ಭಾರತ-ಪಾಕ್ ಪಂದ್ಯ ನೋಡಲು ಹೋಟೆಲ್ಗಳಿಗೆ ಡಿಮ್ಯಾಂಡ್
ಪಾಕ್ ಸರ್ಕಾರದ ನಿರ್ಧಾರದಿಂದ ಫ್ಯಾನ್ಸ್ಗೆ ಮೋಸ ಆಗುತ್ತಾ..?
ಇಂಡೋ- ಪಾಕಿಸ್ತಾನ ಕ್ರಿಕೆಟ್ ಕದನ ನಡೆಯೋದು ಅನುಮಾನ
ಏಕದಿನ ವಿಶ್ವಕಪ್ ಷೆಡ್ಯೂಲ್ ಅನೌನ್ಸ್ ಆಗಿ 2 ವಾರಗಳೇ ಕಳೆದಿವೆ. ಬಿಸಿಸಿಐ & ಐಸಿಸಿ ಸಿದ್ಧತೆ ಆರಂಭಿಸಿದೆ. ಇದರ ನಡುವೆ ಪಾಕಿಸ್ತಾನ ಮತ್ತೆ ಖ್ಯಾತೆ ತಗೆದಿದೆ. ಇದ್ರಿಂದಾಗಿ, ಇಂಡೋ- ಪಾಕ್ ಹೈವೋಲ್ಟೆಜ್ ಕದನ ನಡೆಯುತ್ತಾ, ನಡಿಯಲ್ವಾ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿದೆ.
ಅಕ್ಟೋಬರ್ 15 ಈ ಒಂದು ದಿನಕ್ಕಾಗಿ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಾಕಂದ್ರೆ, ಅಂದು ಬ್ಯಾಟಲ್ ಫೀಲ್ಡ್ನಲ್ಲಿ ಮುಖಾಮುಖಿ ಆಗೋದು ಭಾರತ -ಪಾಕಿಸ್ತಾನ. ಈ ಪ್ರತಿಷ್ಟೆಯ ಕದನದಲ್ಲಿ ಉಭಯ ತಂಡಗಳಿಗೆ ಗೆಲುವೇ ಗುರಿ.
2 ತಿಂಗಳ ಮೊದಲೇ ಮುಗಿಲು ಮುಟ್ಟಿದ ಕ್ರೇಜ್..!
ವಿಶ್ವಕಪ್ ಫೈನಲ್ ಪಂದ್ಯವನ್ನ ನೋಡ್ತಿವೋ ಇಲ್ವೋ ಗೊತ್ತಿಲ್ಲ. ಇಂಡೋ ಪಾಕ್ ಪಂದ್ಯವನ್ನ ನೋಡಬೇಕು ಅನ್ನೋದು ವಿಶ್ವಾದ್ಯಂತ ಇರೋ ಅಭಿಮಾನಿಗಳ ಮಹದಾಸೆ. ಈಗಾಗಲೇ ಗುಜರಾತ್ ಅಹಮದಾಬಾದ್ ನಗರದ ಹೋಟೆಲ್ಗಳು, ಆ ಒಂದು ದಿನದ ವಾಸ್ತವ್ಯಕ್ಕೆ ಭಾರೀ ಬೆಲೆ ನಿಗದಿ ಪಡಿಸಿವೆ. 1 ದಿನಕ್ಕೆ 5 ಸಾವಿರ ಇದ್ದ ರೂಮ್ ಬಾಡಿಗೆ ಈಗ 50 ಸಾವಿರದ ಗಡಿ ದಾಟಿದ್ಯಂತೆ. ಅಷ್ಟಾದ್ರೂ, ದಿನದಿಂದ ದಿನಕ್ಕೆ ಬುಕ್ಕಿಂಗ್ ಹೆಚ್ಚಾಗುತ್ತಲೇ ಇದೆ. ಇಂಡೋ- ಪಾಕ್ ಪಂದ್ಯದ ಕ್ರೇಜ್ ಹೇಗಿದೆ ಅನ್ನೋದಕ್ಕೆ ಇದೇ ಸಾಕ್ಷಿ.
