newsfirstkannada.com

ಬಿಜೆಪಿ ಬಿಡ್ತಾರಾ ಪೂರ್ಣಿಮಾ ಶ್ರೀನಿವಾಸ್​​? ಡಿಕೆಶಿ ಭೇಟಿ ಬಗ್ಗೆ ಮಾಜಿ ಶಾಸಕಿ ಏನಂದ್ರು?

Share :

06-09-2023

    ಪೂರ್ಣಿಮಾ ಶ್ರೀನಿವಾಸ್​ ಮನೆಗೆ ಡಿ.ಕೆ ಶಿವಕುಮಾರ್​ ಭೇಟಿ

    ಕಾಂಗ್ರೆಸ್​ ಬರುವಂತೆ ಆಹ್ವಾನ ನೀಡಿದ್ರಾ..? ಕೆಪಿಸಿಸಿ ಅಧ್ಯಕ್ಷ!

    ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಏನಂದ್ರು..?

ಬೆಂಗಳೂರು: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಿರಿಯೂರಿನ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​​​ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್​​ ಪೂರ್ಣಿಮಾ ಶ್ರೀನಿವಾಸ್​​ ಅವರಿಗೆ ಕಾಂಗ್ರೆಸ್​ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಇನ್ನು, ಡಿ.ಕೆ ಶಿವಕುಮಾರ್​​ ಭೇಟಿ ಬಳಿಕ ಮಾತಾಡಿದ ಪೂರ್ಣಿಮಾ ಶ್ರೀನಿವಾಸ್​​, ನನಗೆ ಕಾಂಗ್ರೆಸ್​ನಿಂದ ಆಹ್ವಾನ ಇದೆ. ನಾನು ಬಿಜೆಪಿಯಲ್ಲೇ ಇದ್ದೇನೆ, ಬಿಜೆಪಿ ಬಿಡೋ ಯೋಚನೆ ಮಾಡಿಲ್ಲ. ಚುನಾವಣೆಗೆ ಮುಂಚೆಯಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಎಲ್ಲೂ ಬಿಜೆಪಿ ಬಿಡುತ್ತೇನೆ ಎಂದು ಹೇಳಿಲ್ಲ. ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

ಮನೆಯಲ್ಲಿ ಹಬ್ಬ ಇತ್ತು, ಊಟಕ್ಕಾಗಿ ಡಿ.ಕೆ ಶಿವಕುಮಾರ್​ ಮನೆಗೆ ಬಂದಿದ್ದರು. ನನ್ನ ತಂದೆ ಹಿಂದುಳಿದ ವರ್ಗದ ನಾಯಕ. ನನ್ನ ಅವಶ್ಯಕತೆ ಕಾಂಗ್ರೆಸ್ಸಿಗೆ ಇರಬಹುದು. ನಾನು ಹೋಗುವುದಾದ್ರೆ ಎಲ್ಲರಿಗೂ ಹೇಳಿ ಕಾಂಗ್ರೆಸ್​ಗೆ ಹೋಗುತ್ತೇನೆ. ಕದ್ದು ಮುಚ್ಚಿ ನಾನು ಏನು ಮಾಡಲ್ಲ ಎಂದು ಹೇಳಿದರು.

ಯಾವುದೇ ಅಸಮಾಧಾನ ಇಲ್ಲ ಎಂದ ಪೂರ್ಣಿಮಾ ಶ್ರೀನಿವಾಸ್​​..!

ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಬೇರೆಯವರಿಗೆ ಅಸಮಾಧಾನ ಇರಬಹುದು. ಏನೇ ಆಗಲೀ ಎಲ್ಲವೂ ನಿಮಗೆ ತಿಳಿಸಿಯೇ ಮಾಡುತ್ತೇನೆ ಎಂದರು. ಜತೆಗೆ ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರ ಆಯ್ಕೆ ಆಗಲಿದೆ ಎಂದು ಕೂಡ ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಬಿಡ್ತಾರಾ ಪೂರ್ಣಿಮಾ ಶ್ರೀನಿವಾಸ್​​? ಡಿಕೆಶಿ ಭೇಟಿ ಬಗ್ಗೆ ಮಾಜಿ ಶಾಸಕಿ ಏನಂದ್ರು?

