ಉದ್ಯಮಿಯೊಬ್ಬರಿಗೆ ಕೋಟಿ, ಕೋಟಿ ಪಂಗನಾಮ ಹಾಕಿದ
ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್ ಹೆಸರಲ್ಲಿ ಮಹಾವಂಚನೆ..!
ಆರೋಪಿ ಮನೆ ಮೇಲೆ ದಾಳಿ ಹಣ ಬಂಗಾರ ನೋಡಿ ಶಾಕ್
ಮುಂಬೈ: ಓರ್ವ ಬ್ಯುಸಿನೆಸ್ ಮೆನ್ಗೆ 58 ಕೋಟಿ ರೂ.ಗಳನ್ನ ವಂಚಿಸಿದ ಖದೀಮನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 14 ಕೋಟಿ ರೂಪಾಯಿ ನಗದು, 4 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿ ಅನಂತ್ ಅಲಿಯಾಸ್ ಸೊಂಟು ನವರತನ್ ಜೈನ್, ಇವರು ಮಹಾರಾಷ್ಟ್ರದ ನಾಗಪುರದಲ್ಲಿನ ಓರ್ವ ಬ್ಯುಸಿನೆಸ್ ಮೆನ್ಗೆ ಕೋಟ್ಯಂತರ ರೂಪಾಯಿಗಳನ್ನು ವಂಚನೆ ಮಾಡಿದ್ದಾರೆ. ಸದ್ಯ ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ ಆರೋಪಿ ಜೈನ್ ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.
ಪ್ರಚೋದನೆಯಿಂದ ಆಡಾಡುತ್ತಾ ₹58 ಕೋಟಿ ಲಾಸ್
ಆರೋಪಿ ಜೈನ್ ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್ ಆಡಿದರೇ ಭಾರೀ ಲಾಭ ಸಿಗುತ್ತೆ ಎಂದು ಉದ್ಯಮಿಯೊಬ್ಬರಿಗೆ ಪ್ರಚೋದನೆ ನೀಡಿ ಉದ್ಯಮಿಯಿಂದ ಹವಾಲಾ ಮೂಲಕ 8 ಲಕ್ಷ ರೂ.ಗಳನ್ನು ಪಡೆದು ಆಲ್ಲೈನ್ ಗೇಮ್ ಆಡಲು ವ್ಯಾಟ್ಸ್ ಆಪ್ನಲ್ಲಿ ಲಿಂಕ್ ಕಳಿಸಿದ್ದನು. ಗೇಮ್ಗೆ 8 ಲಕ್ಷ ರೂ.ಗಳನ್ನು ಠೇವಣಿ ಇರಿಸಿದ್ದನ್ನು ನಂಬಿ ಉದ್ಯಮಿ ಆನ್ಲೈನ್ ಗೇಮ್ ಆಡಲು ಶುರು ಮಾಡಿದ್ದಾನೆ ಎಂದು ಹೇಳಲಾಗಿದೆ.
ಈ ಗೇಮ್ ಆಡುತ್ತಾ.. ಆಡುತ್ತಾ.. ಉದ್ಯಮಿ ಬರೋಬ್ಬರಿ 58 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಆದರೆ ಯಾವುದೇ ಹಣ ಬಂದಿಲ್ಲ. ಈ ವೇಳೆ ಈತನಿಗೆ ಕೇವಲ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ಗೇಮ್ ಮೂಲಕ ವಾಪಸ್ ಬಂದಿದೆ. ಇದರಿಂದ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿ ಜೈನ್ಗೆ ಕೇಳಿದ್ರೆ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
150 ಕಿ.ಮೀ ದೂರದ ಆರೋಪಿ ಮನೆ ರೇಡ್
ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ನಾಗಪುರದಿಂದ 150 ಕಿ.ಮೀ ದೂರದ ಗೊಂಡಿಯಾದಲ್ಲಿನ ಆರೋಪಿ ಜೈನ್ ಮನೆಯನ್ನು ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ 14 ಕೋಟಿ ರೂಪಾಯಿ ನಗದು, 4 ಕೆ.ಜಿ ಬಂಗಾರ ಪತ್ತೆಯಾಗಿದೆ. ಹಣ, ಚಿನ್ನ ಸಿಗುತ್ತಿದ್ದಂತೆ ಆರೋಪಿಯು ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಾರಾಷ್ಟ್ರದ ಗೊಂಡಿಯಾ ಪ್ರದೇಶದ ಆರೋಪಿಯು, ಓರ್ವ ಉದ್ಯಮಿಗೆ ₹58 ಕೋಟಿ ವಂಚಿಸಿದ್ದಾನೆ. ಬಳಿಕ ಪೊಲೀಸರು ಅವನ ಮನೆ ಮೇಲೆ ದಾಳಿ ಮಾಡಿದಾಗ ಕಂಡು ಬಂದ ರಾಶಿ, ರಾಶಿ ಹಣ. #Newsfirstlive #NewsFirstKannada #Businessman #OnlineGamingScam #ResidenceRaid pic.twitter.com/Mhswpp5l2f
— NewsFirst Kannada (@NewsFirstKan) July 23, 2023
ಉದ್ಯಮಿಯೊಬ್ಬರಿಗೆ ಕೋಟಿ, ಕೋಟಿ ಪಂಗನಾಮ ಹಾಕಿದ
ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್ ಹೆಸರಲ್ಲಿ ಮಹಾವಂಚನೆ..!
