newsfirstkannada.com

ವಿಶ್ವಕಪ್​ಗೆ ರಿಷಬ್ ಪಂತ್​​ರನ್ನು ಆಡಿಸಲು ಬಿಸಿಸಿಐ ಶತ ಪ್ರಯತ್ನ; ಪಂತ್​​ ಜತೆಗೆ ಬುಮ್ರಾ, ಅಯ್ಯರ್​ ರೆಡಿ ಆಗ್ತಾರಾ?

Share :

17-06-2023

    ಒನ್ಡೇ ವಿಶ್ವಕಪ್​​​​​​​​​​​​​​​ಗೆ ಸಿದ್ಧಗೊಳಿಸಲು ಪಣತೊಟ್ಟ BCCI ಬಿಗ್​​ಬಾಸ್​ಗಳು ..!

    ವಿಶ್ವಕಪ್​ಗೆ ಟೆರರ್ ಬ್ಯಾಟ್ಸ್​​ಮನ್​​​​​​​​​ ಫುಲ್​​ ಫಿಟ್ ಆಗೋದು ಗ್ಯಾರಂಟಿನಾ?

    ಮನೆಯಲ್ಲಿನ ಮೆಟ್ಟಿಲುಗಳನ್ನು ಮೆಲ್ಲಗೆ ಏರಲು ಪ್ರಾರಂಭಿಸಿದ ರಿಷಬ್ ಪಂತ್

ತಂಡದಲ್ಲಿ ಈ ಬಹುದ್ದೂರ್ ಗಂಡು ಇಲ್ಲವಾಗಿದ್ದೇ ಟೀಮ್​ ಇಂಡಿಯಾ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಯ್ತು. ಮತ್ತೆ ಮಾನ ಕಳೆದುಕೊಳ್ಳಲು ಸಿದ್ಧವಿಲ್ಲದ ಬಿಸಿಸಿಐ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್​ ಮಾಡಿದೆ. ಈ ಸಿಡಿಗುಂಡೇನಾದ್ರು ತಂಡವನ್ನ ಸೇರಿಬಿಟ್ರೆ ಹೋದ ಮಾನ ಏಕದಿನ ವಿಶ್ವಕಪ್​​ನಲ್ಲಿ ಮರಳಿಬರೋದು ಪಕ್ಕಾ.

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​​​​​ ಸೋಲಿನಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​​​ ಬಿಗ್​​ಬಾಸ್​ಗಳ ನೆಕ್ಸ್ಟ್​​​ ಟಾರ್ಗೆಟ್​​​. ಆದ್ರೆ ಈ ಟಾರ್ಗೆಟ್​​​​​​ ರೀಚಿಂಗ್​ ಸುಲಭವಿಲ್ಲ. ಯಾಕಂದ್ರೆ ಕಳೆದ 10 ವರ್ಷದಿಂದ 9 ಐಸಿಸಿ ಟ್ರೋಫಿಗಳನ್ನ ಕೈಚೆಲ್ಲಿ ಕುಗ್ಗಿ ಹೋಗಿದೆ. ಬಟ್​​ ಫಾಸ್ಟ್​ ಇಸ್ ಫಾಸ್ಟ್​​​. ಎಲ್ಲ ಕಹಿ ಮರೆತು ಒನ್ಡೇ ವಿಶ್ವಕಪ್​​​ ಗೆದ್ದೇ ತೀರಲು ಬಿಸಿಸಿಐ ಪಣ ತೊಟ್ಟಿದೆ. ಅದಕ್ಕಾಗಿ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್​​ ಮಾಡಿದೆ. ಈ ಸ್ಟ್ರಾಂಗೆಸ್ಟ್​​​​ ಸಿಡಿಗುಂಡನ್ನೇ ಇಟ್ಟುಕೊಂಡ ವಿಶ್ವಕಪ್​​​ಅನ್ನ ಗೆಲ್ಲಲು ಹೊರಟಿದೆ. ಅಷ್ಟಕ್ಕೂ ಹರಿದ್ವಾರದ ಆ ಡೇಂಜರಸ್ ಸಿಡಿಗುಂಡು ಮತ್ಯಾರು ಅಲ್ಲ, ಅವರೇ ರಿಷಬ್ ಪಂತ್​​​.

