ಸಿದ್ದರಾಮಯ್ಯ, ಶಿವಕುಮಾರ್ ಬಳಿ ಮಾತಾಡೋದು ತಪ್ಪಲ್ಲ
‘ಸೋಮಶೇಖರ್ನ ಬಿಜೆಪಿಗೆ ಕರ್ಕೊಂಡು ಬಂದಿದ್ದು ನಾನೇ’
ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ- S.T ಸೋಮಶೇಖರ್
ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ವೇಳೆ ಬಿಎಸ್ವೈ 10 ಜನರನ್ನ ಕರೆದುಕೊಂಡು ಬಂದ್ರೆ, ನಾನು 5 ಜನರನ್ನು ಕರೆತಂದಿದ್ದೆ. ಅದರಲ್ಲಿ ಎಸ್.ಟಿ ಸೋಮಶೇಖರ್ ಕೂಡ ಒಬ್ಬರು. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಬಿಜೆಪಿಗೆ ಸೋಮಶೇಖರ್ರನ್ನ ಕರೆತಂದಿದ್ದು ನಾನೇ. ಮಾಧ್ಯಮಗಳಲ್ಲಿ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಸುದ್ದಿ ಹರಡುತ್ತಿದೆ. ಆದ್ರೆ ಅವೆಲ್ಲ ಊಹಾಪೋಹ ಆಗಿದ್ದು ಅವರು ಬಿಜೆಪಿಯಲ್ಲೇ ಇರುತ್ತಾರೆ. ಅವರ ಕ್ಷೇತ್ರದ ಭಾಗದಲ್ಲಿ 3 ಬಾರಿ ಶಾಸಕನಾಗಿದ್ದೆ. ಹೀಗಾಗಿ ಅವರ ಮತ್ತು ನನ್ನ ನಡುವೆ ಒಳ್ಳೆಯ ಒಡನಾಟವಿದ್ದು ನಿತ್ಯ ಎರಡು ಟೈಮ್ ಕಾಲ್ ಮಾಡುತ್ತಾರೆ. ಜಸ್ಟ್ ಈಗಲೂ ಮಾತನಾಡಿ ಬಂದು ಭೇಟಿಯಾಗುವಂತೆ ಸೂಚಿಸಿದ್ದೇನೆ. ಮುಂದೆ ಏನಾಗುತ್ತೆಂದು ಕಾದು ನೋಡೋಣ ಎಂದು ಆರ್ ಅಶೋಕ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಸ್ವತಹ ಶಾಸಕ ಎಸ್.ಟಿ ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡಿದ್ದು ನನಗೆ ಬಿಜೆಪಿ ಬಿಟ್ಟು ಹೋಗುವ ಮನಸ್ಸಿಲ್ಲ. ಆದ್ರೆ ಕೆಲವರು ಪಕ್ಷ ಬಿಟ್ಟು ಹೋಗುತ್ತೇವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಎಲೆಕ್ಷನ್ ವೇಳೆಯು ಅಪಪ್ರಚಾರ ಮಾಡಿದ್ದರು. ಇದರ ಹಿಂದೆ ಅಮಾನತು ಆದ ವ್ಯಕ್ತಿ ಕೆಲಸ ಮಾಡಿದ್ದು ಕ್ಷೇತ್ರದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಲೋಕಸಭಾ ಎಲೆಕ್ಷನ್ಗೆ ಹೋಗುವ ಆಸಕ್ತಿಯೇನು ಇಲ್ಲ. ನನ್ನ ಮಗ ಕೂಡ ರಾಜಕೀಯಕ್ಕೆ ಬರಲ್ಲ. ದೆಹಲಿಯಿಂದ ಯಾವುದೇ ಫೋನ್ ಕರೆ ಬಂದಿಲ್ಲ. ಬಂದ್ರೆ ದೆಹಲಿಗೆ ಹೋಗ್ತೀನಿ ಎಂದು ಹೇಳಿದರು.
ಇದೇ ವೇಳೆ ತಮ್ಮ ಬೆಂಬಲಿಗರು ಕಾಂಗ್ರೆಸ್ಗೆ ಸೇರಿದ ಬಗ್ಗೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ವಾರ್ಡ್ಗೆ ಒಬ್ಬರೋ, ಇಬ್ಬರೋ ಹೋದರೆ ಏನು ಆಗಲ್ಲ. ನಾನೇನು ರಾಜ್ಯಮಟ್ಟದ ನಾಯಕನಾಗಬೇಕು ಎಂದು ನನಗೇನು ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾರೂ ತುಳಿಯಲ್ಲ. ನನ್ನ ಕ್ಷೇತ್ರದ ಬಗ್ಗೆ ನಾನು ಮಾತನಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ಒಳ್ಳೆಯ ಮಾತನಾಡಿದ್ರೆ ಅದನ್ನು ಯಾರು ರಿಸ್ಟ್ರಿಕ್ಸನ್ ಮಾಡೋ ಆಗಿಲ್ಲ. ಈಗ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿದೆ. ಆ ಬಗ್ಗೆ ಮಾತನಾಡಿದ್ರೆ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದರಾಮಯ್ಯ, ಶಿವಕುಮಾರ್ ಬಳಿ ಮಾತಾಡೋದು ತಪ್ಪಲ್ಲ
