newsfirstkannada.com

ವಿಶೇಷ ಅಧಿವೇಶನ: ನೆಹರು, ಇಂದಿರಾ, ವಾಜಪೇಯಿ ಅವರನ್ನು ನೆನಪು ಮಾಡಿಕೊಂಡ ಪ್ರಧಾನಿ ಮೋದಿ.. ಏನಂದ್ರು?

Share :

18-09-2023

    ಅನೇಕ ಐತಿಹಾಸಿಕ ನಿರ್ಣಯಗಳನ್ನು ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ

    75 ವರ್ಷದ ಸಾಧನೆ ಅಂದರೆ ಸಾಮಾನ್ಯ ವ್ಯಕ್ತಿಗೂ ಸಂಸತ್ ಮೇಲೆ ನಂಬಿಕೆ

    ಅನೇಕ ಐತಿಹಾಸಿಕ ನಿರ್ಣಯಗಳನ್ನ ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ

ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಲೋಕಸಭೆಯಲ್ಲಿ ವಿಶೇಷ ಅಧಿವೇಶನ ಆರಂಭವಾಗಿದ್ದು ಹಳೆಯ ಸಂಸತ್​ ಭವನಕ್ಕೆ ವಿದಾಯ ಹೇಳಿ ಹೊಸ ಸಂಸತ್​ ಭವನಕ್ಕೆ ಎಲ್ಲರೂ ಹೋಗೋಣ ಎಂದು ಅಧಿವೇಶನದಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು.

ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಒಕ್ಕೂಟ ವ್ಯವಸ್ಥೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಹಳೆಯ ಸಂಸತ್​ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿಯಾಗಿದೆ. ಇಲ್ಲಿ ಅನೇಕ ವರ್ಷಗಳ ಕಾಲ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆಯಲಾಗಿದೆ. ಇಲ್ಲಿ ತೆಗೆದುಕೊಂಡ ನಿರ್ಣಯಗಳು ದೇಶದ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಸಾಕಷ್ಟು ವಾದ-ವಿವಾದಗಳು ನಡೆದಿವೆ. ಸಮಯಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕು. ಅದರಂತೆ ನಾವು ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್​ ಭವನವನ್ನು ಪ್ರವೇಶ ಮಾಡೋಣ ಎಂದು ಮೋದಿ ಹೇಳಿದರು.

ನಾನು ಕನಸಿನಲ್ಲೂ ಈ ಸಂಸತ್ ಭವನ ಪ್ರವೇಶಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಸಂಸತ್ ಭವನಕ್ಕೆ ಬರುವಾಗಿ ಶಿರಬಾಗಿ ನಮಸ್ಕಾರ ಮಾಡಿದ್ದೇನೆ. ಒಳ ಬರುತ್ತಿದ್ದಂತೆ ನಾನು ಭಾವುಕನಾಗಿದ್ದೆ. ಆ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸತ್​ ಭವನದ ಜೊತೆಗಿನ ತಮ್ಮ ಹಳೆಯ ನೆನಪಗಳನ್ನು ಪ್ರಧಾನಿ ಮೋದಿಯವರು ಮೆಲುಕು ಹಾಕಿದರು. ಕಠಿಣ ಸಮಯದಲ್ಲಿ ಕೆಲವರು ಕೆಲಸ ನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಕೆಲವರು ಕ್ಷೇತ್ರವನ್ನು ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಈಗಲೂ ಮಾಜಿ ಸಂಸದರು ಸಂಸತ್​ ಭೇಟಿಕೊಟ್ಟು ಹೋಗುತ್ತಿರುತ್ತಾರೆ. ಇದು ದೇಶದ ಶಕ್ತಿ ಎಂದು ಮೋದಿ ಹೇಳಿದ್ದಾರೆ.

ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್​, ಜವಾರ್​ ಲಾಲ್ ನೆಹರು, ಇಂದಿರಾ ಗಾಂಧಿ, ಭಗತ್ ಸಿಂಗ್, ಲಾಲ್​ ಬಹೂದ್ದೂರ್ ಶಾಸ್ತ್ರಿ, ಅಟಲ್​ ಬಿಹಾರಿ ವಾಜಪೇಯಿ, ಚರಣ್ ಸಿಂಗ್, ನರಸಿಂಹರಾವ್ ಸೇರಿದಂತೆ ಅತ್ಯಂತ ಗಣ್ಯ ವ್ಯಕ್ತಿಗಳು ಈ ಸಂಸತ್​ ಭವನದ ನೇತೃತ್ವವನ್ನು ವಹಿಸಿ ದೇಶದ ಅಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದರು.