‘ಬಹದ್ದೂರ್​ ಗಂಡು’ ಪಂತ್​​ ಬೆನ್ನು ಬಿದ್ದ ಬಿಸಿಸಿಐ

ಸತತ ಐಸಿಸಿ ಟೂರ್ನಿಗಳ ವೈಫಲ್ಯಗಳಿಂದ ಬಿಸಿಸಿಐ ಪಾಠ ಕಲಿತಂತೆ ಕಾಣಿಸ್ತಿದೆ. ಹಾಗಾಗಿನೇ ರಿಷಬ್​​ ಪಂತ್ ಬೆನ್ನು ಬಿದ್ದಿದೆ. ವಿಶ್ವಮಟ್ಟದಲ್ಲಿ ಮಾನ ಕಳೆದುಕೊಂಡಿರೋ ಬಿಸಿಸಿಐ ಮರಳಿ ಪಡೆಯಲು ಟೆರರ್ ಬ್ಯಾಟ್ಸ್​​ಮನ್​​​​ ಕಡೆ ಗಮನ ಹರಿಸಿದೆ. ಅಂದ್ರೆ ಗಾಯಗೊಂಡಿರೋ ಪಂತ್​ರನ್ನ ಮುಂದಿನ ವಿಶ್ವಕಪ್​​​​​​​ ಅಲ್ಲಿ ಆಡಿಸಿಯೇ ತೀರಲು ಪಣತೊಟ್ಟಿದೆ.

ಬಿಸಿಸಿಐ ಪಾಲಿನ ಕೊನೆ ಭರವಸೆ ಅಂದ್ರೆ ಅದು ಡೇರಿಂಗ್​​ ಬ್ಯಾಟ್ಸ್​ಮನ್ ರಿಷಬ್ ಪಂತ್​​​. ಸಂಕಷ್ಟದಲ್ಲಿ ಆಕ್ರಮಣಕಾರಿ ಆಟಕ್ಕೆ ಎತ್ತಿದ ಕೈ. ಘಟಾನುಘಟಿ ಬೌಲರ್​ಗಳ ಎದುರು ನಿರ್ಭೀತಿ ಆಟ. ಮೊದಲ ಎಸೆತದಿಂದಲೇ ಅಟ್ಯಾಕಿಂಗ್​​​​​ ಗೇಮ್​​​​​​​. ಈ ಎಲ್ಲವನ್ನ ಬಿಸಿಸಿಐ ತುಂಬಾನೇ ಮಿಸ್​​ ಮಾಡಿಕೊಳ್ತಿದೆ. ಹೀಗಾಗಿ ಪಂತ್ ಬೆನ್ನುಬಿದ್ದಿರೋ ಬಿಸಿಸಿಐ ಅವರನ್ನ ಒನ್ಡೇ ವಿಶ್ವಕಪ್​​ನಲ್ಲಿ ಕಣಕ್ಕಿಳಿಸಲು ಶಪಥ ಗೈದಿದೆ.

ನಿರೀಕ್ಷಿತ ಸಮಯಕ್ಕಿಂತ ಮೊದಲೇ ಪಂತ್​​ ರಿಕವರಿ..!

ಕಳೆದ ವರ್ಷ ಡೆಡ್ಲಿ ಕಾರು ಆಕ್ಸಿಡೆಂಟ್​​ನಲ್ಲಿ ಪಂತ್​​ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ರು. ಸದ್ಯ ಇವರು ಬೆಂಗಳೂರಿನ ಎನ್​ಸಿಎಯಲ್ಲಿದ್ದು, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ನಿರೀಕ್ಷೆಗೂ ಮೊದಲೇ ಎಡಗೈ ಬ್ಯಾಟ್ಸ್​​​ಮನ್​​​ ರಿಕವರಿ ಆಗಲಿದ್ದಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಂದುಕೊಂಡಂತೆ ನಡೆದು ಬಿಟ್ರೆ 2023ರ ಏಕದಿನ ವಿಶ್ವಕಪ್​​ನಲ್ಲಿ ಪಂತ್​​​​​​ ಅಬ್ಬರ ಕಣ್ತುಂಬಿಕೊಳ್ಳುವ ಕೋಟ್ಯಾನುಕೋಟಿ ಅಭಿಮಾನಗಳ ಮಹಾದಾಸೆ ಈಡೇರಲಿದೆ.