ಕಾದು ಕುಳಿತ ಫ್ಯಾನ್ಸ್ಗೆ ಕಾದಿದ್ಯಾ ನಿರಾಸೆ..?
ಇಂಡೋ- ಪಾಕ್ ವಾರ್ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ, ಸದ್ಯದ ಸಿಚ್ಯುವೇಶನ್ ಏನಾಗಿದೆ ಅಂದ್ರೆ, ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಆಡೋದೆ ಅನುಮಾನವಾಗಿ ಬಿಟ್ಟಿದೆ. ಭಾರತಕ್ಕೆ ಬರೋ ವಿಚಾರದಲ್ಲಿ ಪಾಕ್ ಹೊಸ ತಗಾದೆ ತೆಗೆದಿದೆ. ಭಾರತ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರಲ್ಲ ಅಂದ್ರೆ ನಾವೂ ವಿಶ್ವಕಪ್ ಆಡೋಕೆ ಭಾರತಕ್ಕೆ ಬರಲ್ಲ ಅಂತಾ ಖ್ಯಾತೆ ತೆಗೆದಿದೆ.
ಯೂ ಟರ್ನ್ ಹೊಡೆದಿದ್ಯಾಕೆ ಪಾಕಿಸ್ತಾನ.?
ಏಷ್ಯಾಕಪ್ ಆಯೋಜನೆ ಸಂಬಂಧಿಸಿದಂತೆ ಆರಂಭದಿಂಲೇ ಹಗ್ಗ ಜಗ್ಗಾಟ ನಡೆದಿತ್ತು. ಭದ್ರತಾ ಕಾರಣದಿಂದ ಟೀಮ್ ಇಂಡಿಯಾ ಪಾಕ್ಗೆ ಬರಲ್ಲ ಅಂದ್ರೆ, ಪಾಕ್ ಬರಲೇ ಬೇಕು ಪಟ್ಟು ಹಿಡಿದಿತ್ತು. ಅಂತಿಮವಾಗಿ ಈ ಹಿಂದಿನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮಾಜಿ ಅಧ್ಯಕ್ಷ ನಜಮ್ ಸೇಥಿ, ಹೈಬ್ರಿಡ್ ಮಾದರಿಗೆ ಒಪ್ಪಿದ್ರು. ಇದರ ಪ್ರಕಾರ ಏಷ್ಯಾಕಪ್ ಟೂರ್ನಿಯ ಕೆಲ ಪಂದ್ಯಗಳು ಪಾಕ್ನಲ್ಲಿ, ಇನ್ನು ಕೆಲವು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ಎಲ್ಲ ಪಂದ್ಯಗಳನ್ನೂ ತಟಸ್ಥ ಸ್ಥಳ ಶ್ರೀಲಂಕಾದಲ್ಲಿ ಆಡಲಿದೆ. ಆದ್ರೆ, ಈಗ ಪಿಸಿಬಿ ಚಿಂದಿ ಚಿತ್ರಾನ್ನಾ ಆಗಿದ್ದು, ಹೊಸ ಮ್ಯಾನೇಜ್ಮೆಂಟ್ ಮತ್ತೆ ಖ್ಯಾತೆ ತೆಗೆದಿದೆ.
