newsfirstkannada.com

Manipur: ಮಣಿಪುರದತ್ತ ಪ್ರಯಾಣ ಬೆಳೆಸಿದ INDIA ಕೂಟ.. ಮಣಿಪುರಕ್ಕೆ ಹೊರಟಿರುವ 20 ನಾಯಕರು ಯಾರು?

Share :

29-07-2023

    ಮಣಿಪುರದಲ್ಲಿ ನಿನ್ನೆಯೂ ಹಿಂಸಾಚಾರ, ಶಾಂತಿಯೇ ಇಲ್ಲ..!

    16 ಪಕ್ಷಗಳ 20 ನಾಯಕರಿಂದ ಮಾಹಿತಿ ಸಂಗ್ರಹ

    ಸಂಸತ್​​ನಲ್ಲಿ ಮೋದಿ ಮಾತಾಡಿಸಲು ಪಟ್ಟು ಹಿಡಿದಿರುವ ವಿಪಕ್ಷ

ಮಣಿಪುರ ಹಿಂಸಾಚಾರ ಪ್ರಕರಣದ ಬಗ್ಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಪಟ್ಟು ಹಿಡಿದು ಕೂತಿರುವ ವಿಪಕ್ಷಗಳ ಕೂಟ INDIA, ವಾಸ್ತವ ಸ್ಥಿತಿ ಅರಿತುಕೊಳ್ಳಲು ಗಲಭೆಗಳು ನಡೆದ ಪ್ರದೇಶಗಳತ್ತ ಹೊರಟಿದೆ.

ಇವತ್ತು ಮತ್ತು ನಾಳೆ ಮುಂಗಾರು ಅಧಿವೇಶನಕ್ಕೆ ರಜೆ ಹಿನ್ನೆಲೆಯಲ್ಲಿ ಮಣಿಪುರದತ್ತ ಮುಖ ಮಾಡಿದೆ. ಒಟ್ಟು 16 ರಾಜಕೀಯ ಪಕ್ಷಗಳ 20 ನಾಯಕರು ಮಣಿಪುರಕ್ಕೆ ಹೊರಟಿದ್ದಾರೆ. ಮಣಿಪುರದ ಕಣಿವೆ, ಗುಡ್ಡಗಾಡು ಪ್ರದೇಶಗಳಿಗೆ ಇವರು ಭೇಟಿ ನೀಡಲಿದ್ದಾರೆ.

ಇಲ್ಲಿ ಮೈತೇಯಿ, ಕುಕಿ ಸಮುದಾಯದ ಜನರ ‌ಭೇಟಿಯಾಗಿ ವಸ್ತುಸ್ಥಿತಿ ಅರಿತುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಹಿಂಸಾಚಾರದ ಸಂತ್ರಸ್ತರಿರುವ ಕ್ಯಾಂಪ್​​ಗಳಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಅಂದ್ಹಾಗೆ ನಿನ್ನೆ ಕೂಡ ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜನರೇ ಶಸ್ತ್ರಾಸ್ತ್ರಗಳನ್ನು ಹಿಡಿದು ತಮ್ಮ ಊರುಗಳ ರಕ್ಷಣೆಗೆ ನಿಂತ ದೃಶ್ಯ ಸಾಮಾನ್ಯವಾಗಿದೆ. ಮೈತೇಯಿ- ಕುಕಿ ಸಮುದಾಯಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಯಾರೆಲ್ಲ ಹೋಗ್ತಿದ್ದಾರೆ..?

