ಪ್ರಭಾಸ್ ಸಲಾರ್ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ
ಲೇಟ್ ಆದ್ರೂ ಗ್ರೇಟ್ ಆಗಿ ಬರಲಿ ಅನ್ನೋದಷ್ಟೇ ಫ್ಯಾನ್ಸ್ ನಿರೀಕ್ಷೆ!
ಸ್ಪಷ್ಟ ಕಾರಣದ ಬಗ್ಗೆ ನ್ಯೂಸ್ಫಸ್ಟ್ ತಂಡಕ್ಕೆ ಅಚ್ಚರಿ ವಿಷಯಗಳು ಲಭ್ಯ
ಪ್ಯಾನ್ ಇಂಡಿಯಾದ ನೆಕ್ಸ್ಟ್ ಬಿಗ್ಗೆಸ್ಟ್ ಸಿನಿಮಾ ಅಂದ್ರೆ ಸಲಾರ್. ಸಲಾರ್ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈ ತಿಂಗಳ ಅಂತ್ಯಕ್ಕೆ ಸಲಾರ್ ಬರಬೇಕಿತ್ತು. ಆದರೆ ಹಳೇ ಡೇಟ್ಗೆ ಸಲಾರ್ ಬರಲ್ಲ. ಹಾಗಾದ್ರೆ ದಿಢೀರ್ ಅಂತ ಸಲಾರ್ ಡೇಟ್ ಬದಲಿಸಿದ್ದೇಕೆ ಅಂತ ನೋಡಿದ್ರೆ ಕಾರಣ ಅಚ್ಚರಿ ಉಂಟು ಮಾಡುತ್ತಿದೆ. ಪ್ರಭಾಸ್ ವಿಷ್ಯದಲ್ಲಿ ಒಂಥರಾ ಸವಾಲಾಗಿದ್ರೆ, ಪ್ರಶಾಂತ್ ನೀಲ್ ಲೆಕ್ಕಾಚಾರವೂ ತಲೆಬಿಸಿ ಮಾಡಿದೆ.
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ವರ್ಲ್ಡ್ವೈಡ್ ತೆರೆಗೆ ಬರಬೇಕಿತ್ತು. ನಿನ್ನೆ ಮೊನ್ನೆವರೆಗೂ ಎಲ್ಲರೂ ಹಾಗೆ ಅಂದ್ಕೊಂಡಿದ್ದರು. ಆದರೆ ಸೆಪ್ಟೆಂಬರ್ 13ರಂದು ಹೊಂಬಾಳೆ ಟೀಮ್ ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಸಲಾರ್ ಮೊದಲ ಚಾಪ್ಟರ್ ಸೆಪ್ಟೆಂಬರ್ 28ಕ್ಕೆ ಬರಲ್ಲ ಅಂತ ಅನೌನ್ಸ್ಮೆಂಟ್ ಮಾಡಿ ನಿರಾಸೆ ಉಂಟು ಮಾಡಿತ್ತು.
ಕಳೆದ ಎರಡು ವರ್ಷದಿಂದ ತಯಾರಾಗ್ತಿರುವ ಸಲಾರ್ ಟೀಮ್ ಈಗಾಗಲೇ ಎರಡ್ಮೂರು ಸಲ ಡೇಟ್ ಬದಲಿಸಿದೆ. ಪ್ರಭಾಸ್ ಕಾಲ್ಶೀಟ್, ಪ್ರಶಾಂತ್ ನೀಲ್ ಕಮಿಟ್ಮೆಂಟ್. ಸ್ಕ್ರಿಪ್ಟ್ನಲ್ಲಿ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಸಲಾರ್ ಪದೇ ಪದೇ ಮುಂದಕ್ಕೆ ಹೋಗ್ತಾನೇ ಇತ್ತು. ಅಂತಿಮವಾಗಿ ಸೆಪ್ಟೆಂಬರ್ 28ಕ್ಕೆ ಶತಾಯಗತಾಯ ಬಿಗ್ ಸ್ಕ್ರೀನ್ ಮೇಲೆ ಬಂದೇ ಬರುತ್ತೇವೆ ಅಂತಿದ್ದ ಚಿತ್ರತಂಡ ಈ ಸಲವೂ ಪ್ರೇಕ್ಷಕರನ್ನ ಅಪ್ಸೆಟ್ ಮಾಡಿದೆ. ‘ನಿಮಗೊಂದು ಅದ್ಭುತ ಅನುಭವ ಕೊಡುವ ಉದ್ದೇಶದಿಂದ ಕೆಲಸ ಸಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದೇವೆ’ ಎಂದಷ್ಟೇ ಹೇಳಿರುವ ಚಿತ್ರತಂಡ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸುತ್ತೇವೆ ಎಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ರಿಲೀಸ್ ಮುಂದೂಡಿದ್ದೇಕೆ ಅನ್ನೋದಕ್ಕೆ ಸ್ಪಷ್ಟ ಕಾರಣ ಹೇಳಿರಲಿಲ್ಲ. ಅದನ್ನ ಹುಡುಕಿ ಹೋದ ನ್ಯೂಸ್ಫಸ್ಟ್ ತಂಡಕ್ಕೆ ಅಚ್ಚರಿಯ ವಿಷಯಗಳು ಲಭ್ಯವಾಗಿದೆ.
