ಸಿದ್ದರಾಮಯ್ಯರ ವರ್ಚಸ್ಸು ಬಳಸಿಕೊಳ್ಳಲು ಮೆಗಾ ಪ್ಲಾನ್
ಸಿದ್ದರಾಮಯ್ಯ ಹೆಸರು ಕೇಳಿಬರಲು ಇದೆ 8 ಕಾರಣಗಳು
ಯೋಗಿ ಮಾಡೆಲ್ನಂತೆ ಸದ್ದು ಮಾಡುತ್ತಾ ‘ಸಿದ್ದು ಮಾದರಿ’..!
ಬೆಂಗಳೂರು: ದೇಶದಲ್ಲಿ ಚುನಾವಣೆಯ ಗಾಳಿ ಬೀಸಲು ಶುರುವಾಗುತ್ತಿದ್ದಂತೆ ಪ್ರಮುಖವಾಗಿ ಯೋಗಿ ಮಾಡೆಲ್, ಗುಜರಾತ್ ಮಾಡೆಲ್, ದೆಹಲಿ ಮಾಡೆಲ್ ಹಾಗೂ ಮೋದಿ ಮೇನಿಯಾ, ಯೋಗಿ ಹವಾ, ಕೇಜ್ರಿವಾಲ್ ಹವಾ ಎಂಬ ವಿಚಾರಗಳು ಚರ್ಚೆಯ ಕೇಂದ್ರಬಿಂದು ಆಗುತ್ತವೆ. ಇನ್ಮುಂದೆ ಚುನಾವಣಾ ಸಂದರ್ಭದಲ್ಲಿ ಈ ಎಲ್ಲಾ ಚರ್ಚಾ ವಿಷಯಗಳ ಜೊತೆಗೆ ಸಿದ್ದರಾಮಯ್ಯ ಅವರ ಹೆಸರು ಕೂಡ ಕೇಳಿಬಂದರೂ ಅಚ್ಚರಿ ಇಲ್ಲ!
ರಾಜಕೀಯ ವಿಶ್ಲೇಷಕರ ವಾದ..!
ಮಾರ್ಚ್ 10 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರಿಗಿದ್ದ ವರ್ಚಸ್ಸು ಹಾಗೂ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ‘ಗ್ಯಾರಂಟಿ ಯೋಜನೆಗಳು’ ಅನ್ನೋದು ರಾಜಕೀಯ ವಿಶ್ಲೇಷಕರ ವಾದ.
ಪ್ಯಾನ್ ಇಂಡಿಯಾ ಸಿದ್ದರಾಮಯ್ಯ..!
ಇದೀಗ ಸಿದ್ದರಾಮಯ್ಯ ಅವರ ಇಮೇಜ್ ಇಟ್ಟುಕೊಂಡೇ ದೇಶದಾದ್ಯಂತ ಚುನಾವಣೆ ಎದುರಿಸಲು ಕಾಂಗ್ರೆಸ್ನಲ್ಲಿ ಪ್ಲಾನ್ ನಡೀತಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರ ‘ಮಾದರಿ ಆಡಳಿತ’ವನ್ನು ದೇಶದ ಜನರ ಮುಂದೆ ಇಟ್ಟು ಮತದಾರರ ಎನ್ಕ್ಯಾಶ್ ಮಾಡಲು ಕಾಂಗ್ರೆಸ್ ನಿರ್ಧರಿಸಿದ್ಯಂತೆ. ಇತರೆ ರಾಜ್ಯಗಳಲ್ಲೂ ಸಿದ್ದರಾಮಯ್ಯರ ಆಡಳಿತದ ಹೆಸರಲ್ಲೇ ಚುನಾವಣೆ ಎದುರಿಸಬೇಕು ಅನ್ನೋದು ಕಾಂಗ್ರೆಸ್ನ ಹಲವು ನಾಯಕರ ಅಭಿಪ್ರಾಯ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪ್ಲಾನ್ ಏನು..?
ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಸಮ ಆಗುತ್ತಿದೆ ಅನ್ನೋ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಸಂದೇಶವನ್ನು ರವಾನಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸೋಲನ್ನು ಕಂಡು ಹಂತಾಶೆಗೆ ಒಳಗಾಗಿದ್ದ ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಆಸೆಯನ್ನು ಚಿಗುರಿಸಿದೆ. ಕರ್ನಾಟಕದಲ್ಲಿ ಗೆಲುವು ಸಾಧಿಸಿದಲು ಪ್ರಯೋಗಿಸಿದ ಅಸ್ತ್ರವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಅನ್ನೋದ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದರಾಮಯ್ಯರ ವರ್ಚಸ್ಸು ಬಳಸಿಕೊಳ್ಳಲು ಮೆಗಾ ಪ್ಲಾನ್
ಸಿದ್ದರಾಮಯ್ಯ ಹೆಸರು ಕೇಳಿಬರಲು ಇದೆ 8 ಕಾರಣಗಳು
ಯೋಗಿ ಮಾಡೆಲ್ನಂತೆ ಸದ್ದು ಮಾಡುತ್ತಾ ‘ಸಿದ್ದು ಮಾದರಿ’..!