ಆರೋಪಿ ಮನೆ ಮೇಲೆ ದಾಳಿ ಹಣ ಬಂಗಾರ ನೋಡಿ ಶಾಕ್
ಮುಂಬೈ: ಓರ್ವ ಬ್ಯುಸಿನೆಸ್ ಮೆನ್ಗೆ 58 ಕೋಟಿ ರೂ.ಗಳನ್ನ ವಂಚಿಸಿದ ಖದೀಮನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ 14 ಕೋಟಿ ರೂಪಾಯಿ ನಗದು, 4 ಕೆಜಿ ಚಿನ್ನ ವಶಕ್ಕೆ ಪಡೆದಿದ್ದಾರೆ.
ಆರೋಪಿ ಅನಂತ್ ಅಲಿಯಾಸ್ ಸೊಂಟು ನವರತನ್ ಜೈನ್, ಇವರು ಮಹಾರಾಷ್ಟ್ರದ ನಾಗಪುರದಲ್ಲಿನ ಓರ್ವ ಬ್ಯುಸಿನೆಸ್ ಮೆನ್ಗೆ ಕೋಟ್ಯಂತರ ರೂಪಾಯಿಗಳನ್ನು ವಂಚನೆ ಮಾಡಿದ್ದಾರೆ. ಸದ್ಯ ಪೊಲೀಸರು ಮನೆ ಮೇಲೆ ದಾಳಿ ಮಾಡಿದಾಗ ಆರೋಪಿ ಜೈನ್ ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.
ಪ್ರಚೋದನೆಯಿಂದ ಆಡಾಡುತ್ತಾ ₹58 ಕೋಟಿ ಲಾಸ್
ಆರೋಪಿ ಜೈನ್ ಆನ್ಲೈನ್ ಗೇಮ್, ಗ್ಯಾಂಬ್ಲಿಂಗ್ ಆಡಿದರೇ ಭಾರೀ ಲಾಭ ಸಿಗುತ್ತೆ ಎಂದು ಉದ್ಯಮಿಯೊಬ್ಬರಿಗೆ ಪ್ರಚೋದನೆ ನೀಡಿ ಉದ್ಯಮಿಯಿಂದ ಹವಾಲಾ ಮೂಲಕ 8 ಲಕ್ಷ ರೂ.ಗಳನ್ನು ಪಡೆದು ಆಲ್ಲೈನ್ ಗೇಮ್ ಆಡಲು ವ್ಯಾಟ್ಸ್ ಆಪ್ನಲ್ಲಿ ಲಿಂಕ್ ಕಳಿಸಿದ್ದನು. ಗೇಮ್ಗೆ 8 ಲಕ್ಷ ರೂ.ಗಳನ್ನು ಠೇವಣಿ ಇರಿಸಿದ್ದನ್ನು ನಂಬಿ ಉದ್ಯಮಿ ಆನ್ಲೈನ್ ಗೇಮ್ ಆಡಲು ಶುರು ಮಾಡಿದ್ದಾನೆ ಎಂದು ಹೇಳಲಾಗಿದೆ.
ಈ ಗೇಮ್ ಆಡುತ್ತಾ.. ಆಡುತ್ತಾ.. ಉದ್ಯಮಿ ಬರೋಬ್ಬರಿ 58 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾನೆ. ಆದರೆ ಯಾವುದೇ ಹಣ ಬಂದಿಲ್ಲ. ಈ ವೇಳೆ ಈತನಿಗೆ ಕೇವಲ 5 ಕೋಟಿ ರೂ. ಮಾತ್ರ ಲಾಭದ ರೀತಿಯಲ್ಲಿ ಗೇಮ್ ಮೂಲಕ ವಾಪಸ್ ಬಂದಿದೆ. ಇದರಿಂದ ಅನುಮಾನಗೊಂಡ ಉದ್ಯಮಿ ಹಣ ವಾಪಸ್ ನೀಡುವಂತೆ ಆರೋಪಿ ಜೈನ್ಗೆ ಕೇಳಿದ್ರೆ ಇದಕ್ಕೆ ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.
150 ಕಿ.ಮೀ ದೂರದ ಆರೋಪಿ ಮನೆ ರೇಡ್
ಹಣ ಕಳೆದುಕೊಂಡ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ನಾಗಪುರದಿಂದ 150 ಕಿ.ಮೀ ದೂರದ ಗೊಂಡಿಯಾದಲ್ಲಿನ ಆರೋಪಿ ಜೈನ್ ಮನೆಯನ್ನು ಪೊಲೀಸರು ರೇಡ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ 14 ಕೋಟಿ ರೂಪಾಯಿ ನಗದು, 4 ಕೆ.ಜಿ ಬಂಗಾರ ಪತ್ತೆಯಾಗಿದೆ. ಹಣ, ಚಿನ್ನ ಸಿಗುತ್ತಿದ್ದಂತೆ ಆರೋಪಿಯು ದುಬೈಗೆ ಎಸ್ಕೇಪ್ ಆಗಿದ್ದಾನೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಹಾರಾಷ್ಟ್ರದ ಗೊಂಡಿಯಾ ಪ್ರದೇಶದ ಆರೋಪಿಯು, ಓರ್ವ ಉದ್ಯಮಿಗೆ ₹58 ಕೋಟಿ ವಂಚಿಸಿದ್ದಾನೆ. ಬಳಿಕ ಪೊಲೀಸರು ಅವನ ಮನೆ ಮೇಲೆ ದಾಳಿ ಮಾಡಿದಾಗ ಕಂಡು ಬಂದ ರಾಶಿ, ರಾಶಿ ಹಣ. #Newsfirstlive #NewsFirstKannada #Businessman #OnlineGamingScam #ResidenceRaid pic.twitter.com/Mhswpp5l2f
— NewsFirst Kannada (@NewsFirstKan) July 23, 2023