ಇದನ್ನು ಓದಿ: ಮಹಿಳಾ PSI ಪುತ್ರನ ವೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು
ಈ ವರ್ಷ ಬರಲ್ಲ ಸಲಾರ್ ಮೊದಲ ಅಧ್ಯಾಯ!
ಸೆಪ್ಟೆಂಬರ್ 28ರಿಂದ ಮುಂದೂಡಿಕೆಯಾದ ಸಲಾರ್ ಸಿನಿಮಾ ಇದೇ ವರ್ಷ ಬರುತ್ತೆ ಎನ್ನುವ ನಿರೀಕ್ಷೆ ಈವರೆಗೂ ಇದೆ. ಡಿಸೆಂಬರ್ಗೆ ಕೊನೆಯ ವಾರಕ್ಕೆ ಮುಹೂರ್ತ ಫಿಕ್ಸ್ ಆದ್ರೂ ಆಗಬಹುದು ಎಂಬ ಭರವಸೆ ಮೂಡಿಸಿದೆ. ಆದರೆ ಶಾಕಿಂಗ್ ಸಮಾಚಾರ ಏನಪ್ಪಾ ಅಂದ್ರೆ ಸಲಾರ್ ಈ ವರ್ಷ ಬರಲ್ವಂತೆ. ಈ ವರ್ಷ ಸಲಾರ್ ತೆರೆಗೆ ಬರೋದು ಬಹುತೇಕ ಅನುಮಾನ ಎಂಬ ಎಕ್ಸ್ಕ್ಲೂಸಿವ್ ಸಮಾಚಾರ ನ್ಯೂಸ್ಫಸ್ಟ್ ತಂಡಕ್ಕೆ ಲಭ್ಯವಾಗಿದೆ. ಈ ವರ್ಷ ಸಲಾರ್ ಬರೋದು ಅನುಮಾನವಾದ್ರೆ ಮತ್ಯಾವಾಗ ಅಂತ ಕೇಳಿದ್ರೆ ಅದಕ್ಕೂ ಒಂದು ದಿನಾಂಕವನ್ನ ನಿಗದಿ ಮಾಡಿಟ್ಟುಕೊಂಡಿದೆಯಂತೆ. ಸದ್ಯದ ಲೆಕ್ಕಾಚಾರ, ಬಾಕಿ ಉಳಿದಿರುವ ಕೆಲಸ, ಪ್ರಚಾರ ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡಿರುವ ಚಿತ್ರತಂಡ ಮುಂದಿನ ವರ್ಷದ ಮಾರ್ಚ್ ತಿಂಗಳನ್ನ ಟಾರ್ಗೆಟ್ ಮಾಡಿದೆಯಂತೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ತಿಂಗಳು ಸಲಾರ್ ದರ್ಶನ ಕೊಡಲಿದೆಯಂತೆ.
ಸಲಾರ್ ಪೋಸ್ಟ್ ಪ್ರೊಡಕ್ಷನ್ ಯಾಕೆ ಲೇಟ್ ಆಗ್ತಿದೆ?
ಸಲಾರ್ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ನಾಲ್ಕೈದು ದಿನದ ಪ್ಯಾಚ್ವರ್ಕ್ ಮಾತ್ರ ಉಳಿದುಕೊಂಡಿದ್ದು ಬಾಕಿ ಎಲ್ಲ ದೃಶ್ಯಗಳ ಶೂಟಿಂಗ್ ಕೊನೆಗೊಂಡಿದೆ. ಬಟ್ ಸಿನಿಮಾ ತಂಡ ಸ್ಟಕ್ ಆಗಿರೋದು ಪೋಸ್ಟ್ ಪ್ರೊಡಕ್ಷನ್ನಲ್ಲಿ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿಜಿ ವರ್ಕ್ಗೆ ಹೆಚ್ಚು ಸಮಯ ತೆಗೆದುಕೊಳ್ತಿದೆ. ಎಷ್ಟು ಸಮಯ ಅಂದ್ರೆ ಈಗಿನ ಪರಿಸ್ಥಿತಿಯಲ್ಲಿ ಸಲಾರ್ ಸಿಜಿ ಕೆಲಸ ಮುಗಿಯೋಕೂ ಇನ್ನೂ 30 ರಿಂದ 50 ದಿನ ಸಮಯ ಬೇಕಂತೆ. ಹಾಗಾಗಿ, ಕ್ವಾಲಿಟಿ ವಿಷ್ಯದಲ್ಲಿ ಯಾವುದೇ ಕಾಂಪ್ರುಮೈಸ್ ಆಗದಿರಲು ನಿರ್ಧರಿಸಿರುವ ಹೊಂಬಾಳೆ ಫಿಲಂಸ್ ಹಂಡ್ರೆಡ್ ಪರ್ಸೆಂಟ್ ಕೆಲಸ ಮುಗಿದ ನಂತರವೇ ಸಿನಿಮಾ ರಿಲೀಸ್ ಮಾಡೋಣ ಎಂದುಕೊಂಡಿದೆ.