  • ಸಬ್​ ಕಾ ಸಾತ್, ಸಬ್​ ಕಾ ವಿಕಾಸ್ ಇದು ನಮ್ಮ ಮಂತ್ರ
  • ಹಳೆಯ ಸಂಸತ್ ಭವನ ಬಿಟ್ಟು ಹೋಗುವುದು ಭಾವುಕ
  • ನವೆಂಬರ್ 26, 1949ರಂದು ನಮಗೆ ಸಂವಿಧಾನ ಸಿಕ್ಕಿದೆ
  • ಇದೇ ಸದನದಲ್ಲಿ 2 ವರ್ಷ 11 ತಿಂಗಳು ಸಂವಿಧಾನದ ಚರ್ಚೆ
  • ಮಹತ್ವದ ಸಂವಿಧಾನವನ್ನು ಇದೇ ಸ್ಥಳದಲ್ಲಿ ಒಪ್ಪಿದ್ದೇವೆ
  • 75 ವರ್ಷದ ಸಾಧನೆ ಎಂದರೆ ಸಾಮಾನ್ಯ ವ್ಯಕ್ತಿಗೂ ಇದರ ಮೇಲೆ ನಂಬಿಕೆ ಇದೆ.
  • ಅನೇಕ ಐತಿಹಾಸಿಕ ನಿರ್ಣಯಗಳನ್ನು ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ
  • ಆರ್ಟಿಕಲ್ 370 ನಿರ್ಣಾಯವನ್ನು ಈ ಅಧಿವೇಶನದಲ್ಲಿ ಆಗಿದೆ
  • ಚಂದ್ರಯಾನ- 3 ಯಶಸ್ಸು ಇಡೀ ದೇಶದ ಮೇಲೆ ಪರಿಣಾಮ ಬೀರಿದೆ
  • 140 ಕೋಟಿ ಜನರ ಸಂಕಲ್ಪದೊಂದಿಗೆ ಚಂದ್ರಯಾನ- 3 ಯಶಸ್ಸು ಆಗಿದೆ
  • ಮತ್ತೊಮ್ಮೆ ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಕೋಟಿ ಕೋಟಿ ವಂದನೆ
  • G20 ಯಶಸ್ಸು ಭಾರತದ ಯಶಸ್ಸು, ಇದರಿಂದ ದೇಶಕ್ಕೆ ಹೆಮ್ಮೆಯಾಗಿದೆ
  • G20 ಯಾರದ್ದೋ ಒಬ್ಬ ವ್ಯಕ್ತಿ, ಪಕ್ಷದ ಸಫಲತೆ ಅಲ್ಲ, ದೇಶದ ಸಕ್ಸಸ್
  • ಭಾರತದಲ್ಲಿ ನಡೆ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಸೇರಿಸಿತು
  • ಸಂಸತ್​ ಸದನದಲ್ಲಿ ಮೊದಲು ಮಹಿಳೆಯರ ಸಂಖ್ಯೆ ಕಡಿಮೆ ಇತ್ತು
  • ಈಗ ಮಹಿಳೆಯರು ಸಂಸತ್ತಿಗೆ ಬರುತ್ತ ಘನತೆಯನ್ನು ಹೆಚ್ಚಿಸಿದ್ದಾರೆ
  • ಸದನದಲ್ಲಿ 43 ವರ್ಷ ಇಂದ್ರಜಿತ್ ಗುಪ್ತಾ ಅವರು ಸದಸ್ಯರಾಗಿ ಸೇವೆ
  • ಚಂದ್ರಮಣಿ ಮುರ್ಮು ತಮ್ಮ ಸಣ್ಣ ವಯಸ್ಸಲ್ಲೇ ಸದನಕ್ಕೆ ಸದಸ್ಯರಾಗಿದ್ರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶೇಷ ಅಧಿವೇಶನ: ನೆಹರು, ಇಂದಿರಾ, ವಾಜಪೇಯಿ ಅವರನ್ನು ನೆನಪು ಮಾಡಿಕೊಂಡ ಪ್ರಧಾನಿ ಮೋದಿ.. ಏನಂದ್ರು?

