ಪೇಯ್ಡ್ ಪಾರ್ಕಿಂಗ್ ಮಾಡೋ ವಾಹನ ಮಾಲೀಕರಿಗೆ ಗುಡ್ನ್ಯೂಸ್
'ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ದೇ ವಾಹನಗಳ ಜವಾಬ್ದಾರಿ'
ಬೆಂಗಳೂರು ಗ್ರಾಹಕ ನ್ಯಾಯಾಲಯದಿಂದ ಮಹತ್ವದ ಆದೇಶ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕ್ರೈಮ್ ರೇಟ್ ಹೆಚ್ಚಾಗುತ್ತಲೇ ಇದೆ. ನಗರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ. ಈ ಹಿಂದೆ ಮನೆ ಮುಂದೆ ಪಾರ್ಕ್ ಮಾಡುತ್ತಿದ್ದ ಬೈಕ್ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳರು ಈಗ ತಮ್ಮ ಕಳ್ಳತನದ ಶೈಲಿಯನ್ನೇ ಬದಲಿಸಿದ್ದಾರೆ. ಈಗ ಹೈ ಸೆಕ್ಯೂರಿಟಿ ಇರೋ ಪಾರ್ಕಿಂಗ್ ಲಾಟ್ನಲ್ಲೇ ಬೈಕ್ ಕಳ್ಳತನ ದಂಧೆಗೆ ಇಳಿದಿದ್ದಾರೆ. ಹೀಗಾಗಿ ಇನ್ನು ಮುಂದೆ ಹಣ ಪಡೆದು ಪಾರ್ಕಿಂಗ್ ಮಾಡಿಸಿಕೊಳ್ಳೋ ಮ್ಯಾನೇಜ್ಮೆಂಟ್ ಅವರದ್ದೇ ವಾಹನಗಳ ಸುರಕ್ಷತೆ ಮಾಡುವ ಸಂಪೂರ್ಣ ಜವಾಬ್ದಾರಿ ಎಂದು ಬೆಂಗಳೂರು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ನಾಲ್ಕು ವರ್ಷಗಳ ಹಿಂದೆ 2019 ಆಗಸ್ಟ್ ತಿಂಗಳಿನಲ್ಲಿ HSR ಲೇಔಟ್ ಮೂಲದ ನಾರಾಯಣಸ್ವಾಮಿ ಎಂಬುವರು ಬೆಳ್ಳಂದೂರಿನ ಸೆಂಟ್ರಲ್ ಸ್ಪಿರಿಟ್ ಮಾಲ್ಗೆ ಸಿನಿಮಾ ನೋಡಲು KTM ಬೈಕ್ನಲ್ಲಿ ಬಂದಿದ್ದರು. ಪೇಯ್ಡ್ ಪಾರ್ಕಿಂಗ್ ಲಾಟ್ನಲ್ಲಿ ಪಾರ್ಕ್ ಮಾಡಿದ್ದರು. ಸಿನಿಮಾ ನೋಡಿ ಬಂದ ಕೂಡಲೇ ಬೈಕ್ ಪಾರ್ಕಿಂಗ್ ಲಾಟ್ನಲ್ಲಿ ಇರಲಿಲ್ಲ. ಈ ಬಗ್ಗೆ ಪಾರ್ಕಿಂಗ್ ಲಾಟ್ನಲ್ಲಿದ್ದ ಸಿಬ್ಬಂದಿಯನ್ನು ಕೇಳಿದ್ರೆ, ನಿಮ್ಮ ಬೈಕ್ ಕಳುವಿಗೆ ನಾವು ಜವಾಬ್ದಾರರಲ್ಲ ಎಂದಿದ್ದರು. ಇದರಿಂದ ಶಾಕ್ ಆದ ಬೈಕ್ ಮಾಲೀಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇಷ್ಟು ದಿನ ಕಳೆದರೂ ಈ ಬೈಕ್ ಇನ್ನೂ ಸಿಕ್ಕಿಲ್ಲ. ಹೀಗಾಗಿ ಬೈಕ್ ಮಾಲೀಕ ಬೆಂಗಳೂರು ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸದ್ಯ ನಾರಾಯಣಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 1 ಲಕ್ಷಕ್ಕೂ ಹೆಚ್ಚು ದಂಡ ಹಾಕಿದೆ. ಬೈಕ್ ಮಾಲೀಕನಿಗೆ 1,06,288 ರೂ., ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ 5,000 ರೂ., ನಿರ್ಲಕ್ಷ್ಯ ತೋರಿದ್ದಕ್ಕಾಗಿ 10,000 ದಂಡ ಪಾವತಿಸಿ ಎಂದು ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ಗೆ ಆದೇಶಿಸಿದೆ. ಮುಂದಿನ 45 ದಿನಗಳಲ್ಲಿ ಈ ದಂಡ ಪಾವತಿಸಬೇಕು ಎಂದು ಆದೇಶಿಸಿದ್ದಲ್ಲದೇ ಇನ್ನು ಮುಂದೆ ಪೇಯ್ಡ್ ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ದೇ ವೆಹಿಕಲ್ ಸೇಫಟಿ ಜವಾಬ್ದಾರಿ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪೇಯ್ಡ್ ಪಾರ್ಕಿಂಗ್ ಮಾಡೋ ವಾಹನ ಮಾಲೀಕರಿಗೆ ಗುಡ್ನ್ಯೂಸ್
'ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ದೇ ವಾಹನಗಳ ಜವಾಬ್ದಾರಿ'
ಬೆಂಗಳೂರು ಗ್ರಾಹಕ ನ್ಯಾಯಾಲಯದಿಂದ ಮಹತ್ವದ ಆದೇಶ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನೇ ದಿನೇ ಕ್ರೈಮ್ ರೇಟ್ ಹೆಚ್ಚಾಗುತ್ತಲೇ ಇದೆ. ನಗರ ವ್ಯಾಪ್ತಿಯಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳ ಸಂಖ್ಯೆ ಗಮನಿಸಿದರೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿವೆ. ಈ ಹಿಂದೆ ಮನೆ ಮುಂದೆ ಪಾರ್ಕ್ ಮಾಡುತ್ತಿದ್ದ ಬೈಕ್ ಕಳವು ಮಾಡುತ್ತಿದ್ದ ಖತರ್ನಾಕ್ ಕಳ್ಳರು ಈಗ ತಮ್ಮ ಕಳ್ಳತನದ ಶೈಲಿಯನ್ನೇ ಬದಲಿಸಿದ್ದಾರೆ. ಈಗ ಹೈ ಸೆಕ್ಯೂರಿಟಿ ಇರೋ ಪಾರ್ಕಿಂಗ್ ಲಾಟ್ನಲ್ಲೇ ಬೈಕ್ ಕಳ್ಳತನ ದಂಧೆಗೆ ಇಳಿದಿದ್ದಾರೆ. ಹೀಗಾಗಿ ಇನ್ನು ಮುಂದೆ ಹಣ ಪಡೆದು ಪಾರ್ಕಿಂಗ್ ಮಾಡಿಸಿಕೊಳ್ಳೋ ಮ್ಯಾನೇಜ್ಮೆಂಟ್ ಅವರದ್ದೇ ವಾಹನಗಳ ಸುರಕ್ಷತೆ ಮಾಡುವ ಸಂಪೂರ್ಣ ಜವಾಬ್ದಾರಿ ಎಂದು ಬೆಂಗಳೂರು ಗ್ರಾಹಕ ನ್ಯಾಯಾಲಯ ಆದೇಶಿಸಿದೆ.
ನಾಲ್ಕು ವರ್ಷಗಳ ಹಿಂದೆ 2019 ಆಗಸ್ಟ್ ತಿಂಗಳಿನಲ್ಲಿ HSR ಲೇಔಟ್ ಮೂಲದ ನಾರಾಯಣಸ್ವಾಮಿ ಎಂಬುವರು ಬೆಳ್ಳಂದೂರಿನ ಸೆಂಟ್ರಲ್ ಸ್ಪಿರಿಟ್ ಮಾಲ್ಗೆ ಸಿನಿಮಾ ನೋಡಲು KTM ಬೈಕ್ನಲ್ಲಿ ಬಂದಿದ್ದರು. ಪೇಯ್ಡ್ ಪಾರ್ಕಿಂಗ್ ಲಾಟ್ನಲ್ಲಿ ಪಾರ್ಕ್ ಮಾಡಿದ್ದರು. ಸಿನಿಮಾ ನೋಡಿ ಬಂದ ಕೂಡಲೇ ಬೈಕ್ ಪಾರ್ಕಿಂಗ್ ಲಾಟ್ನಲ್ಲಿ ಇರಲಿಲ್ಲ. ಈ ಬಗ್ಗೆ ಪಾರ್ಕಿಂಗ್ ಲಾಟ್ನಲ್ಲಿದ್ದ ಸಿಬ್ಬಂದಿಯನ್ನು ಕೇಳಿದ್ರೆ, ನಿಮ್ಮ ಬೈಕ್ ಕಳುವಿಗೆ ನಾವು ಜವಾಬ್ದಾರರಲ್ಲ ಎಂದಿದ್ದರು. ಇದರಿಂದ ಶಾಕ್ ಆದ ಬೈಕ್ ಮಾಲೀಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಇಷ್ಟು ದಿನ ಕಳೆದರೂ ಈ ಬೈಕ್ ಇನ್ನೂ ಸಿಕ್ಕಿಲ್ಲ. ಹೀಗಾಗಿ ಬೈಕ್ ಮಾಲೀಕ ಬೆಂಗಳೂರು ಗ್ರಾಹಕ ಕೋರ್ಟ್ ಮೆಟ್ಟಿಲೇರಿದ್ದಾರೆ.
ಸದ್ಯ ನಾರಾಯಣಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, 1 ಲಕ್ಷಕ್ಕೂ ಹೆಚ್ಚು ದಂಡ ಹಾಕಿದೆ. ಬೈಕ್ ಮಾಲೀಕನಿಗೆ 1,06,288 ರೂ., ಕೋರ್ಟ್ ಸಮಯ ಹಾಳು ಮಾಡಿದ್ದಕ್ಕೆ 5,000 ರೂ., ನಿರ್ಲಕ್ಷ್ಯ ತೋರಿದ್ದಕ್ಕಾಗಿ 10,000 ದಂಡ ಪಾವತಿಸಿ ಎಂದು ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ಗೆ ಆದೇಶಿಸಿದೆ. ಮುಂದಿನ 45 ದಿನಗಳಲ್ಲಿ ಈ ದಂಡ ಪಾವತಿಸಬೇಕು ಎಂದು ಆದೇಶಿಸಿದ್ದಲ್ಲದೇ ಇನ್ನು ಮುಂದೆ ಪೇಯ್ಡ್ ಪಾರ್ಕಿಂಗ್ ಲಾಟ್ ಮ್ಯಾನೇಜ್ಮೆಂಟ್ದೇ ವೆಹಿಕಲ್ ಸೇಫಟಿ ಜವಾಬ್ದಾರಿ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