ಟೆನ್ಷನ್ ಹೆಚ್ಚಿಸಿದ ಪ್ರಶಾಂತ್ ನೀಲ್ ನಿರ್ಧಾರ?
ಸೆಕೆಂಡ್ ಹಾಫ್ ರೀ-ಶೂಟ್ ಮಾಡ್ತಾರಾ ನೀಲ್?
ಇದುವರೆಗೂ ಸಲಾರ್ ಸಿನಿಮಾ ತುಂಬಾ ಚೆನ್ನಾಗಿದೆ ಬಂದಿದೆಯಂತೆ. ಚಿತ್ರದ ಔಟ್ಪುಟ್ ನೋಡಿರುವ ಹೊಂಬಾಳೆ ಮತ್ತು ನಟ ಪ್ರಭಾಸ್ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ಇಟ್ಕೊಂಡಿದ್ದಾರಂತೆ. ಹೊಂಬಾಳೆ ಸಾರಥ್ಯದಲ್ಲಿ ಹಾಗೂ ಪ್ರಭಾಸ್ ನಟನೆಯಲ್ಲಿ ಈವರೆಗೂ ಬಂದಿರುವ ಸಿನಿಮಾಗಳ ಪೈಕಿ ಸಲಾರ್ ಬಿಗ್ಗೆಸ್ಟ್ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಇದೆಯಂತೆ. ಆದ್ರೀಗ ನಿರ್ದೇಶಕ ಪ್ರಶಾಂತ್ ನೀಲ್ ನಾವ್ಯಾಕೆ ಇನ್ನೊಂದು ಆ್ಯಪ್ಷನ್ ತಗೋಬಾರದು ಅನ್ನೋ ಆಲೋಚನೆಗೆ ಬಿದ್ದಿದ್ದಾರಂತೆ. ಕಂಪ್ಲೀಟ್ ಶೂಟಿಂಗ್ ಮುಗಿಸಿರುವ ನೀಲ್ ಕೊನೆ ಹಂತದಲ್ಲಿ ಸಲಾರ್ ಚಿತ್ರದ ಕೆಲವು ಸೀನ್ಗಳನ್ನ ರೀ-ಶೂಟ್ ಮಾಡೋಣ ಎನ್ನುವ ಬಗ್ಗೆ ಯೋಚಿಸ್ತಿದ್ದಾರಂತೆ. ಹೌದು, ಸಲಾರ್ ಸಿನಿಮಾದ ಮೊದಲ ಅಧ್ಯಾಯದ ಬಗ್ಗೆ ಫುಲ್ ಖುಷಿಯಾಗಿರುವ ಪ್ರಶಾಂತ್ ನೀಲ್, ಸೆಕೆಂಡ್ ಹಾಫ್ನಲ್ಲಿ ಕೆಲವು ಬದಲಾವಣೆ ಅಗತ್ಯ ಅಂತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸಲಾರ್ ಸೆಕೆಂಡ್ ಹಾಫ್ ಮತ್ತೆ ರೀ-ಶೂಟ್ ಆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಅವರ ಆಪ್ತಬಳಗ. ಬಟ್, ಈ ವಿಷ್ಯದಲ್ಲಿ ಹೊಂಬಾಳೆ ಸಂಸ್ಥೆಯ ಯಾವ ಥರಾ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಒಂದು ವೇಳೆ ರೀ-ಶೂಟ್ ಮಾಡೋದು ನಿಜವೇ ಆದ್ರೆ ಸಲಾರ್ ದರ್ಶನ ಇನ್ನಷ್ಟು ವಿಳಂಬ ಆಗೋದ್ರಲ್ಲಿ ಅನುಮಾನನೇ ಇಲ್ಲ.
ಪ್ರಭಾಸ್ಗೆ ಎಚ್ಚರಿಕೆ ಕೊಟ್ಟಿರೋದ್ಯಾರು?