https://newsfirstlive.com/wp-content/uploads/2023/09/Dk-Shivakumar-Meets-Poornima.jpg

    ಪೂರ್ಣಿಮಾ ಶ್ರೀನಿವಾಸ್​ ಮನೆಗೆ ಡಿ.ಕೆ ಶಿವಕುಮಾರ್​ ಭೇಟಿ

    ಕಾಂಗ್ರೆಸ್​ ಬರುವಂತೆ ಆಹ್ವಾನ ನೀಡಿದ್ರಾ..? ಕೆಪಿಸಿಸಿ ಅಧ್ಯಕ್ಷ!

    ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​ ಏನಂದ್ರು..?

ಬೆಂಗಳೂರು: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹಿರಿಯೂರಿನ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್​​​ ಅವರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಡಿ.ಕೆ ಶಿವಕುಮಾರ್​​ ಪೂರ್ಣಿಮಾ ಶ್ರೀನಿವಾಸ್​​ ಅವರಿಗೆ ಕಾಂಗ್ರೆಸ್​ಗೆ ಬರುವಂತೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

ಇನ್ನು, ಡಿ.ಕೆ ಶಿವಕುಮಾರ್​​ ಭೇಟಿ ಬಳಿಕ ಮಾತಾಡಿದ ಪೂರ್ಣಿಮಾ ಶ್ರೀನಿವಾಸ್​​, ನನಗೆ ಕಾಂಗ್ರೆಸ್​ನಿಂದ ಆಹ್ವಾನ ಇದೆ. ನಾನು ಬಿಜೆಪಿಯಲ್ಲೇ ಇದ್ದೇನೆ, ಬಿಜೆಪಿ ಬಿಡೋ ಯೋಚನೆ ಮಾಡಿಲ್ಲ. ಚುನಾವಣೆಗೆ ಮುಂಚೆಯಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ನಾನು ಎಲ್ಲೂ ಬಿಜೆಪಿ ಬಿಡುತ್ತೇನೆ ಎಂದು ಹೇಳಿಲ್ಲ. ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದರು.

ಮನೆಯಲ್ಲಿ ಹಬ್ಬ ಇತ್ತು, ಊಟಕ್ಕಾಗಿ ಡಿ.ಕೆ ಶಿವಕುಮಾರ್​ ಮನೆಗೆ ಬಂದಿದ್ದರು. ನನ್ನ ತಂದೆ ಹಿಂದುಳಿದ ವರ್ಗದ ನಾಯಕ. ನನ್ನ ಅವಶ್ಯಕತೆ ಕಾಂಗ್ರೆಸ್ಸಿಗೆ ಇರಬಹುದು. ನಾನು ಹೋಗುವುದಾದ್ರೆ ಎಲ್ಲರಿಗೂ ಹೇಳಿ ಕಾಂಗ್ರೆಸ್​ಗೆ ಹೋಗುತ್ತೇನೆ. ಕದ್ದು ಮುಚ್ಚಿ ನಾನು ಏನು ಮಾಡಲ್ಲ ಎಂದು ಹೇಳಿದರು.

ಯಾವುದೇ ಅಸಮಾಧಾನ ಇಲ್ಲ ಎಂದ ಪೂರ್ಣಿಮಾ ಶ್ರೀನಿವಾಸ್​​..!

ನನಗೆ ಬಿಜೆಪಿ ಮೇಲೆ ಯಾವುದೇ ಅಸಮಾಧಾನ ಇಲ್ಲ. ಬೇರೆಯವರಿಗೆ ಅಸಮಾಧಾನ ಇರಬಹುದು. ಏನೇ ಆಗಲೀ ಎಲ್ಲವೂ ನಿಮಗೆ ತಿಳಿಸಿಯೇ ಮಾಡುತ್ತೇನೆ ಎಂದರು. ಜತೆಗೆ ಸದ್ಯದಲ್ಲೇ ಬಿಜೆಪಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ನಾಯಕರ ಆಯ್ಕೆ ಆಗಲಿದೆ ಎಂದು ಕೂಡ ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More