https://newsfirstlive.com/wp-content/uploads/2023/09/modi-13.jpg

    ಅನೇಕ ಐತಿಹಾಸಿಕ ನಿರ್ಣಯಗಳನ್ನು ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ

    75 ವರ್ಷದ ಸಾಧನೆ ಅಂದರೆ ಸಾಮಾನ್ಯ ವ್ಯಕ್ತಿಗೂ ಸಂಸತ್ ಮೇಲೆ ನಂಬಿಕೆ

    ಅನೇಕ ಐತಿಹಾಸಿಕ ನಿರ್ಣಯಗಳನ್ನ ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ

ನವದೆಹಲಿ: ಇಂದಿನಿಂದ 5 ದಿನಗಳ ಕಾಲ ಲೋಕಸಭೆಯಲ್ಲಿ ವಿಶೇಷ ಅಧಿವೇಶನ ಆರಂಭವಾಗಿದ್ದು ಹಳೆಯ ಸಂಸತ್​ ಭವನಕ್ಕೆ ವಿದಾಯ ಹೇಳಿ ಹೊಸ ಸಂಸತ್​ ಭವನಕ್ಕೆ ಎಲ್ಲರೂ ಹೋಗೋಣ ಎಂದು ಅಧಿವೇಶನದಲ್ಲಿ ಪ್ರಧಾನಿ ಮೋದಿ ಕರೆ ನೀಡಿದರು.

ಸಂಸತ್ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಒಕ್ಕೂಟ ವ್ಯವಸ್ಥೆಯು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಹಳೆಯ ಸಂಸತ್​ಗೆ ವಿದಾಯ ಹೇಳುತ್ತಿರುವುದು ದುಃಖದ ಸಂಗತಿಯಾಗಿದೆ. ಇಲ್ಲಿ ಅನೇಕ ವರ್ಷಗಳ ಕಾಲ ಬಹಳಷ್ಟು ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆಯಲಾಗಿದೆ. ಇಲ್ಲಿ ತೆಗೆದುಕೊಂಡ ನಿರ್ಣಯಗಳು ದೇಶದ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಸಾಕಷ್ಟು ವಾದ-ವಿವಾದಗಳು ನಡೆದಿವೆ. ಸಮಯಕ್ಕೆ ತಕ್ಕಂತೆ ಕೆಲವೊಂದು ಬದಲಾವಣೆಗೆ ಹೊಂದಿಕೊಳ್ಳಬೇಕು. ಅದರಂತೆ ನಾವು ನಾಳೆ ಗಣೇಶ ಚತುರ್ಥಿಯಂದು ಹೊಸ ಸಂಸತ್​ ಭವನವನ್ನು ಪ್ರವೇಶ ಮಾಡೋಣ ಎಂದು ಮೋದಿ ಹೇಳಿದರು.

ನಾನು ಕನಸಿನಲ್ಲೂ ಈ ಸಂಸತ್ ಭವನ ಪ್ರವೇಶಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಮೊದಲ ಬಾರಿಗೆ ಸಂಸತ್ ಭವನಕ್ಕೆ ಬರುವಾಗಿ ಶಿರಬಾಗಿ ನಮಸ್ಕಾರ ಮಾಡಿದ್ದೇನೆ. ಒಳ ಬರುತ್ತಿದ್ದಂತೆ ನಾನು ಭಾವುಕನಾಗಿದ್ದೆ. ಆ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಸಂಸತ್​ ಭವನದ ಜೊತೆಗಿನ ತಮ್ಮ ಹಳೆಯ ನೆನಪಗಳನ್ನು ಪ್ರಧಾನಿ ಮೋದಿಯವರು ಮೆಲುಕು ಹಾಕಿದರು. ಕಠಿಣ ಸಮಯದಲ್ಲಿ ಕೆಲವರು ಕೆಲಸ ನಿರ್ವಹಿಸಿದ್ದಾರೆ. ಇಳಿ ವಯಸ್ಸಿನಲ್ಲೂ ಕೆಲವರು ಕ್ಷೇತ್ರವನ್ನು ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಈಗಲೂ ಮಾಜಿ ಸಂಸದರು ಸಂಸತ್​ ಭೇಟಿಕೊಟ್ಟು ಹೋಗುತ್ತಿರುತ್ತಾರೆ. ಇದು ದೇಶದ ಶಕ್ತಿ ಎಂದು ಮೋದಿ ಹೇಳಿದ್ದಾರೆ.

ಸಭೆಯಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್​, ಜವಾರ್​ ಲಾಲ್ ನೆಹರು, ಇಂದಿರಾ ಗಾಂಧಿ, ಭಗತ್ ಸಿಂಗ್, ಲಾಲ್​ ಬಹೂದ್ದೂರ್ ಶಾಸ್ತ್ರಿ, ಅಟಲ್​ ಬಿಹಾರಿ ವಾಜಪೇಯಿ, ಚರಣ್ ಸಿಂಗ್, ನರಸಿಂಹರಾವ್ ಸೇರಿದಂತೆ ಅತ್ಯಂತ ಗಣ್ಯ ವ್ಯಕ್ತಿಗಳು ಈ ಸಂಸತ್​ ಭವನದ ನೇತೃತ್ವವನ್ನು ವಹಿಸಿ ದೇಶದ ಅಭಿವೃದ್ಧಿಗೆ ಕಾರಣವಾಗಿದ್ದಾರೆ ಎಂದರು.