ಬಿಸಿಸಿಐ ಕನಸು ನನಸಾಗಿಸಲು ಸರ್ವ ಪ್ರಯತ್ನ..!

ಒಂದೆಡೆ ಬಿಸಿಸಿಐ ಪಂತ್​ರನ್ನ ಬೇಗನೇ ಗುಣಮುಖ ಮಾಡಲು ಹಠಕ್ಕೆ ಬಿದ್ದಿದೆ. ಇನ್ನೊಂದೆಡೆ ರಿಷಬ್​ ಕೂಡ ವಿಶ್ವಕಪ್ ಆಡುವ ಬಿಗ್​​ಬಾಸ್​ಗಳ ಕನಸನ್ನ ನನಸಾಗಿಸಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಫಿಸಿಯೋ ಎಸ್​​ ರಜನಿಕಾಂತ್ ಅವರ ಮಾರ್ಗದರ್ಶನದಲ್ಲಿ ಕ್ರಚಸ್​​​ ಇಲ್ಲದೇ ನಡಿಗೆ ಜೊತೆ ಯಾರ ಸಹಾಯವಿಲ್ಲದೇ ಮೆಟ್ಟಿನಿಲ್ಲುಗಳನ್ನ ಹತ್ತಲು ಆರಂಭಿಸಿದ್ದಾರೆ.

ಏಷ್ಯಕಾಪ್​​​​​​ ಟೂರ್ನಿಗೆ ಬುಮ್ರಾ-ಶ್ರೇಯಸ್ ಲಭ್ಯ

ಇನ್ನು ಜಸ್​​ಪ್ರೀತ್​ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಮೇಲೂ ಬಿಸಿಸಿಐ ಹೆಚ್ಚು ಗಮನ ಹರಿಸಿದೆ. ಯಾಕಂದ್ರೆ ತಂಡಕ್ಕೆ ಇಬ್ಬರ ಅಲಭ್ಯತೆ ಕಾಡ್ತಿದೆ. ಬುಮ್ರಾಗೆ ಬೆನ್ನು ನೋವು ಕಾಡ್ತಿದ್ದು ಐಪಿಎಲ್​​ ಹಾಗೂ WTC ಫೈನಲ್​​ನಿಂದ ಹೊರಗುಳಿದಿದ್ರು. ಇನ್ನು ಶ್ರೇಯಸ್​​​ ಇದೇ ವರ್ಷ ಬಾರ್ಡರ್​​​​​-ಗವಾಸ್ಕರ್ ಟ್ರೋಫಿಯನ್ನ ತಪ್ಪಿಸಿಕೊಂಡಿದ್ರು. ಸದ್ಯ ಸ್ಟಾರ್ ಆಟಗಾರರಿಬ್ಬರು ಎನ್​​ಸಿಎಯಲ್ಲಿದ್ದು, ಮುಂಬರೋ ಏಷ್ಯಾಕಪ್​ ಟೂರ್ನಿಗೆ ಫುಲ್​​ ಫಿಟ್​ ಆಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಿಷಬ್​​​ ಪಂತ್​​, ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್​​​​ ಟೀಮ್​ ಇಂಡಿಯಾದ ಮ್ಯಾಚ್ ವಿನ್ನರ್ಸ್​. ಈ ತ್ರಿಮೂರ್ತಿಗಳು ಬೇಗನೆ ಗುಣಮುಖರಾಗಲಿ. ಮತ್ತೆ ಬ್ಲೂ ಜರ್ಸಿಯಲ್ಲಿ ಅಬ್ಬರಿಸಿ, ಅಭಿಮಾನಿ ದೇವರುಗಳನ್ನ ರಂಜಿಸುವಂತಾಗಲಿ ಎಂಬುದು ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್​ಗೆ ರಿಷಬ್ ಪಂತ್​​ರನ್ನು ಆಡಿಸಲು ಬಿಸಿಸಿಐ ಶತ ಪ್ರಯತ್ನ; ಪಂತ್​​ ಜತೆಗೆ ಬುಮ್ರಾ, ಅಯ್ಯರ್​ ರೆಡಿ ಆಗ್ತಾರಾ?

https://newsfirstlive.com/wp-content/uploads/2023/06/RISHAB_PANTH_BATTING_1.jpg

    ಒನ್ಡೇ ವಿಶ್ವಕಪ್​​​​​​​​​​​​​​​ಗೆ ಸಿದ್ಧಗೊಳಿಸಲು ಪಣತೊಟ್ಟ BCCI ಬಿಗ್​​ಬಾಸ್​ಗಳು ..!