ಸಲಾರ್ ಲೇಟ್ ಆಗ್ತಿರೋದಕ್ಕೆ ಮತ್ತೊಂದು ಪ್ರಮುಖ ಕಾರಣ ನಟ ಪ್ರಭಾಸ್ ಅಂತ ಹೇಳಲಾಗ್ತಿದೆ. ಬಾಹುಬಲಿ ಆದ್ಮೇಲೆ ಪ್ರಭಾಸ್ ಸಿನಿಮಾಗಳು ಕಮರ್ಷಿಯಲಿ ದುಡ್ಡು ಮಾಡ್ತಿವೆ ಅನ್ನೋದು ಬಿಟ್ಟರೆ ಜನರಿಗೆ ಯಾವ ಸಿನಿಮಾನೂ ಇಷ್ಟ ಆಗಿಲ್ಲ. ಪ್ರಭಾಸ್ಗೆ ಮತ್ತೆ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ. ಮತ್ತೆ ಜನರ ಅಭಿಮಾನ ಗಳಿಸಬೇಕಾದ ಅನಿವಾರ್ಯತೆ ಅವರಿಗಿದೆ. ಈ ಹಂತದಲ್ಲಿ ಸಲಾರ್ ಚಿತ್ರವೊಂದೇ ಭರವಸೆಯಾಗಿದೆ. ಇದನ್ನ ಪ್ರಭಾಸ್ ಕೂಡ ಚೆನ್ನಾಗಿ ತಿಳಿದುಕೊಂಡಿದ್ದು ಡೈರೆಕ್ಟರ್ ಮೇಲೆ ನಂಬಿಕೆ ಇಟ್ಕೊಂಡಿದ್ದಾರಂತೆ. ಈ ನಡುವೆ ಪ್ರಭಾಸ್ಗೆ ಆಪ್ತ ಜ್ಯೋತಿಷಿಗಳು ಸದ್ಯದ ಸ್ಥಿತಿಗತಿ ಬಗ್ಗೆ ಎಚ್ಚರಿಕೆ ಕೊಟ್ಟಿರೋದರಿಂದ ಸಲಾರ್ ವಿಷಯ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಹೌದು, ಪ್ರಭಾಸ್ ಜಾತಕದಲ್ಲಿ ಈ ವರ್ಷ ಚೆನ್ನಾಗಿಲ್ವಂತೆ.
ಪ್ರಭಾಸ್ ಏನೇ ಅಂದ್ಕೊಂಡರೂ ಸಕ್ಸಸ್ ಆಗಲಿಲ್ಲವಂತೆ. ಹಾಗಾಗಿ ಪ್ರಭಾಸ್ ಖ್ಯಾತಿಯಲ್ಲಿ ಬಂದ ಯಾವ ಚಿತ್ರಗಳು ಗೆದ್ದಿಲ್ಲ. ಈಗ ಸಲಾರ್ ಬಂದರೂ ಕಷ್ಟ ಆಗಬಹುದು ಅನ್ನೋದು ಜ್ಯೋತಿಷಿಗಳ ಎಚ್ಚರಿಕೆ. ಆದ್ದರಿಂದ ಪ್ರಭಾಸ್ ಕೂಡ ಸಲಾರ್ ಈ ವರ್ಷವೇ ಬರಲಿ ಅಂತ ಒತ್ತಡನೂ ಹಾಕ್ತಿಲ್ಲ. ಸಲಾರ್ ನಾವು ನೀವು ಅಂದುಕೊಂಡಂತೆ ಈಸಿಯಾಗಂತೂ ರೆಡಿ ಆಗ್ತಿಲ್ಲ. ಹತ್ತು ಹಲವು ವಿಘ್ನಗಳನ್ನ ಮೀರಿ, ಸವಾಲುಗಳನ್ನ ಮೆಟ್ಟಿ ತಯಾರಾಗ್ತಿದೆ. ಅಲ್ಟಿಮೇಟ್ ಆಗಿ ಒಳ್ಳೆ ಚಿತ್ರ ಕೊಡಬೇಕು ಅನ್ನೋದು ಚಿತ್ರತಂಡದ ಉದ್ದೇಶ. ಇದು ಒಳ್ಳೆ ಸಿನಿಮಾ ಆಗಬೇಕು ಅನ್ನೋದು ಅಭಿಮಾನಿ ದೇವರುಗಳ ಆಶಯ. ಲೇಟ್ ಆದ್ರೂ ಗ್ರೇಟ್ ಆಗಿ ಬರಲಿ ಅನ್ನೋದಷ್ಟೇ ನಿರೀಕ್ಷೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಭಾಸ್ ಸಲಾರ್ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ
ಲೇಟ್ ಆದ್ರೂ ಗ್ರೇಟ್ ಆಗಿ ಬರಲಿ ಅನ್ನೋದಷ್ಟೇ ಫ್ಯಾನ್ಸ್ ನಿರೀಕ್ಷೆ!