ಸದ್ಯ ಪಿಸಿಬಿ ಎಲೆಕ್ಷನ್ ಕಾನೂನಾತ್ಮಕ ಸಮಸ್ಯೆಗೆ ತುತ್ತಾಗಿದೆ. ಹೀಗಾಗಿ ಸರ್ಕಾರದ ಅಧೀನಕ್ಕೆ ಕ್ರಿಕೆಟ್ ಬೋರ್ಡ್ ಒಳಪಟ್ಟಿದೆ. ಝಾಕಾ ಅಶ್ರಪ್ ನೇತೃತ್ವದ 10 ಮಂದಿಯ ಸದಸ್ಯರನ್ನ ಪಾಕ್ ಪ್ರೈಮ್ ಮಿನಿಸ್ಟರ್, ಮ್ಯಾನೇಜ್ಮೆಂಟ್ ಸಮಿತಿಯನ್ನಾಗಿ ನೇಮಿಸಿದ್ದಾರೆ. ಹಾಗಿದ್ರೂ, ಎಲ್ಲ ಅಧಿಕಾರ ಸರ್ಕಾದ ಕೈಯಲ್ಲಿದ್ದು ಕ್ರೀಡಾ ಸಚಿವ ಹೊಸ ಖ್ಯಾತೆ ತೆಗೆದಿದ್ದಾರೆ.
‘ತಟಸ್ಥ ಸ್ಥಳದಲ್ಲಿ ವಿಶ್ವಕಪ್ ಆಡ್ತೇವೆ’
‘ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನನ್ನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನಂದ್ರೆ, ಭಾರತ ಏಷ್ಯಾಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ರೆ, ನಾವೂ ಕೂಡ ವಿಶ್ವಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲಿದ್ದೇವೆ’
ಎಹ್ಸಾನ್ ಮಜಾರಿ, ಪಾಕಿಸ್ತಾನ ಕ್ರೀಡಾ ಸಚಿವ
ಒಂದೆಡೆ ಏಷ್ಯಾಕಪ್ಗೆ ನೀವು ಬರದಿದ್ರೆ, ವಿಶ್ವಕಪ್ ಆಡೋಕೆ ನಾವು ಬರಲ್ಲ ಅಂತಿರೋ ಪಾಕ್ ಬೋರ್ಡ್ ಇನ್ನೊಂದೆಡೆ ಸೆಕ್ಯೂರಿಟಿ ಪರಿಶೀಲನೆಗೆ ಭಾರತಕ್ಕೆ ಒಂದು ಟೀಮ್ ಕಳಿಸಿದ್ಯಂತೆ. ಅದು ನೀಡೋ ರಿಪೋರ್ಟ್ ಆದಾರದಲ್ಲಿ ನಿರ್ಧಾರ ತೆಗೆದುಕೊಳ್ಳೋದು ಪಾಕ್ ಬೋರ್ಡ್ನ ಲೆಕ್ಕಾಚಾರವಾಗಿದೆ.
ಪಾಕ್ ಬರಲಿಲ್ಲ ಅಂದ್ರೂ ನಡೆಯುತ್ತೆ ವಿಶ್ವಕಪ್.!
ಪಾಕ್ ಬೋರ್ಡ್ ವಿಶ್ವಕಪ್ಗೆ ಬರಲ್ಲ ಅಂದ್ರೆ, ಬಿಸಿಸಿಐ ತಲೆ ಕೆಡಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಇದ್ದಂತಿಲ್ಲ. ಈಗಾಗಲೇ ಒಂದು ವೇಳೆ ಪಾಕ್ ಟೂರ್ನಿಯಿಂದ ಹಿಂದೆ ಸರಿದ್ರೆ, ಬಿಸಿಸಿಐ ಪ್ಲಾನ್- ಬಿ ಅನ್ನೂ ರೆಡಿಯಿಟ್ಟುಕೊಂಡಿದೆ ಎನ್ನಲಾಗ್ತಿದೆ. ಪಾಕ್ ಅಂತಿಮ ನಿರ್ಧಾರ ಪ್ರಕಟಿಸಿದ ಬಳಿಕ ಐಸಿಸಿ ಜೊತೆ ಚರ್ಚಿಸಿ ಪ್ಲಾನ್ ಬಿ ಎಕ್ಸಿಕ್ಯೂಟ್ ಮಾಡಲು ಬಿಸಿಸಿಐ ಸಜ್ಜಾಗಿದೆ ಅನ್ನೋದು ಮೂಲದ ಮಾಹಿತಿಯಾಗಿದೆ.