    ವಿಶ್ವಕಪ್​ಗೆ ಟೆರರ್ ಬ್ಯಾಟ್ಸ್​​ಮನ್​​​​​​​​​ ಫುಲ್​​ ಫಿಟ್ ಆಗೋದು ಗ್ಯಾರಂಟಿನಾ?

    ಮನೆಯಲ್ಲಿನ ಮೆಟ್ಟಿಲುಗಳನ್ನು ಮೆಲ್ಲಗೆ ಏರಲು ಪ್ರಾರಂಭಿಸಿದ ರಿಷಬ್ ಪಂತ್

ತಂಡದಲ್ಲಿ ಈ ಬಹುದ್ದೂರ್ ಗಂಡು ಇಲ್ಲವಾಗಿದ್ದೇ ಟೀಮ್​ ಇಂಡಿಯಾ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಯ್ತು. ಮತ್ತೆ ಮಾನ ಕಳೆದುಕೊಳ್ಳಲು ಸಿದ್ಧವಿಲ್ಲದ ಬಿಸಿಸಿಐ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್​ ಮಾಡಿದೆ. ಈ ಸಿಡಿಗುಂಡೇನಾದ್ರು ತಂಡವನ್ನ ಸೇರಿಬಿಟ್ರೆ ಹೋದ ಮಾನ ಏಕದಿನ ವಿಶ್ವಕಪ್​​ನಲ್ಲಿ ಮರಳಿಬರೋದು ಪಕ್ಕಾ.

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​​​​​ ಸೋಲಿನಿಂದ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಈ ವರ್ಷಾಂತ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​​​ ಬಿಗ್​​ಬಾಸ್​ಗಳ ನೆಕ್ಸ್ಟ್​​​ ಟಾರ್ಗೆಟ್​​​. ಆದ್ರೆ ಈ ಟಾರ್ಗೆಟ್​​​​​​ ರೀಚಿಂಗ್​ ಸುಲಭವಿಲ್ಲ. ಯಾಕಂದ್ರೆ ಕಳೆದ 10 ವರ್ಷದಿಂದ 9 ಐಸಿಸಿ ಟ್ರೋಫಿಗಳನ್ನ ಕೈಚೆಲ್ಲಿ ಕುಗ್ಗಿ ಹೋಗಿದೆ. ಬಟ್​​ ಫಾಸ್ಟ್​ ಇಸ್ ಫಾಸ್ಟ್​​​. ಎಲ್ಲ ಕಹಿ ಮರೆತು ಒನ್ಡೇ ವಿಶ್ವಕಪ್​​​ ಗೆದ್ದೇ ತೀರಲು ಬಿಸಿಸಿಐ ಪಣ ತೊಟ್ಟಿದೆ. ಅದಕ್ಕಾಗಿ ಹರಿದ್ವಾರದ ಸಿಡಿಗುಂಡನ್ನ ಟಾರ್ಗೆಟ್​​ ಮಾಡಿದೆ. ಈ ಸ್ಟ್ರಾಂಗೆಸ್ಟ್​​​​ ಸಿಡಿಗುಂಡನ್ನೇ ಇಟ್ಟುಕೊಂಡ ವಿಶ್ವಕಪ್​​​ಅನ್ನ ಗೆಲ್ಲಲು ಹೊರಟಿದೆ. ಅಷ್ಟಕ್ಕೂ ಹರಿದ್ವಾರದ ಆ ಡೇಂಜರಸ್ ಸಿಡಿಗುಂಡು ಮತ್ಯಾರು ಅಲ್ಲ, ಅವರೇ ರಿಷಬ್ ಪಂತ್​​​.