ಸ್ಪಷ್ಟ ಕಾರಣದ ಬಗ್ಗೆ ನ್ಯೂಸ್ಫಸ್ಟ್ ತಂಡಕ್ಕೆ ಅಚ್ಚರಿ ವಿಷಯಗಳು ಲಭ್ಯ
ಪ್ಯಾನ್ ಇಂಡಿಯಾದ ನೆಕ್ಸ್ಟ್ ಬಿಗ್ಗೆಸ್ಟ್ ಸಿನಿಮಾ ಅಂದ್ರೆ ಸಲಾರ್. ಸಲಾರ್ಗಾಗಿ ಇಡೀ ಸಿನಿ ದುನಿಯಾ ಎದುರು ನೋಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಈ ತಿಂಗಳ ಅಂತ್ಯಕ್ಕೆ ಸಲಾರ್ ಬರಬೇಕಿತ್ತು. ಆದರೆ ಹಳೇ ಡೇಟ್ಗೆ ಸಲಾರ್ ಬರಲ್ಲ. ಹಾಗಾದ್ರೆ ದಿಢೀರ್ ಅಂತ ಸಲಾರ್ ಡೇಟ್ ಬದಲಿಸಿದ್ದೇಕೆ ಅಂತ ನೋಡಿದ್ರೆ ಕಾರಣ ಅಚ್ಚರಿ ಉಂಟು ಮಾಡುತ್ತಿದೆ. ಪ್ರಭಾಸ್ ವಿಷ್ಯದಲ್ಲಿ ಒಂಥರಾ ಸವಾಲಾಗಿದ್ರೆ, ಪ್ರಶಾಂತ್ ನೀಲ್ ಲೆಕ್ಕಾಚಾರವೂ ತಲೆಬಿಸಿ ಮಾಡಿದೆ.
ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ಸಲಾರ್ ಸಿನಿಮಾ ಸೆಪ್ಟೆಂಬರ್ 28ಕ್ಕೆ ವರ್ಲ್ಡ್ವೈಡ್ ತೆರೆಗೆ ಬರಬೇಕಿತ್ತು. ನಿನ್ನೆ ಮೊನ್ನೆವರೆಗೂ ಎಲ್ಲರೂ ಹಾಗೆ ಅಂದ್ಕೊಂಡಿದ್ದರು. ಆದರೆ ಸೆಪ್ಟೆಂಬರ್ 13ರಂದು ಹೊಂಬಾಳೆ ಟೀಮ್ ಪ್ರಭಾಸ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಸಲಾರ್ ಮೊದಲ ಚಾಪ್ಟರ್ ಸೆಪ್ಟೆಂಬರ್ 28ಕ್ಕೆ ಬರಲ್ಲ ಅಂತ ಅನೌನ್ಸ್ಮೆಂಟ್ ಮಾಡಿ ನಿರಾಸೆ ಉಂಟು ಮಾಡಿತ್ತು.
ಕಳೆದ ಎರಡು ವರ್ಷದಿಂದ ತಯಾರಾಗ್ತಿರುವ ಸಲಾರ್ ಟೀಮ್ ಈಗಾಗಲೇ ಎರಡ್ಮೂರು ಸಲ ಡೇಟ್ ಬದಲಿಸಿದೆ. ಪ್ರಭಾಸ್ ಕಾಲ್ಶೀಟ್, ಪ್ರಶಾಂತ್ ನೀಲ್ ಕಮಿಟ್ಮೆಂಟ್. ಸ್ಕ್ರಿಪ್ಟ್ನಲ್ಲಿ ಬದಲಾವಣೆ ಹೀಗೆ ಹಲವು ಕಾರಣಗಳಿಂದ ಸಲಾರ್ ಪದೇ ಪದೇ ಮುಂದಕ್ಕೆ ಹೋಗ್ತಾನೇ ಇತ್ತು. ಅಂತಿಮವಾಗಿ ಸೆಪ್ಟೆಂಬರ್ 28ಕ್ಕೆ ಶತಾಯಗತಾಯ ಬಿಗ್ ಸ್ಕ್ರೀನ್ ಮೇಲೆ ಬಂದೇ ಬರುತ್ತೇವೆ ಅಂತಿದ್ದ ಚಿತ್ರತಂಡ ಈ ಸಲವೂ ಪ್ರೇಕ್ಷಕರನ್ನ ಅಪ್ಸೆಟ್ ಮಾಡಿದೆ. ‘ನಿಮಗೊಂದು ಅದ್ಭುತ ಅನುಭವ ಕೊಡುವ ಉದ್ದೇಶದಿಂದ ಕೆಲಸ ಸಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದೇವೆ’ ಎಂದಷ್ಟೇ ಹೇಳಿರುವ ಚಿತ್ರತಂಡ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸುತ್ತೇವೆ ಎಂದಿದ್ದರು. ಆದರೆ, ಕೊನೆ ಕ್ಷಣದಲ್ಲಿ ರಿಲೀಸ್ ಮುಂದೂಡಿದ್ದೇಕೆ ಅನ್ನೋದಕ್ಕೆ ಸ್ಪಷ್ಟ ಕಾರಣ ಹೇಳಿರಲಿಲ್ಲ. ಅದನ್ನ ಹುಡುಕಿ ಹೋದ ನ್ಯೂಸ್ಫಸ್ಟ್ ತಂಡಕ್ಕೆ ಅಚ್ಚರಿಯ ವಿಷಯಗಳು ಲಭ್ಯವಾಗಿದೆ.