ಬೆಂಗಳೂರು: ದೇಶದಲ್ಲಿ ಚುನಾವಣೆಯ ಗಾಳಿ ಬೀಸಲು ಶುರುವಾಗುತ್ತಿದ್ದಂತೆ ಪ್ರಮುಖವಾಗಿ ಯೋಗಿ ಮಾಡೆಲ್, ಗುಜರಾತ್ ಮಾಡೆಲ್, ದೆಹಲಿ ಮಾಡೆಲ್ ಹಾಗೂ ಮೋದಿ ಮೇನಿಯಾ, ಯೋಗಿ ಹವಾ, ಕೇಜ್ರಿವಾಲ್ ಹವಾ ಎಂಬ ವಿಚಾರಗಳು ಚರ್ಚೆಯ ಕೇಂದ್ರಬಿಂದು ಆಗುತ್ತವೆ. ಇನ್ಮುಂದೆ ಚುನಾವಣಾ ಸಂದರ್ಭದಲ್ಲಿ ಈ ಎಲ್ಲಾ ಚರ್ಚಾ ವಿಷಯಗಳ ಜೊತೆಗೆ ಸಿದ್ದರಾಮಯ್ಯ ಅವರ ಹೆಸರು ಕೂಡ ಕೇಳಿಬಂದರೂ ಅಚ್ಚರಿ ಇಲ್ಲ!
ರಾಜಕೀಯ ವಿಶ್ಲೇಷಕರ ವಾದ..!
ಮಾರ್ಚ್ 10 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಈ ವೇಳೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯರಿಗಿದ್ದ ವರ್ಚಸ್ಸು ಹಾಗೂ ಚುನಾವಣೆ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ‘ಗ್ಯಾರಂಟಿ ಯೋಜನೆಗಳು’ ಅನ್ನೋದು ರಾಜಕೀಯ ವಿಶ್ಲೇಷಕರ ವಾದ.
ಪ್ಯಾನ್ ಇಂಡಿಯಾ ಸಿದ್ದರಾಮಯ್ಯ..!
ಇದೀಗ ಸಿದ್ದರಾಮಯ್ಯ ಅವರ ಇಮೇಜ್ ಇಟ್ಟುಕೊಂಡೇ ದೇಶದಾದ್ಯಂತ ಚುನಾವಣೆ ಎದುರಿಸಲು ಕಾಂಗ್ರೆಸ್ನಲ್ಲಿ ಪ್ಲಾನ್ ನಡೀತಿದೆ ಎನ್ನಲಾಗುತ್ತಿದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ಎದುರಾಗಲಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯರ ‘ಮಾದರಿ ಆಡಳಿತ’ವನ್ನು ದೇಶದ ಜನರ ಮುಂದೆ ಇಟ್ಟು ಮತದಾರರ ಎನ್ಕ್ಯಾಶ್ ಮಾಡಲು ಕಾಂಗ್ರೆಸ್ ನಿರ್ಧರಿಸಿದ್ಯಂತೆ. ಇತರೆ ರಾಜ್ಯಗಳಲ್ಲೂ ಸಿದ್ದರಾಮಯ್ಯರ ಆಡಳಿತದ ಹೆಸರಲ್ಲೇ ಚುನಾವಣೆ ಎದುರಿಸಬೇಕು ಅನ್ನೋದು ಕಾಂಗ್ರೆಸ್ನ ಹಲವು ನಾಯಕರ ಅಭಿಪ್ರಾಯ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪ್ಲಾನ್ ಏನು..?
ಒಟ್ಟಾರೆ ದೇಶದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಸಮ ಆಗುತ್ತಿದೆ ಅನ್ನೋ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊಸ ಸಂದೇಶವನ್ನು ರವಾನಿಸಿದ್ದಾರೆ. ಪ್ರತಿ ಚುನಾವಣೆಯಲ್ಲೂ ಸೋಲನ್ನು ಕಂಡು ಹಂತಾಶೆಗೆ ಒಳಗಾಗಿದ್ದ ಕಾಂಗ್ರೆಸ್ ಹೈಕಮಾಂಡ್ಗೆ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊಸ ಆಸೆಯನ್ನು ಚಿಗುರಿಸಿದೆ. ಕರ್ನಾಟಕದಲ್ಲಿ ಗೆಲುವು ಸಾಧಿಸಿದಲು ಪ್ರಯೋಗಿಸಿದ ಅಸ್ತ್ರವನ್ನೇ ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಆದರೆ ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಅನ್ನೋದ ಕುತೂಹಲ ಮೂಡಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