  1. ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್​​)
  2. ಗೌರವ್ ಗೊಗಯಿ (ಕಾಂಗ್ರೆಸ್​)
  3. ರಾಜೀವ್ ರಂಜನ್ (ಜೆಡಿಯು)
  4. ಸುಸ್ಮಿತಾ ದೇವ್ (ಟಿಎಂಸಿ)
  5. ಕಣಿಮೋಳಿ ಕರುಣಾನಿಧಿ (ಡಿಎಂಕೆ)
  6. ಸಂದೋಶ್ ಕುಮಾರ್ (ಸಿಪಿಐ)
  7. ಎಎ ರಹೀಮ್ (ಸಿಪಿಐ)
  8. ಮನೋಜ್ ಕುಮಾರ್ ಝಾ (ಆರ್​​ಜೆಡಿ)
  9. ಜಾವೆದ್ ಅಲಿ ಖಾನ್ (ಎಸ್​​ಪಿ)
  10. ಮಾಹುವಾ ಮಾಜಿ (ಜೆಎಂಎಂ)
  11. ಪಿಪಿ ಮೊಹಮ್ಮದ್ ಫಾಜಿಲ್ (ಎನ್​ಸಿಪಿ)
  12. ಅನಿಲ್ ಪ್ರಸಾದ್​ ಹೆಗಡೆ (ಜೆಡಿಯು)
  13. ಇಟಿ ಮೊಹ್ಮದ್ ಬಶೀರ್​ (ಐಯುಎಂಎಲ್)
  14. ಎನ್​ಕೆ ಪ್ರೇಮಚಂದ್ರನ್ (ಆರ್​​ಎಸ್​ಪಿ)
  15. ಸುಶೀಲ್ ಗುಪ್ತ (ಆಮ್​​ ಆದ್ಮಿ ಪಾರ್ಟಿ)
  16. ಅರವಿಂದ್ ಸಾವಂತ್ (ಶಿವ ಸೇನಾ)
  17. ಡಿ.ರವಿ ಕುಮಾರ್ (ವಿಸಿಕೆ)
  18. ಥಿರು ಥೋಲ್ ಥಿರುಮವಲವನ್ (ವಿಸಿಕೆ)
  19. ಜಯಂತ್ ಸಿಂಗ್ (ಆರ್​ಎಲ್​ಡಿ)
  20. ಪೌಲೋ ದೇವಿ (ಕಾಂಗ್ರೆಸ್​)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Manipur: ಮಣಿಪುರದತ್ತ ಪ್ರಯಾಣ ಬೆಳೆಸಿದ INDIA ಕೂಟ.. ಮಣಿಪುರಕ್ಕೆ ಹೊರಟಿರುವ 20 ನಾಯಕರು ಯಾರು?

https://newsfirstlive.com/wp-content/uploads/2023/07/MANIPUR-3-2.jpg

    ಮಣಿಪುರದಲ್ಲಿ ನಿನ್ನೆಯೂ ಹಿಂಸಾಚಾರ, ಶಾಂತಿಯೇ ಇಲ್ಲ..!

    16 ಪಕ್ಷಗಳ 20 ನಾಯಕರಿಂದ ಮಾಹಿತಿ ಸಂಗ್ರಹ

    ಸಂಸತ್​​ನಲ್ಲಿ ಮೋದಿ ಮಾತಾಡಿಸಲು ಪಟ್ಟು ಹಿಡಿದಿರುವ ವಿಪಕ್ಷ

ಮಣಿಪುರ ಹಿಂಸಾಚಾರ ಪ್ರಕರಣದ ಬಗ್ಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಪಟ್ಟು ಹಿಡಿದು ಕೂತಿರುವ ವಿಪಕ್ಷಗಳ ಕೂಟ INDIA, ವಾಸ್ತವ ಸ್ಥಿತಿ ಅರಿತುಕೊಳ್ಳಲು ಗಲಭೆಗಳು ನಡೆದ ಪ್ರದೇಶಗಳತ್ತ ಹೊರಟಿದೆ.

ಇವತ್ತು ಮತ್ತು ನಾಳೆ ಮುಂಗಾರು ಅಧಿವೇಶನಕ್ಕೆ ರಜೆ ಹಿನ್ನೆಲೆಯಲ್ಲಿ ಮಣಿಪುರದತ್ತ ಮುಖ ಮಾಡಿದೆ. ಒಟ್ಟು 16 ರಾಜಕೀಯ ಪಕ್ಷಗಳ 20 ನಾಯಕರು ಮಣಿಪುರಕ್ಕೆ ಹೊರಟಿದ್ದಾರೆ. ಮಣಿಪುರದ ಕಣಿವೆ, ಗುಡ್ಡಗಾಡು ಪ್ರದೇಶಗಳಿಗೆ ಇವರು ಭೇಟಿ ನೀಡಲಿದ್ದಾರೆ.