ಇದನ್ನು ಓದಿ: ಮಹಿಳಾ PSI ಪುತ್ರನ ವೀಲಿಂಗ್ ಪುಂಡಾಟಕ್ಕೆ ವೃದ್ಧ ಬಲಿ.. ನ್ಯಾಯ ಕೊಡಿಸಿ ಎಂದು ಕುಟುಂಬಸ್ಥರ ಅಳಲು
ಈ ವರ್ಷ ಬರಲ್ಲ ಸಲಾರ್ ಮೊದಲ ಅಧ್ಯಾಯ!
ಸೆಪ್ಟೆಂಬರ್ 28ರಿಂದ ಮುಂದೂಡಿಕೆಯಾದ ಸಲಾರ್ ಸಿನಿಮಾ ಇದೇ ವರ್ಷ ಬರುತ್ತೆ ಎನ್ನುವ ನಿರೀಕ್ಷೆ ಈವರೆಗೂ ಇದೆ. ಡಿಸೆಂಬರ್ಗೆ ಕೊನೆಯ ವಾರಕ್ಕೆ ಮುಹೂರ್ತ ಫಿಕ್ಸ್ ಆದ್ರೂ ಆಗಬಹುದು ಎಂಬ ಭರವಸೆ ಮೂಡಿಸಿದೆ. ಆದರೆ ಶಾಕಿಂಗ್ ಸಮಾಚಾರ ಏನಪ್ಪಾ ಅಂದ್ರೆ ಸಲಾರ್ ಈ ವರ್ಷ ಬರಲ್ವಂತೆ. ಈ ವರ್ಷ ಸಲಾರ್ ತೆರೆಗೆ ಬರೋದು ಬಹುತೇಕ ಅನುಮಾನ ಎಂಬ ಎಕ್ಸ್ಕ್ಲೂಸಿವ್ ಸಮಾಚಾರ ನ್ಯೂಸ್ಫಸ್ಟ್ ತಂಡಕ್ಕೆ ಲಭ್ಯವಾಗಿದೆ. ಈ ವರ್ಷ ಸಲಾರ್ ಬರೋದು ಅನುಮಾನವಾದ್ರೆ ಮತ್ಯಾವಾಗ ಅಂತ ಕೇಳಿದ್ರೆ ಅದಕ್ಕೂ ಒಂದು ದಿನಾಂಕವನ್ನ ನಿಗದಿ ಮಾಡಿಟ್ಟುಕೊಂಡಿದೆಯಂತೆ. ಸದ್ಯದ ಲೆಕ್ಕಾಚಾರ, ಬಾಕಿ ಉಳಿದಿರುವ ಕೆಲಸ, ಪ್ರಚಾರ ಎಲ್ಲವನ್ನೂ ತಲೆಯಲ್ಲಿಟ್ಟುಕೊಂಡಿರುವ ಚಿತ್ರತಂಡ ಮುಂದಿನ ವರ್ಷದ ಮಾರ್ಚ್ ತಿಂಗಳನ್ನ ಟಾರ್ಗೆಟ್ ಮಾಡಿದೆಯಂತೆ. ಈಗಿನ ಪರಿಸ್ಥಿತಿಯಲ್ಲಿ ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ತಿಂಗಳು ಸಲಾರ್ ದರ್ಶನ ಕೊಡಲಿದೆಯಂತೆ.
ಸಲಾರ್ ಪೋಸ್ಟ್ ಪ್ರೊಡಕ್ಷನ್ ಯಾಕೆ ಲೇಟ್ ಆಗ್ತಿದೆ?
ಸಲಾರ್ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ನಾಲ್ಕೈದು ದಿನದ ಪ್ಯಾಚ್ವರ್ಕ್ ಮಾತ್ರ ಉಳಿದುಕೊಂಡಿದ್ದು ಬಾಕಿ ಎಲ್ಲ ದೃಶ್ಯಗಳ ಶೂಟಿಂಗ್ ಕೊನೆಗೊಂಡಿದೆ. ಬಟ್ ಸಿನಿಮಾ ತಂಡ ಸ್ಟಕ್ ಆಗಿರೋದು ಪೋಸ್ಟ್ ಪ್ರೊಡಕ್ಷನ್ನಲ್ಲಿ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿಜಿ ವರ್ಕ್ಗೆ ಹೆಚ್ಚು ಸಮಯ ತೆಗೆದುಕೊಳ್ತಿದೆ. ಎಷ್ಟು ಸಮಯ ಅಂದ್ರೆ ಈಗಿನ ಪರಿಸ್ಥಿತಿಯಲ್ಲಿ ಸಲಾರ್ ಸಿಜಿ ಕೆಲಸ ಮುಗಿಯೋಕೂ ಇನ್ನೂ 30 ರಿಂದ 50 ದಿನ ಸಮಯ ಬೇಕಂತೆ. ಹಾಗಾಗಿ, ಕ್ವಾಲಿಟಿ ವಿಷ್ಯದಲ್ಲಿ ಯಾವುದೇ ಕಾಂಪ್ರುಮೈಸ್ ಆಗದಿರಲು ನಿರ್ಧರಿಸಿರುವ ಹೊಂಬಾಳೆ ಫಿಲಂಸ್ ಹಂಡ್ರೆಡ್ ಪರ್ಸೆಂಟ್ ಕೆಲಸ ಮುಗಿದ ನಂತರವೇ ಸಿನಿಮಾ ರಿಲೀಸ್ ಮಾಡೋಣ ಎಂದುಕೊಂಡಿದೆ.
