್ ವ್ಯಾಪಾರಿಯ ಜೀವವೇ ಹೋಗಿದೆ. ಇನ್ನು, ಕಾರು ಚಲಾಯಿಸುತ್ತಿದ್ದ, ಬ್ಯುಸಿನೆಸ್ ಮೆನ್ ಅನುಭವ್ ಗೋಯಲ್ ಕಠಂ ಪೂರ್ತಿ ಕುಡಿದು ವಾಹನ ಚಲಾಯಿಸುತ್ತಿದ್ದ. ಌಕ್ಸಿಡೆಂಟ್ ಬಳಿಕ ಅನುಭವನ್ ಜೊತೆ ಇದ್ದವರು ಕಾರ್ನ ಕಿಟಕಿಗಳಿಂದ ಹೊರ ಜಿಗಿದಿದ್ದಾರೆ.
ಕೂಡಲೇ ಸ್ಥಳೀಯರು ಜಮಾಯಿಸಿ, ಅನುಭವ್ ಗೋಯಲ್ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಆದ್ರೆ, ಪೊಲೀಸರು ಯಾವ ವಿಚಾರಣೆಯೂ ಮಾಡದೇ ಬಿಟ್ಟು ಕಳಿಸಿದ್ದರಂತೆ. ಕಡೆಗೆ ಹಿರಿಯ ಅಧಿಕಾರಿಗಳು ಪ್ರಶ್ನಿಸಿದಾಗ ನಾಪತ್ತೆಯಾಗಿದ್ದ ಅನುಭವ್ನನ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