ರಾಜಕೀಯ ಮೇಲಾಟಕ್ಕೆ ಕ್ರಿಕೆಟ್ ಬಲಿಯಾಗುತ್ತಾ.?
ಉಭಯ ರಾಷ್ಟ್ರಗಳ ಸರ್ಕಾರಗಳು ಪಟ್ಟು ಸಡಿಸುವಂತೆ ಕಾಣ್ತಿಲ್ಲ. ರಾಜಕೀಯ ಗುದ್ದಾಟಕ್ಕೆ ಕ್ರಿಕೆಟ್ ಬಲಿಯಾಗುವ ಸಾಧ್ಯತೆಯೇ ದಟ್ಟವಾಗಿದೆ. ಇಂಡೋ- ಪಾಕ್ ಮುಖಾಮುಖಿ ಆಗಲಿಲ್ಲ ಅಂದ್ರೆ, ಏಷ್ಯಾಕಪ್- ವಿಶ್ವಕಪ್ ಎರಡೂ ಟೂರ್ನಿಗಳು ಕ್ರೇಜ್ ಕುಂದಲಿದೆ. ಇಡೀ ಟೂರ್ನಿ ಸಪ್ಪೆಯಾಗಲಿದೆ. ಫ್ಯಾನ್ಸ್ಗೆ ಆಗೋ ನಿರಾಸೆಯನ್ನ ಪದಗಳಲ್ಲಿ ಹೇಳೋಕೆ ಸಾಧ್ಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಭಾರತ-ಪಾಕ್ ಪಂದ್ಯ ನೋಡಲು ಹೋಟೆಲ್ಗಳಿಗೆ ಡಿಮ್ಯಾಂಡ್
ಪಾಕ್ ಸರ್ಕಾರದ ನಿರ್ಧಾರದಿಂದ ಫ್ಯಾನ್ಸ್ಗೆ ಮೋಸ ಆಗುತ್ತಾ..?
ಇಂಡೋ- ಪಾಕಿಸ್ತಾನ ಕ್ರಿಕೆಟ್ ಕದನ ನಡೆಯೋದು ಅನುಮಾನ
ಏಕದಿನ ವಿಶ್ವಕಪ್ ಷೆಡ್ಯೂಲ್ ಅನೌನ್ಸ್ ಆಗಿ 2 ವಾರಗಳೇ ಕಳೆದಿವೆ. ಬಿಸಿಸಿಐ & ಐಸಿಸಿ ಸಿದ್ಧತೆ ಆರಂಭಿಸಿದೆ. ಇದರ ನಡುವೆ ಪಾಕಿಸ್ತಾನ ಮತ್ತೆ ಖ್ಯಾತೆ ತಗೆದಿದೆ. ಇದ್ರಿಂದಾಗಿ, ಇಂಡೋ- ಪಾಕ್ ಹೈವೋಲ್ಟೆಜ್ ಕದನ ನಡೆಯುತ್ತಾ, ನಡಿಯಲ್ವಾ ಅನ್ನೋ ಅನುಮಾನ ಅಭಿಮಾನಿಗಳಲ್ಲಿ ಹುಟ್ಟಿದೆ.
ಅಕ್ಟೋಬರ್ 15 ಈ ಒಂದು ದಿನಕ್ಕಾಗಿ ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಾಕಂದ್ರೆ, ಅಂದು ಬ್ಯಾಟಲ್ ಫೀಲ್ಡ್ನಲ್ಲಿ ಮುಖಾಮುಖಿ ಆಗೋದು ಭಾರತ -ಪಾಕಿಸ್ತಾನ. ಈ ಪ್ರತಿಷ್ಟೆಯ ಕದನದಲ್ಲಿ ಉಭಯ ತಂಡಗಳಿಗೆ ಗೆಲುವೇ ಗುರಿ.