‘ಬಹದ್ದೂರ್​ ಗಂಡು’ ಪಂತ್​​ ಬೆನ್ನು ಬಿದ್ದ ಬಿಸಿಸಿಐ

ಸತತ ಐಸಿಸಿ ಟೂರ್ನಿಗಳ ವೈಫಲ್ಯಗಳಿಂದ ಬಿಸಿಸಿಐ ಪಾಠ ಕಲಿತಂತೆ ಕಾಣಿಸ್ತಿದೆ. ಹಾಗಾಗಿನೇ ರಿಷಬ್​​ ಪಂತ್ ಬೆನ್ನು ಬಿದ್ದಿದೆ. ವಿಶ್ವಮಟ್ಟದಲ್ಲಿ ಮಾನ ಕಳೆದುಕೊಂಡಿರೋ ಬಿಸಿಸಿಐ ಮರಳಿ ಪಡೆಯಲು ಟೆರರ್ ಬ್ಯಾಟ್ಸ್​​ಮನ್​​​​ ಕಡೆ ಗಮನ ಹರಿಸಿದೆ. ಅಂದ್ರೆ ಗಾಯಗೊಂಡಿರೋ ಪಂತ್​ರನ್ನ ಮುಂದಿನ ವಿಶ್ವಕಪ್​​​​​​​ ಅಲ್ಲಿ ಆಡಿಸಿಯೇ ತೀರಲು ಪಣತೊಟ್ಟಿದೆ.

ಬಿಸಿಸಿಐ ಪಾಲಿನ ಕೊನೆ ಭರವಸೆ ಅಂದ್ರೆ ಅದು ಡೇರಿಂಗ್​​ ಬ್ಯಾಟ್ಸ್​ಮನ್ ರಿಷಬ್ ಪಂತ್​​​. ಸಂಕಷ್ಟದಲ್ಲಿ ಆಕ್ರಮಣಕಾರಿ ಆಟಕ್ಕೆ ಎತ್ತಿದ ಕೈ. ಘಟಾನುಘಟಿ ಬೌಲರ್​ಗಳ ಎದುರು ನಿರ್ಭೀತಿ ಆಟ. ಮೊದಲ ಎಸೆತದಿಂದಲೇ ಅಟ್ಯಾಕಿಂಗ್​​​​​ ಗೇಮ್​​​​​​​. ಈ ಎಲ್ಲವನ್ನ ಬಿಸಿಸಿಐ ತುಂಬಾನೇ ಮಿಸ್​​ ಮಾಡಿಕೊಳ್ತಿದೆ. ಹೀಗಾಗಿ ಪಂತ್ ಬೆನ್ನುಬಿದ್ದಿರೋ ಬಿಸಿಸಿಐ ಅವರನ್ನ ಒನ್ಡೇ ವಿಶ್ವಕಪ್​​ನಲ್ಲಿ ಕಣಕ್ಕಿಳಿಸಲು ಶಪಥ ಗೈದಿದೆ.

ನಿರೀಕ್ಷಿತ ಸಮಯಕ್ಕಿಂತ ಮೊದಲೇ ಪಂತ್​​ ರಿಕವರಿ..!

ಕಳೆದ ವರ್ಷ ಡೆಡ್ಲಿ ಕಾರು ಆಕ್ಸಿಡೆಂಟ್​​ನಲ್ಲಿ ಪಂತ್​​ ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿದ್ರು. ಸದ್ಯ ಇವರು ಬೆಂಗಳೂರಿನ ಎನ್​ಸಿಎಯಲ್ಲಿದ್ದು, ಪುನಶ್ಚೇತನ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು ನಿರೀಕ್ಷೆಗೂ ಮೊದಲೇ ಎಡಗೈ ಬ್ಯಾಟ್ಸ್​​​ಮನ್​​​ ರಿಕವರಿ ಆಗಲಿದ್ದಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಅಂದುಕೊಂಡಂತೆ ನಡೆದು ಬಿಟ್ರೆ 2023ರ ಏಕದಿನ ವಿಶ್ವಕಪ್​​ನಲ್ಲಿ ಪಂತ್​​​​​​ ಅಬ್ಬರ ಕಣ್ತುಂಬಿಕೊಳ್ಳುವ ಕೋಟ್ಯಾನುಕೋಟಿ ಅಭಿಮಾನಗಳ ಮಹಾದಾಸೆ ಈಡೇರಲಿದೆ.