ಇಲ್ಲಿ ಮೈತೇಯಿ, ಕುಕಿ ಸಮುದಾಯದ ಜನರ ‌ಭೇಟಿಯಾಗಿ ವಸ್ತುಸ್ಥಿತಿ ಅರಿತುಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಹಿಂಸಾಚಾರದ ಸಂತ್ರಸ್ತರಿರುವ ಕ್ಯಾಂಪ್​​ಗಳಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಅಂದ್ಹಾಗೆ ನಿನ್ನೆ ಕೂಡ ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜನರೇ ಶಸ್ತ್ರಾಸ್ತ್ರಗಳನ್ನು ಹಿಡಿದು ತಮ್ಮ ಊರುಗಳ ರಕ್ಷಣೆಗೆ ನಿಂತ ದೃಶ್ಯ ಸಾಮಾನ್ಯವಾಗಿದೆ. ಮೈತೇಯಿ- ಕುಕಿ ಸಮುದಾಯಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಯಾರೆಲ್ಲ ಹೋಗ್ತಿದ್ದಾರೆ..?

  1. ಅಧೀರ್ ರಂಜನ್ ಚೌಧರಿ (ಕಾಂಗ್ರೆಸ್​​)
  2. ಗೌರವ್ ಗೊಗಯಿ (ಕಾಂಗ್ರೆಸ್​)
  3. ರಾಜೀವ್ ರಂಜನ್ (ಜೆಡಿಯು)
  4. ಸುಸ್ಮಿತಾ ದೇವ್ (ಟಿಎಂಸಿ)
  5. ಕಣಿಮೋಳಿ ಕರುಣಾನಿಧಿ (ಡಿಎಂಕೆ)
  6. ಸಂದೋಶ್ ಕುಮಾರ್ (ಸಿಪಿಐ)
  7. ಎಎ ರಹೀಮ್ (ಸಿಪಿಐ)
  8. ಮನೋಜ್ ಕುಮಾರ್ ಝಾ (ಆರ್​​ಜೆಡಿ)
  9. ಜಾವೆದ್ ಅಲಿ ಖಾನ್ (ಎಸ್​​ಪಿ)
  10. ಮಾಹುವಾ ಮಾಜಿ (ಜೆಎಂಎಂ)
  11. ಪಿಪಿ ಮೊಹಮ್ಮದ್ ಫಾಜಿಲ್ (ಎನ್​ಸಿಪಿ)
  12. ಅನಿಲ್ ಪ್ರಸಾದ್​ ಹೆಗಡೆ (ಜೆಡಿಯು)
  13. ಇಟಿ ಮೊಹ್ಮದ್ ಬಶೀರ್​ (ಐಯುಎಂಎಲ್)
  14. ಎನ್​ಕೆ ಪ್ರೇಮಚಂದ್ರನ್ (ಆರ್​​ಎಸ್​ಪಿ)
  15. ಸುಶೀಲ್ ಗುಪ್ತ (ಆಮ್​​ ಆದ್ಮಿ ಪಾರ್ಟಿ)
  16. ಅರವಿಂದ್ ಸಾವಂತ್ (ಶಿವ ಸೇನಾ)
  17. ಡಿ.ರವಿ ಕುಮಾರ್ (ವಿಸಿಕೆ)
  18. ಥಿರು ಥೋಲ್ ಥಿರುಮವಲವನ್ (ವಿಸಿಕೆ)
  19. ಜಯಂತ್ ಸಿಂಗ್ (ಆರ್​ಎಲ್​ಡಿ)
  20. ಪೌಲೋ ದೇವಿ (ಕಾಂಗ್ರೆಸ್​)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More