  • ಸಬ್​ ಕಾ ಸಾತ್, ಸಬ್​ ಕಾ ವಿಕಾಸ್ ಇದು ನಮ್ಮ ಮಂತ್ರ
  • ಹಳೆಯ ಸಂಸತ್ ಭವನ ಬಿಟ್ಟು ಹೋಗುವುದು ಭಾವುಕ
  • ನವೆಂಬರ್ 26, 1949ರಂದು ನಮಗೆ ಸಂವಿಧಾನ ಸಿಕ್ಕಿದೆ
  • ಇದೇ ಸದನದಲ್ಲಿ 2 ವರ್ಷ 11 ತಿಂಗಳು ಸಂವಿಧಾನದ ಚರ್ಚೆ
  • ಮಹತ್ವದ ಸಂವಿಧಾನವನ್ನು ಇದೇ ಸ್ಥಳದಲ್ಲಿ ಒಪ್ಪಿದ್ದೇವೆ
  • 75 ವರ್ಷದ ಸಾಧನೆ ಎಂದರೆ ಸಾಮಾನ್ಯ ವ್ಯಕ್ತಿಗೂ ಇದರ ಮೇಲೆ ನಂಬಿಕೆ ಇದೆ.
  • ಅನೇಕ ಐತಿಹಾಸಿಕ ನಿರ್ಣಯಗಳನ್ನು ಈ ಸಂಸತ್​ನಲ್ಲಿ ತೆಗೆದುಕೊಳ್ಳಲಾಗಿದೆ
  • ಆರ್ಟಿಕಲ್ 370 ನಿರ್ಣಾಯವನ್ನು ಈ ಅಧಿವೇಶನದಲ್ಲಿ ಆಗಿದೆ
  • ಚಂದ್ರಯಾನ- 3 ಯಶಸ್ಸು ಇಡೀ ದೇಶದ ಮೇಲೆ ಪರಿಣಾಮ ಬೀರಿದೆ
  • 140 ಕೋಟಿ ಜನರ ಸಂಕಲ್ಪದೊಂದಿಗೆ ಚಂದ್ರಯಾನ- 3 ಯಶಸ್ಸು ಆಗಿದೆ
  • ಮತ್ತೊಮ್ಮೆ ನಮ್ಮ ಹೆಮ್ಮೆಯ ವಿಜ್ಞಾನಿಗಳಿಗೆ ಕೋಟಿ ಕೋಟಿ ವಂದನೆ
  • G20 ಯಶಸ್ಸು ಭಾರತದ ಯಶಸ್ಸು, ಇದರಿಂದ ದೇಶಕ್ಕೆ ಹೆಮ್ಮೆಯಾಗಿದೆ
  • G20 ಯಾರದ್ದೋ ಒಬ್ಬ ವ್ಯಕ್ತಿ, ಪಕ್ಷದ ಸಫಲತೆ ಅಲ್ಲ, ದೇಶದ ಸಕ್ಸಸ್
  • ಭಾರತದಲ್ಲಿ ನಡೆ ಶೃಂಗಸಭೆಯಲ್ಲಿ ಆಫ್ರಿಕನ್ ಯೂನಿಯನ್ ಸೇರಿಸಿತು
  • ಸಂಸತ್​ ಸದನದಲ್ಲಿ ಮೊದಲು ಮಹಿಳೆಯರ ಸಂಖ್ಯೆ ಕಡಿಮೆ ಇತ್ತು
  • ಈಗ ಮಹಿಳೆಯರು ಸಂಸತ್ತಿಗೆ ಬರುತ್ತ ಘನತೆಯನ್ನು ಹೆಚ್ಚಿಸಿದ್ದಾರೆ
  • ಸದನದಲ್ಲಿ 43 ವರ್ಷ ಇಂದ್ರಜಿತ್ ಗುಪ್ತಾ ಅವರು ಸದಸ್ಯರಾಗಿ ಸೇವೆ
  • ಚಂದ್ರಮಣಿ ಮುರ್ಮು ತಮ್ಮ ಸಣ್ಣ ವಯಸ್ಸಲ್ಲೇ ಸದನಕ್ಕೆ ಸದಸ್ಯರಾಗಿದ್ರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More