2 ತಿಂಗಳ ಮೊದಲೇ ಮುಗಿಲು ಮುಟ್ಟಿದ ಕ್ರೇಜ್..!
ವಿಶ್ವಕಪ್ ಫೈನಲ್ ಪಂದ್ಯವನ್ನ ನೋಡ್ತಿವೋ ಇಲ್ವೋ ಗೊತ್ತಿಲ್ಲ. ಇಂಡೋ ಪಾಕ್ ಪಂದ್ಯವನ್ನ ನೋಡಬೇಕು ಅನ್ನೋದು ವಿಶ್ವಾದ್ಯಂತ ಇರೋ ಅಭಿಮಾನಿಗಳ ಮಹದಾಸೆ. ಈಗಾಗಲೇ ಗುಜರಾತ್ ಅಹಮದಾಬಾದ್ ನಗರದ ಹೋಟೆಲ್ಗಳು, ಆ ಒಂದು ದಿನದ ವಾಸ್ತವ್ಯಕ್ಕೆ ಭಾರೀ ಬೆಲೆ ನಿಗದಿ ಪಡಿಸಿವೆ. 1 ದಿನಕ್ಕೆ 5 ಸಾವಿರ ಇದ್ದ ರೂಮ್ ಬಾಡಿಗೆ ಈಗ 50 ಸಾವಿರದ ಗಡಿ ದಾಟಿದ್ಯಂತೆ. ಅಷ್ಟಾದ್ರೂ, ದಿನದಿಂದ ದಿನಕ್ಕೆ ಬುಕ್ಕಿಂಗ್ ಹೆಚ್ಚಾಗುತ್ತಲೇ ಇದೆ. ಇಂಡೋ- ಪಾಕ್ ಪಂದ್ಯದ ಕ್ರೇಜ್ ಹೇಗಿದೆ ಅನ್ನೋದಕ್ಕೆ ಇದೇ ಸಾಕ್ಷಿ.
ಕಾದು ಕುಳಿತ ಫ್ಯಾನ್ಸ್ಗೆ ಕಾದಿದ್ಯಾ ನಿರಾಸೆ..?
ಇಂಡೋ- ಪಾಕ್ ವಾರ್ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ, ಸದ್ಯದ ಸಿಚ್ಯುವೇಶನ್ ಏನಾಗಿದೆ ಅಂದ್ರೆ, ಪಾಕಿಸ್ತಾನ ವಿಶ್ವಕಪ್ ಟೂರ್ನಿಯಲ್ಲಿ ಆಡೋದೆ ಅನುಮಾನವಾಗಿ ಬಿಟ್ಟಿದೆ. ಭಾರತಕ್ಕೆ ಬರೋ ವಿಚಾರದಲ್ಲಿ ಪಾಕ್ ಹೊಸ ತಗಾದೆ ತೆಗೆದಿದೆ. ಭಾರತ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ಬರಲ್ಲ ಅಂದ್ರೆ ನಾವೂ ವಿಶ್ವಕಪ್ ಆಡೋಕೆ ಭಾರತಕ್ಕೆ ಬರಲ್ಲ ಅಂತಾ ಖ್ಯಾತೆ ತೆಗೆದಿದೆ.
ಯೂ ಟರ್ನ್ ಹೊಡೆದಿದ್ಯಾಕೆ ಪಾಕಿಸ್ತಾನ.?