ಬಿಸಿಸಿಐ ಕನಸು ನನಸಾಗಿಸಲು ಸರ್ವ ಪ್ರಯತ್ನ..!

ಒಂದೆಡೆ ಬಿಸಿಸಿಐ ಪಂತ್​ರನ್ನ ಬೇಗನೇ ಗುಣಮುಖ ಮಾಡಲು ಹಠಕ್ಕೆ ಬಿದ್ದಿದೆ. ಇನ್ನೊಂದೆಡೆ ರಿಷಬ್​ ಕೂಡ ವಿಶ್ವಕಪ್ ಆಡುವ ಬಿಗ್​​ಬಾಸ್​ಗಳ ಕನಸನ್ನ ನನಸಾಗಿಸಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಫಿಸಿಯೋ ಎಸ್​​ ರಜನಿಕಾಂತ್ ಅವರ ಮಾರ್ಗದರ್ಶನದಲ್ಲಿ ಕ್ರಚಸ್​​​ ಇಲ್ಲದೇ ನಡಿಗೆ ಜೊತೆ ಯಾರ ಸಹಾಯವಿಲ್ಲದೇ ಮೆಟ್ಟಿನಿಲ್ಲುಗಳನ್ನ ಹತ್ತಲು ಆರಂಭಿಸಿದ್ದಾರೆ.

ಏಷ್ಯಕಾಪ್​​​​​​ ಟೂರ್ನಿಗೆ ಬುಮ್ರಾ-ಶ್ರೇಯಸ್ ಲಭ್ಯ

ಇನ್ನು ಜಸ್​​ಪ್ರೀತ್​ ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್ ಮೇಲೂ ಬಿಸಿಸಿಐ ಹೆಚ್ಚು ಗಮನ ಹರಿಸಿದೆ. ಯಾಕಂದ್ರೆ ತಂಡಕ್ಕೆ ಇಬ್ಬರ ಅಲಭ್ಯತೆ ಕಾಡ್ತಿದೆ. ಬುಮ್ರಾಗೆ ಬೆನ್ನು ನೋವು ಕಾಡ್ತಿದ್ದು ಐಪಿಎಲ್​​ ಹಾಗೂ WTC ಫೈನಲ್​​ನಿಂದ ಹೊರಗುಳಿದಿದ್ರು. ಇನ್ನು ಶ್ರೇಯಸ್​​​ ಇದೇ ವರ್ಷ ಬಾರ್ಡರ್​​​​​-ಗವಾಸ್ಕರ್ ಟ್ರೋಫಿಯನ್ನ ತಪ್ಪಿಸಿಕೊಂಡಿದ್ರು. ಸದ್ಯ ಸ್ಟಾರ್ ಆಟಗಾರರಿಬ್ಬರು ಎನ್​​ಸಿಎಯಲ್ಲಿದ್ದು, ಮುಂಬರೋ ಏಷ್ಯಾಕಪ್​ ಟೂರ್ನಿಗೆ ಫುಲ್​​ ಫಿಟ್​ ಆಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ರಿಷಬ್​​​ ಪಂತ್​​, ಬುಮ್ರಾ ಹಾಗೂ ಶ್ರೇಯಸ್ ಅಯ್ಯರ್​​​​ ಟೀಮ್​ ಇಂಡಿಯಾದ ಮ್ಯಾಚ್ ವಿನ್ನರ್ಸ್​. ಈ ತ್ರಿಮೂರ್ತಿಗಳು ಬೇಗನೆ ಗುಣಮುಖರಾಗಲಿ. ಮತ್ತೆ ಬ್ಲೂ ಜರ್ಸಿಯಲ್ಲಿ ಅಬ್ಬರಿಸಿ, ಅಭಿಮಾನಿ ದೇವರುಗಳನ್ನ ರಂಜಿಸುವಂತಾಗಲಿ ಎಂಬುದು ಆಶಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More