ಟೆನ್ಷನ್ ಹೆಚ್ಚಿಸಿದ ಪ್ರಶಾಂತ್ ನೀಲ್ ನಿರ್ಧಾರ?
ಸೆಕೆಂಡ್ ಹಾಫ್ ರೀ-ಶೂಟ್ ಮಾಡ್ತಾರಾ ನೀಲ್?
ಇದುವರೆಗೂ ಸಲಾರ್ ಸಿನಿಮಾ ತುಂಬಾ ಚೆನ್ನಾಗಿದೆ ಬಂದಿದೆಯಂತೆ. ಚಿತ್ರದ ಔಟ್ಪುಟ್ ನೋಡಿರುವ ಹೊಂಬಾಳೆ ಮತ್ತು ನಟ ಪ್ರಭಾಸ್ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ಕಾನ್ಫಿಡೆನ್ಸ್ ಇಟ್ಕೊಂಡಿದ್ದಾರಂತೆ. ಹೊಂಬಾಳೆ ಸಾರಥ್ಯದಲ್ಲಿ ಹಾಗೂ ಪ್ರಭಾಸ್ ನಟನೆಯಲ್ಲಿ ಈವರೆಗೂ ಬಂದಿರುವ ಸಿನಿಮಾಗಳ ಪೈಕಿ ಸಲಾರ್ ಬಿಗ್ಗೆಸ್ಟ್ ಸಿನಿಮಾ ಆಗಲಿದೆ ಎಂಬ ನಿರೀಕ್ಷೆ ಇದೆಯಂತೆ. ಆದ್ರೀಗ ನಿರ್ದೇಶಕ ಪ್ರಶಾಂತ್ ನೀಲ್ ನಾವ್ಯಾಕೆ ಇನ್ನೊಂದು ಆ್ಯಪ್ಷನ್ ತಗೋಬಾರದು ಅನ್ನೋ ಆಲೋಚನೆಗೆ ಬಿದ್ದಿದ್ದಾರಂತೆ. ಕಂಪ್ಲೀಟ್ ಶೂಟಿಂಗ್ ಮುಗಿಸಿರುವ ನೀಲ್ ಕೊನೆ ಹಂತದಲ್ಲಿ ಸಲಾರ್ ಚಿತ್ರದ ಕೆಲವು ಸೀನ್ಗಳನ್ನ ರೀ-ಶೂಟ್ ಮಾಡೋಣ ಎನ್ನುವ ಬಗ್ಗೆ ಯೋಚಿಸ್ತಿದ್ದಾರಂತೆ. ಹೌದು, ಸಲಾರ್ ಸಿನಿಮಾದ ಮೊದಲ ಅಧ್ಯಾಯದ ಬಗ್ಗೆ ಫುಲ್ ಖುಷಿಯಾಗಿರುವ ಪ್ರಶಾಂತ್ ನೀಲ್, ಸೆಕೆಂಡ್ ಹಾಫ್ನಲ್ಲಿ ಕೆಲವು ಬದಲಾವಣೆ ಅಗತ್ಯ ಅಂತಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸಲಾರ್ ಸೆಕೆಂಡ್ ಹಾಫ್ ಮತ್ತೆ ರೀ-ಶೂಟ್ ಆದರೂ ಅಚ್ಚರಿ ಇಲ್ಲ ಎನ್ನುತ್ತಿದೆ ಅವರ ಆಪ್ತಬಳಗ. ಬಟ್, ಈ ವಿಷ್ಯದಲ್ಲಿ ಹೊಂಬಾಳೆ ಸಂಸ್ಥೆಯ ಯಾವ ಥರಾ ನಿರ್ಧಾರ ತೆಗೆದುಕೊಳ್ಳುತ್ತೋ ಕಾದು ನೋಡಬೇಕಿದೆ. ಒಂದು ವೇಳೆ ರೀ-ಶೂಟ್ ಮಾಡೋದು ನಿಜವೇ ಆದ್ರೆ ಸಲಾರ್ ದರ್ಶನ ಇನ್ನಷ್ಟು ವಿಳಂಬ ಆಗೋದ್ರಲ್ಲಿ ಅನುಮಾನನೇ ಇಲ್ಲ.