ಏಷ್ಯಾಕಪ್ ಆಯೋಜನೆ ಸಂಬಂಧಿಸಿದಂತೆ ಆರಂಭದಿಂಲೇ ಹಗ್ಗ ಜಗ್ಗಾಟ ನಡೆದಿತ್ತು. ಭದ್ರತಾ ಕಾರಣದಿಂದ ಟೀಮ್ ಇಂಡಿಯಾ ಪಾಕ್ಗೆ ಬರಲ್ಲ ಅಂದ್ರೆ, ಪಾಕ್ ಬರಲೇ ಬೇಕು ಪಟ್ಟು ಹಿಡಿದಿತ್ತು. ಅಂತಿಮವಾಗಿ ಈ ಹಿಂದಿನ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ನ ಮಾಜಿ ಅಧ್ಯಕ್ಷ ನಜಮ್ ಸೇಥಿ, ಹೈಬ್ರಿಡ್ ಮಾದರಿಗೆ ಒಪ್ಪಿದ್ರು. ಇದರ ಪ್ರಕಾರ ಏಷ್ಯಾಕಪ್ ಟೂರ್ನಿಯ ಕೆಲ ಪಂದ್ಯಗಳು ಪಾಕ್ನಲ್ಲಿ, ಇನ್ನು ಕೆಲವು ಶ್ರೀಲಂಕಾದಲ್ಲಿ ನಡೆಯಲಿವೆ. ಭಾರತ ಎಲ್ಲ ಪಂದ್ಯಗಳನ್ನೂ ತಟಸ್ಥ ಸ್ಥಳ ಶ್ರೀಲಂಕಾದಲ್ಲಿ ಆಡಲಿದೆ. ಆದ್ರೆ, ಈಗ ಪಿಸಿಬಿ ಚಿಂದಿ ಚಿತ್ರಾನ್ನಾ ಆಗಿದ್ದು, ಹೊಸ ಮ್ಯಾನೇಜ್ಮೆಂಟ್ ಮತ್ತೆ ಖ್ಯಾತೆ ತೆಗೆದಿದೆ.
ಸದ್ಯ ಪಿಸಿಬಿ ಎಲೆಕ್ಷನ್ ಕಾನೂನಾತ್ಮಕ ಸಮಸ್ಯೆಗೆ ತುತ್ತಾಗಿದೆ. ಹೀಗಾಗಿ ಸರ್ಕಾರದ ಅಧೀನಕ್ಕೆ ಕ್ರಿಕೆಟ್ ಬೋರ್ಡ್ ಒಳಪಟ್ಟಿದೆ. ಝಾಕಾ ಅಶ್ರಪ್ ನೇತೃತ್ವದ 10 ಮಂದಿಯ ಸದಸ್ಯರನ್ನ ಪಾಕ್ ಪ್ರೈಮ್ ಮಿನಿಸ್ಟರ್, ಮ್ಯಾನೇಜ್ಮೆಂಟ್ ಸಮಿತಿಯನ್ನಾಗಿ ನೇಮಿಸಿದ್ದಾರೆ. ಹಾಗಿದ್ರೂ, ಎಲ್ಲ ಅಧಿಕಾರ ಸರ್ಕಾದ ಕೈಯಲ್ಲಿದ್ದು ಕ್ರೀಡಾ ಸಚಿವ ಹೊಸ ಖ್ಯಾತೆ ತೆಗೆದಿದ್ದಾರೆ.
‘ತಟಸ್ಥ ಸ್ಥಳದಲ್ಲಿ ವಿಶ್ವಕಪ್ ಆಡ್ತೇವೆ’
‘ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನನ್ನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ನನ್ನ ವೈಯಕ್ತಿಕ ಅಭಿಪ್ರಾಯ ಏನಂದ್ರೆ, ಭಾರತ ಏಷ್ಯಾಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ರೆ, ನಾವೂ ಕೂಡ ವಿಶ್ವಕಪ್ ಟೂರ್ನಿಯನ್ನ ತಟಸ್ಥ ಸ್ಥಳದಲ್ಲಿ ಆಡಲಿದ್ದೇವೆ’
ಎಹ್ಸಾನ್ ಮಜಾರಿ, ಪಾಕಿಸ್ತಾನ ಕ್ರೀಡಾ ಸಚಿವ
ಒಂದೆಡೆ ಏಷ್ಯಾಕಪ್ಗೆ ನೀವು ಬರದಿದ್ರೆ, ವಿಶ್ವಕಪ್ ಆಡೋಕೆ ನಾವು ಬರಲ್ಲ ಅಂತಿರೋ ಪಾಕ್ ಬೋರ್ಡ್ ಇನ್ನೊಂದೆಡೆ ಸೆಕ್ಯೂರಿಟಿ ಪರಿಶೀಲನೆಗೆ ಭಾರತಕ್ಕೆ ಒಂದು ಟೀಮ್ ಕಳಿಸಿದ್ಯಂತೆ. ಅದು ನೀಡೋ ರಿಪೋರ್ಟ್ ಆದಾರದಲ್ಲಿ ನಿರ್ಧಾರ ತೆಗೆದುಕೊಳ್ಳೋದು ಪಾಕ್ ಬೋರ್ಡ್ನ ಲೆಕ್ಕಾಚಾರವಾಗಿದೆ.
