newsfirstkannada.com

ಗಣಪತಿ ಹಬ್ಬದ ಎಫೆಕ್ಟ್​​; ದುಬಾರಿ ಆಯ್ತು ಬಸ್​ ಟಿಕೆಟ್​​ ದರ; ರೇಟ್​ ಕೇಳಿದ್ರೆ ಶಾಕ್​ ಆಗ್ತೀರಾ!

Share :

15-09-2023

    ನ್ಯೂಸ್​ ಫಸ್ಟ್ ಇಂಪ್ಯಾಕ್ಟ್.. ದಶಕದ ಸಮಸ್ಯೆಗೆ ಪರಿಹಾರ

    ದುಪ್ಪಟ್ಟು ಹಣ ವಸೂಲಿಗೆ ಮುಂದಾದ ಖಾಸಗಿ ಬಸ್

    ಟಿಕೆಟ್​ ದರ ನೋಡಿ ದಂಗಾದ ಪ್ರಯಾಣಿಕರು..!

ಬೆಂಗಳೂರು: ಸರ್ಕಾರ ಜಾರಿಗೊಳಿಸಿದ ಮಹತ್ತರ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಆದ್ರೆ ಇದೇ ಶಕ್ತಿ ಯೋಜನೆ ಎಫ್ಟೆಕ್ಟ್​​ನಿಂದ ಖಾಸಗಿ ಸಾರಿಗೆಯವರಿಗೆ ನಷ್ಟವಾಗಿದ್ದು, ನಮ್ಮ ಸಮಸ್ಯೆಗೆ ಪರಿಹಾರ ನೀಡಿ ಅಂತಾ ಸೆಪ್ಟೆಂಬರ್​ 11 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಗೂ ಇಳಿದಿದ್ರು. ಇದೀಗ ಖಾಸಗಿ ಬಸ್​ ಮಾಲೀಕರು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗೌರಿ-ಗಣೇಶ ಹಬ್ಬ ಬಂತು. ಕೆಲಸಕ್ಕೆ ಬ್ರೇಕ್​ ಹಾಕಿ ಊರಿಗೆ ತೆರಳಿ ಫ್ಯಾಮಿಲಿ ಜೊತೆ ಹಬ್ಬ ಸೆಲಬ್ರೇಟ್​​ ಮಾಡೋಣ ಹೊರಟಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್​​ ಬಿಗ್​​ ಶಾಕ್​ ನೀಡಿದೆ. ಆನ್ಲೈನ್ ಟಿಕೆಟ್ ದರವನ್ನ ದುಪ್ಪಟ್ಟು ಏರಿಕೆ ಮಾಡಿರೋ ಖಾಸಗಿ ಸಾರಿಗೆ ಇಲಾಖೆಗೆ ಜನರು ಹಿಡಿಶಾಪ ಹಾಕ್ತಿದ್ದಾರೆ.

ಗಣೇಶ ಚತುರ್ಥಿ ಹಬ್ಬ ಇರೋದ್ರಿಂದ ಬೆಂಗಳೂರಿಗರು ತಮ್ಮ ತಮ್ಮ ಊರಿಗೆ ತೆರಳೋ ನಿಮಿತ್ತ ಮುಂಗಡವಾಗಿ ಟಿಕೆಟ್​​ ಬುಕ್​ ಮಾಡಿದ್ದಾರೆ. ಆದ್ರೆ ಟಿಕೆಟ್​ ರೇಟ್​ ನೋಡಿದ ಪ್ರಯಾಣಿಕರು ಶಾಕ್​ ಆಗಿದ್ದಾರೆ.

ನೋಡಿದ್ರಲ್ಲಾ 450 ರಿಂದ ಪ್ರಾರಂಭವಾದ ಮೊತ್ತ ಹೇಗೆ 2 ಸಾವಿರ ದಾಟಿದೆ ಅಂತಾ. ಇಷ್ಟೊಂದು ಹಣ ಟ್ರಾನ್ಸ್​ಪಾರ್ ಮಾಡಿಕೊಂಡಿರೋದು ಯಾವುದೋ ಹೊರರಾಜ್ಯಕ್ಕೆ ತೆರಳೋಕೆ ಅಲ್ಲಾ. ಬದಲಾಗಿ ನಮ್ಮದೇ ರಾಜ್ಯದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಇತರೆ ಊರಿಗೆ ತೆರಳಲು ಖಾಸಗಿ ಬಸ್​​ ಫಿಕ್ಸ್​ ಮಾಡಿರೋ ದುಬಾರಿ ರೇಟ್​. ಈ ಹಿಂದೆ 500 ರಿಂದ 700 ರೂಪಾಯಿ ಇದ್ದ ಮೊತ್ತ ದಿಢೀರ್​ ಅಂತಾ ಏರಿಕೆಯಾಗಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ.

ಒಟ್ನಲ್ಲಿ ಸಾರಿಗೆ ಇಲಾಖೆ ಆದೇಶವನ್ನೂ ಮೀರಿ ಖಾಸಗಿ ಬಸ್​ ಮಾಲೀಕರು ಪ್ರಯಾಣಿಕರಿಂದ ಸಾವಿರಗಟ್ಟಲೆ ಹಣ ವಸೂಲಿ ಮಾಡ್ತಿರೋರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹಾಗೂ ಪ್ರಯಾಣಿಕರ ಪ್ರಶ್ನೆಗಳಿಗೂ ಸಾರಿಗೆ ಇಲಾಖೆ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಣಪತಿ ಹಬ್ಬದ ಎಫೆಕ್ಟ್​​; ದುಬಾರಿ ಆಯ್ತು ಬಸ್​ ಟಿಕೆಟ್​​ ದರ; ರೇಟ್​ ಕೇಳಿದ್ರೆ ಶಾಕ್​ ಆಗ್ತೀರಾ!

https://newsfirstlive.com/wp-content/uploads/2023/09/PVT-Bus.jpg

    ನ್ಯೂಸ್​ ಫಸ್ಟ್ ಇಂಪ್ಯಾಕ್ಟ್.. ದಶಕದ ಸಮಸ್ಯೆಗೆ ಪರಿಹಾರ

    ದುಪ್ಪಟ್ಟು ಹಣ ವಸೂಲಿಗೆ ಮುಂದಾದ ಖಾಸಗಿ ಬಸ್

    ಟಿಕೆಟ್​ ದರ ನೋಡಿ ದಂಗಾದ ಪ್ರಯಾಣಿಕರು..!