ಪ್ರಭಾಸ್ಗೆ ಎಚ್ಚರಿಕೆ ಕೊಟ್ಟಿರೋದ್ಯಾರು?
ಸಲಾರ್ ಲೇಟ್ ಆಗ್ತಿರೋದಕ್ಕೆ ಮತ್ತೊಂದು ಪ್ರಮುಖ ಕಾರಣ ನಟ ಪ್ರಭಾಸ್ ಅಂತ ಹೇಳಲಾಗ್ತಿದೆ. ಬಾಹುಬಲಿ ಆದ್ಮೇಲೆ ಪ್ರಭಾಸ್ ಸಿನಿಮಾಗಳು ಕಮರ್ಷಿಯಲಿ ದುಡ್ಡು ಮಾಡ್ತಿವೆ ಅನ್ನೋದು ಬಿಟ್ಟರೆ ಜನರಿಗೆ ಯಾವ ಸಿನಿಮಾನೂ ಇಷ್ಟ ಆಗಿಲ್ಲ. ಪ್ರಭಾಸ್ಗೆ ಮತ್ತೆ ಗೆಲ್ಲಬೇಕಾದ ಒತ್ತಡದಲ್ಲಿದ್ದಾರೆ. ಮತ್ತೆ ಜನರ ಅಭಿಮಾನ ಗಳಿಸಬೇಕಾದ ಅನಿವಾರ್ಯತೆ ಅವರಿಗಿದೆ. ಈ ಹಂತದಲ್ಲಿ ಸಲಾರ್ ಚಿತ್ರವೊಂದೇ ಭರವಸೆಯಾಗಿದೆ. ಇದನ್ನ ಪ್ರಭಾಸ್ ಕೂಡ ಚೆನ್ನಾಗಿ ತಿಳಿದುಕೊಂಡಿದ್ದು ಡೈರೆಕ್ಟರ್ ಮೇಲೆ ನಂಬಿಕೆ ಇಟ್ಕೊಂಡಿದ್ದಾರಂತೆ. ಈ ನಡುವೆ ಪ್ರಭಾಸ್ಗೆ ಆಪ್ತ ಜ್ಯೋತಿಷಿಗಳು ಸದ್ಯದ ಸ್ಥಿತಿಗತಿ ಬಗ್ಗೆ ಎಚ್ಚರಿಕೆ ಕೊಟ್ಟಿರೋದರಿಂದ ಸಲಾರ್ ವಿಷಯ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಹೌದು, ಪ್ರಭಾಸ್ ಜಾತಕದಲ್ಲಿ ಈ ವರ್ಷ ಚೆನ್ನಾಗಿಲ್ವಂತೆ.
ಪ್ರಭಾಸ್ ಏನೇ ಅಂದ್ಕೊಂಡರೂ ಸಕ್ಸಸ್ ಆಗಲಿಲ್ಲವಂತೆ. ಹಾಗಾಗಿ ಪ್ರಭಾಸ್ ಖ್ಯಾತಿಯಲ್ಲಿ ಬಂದ ಯಾವ ಚಿತ್ರಗಳು ಗೆದ್ದಿಲ್ಲ. ಈಗ ಸಲಾರ್ ಬಂದರೂ ಕಷ್ಟ ಆಗಬಹುದು ಅನ್ನೋದು ಜ್ಯೋತಿಷಿಗಳ ಎಚ್ಚರಿಕೆ. ಆದ್ದರಿಂದ ಪ್ರಭಾಸ್ ಕೂಡ ಸಲಾರ್ ಈ ವರ್ಷವೇ ಬರಲಿ ಅಂತ ಒತ್ತಡನೂ ಹಾಕ್ತಿಲ್ಲ. ಸಲಾರ್ ನಾವು ನೀವು ಅಂದುಕೊಂಡಂತೆ ಈಸಿಯಾಗಂತೂ ರೆಡಿ ಆಗ್ತಿಲ್ಲ. ಹತ್ತು ಹಲವು ವಿಘ್ನಗಳನ್ನ ಮೀರಿ, ಸವಾಲುಗಳನ್ನ ಮೆಟ್ಟಿ ತಯಾರಾಗ್ತಿದೆ. ಅಲ್ಟಿಮೇಟ್ ಆಗಿ ಒಳ್ಳೆ ಚಿತ್ರ ಕೊಡಬೇಕು ಅನ್ನೋದು ಚಿತ್ರತಂಡದ ಉದ್ದೇಶ. ಇದು ಒಳ್ಳೆ ಸಿನಿಮಾ ಆಗಬೇಕು ಅನ್ನೋದು ಅಭಿಮಾನಿ ದೇವರುಗಳ ಆಶಯ. ಲೇಟ್ ಆದ್ರೂ ಗ್ರೇಟ್ ಆಗಿ ಬರಲಿ ಅನ್ನೋದಷ್ಟೇ ನಿರೀಕ್ಷೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