ಪಾಕ್ ಬರಲಿಲ್ಲ ಅಂದ್ರೂ ನಡೆಯುತ್ತೆ ವಿಶ್ವಕಪ್.!
ಪಾಕ್ ಬೋರ್ಡ್ ವಿಶ್ವಕಪ್ಗೆ ಬರಲ್ಲ ಅಂದ್ರೆ, ಬಿಸಿಸಿಐ ತಲೆ ಕೆಡಿಸಿಕೊಳ್ಳೋ ಲೆಕ್ಕಾಚಾರದಲ್ಲಿ ಇದ್ದಂತಿಲ್ಲ. ಈಗಾಗಲೇ ಒಂದು ವೇಳೆ ಪಾಕ್ ಟೂರ್ನಿಯಿಂದ ಹಿಂದೆ ಸರಿದ್ರೆ, ಬಿಸಿಸಿಐ ಪ್ಲಾನ್- ಬಿ ಅನ್ನೂ ರೆಡಿಯಿಟ್ಟುಕೊಂಡಿದೆ ಎನ್ನಲಾಗ್ತಿದೆ. ಪಾಕ್ ಅಂತಿಮ ನಿರ್ಧಾರ ಪ್ರಕಟಿಸಿದ ಬಳಿಕ ಐಸಿಸಿ ಜೊತೆ ಚರ್ಚಿಸಿ ಪ್ಲಾನ್ ಬಿ ಎಕ್ಸಿಕ್ಯೂಟ್ ಮಾಡಲು ಬಿಸಿಸಿಐ ಸಜ್ಜಾಗಿದೆ ಅನ್ನೋದು ಮೂಲದ ಮಾಹಿತಿಯಾಗಿದೆ.
ರಾಜಕೀಯ ಮೇಲಾಟಕ್ಕೆ ಕ್ರಿಕೆಟ್ ಬಲಿಯಾಗುತ್ತಾ.?
ಉಭಯ ರಾಷ್ಟ್ರಗಳ ಸರ್ಕಾರಗಳು ಪಟ್ಟು ಸಡಿಸುವಂತೆ ಕಾಣ್ತಿಲ್ಲ. ರಾಜಕೀಯ ಗುದ್ದಾಟಕ್ಕೆ ಕ್ರಿಕೆಟ್ ಬಲಿಯಾಗುವ ಸಾಧ್ಯತೆಯೇ ದಟ್ಟವಾಗಿದೆ. ಇಂಡೋ- ಪಾಕ್ ಮುಖಾಮುಖಿ ಆಗಲಿಲ್ಲ ಅಂದ್ರೆ, ಏಷ್ಯಾಕಪ್- ವಿಶ್ವಕಪ್ ಎರಡೂ ಟೂರ್ನಿಗಳು ಕ್ರೇಜ್ ಕುಂದಲಿದೆ. ಇಡೀ ಟೂರ್ನಿ ಸಪ್ಪೆಯಾಗಲಿದೆ. ಫ್ಯಾನ್ಸ್ಗೆ ಆಗೋ ನಿರಾಸೆಯನ್ನ ಪದಗಳಲ್ಲಿ ಹೇಳೋಕೆ ಸಾಧ್ಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