‘ಸೋಮಶೇಖರ್ನ ಬಿಜೆಪಿಗೆ ಕರ್ಕೊಂಡು ಬಂದಿದ್ದು ನಾನೇ’
ಕ್ಷೇತ್ರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ- S.T ಸೋಮಶೇಖರ್
ಬೆಂಗಳೂರು: ಬಿಜೆಪಿ ಸರ್ಕಾರ ರಚನೆ ವೇಳೆ ಬಿಎಸ್ವೈ 10 ಜನರನ್ನ ಕರೆದುಕೊಂಡು ಬಂದ್ರೆ, ನಾನು 5 ಜನರನ್ನು ಕರೆತಂದಿದ್ದೆ. ಅದರಲ್ಲಿ ಎಸ್.ಟಿ ಸೋಮಶೇಖರ್ ಕೂಡ ಒಬ್ಬರು. ಅವರು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಆರ್. ಅಶೋಕ್, ಬಿಜೆಪಿಗೆ ಸೋಮಶೇಖರ್ರನ್ನ ಕರೆತಂದಿದ್ದು ನಾನೇ. ಮಾಧ್ಯಮಗಳಲ್ಲಿ ಕಾಂಗ್ರೆಸ್ಗೆ ಹೋಗುತ್ತಾರೆ ಎಂಬ ಸುದ್ದಿ ಹರಡುತ್ತಿದೆ. ಆದ್ರೆ ಅವೆಲ್ಲ ಊಹಾಪೋಹ ಆಗಿದ್ದು ಅವರು ಬಿಜೆಪಿಯಲ್ಲೇ ಇರುತ್ತಾರೆ. ಅವರ ಕ್ಷೇತ್ರದ ಭಾಗದಲ್ಲಿ 3 ಬಾರಿ ಶಾಸಕನಾಗಿದ್ದೆ. ಹೀಗಾಗಿ ಅವರ ಮತ್ತು ನನ್ನ ನಡುವೆ ಒಳ್ಳೆಯ ಒಡನಾಟವಿದ್ದು ನಿತ್ಯ ಎರಡು ಟೈಮ್ ಕಾಲ್ ಮಾಡುತ್ತಾರೆ. ಜಸ್ಟ್ ಈಗಲೂ ಮಾತನಾಡಿ ಬಂದು ಭೇಟಿಯಾಗುವಂತೆ ಸೂಚಿಸಿದ್ದೇನೆ. ಮುಂದೆ ಏನಾಗುತ್ತೆಂದು ಕಾದು ನೋಡೋಣ ಎಂದು ಆರ್ ಅಶೋಕ್ ಹೇಳಿದ್ದಾರೆ.
ಇನ್ನು ಈ ಬಗ್ಗೆ ಸ್ವತಹ ಶಾಸಕ ಎಸ್.ಟಿ ಸೋಮಶೇಖರ್ ಅವರು ಪ್ರತಿಕ್ರಿಯೆ ನೀಡಿದ್ದು ನನಗೆ ಬಿಜೆಪಿ ಬಿಟ್ಟು ಹೋಗುವ ಮನಸ್ಸಿಲ್ಲ. ಆದ್ರೆ ಕೆಲವರು ಪಕ್ಷ ಬಿಟ್ಟು ಹೋಗುತ್ತೇವೆಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಎಲೆಕ್ಷನ್ ವೇಳೆಯು ಅಪಪ್ರಚಾರ ಮಾಡಿದ್ದರು. ಇದರ ಹಿಂದೆ ಅಮಾನತು ಆದ ವ್ಯಕ್ತಿ ಕೆಲಸ ಮಾಡಿದ್ದು ಕ್ಷೇತ್ರದಲ್ಲಿ ಕೆಲವರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಸದ್ಯಕ್ಕೆ ಲೋಕಸಭಾ ಎಲೆಕ್ಷನ್ಗೆ ಹೋಗುವ ಆಸಕ್ತಿಯೇನು ಇಲ್ಲ. ನನ್ನ ಮಗ ಕೂಡ ರಾಜಕೀಯಕ್ಕೆ ಬರಲ್ಲ. ದೆಹಲಿಯಿಂದ ಯಾವುದೇ ಫೋನ್ ಕರೆ ಬಂದಿಲ್ಲ. ಬಂದ್ರೆ ದೆಹಲಿಗೆ ಹೋಗ್ತೀನಿ ಎಂದು ಹೇಳಿದರು.
ಇದೇ ವೇಳೆ ತಮ್ಮ ಬೆಂಬಲಿಗರು ಕಾಂಗ್ರೆಸ್ಗೆ ಸೇರಿದ ಬಗ್ಗೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಯಾವುದೇ ಸಮಸ್ಯೆಯಿಲ್ಲ. ವಾರ್ಡ್ಗೆ ಒಬ್ಬರೋ, ಇಬ್ಬರೋ ಹೋದರೆ ಏನು ಆಗಲ್ಲ. ನಾನೇನು ರಾಜ್ಯಮಟ್ಟದ ನಾಯಕನಾಗಬೇಕು ಎಂದು ನನಗೇನು ಇಲ್ಲ. ಹೀಗಾಗಿ ಬಿಜೆಪಿಯಲ್ಲಿ ಯಾರೂ ತುಳಿಯಲ್ಲ. ನನ್ನ ಕ್ಷೇತ್ರದ ಬಗ್ಗೆ ನಾನು ಮಾತನಾಡುತ್ತೇನೆ. ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಬಗ್ಗೆ ಒಳ್ಳೆಯ ಮಾತನಾಡಿದ್ರೆ ಅದನ್ನು ಯಾರು ರಿಸ್ಟ್ರಿಕ್ಸನ್ ಮಾಡೋ ಆಗಿಲ್ಲ. ಈಗ ಕ್ಷೇತ್ರದಲ್ಲಿ ನೀರಿನ ಸಮಸ್ಯೆಯಿದೆ. ಆ ಬಗ್ಗೆ ಮಾತನಾಡಿದ್ರೆ ತಪ್ಪು ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