ಬೆಂಗಳೂರು: ಸರ್ಕಾರ ಜಾರಿಗೊಳಿಸಿದ ಮಹತ್ತರ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಆದ್ರೆ ಇದೇ ಶಕ್ತಿ ಯೋಜನೆ ಎಫ್ಟೆಕ್ಟ್​​ನಿಂದ ಖಾಸಗಿ ಸಾರಿಗೆಯವರಿಗೆ ನಷ್ಟವಾಗಿದ್ದು, ನಮ್ಮ ಸಮಸ್ಯೆಗೆ ಪರಿಹಾರ ನೀಡಿ ಅಂತಾ ಸೆಪ್ಟೆಂಬರ್​ 11 ರಂದು ಬೆಂಗಳೂರಿನಲ್ಲಿ ಪ್ರತಿಭಟನೆಗೂ ಇಳಿದಿದ್ರು. ಇದೀಗ ಖಾಸಗಿ ಬಸ್​ ಮಾಲೀಕರು ಜನಸಾಮಾನ್ಯರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಗೌರಿ-ಗಣೇಶ ಹಬ್ಬ ಬಂತು. ಕೆಲಸಕ್ಕೆ ಬ್ರೇಕ್​ ಹಾಕಿ ಊರಿಗೆ ತೆರಳಿ ಫ್ಯಾಮಿಲಿ ಜೊತೆ ಹಬ್ಬ ಸೆಲಬ್ರೇಟ್​​ ಮಾಡೋಣ ಹೊರಟಿದ್ದ ಪ್ರಯಾಣಿಕರಿಗೆ ಖಾಸಗಿ ಬಸ್​​ ಬಿಗ್​​ ಶಾಕ್​ ನೀಡಿದೆ. ಆನ್ಲೈನ್ ಟಿಕೆಟ್ ದರವನ್ನ ದುಪ್ಪಟ್ಟು ಏರಿಕೆ ಮಾಡಿರೋ ಖಾಸಗಿ ಸಾರಿಗೆ ಇಲಾಖೆಗೆ ಜನರು ಹಿಡಿಶಾಪ ಹಾಕ್ತಿದ್ದಾರೆ.

ಗಣೇಶ ಚತುರ್ಥಿ ಹಬ್ಬ ಇರೋದ್ರಿಂದ ಬೆಂಗಳೂರಿಗರು ತಮ್ಮ ತಮ್ಮ ಊರಿಗೆ ತೆರಳೋ ನಿಮಿತ್ತ ಮುಂಗಡವಾಗಿ ಟಿಕೆಟ್​​ ಬುಕ್​ ಮಾಡಿದ್ದಾರೆ. ಆದ್ರೆ ಟಿಕೆಟ್​ ರೇಟ್​ ನೋಡಿದ ಪ್ರಯಾಣಿಕರು ಶಾಕ್​ ಆಗಿದ್ದಾರೆ.

ನೋಡಿದ್ರಲ್ಲಾ 450 ರಿಂದ ಪ್ರಾರಂಭವಾದ ಮೊತ್ತ ಹೇಗೆ 2 ಸಾವಿರ ದಾಟಿದೆ ಅಂತಾ. ಇಷ್ಟೊಂದು ಹಣ ಟ್ರಾನ್ಸ್​ಪಾರ್ ಮಾಡಿಕೊಂಡಿರೋದು ಯಾವುದೋ ಹೊರರಾಜ್ಯಕ್ಕೆ ತೆರಳೋಕೆ ಅಲ್ಲಾ. ಬದಲಾಗಿ ನಮ್ಮದೇ ರಾಜ್ಯದ ಬಳ್ಳಾರಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಇತರೆ ಊರಿಗೆ ತೆರಳಲು ಖಾಸಗಿ ಬಸ್​​ ಫಿಕ್ಸ್​ ಮಾಡಿರೋ ದುಬಾರಿ ರೇಟ್​. ಈ ಹಿಂದೆ 500 ರಿಂದ 700 ರೂಪಾಯಿ ಇದ್ದ ಮೊತ್ತ ದಿಢೀರ್​ ಅಂತಾ ಏರಿಕೆಯಾಗಿದ್ದು ಪ್ರಯಾಣಿಕರು ಕಂಗಾಲಾಗಿದ್ದಾರೆ.

ಒಟ್ನಲ್ಲಿ ಸಾರಿಗೆ ಇಲಾಖೆ ಆದೇಶವನ್ನೂ ಮೀರಿ ಖಾಸಗಿ ಬಸ್​ ಮಾಲೀಕರು ಪ್ರಯಾಣಿಕರಿಂದ ಸಾವಿರಗಟ್ಟಲೆ ಹಣ ವಸೂಲಿ ಮಾಡ್ತಿರೋರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ. ಹಾಗೂ ಪ್ರಯಾಣಿಕರ ಪ್ರಶ್ನೆಗಳಿಗೂ ಸಾರಿಗೆ ಇಲಾಖೆ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More